ರಸ್ತೆ ಅಪಘಾತದಲ್ಲಿ ನಿಧನರಾದ ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ 114 ವರ್ಷದ ಫೌಜಾ ಸಿಂಗ್

ಜಲಂಧರ : ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಫೌಜಾ ಸಿಂಗ್ ತಮ್ಮ 114 ನೇ ವಯಸ್ಸಿನಲ್ಲಿ ಮಿಂಡೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರು ಏಪ್ರಿಲ್ 1, 1911 ರಂದು ಜಲಂಧರ್‌ನ ಬೆಯಾಸ್ ಗ್ರಾಮದಲ್ಲಿ ಜನಿಸಿದ್ದರು. ಬಿಬಿಸಿ ಪಂಜಾಬಿ ವರದಿಯ ಪ್ರಕಾರ, ಸೋಮವಾರ ಮಧ್ಯಾಹ್ನ ಜಲಂಧರ-ಪಠಾಣಕೋಟ್ ಹೆದ್ದಾರಿಯಲ್ಲಿ ಕಾರು ಡಿಕ್ಕಿ … Continued

ಕರ್ನಾಟಕ ಹೈಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ವಿಭು ಬಖ್ರು ನೇಮಕ

ನವದೆಹಲಿ : ನ್ಯಾಯಮೂರ್ತಿ ವಿಭು ಭಖ್ರು ಅವರನ್ನು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿ ಕೇಂದ್ರ ಸರ್ಕಾರವು ಸೋಮವಾರ ಆದೇಶ ಹೊರಡಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಮಧ್ಯಪ್ರದೇಶ, ಜಾರ್ಖಂಡ್, ಗುವಾಹಟಿ ಹಾಗೂ ಪಾಟ್ನಾ ಹೈಕೋರ್ಟ್‌ಗಳಿಗೂ ಸಹ ನೂತನ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಿಸಲಾಗಿದೆ. ಮಧ್ಯಪ್ರದೇಶ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ … Continued

ಹಾಸ್ಯಗಾರರ ʼದಶರೂಪಗಳ ದಶಾವತಾರʼ ಕೃತಿ ಯಕ್ಷಗಾನಕ್ಕೊಂದು ಆಕರ ಗ್ರಂಥ

 ಶಿರಸಿ: ದಶರೂಪಗಳ ದಶಾವತಾರ ಕೃತಿಯನ್ನು ವಿಶ್ರಾಂತ ಸಂಪಾದಕ ಅಶೋಕ ಹಾಸ್ಯಗಾರ ಅವರು ಹತ್ತು ವರ್ಷಗಳ ಸತತ ಅಧ್ಯಯನ, ಪರಿಶ್ರಮದಿಂದ ರಚಿಸಿದ್ದಾರೆ. ಯಕ್ಷಗಾನಕ್ಕೆ ಇದೊಂದು ಆಕರ ಗ್ರಂಥ ವಾಗುವುದರಲ್ಲಿ ಸಂಶಯವಿಲ್ಲ. ಎಂದು ಖ್ಯಾತ ಪತ್ರಕರ್ತ, ಅಂಕಣಕಾರ ರಾಜು ಅಡ್ಕಳ್ಳಿ ಹೇಳಿದರು. ಅವರು ಬೆಂಗಳೂರಿನ ಆನಂದ ರಾವ್ ವೃತ್ತದ ಲೆಕ್ಕಾಧಿಕಾರಿಗಳ ಸಂಘದಲ್ಲಿ ವಿಶ್ವಾಭಿಗಮನಮ್ ಯಕ್ಷನೃತ್ಯ, ಸಾಹಿತಿ, ಪ್ರಸಂಗಕರ್ತ ದಿನೇಶ … Continued

ಸವದತ್ತಿ | ಟ್ಯಾಂಕಿನ ನೀರು ಸೇವಿಸಿ 12 ಮಕ್ಕಳು ಆಸ್ಪತ್ರೆಗೆ ದಾಖಲು; ನೀರಿಗೆ ಕೀಟನಾಶಕ ಬೆರಕೆಯಾದ ಶಂಕೆ

ಬೆಳಗಾವಿ: ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಟ್ಯಾಂಕಿನ ನೀರು ಸೇವಿಸಿ 12 ಮಕ್ಕಳು ಅಸ್ವಸ್ಥಗೊಂಡು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಶಾಲೆಯ ಆವರಣದಲ್ಲಿರುವ ಟ್ಯಾಂಕಿಗೆ ಅಪರಿಚಿತ ವ್ಯಕ್ತಿಗಳು ಕೀಟನಾಶಕ ಬೆರೆಸಿರುವ ಶಂಕೆ ವ್ಯಕ್ತವಾಗಿದೆ. ಶಾಲೆಯಲ್ಲಿ 41 ಮಕ್ಕಳಿದ್ದಾರೆ. ಅಲ್ಲದೆ ಈ ಶಾಲೆಯ ಪಕ್ಕದಲ್ಲೇ … Continued

1,40,000 ವರ್ಷಗಳಷ್ಟು ಹಳೆಯ ತಲೆಬುರುಡೆಯು ಆಧುನಿಕ ಮಾನವ- ನಿಯಾಂಡರ್ತಾಲ್ ಮಾನವನ ಮಿಶ್ರತಳಿಯ ಭಾಗವಾಗಿರಬಹುದು: ಅಧ್ಯಯನ

ಇಸ್ರೇಲ್‌ನ ಮೌಂಟ್ ಕಾರ್ಮೆಲ್‌ನಲ್ಲಿರುವ ಸ್ಖುಲ್ ಗುಹೆಯಲ್ಲಿ ಸುಮಾರು 100 ವರ್ಷಗಳ ಹಿಂದೆ ಕಂಡುಬಂದ ಚಿಕ್ಕ ಮಗುವಿಗೆ ಸೇರಿದ ತಲೆಬುರುಡೆಯ ಮೇಲೆ ಸಂಶೋಧಕರು ಹೊಸ ಬೆಳಕನ್ನು ಚೆಲ್ಲಿದ್ದಾರೆ. ಬಹುಶಃ ಹುಡುಗಿಯ ತಲೆಬುರುಡೆಯು 1,40,000 ವರ್ಷಗಳಷ್ಟು ಹಳೆಯದಾದ ಸಮಾಧಿ ಸ್ಥಳದಲ್ಲಿ ಕಂಡುಬಂದ ನಿಗೂಢ ಮಾನವ ಅವಶೇಷಗಳ ಭಾಗವಾಗಿತ್ತು. ಎಲ್’ಆಂಥ್ರೊಪೊಲೊಜಿ ಜರ್ನಲ್‌ನ ಜುಲೈ-ಆಗಸ್ಟ್ ಸಂಚಿಕೆಯಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದರಲ್ಲಿ, ಫ್ರಾನ್ಸ್‌ನ … Continued

ಆಘಾತಕಾರಿ ವೀಡಿಯೊ | ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಅವಘಡ ; ಸ್ಟಂಟ್ ಮ್ಯಾನ್ ಎಸ್.ಎಂ. ರಾಜು ಸಾವು

ಚೆನ್ನೈ: ತಮಿಳುನಾಡಿನಲ್ಲಿ ಭಾನುವಾರ ಬೆಳಿಗ್ಗೆ ಸಿನೆಮಾವೊಂದರ ಸಾಹಸದ ದೃಶ್ಯ ಚಿತ್ರೀಕರಣ ಮಾಡುವಾಗ ನಡೆದ ಅವಘಡದಲ್ಲಿ ಪ್ರಸಿದ್ಧ ಸಾಹಸ ಕಲಾವಿದ ಎಸ್.ಎಂ. ರಾಜು ಸಾವಿಗೀಡಾಗಿದ್ದಾರೆ. ಪಾ ರಂಜಿತ್ ನಿರ್ದೇಶನದ ತಮಿಳು ನಟ ಆರ್ಯ ಅವರ ಮುಂಬರುವ ಚಿತ್ರ ‘ವೆಟ್ಟುವನ್’ ಸಿನೆಮಾದ ಸಾಹಸದ ದೃಶ್ಯಗಳ ಚಿತ್ರೀಕರಣದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದ ಮನಕಲಕುವ ದೃಶ್ಯಗಳು ಕಾಣಿಸಿಕೊಂಡಿದ್ದು, ರಾಜು … Continued

ಜೀವ ಉಳಿಸಿಕೊಳ್ಳಲು ನಾಗರ ಹಾವಿನ ಹೆಡೆ ಮೇಲೆ ಕುಳಿತು ಪಾರಾದ ಇಲಿ ; ಬುದ್ಧಿವಂತಿಕೆಗೆ ಬೆರಗಾಗಲೇ ಬೇಕು | ವೀಕ್ಷಿಸಿ

ಸಾವು ಮುಂದೆ ನಿಂತಾಗ ಪ್ರಾಣಿಗಳು ಜೀವ ಉಳಿಸಿಕೊಳ್ಳಲು ಊಹಿಸಲಾಗದ ತಂತ್ರಗಾರಿಕೆ ಹಾಗೂ ಬುದ್ಧವಂತಿಕೆ ಉಪಯೋಗಿಸಿ ಪಾರಾಗುತ್ತವೆ. ಎಂದು ಹೇಳಲಾಗುತ್ತದೆ. ಇಲಿ ಚಾಣಾಕ್ಷತೆ ಮೂಲಕ ತನ್ನ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಹಾವಿನ ರೂಪದಲ್ಲಿ ಬಂದ ಸಾವಿನಿಂದ ಇಲಿ ಪಾರಾಗಿದ್ದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಇಲಿ ಮರಿಯೊಂದು ತನ್ನ ಜೀವ ಉಳಿಸಿಕೊಳ್ಳಲು … Continued

ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ ಇನ್ನಿಲ್ಲ

ಬೆಂಗಳೂರು: ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ (87) ಇಂದು ವಿಧಿವಶರಾಗಿದ್ದಾರೆ. ಸ್ಯಾಂಡಲ್‌ವುಡ್‌ನ ಅಭಿನಯ ಶಾರದೆ ಎಂದು ಹೆಸರು ಪಡೆದಿದ್ದ ಇವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ಹಲವು ಭಾಷೆಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಇವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸರೋಜಾದೇವಿ ಅವರು 1955 ರಿಂದ 1984 ರವರೆಗೆ ಸತತವಾಗಿ 161 ಚಿತ್ರಗಳಲ್ಲಿ … Continued

ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಸೇರಿ 8 ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಿದ ಅಮೆರಿಕದ ಎಫ್‌ ಬಿಐ

ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ (United States) ಗ್ಯಾಂಗ್‌ಗೆ ಸಂಬಂಧಿತ ಅಪಹರಣ (Kidnapping) ಮತ್ತು ಚಿತ್ರಹಿಂಸೆ ಪ್ರಕರಣಗಳ ತನಿಖೆಯ ಸಂಬಂಧ ಭಾರತೀಯ ಮೂಲದ (Indian-Origin ) ಎಂಟು ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಬಂಧಿತರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಬೇಕಾಗಿರುವ ಪಂಜಾಬ್‌ನ ಗ್ಯಾಂಗ್‌ಸ್ಟರ್ ಪವಿತ್ತರ್ ಸಿಂಗ್ ಬಟಾಲಾ ಕೂಡ ಸೇರಿದ್ದಾನೆ. ಬಟಾಲಾ ನಿಷೇಧಿತ ಭಯೋತ್ಪಾದಕ ಸಂಘಟನೆ … Continued

ವೀಡಿಯೊ…| ಪತ್ನಿಯಿಂದ ವಿಚ್ಛೇದನ ಪಡೆದ ನಂತರ 4 ಬಕೆಟ್‌ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ ವ್ಯಕ್ತಿ…!

ಅಸ್ಸಾಂ ನಿವಾಸಿ ಮಾಣಿಕ್ ಅಲಿಗೆ ಇದು ಸಂಭ್ರಮದ ದಿನವಾಗಿತ್ತು. ಅವರು ಪತ್ನಿಯಿಂದ ವಿಚ್ಛೇದನ ಪಡೆದ ನಂತರ ಬಹುನಿರೀಕ್ಷಿತ “ಸ್ವಾತಂತ್ರ್ಯ”ವನ್ನು ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ ಮತ್ತು ಹಾಲಿನಲ್ಲಿ ಸ್ನಾನ ಮಾಡುವ ಮೂಲಕ ಅದನ್ನು ಅಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ಕೆಳ ಅಸ್ಸಾಂನ ನಲ್ಬರಿ ಜಿಲ್ಲೆಯ ನಿವಾಸಿ ಮಾಣಿಕ್ ಅಲಿ, ತಮ್ಮ ಪತ್ನಿಯಿಂದ ಕಾನೂನುಬದ್ಧವಾಗಿ ಬೇರ್ಪಟ್ಟ ನಂತರ ಹಾಲಿನಲ್ಲಿ ಸ್ನಾನ ಮಾಡಿದರು. … Continued