ದೇಶಕ್ಕೆ ಅವರ ಅಗತ್ಯವಿದೆ…: ತನ್ನ ಎಲ್ಲ ಆಸ್ತಿಯನ್ನೂ ರಾಹುಲ್​ ಗಾಂಧಿ ಹೆಸರಿಗೆ ಬರೆದಿಟ್ಟ ಡೆಹ್ರಾಡೂನಿನ 78 ವರ್ಷದ ಮಹಿಳೆ…!

ಡೆಹ್ರಾಡೂನ್‌: ಉತ್ತರಾಖಂಡ್‌ನ ಡೆಹ್ರಾಡೂನ್‌ನ 78 ವರ್ಷದ ಮಹಿಳೆಯೊಬ್ಬರು 50 ಲಕ್ಷ ರೂ.ಗಳ ಮೌಲ್ಯದ ಆಸ್ತಿ ಮತ್ತು 10 ತೊಲೆ ಚಿನ್ನ ಸೇರಿದಂತೆ ತಮ್ಮ ಎಲ್ಲ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿಗೆ ಬರೆದಿದ್ದಾರೆ. ಪುಷ್ಪಾ ಮುಂಜಿಯಾಲ್ ಎಂಬ ಮಹಿಳೆ ಡೆಹ್ರಾಡೂನ್ ನ್ಯಾಯಾಲಯಕ್ಕೆ ವಿಲ್ ಸಲ್ಲಿಸಿದ್ದು, ರಾಹುಲ್ ಗಾಂಧಿಗೆ ತಮ್ಮ ಆಸ್ತಿಯ ಮಾಲೀಕತ್ವದ ಕಾಗದಪತ್ರಗಳನ್ನು ನೀಡಿದ್ದಾರೆ. … Continued

ರಾಜಸ್ಥಾನದ ಹಿಂಸಾಚಾರದಲ್ಲಿ ಬೆಂಕಿ ಕೆನ್ನಾಲಿಗೆಗೆ ಸುಡುತ್ತಿರುವ ಕಟ್ಟಡಗಳ ಮಧ್ಯೆ ಪುಟ್ಟ ಮಗು ಎತ್ತಿಕೊಂಡು ಓಡಿ ರಕ್ಷಣೆ ಮಾಡಿದ ಪೊಲೀಸ್‌ ಪೇದೆ.. ಈ ಹೃದಯಸ್ಪರ್ಶಿ ಘಟನೆಗೆ ಎಲ್ಲೆಡೆ ಪ್ರಶಂಸೆ

ನವದೆಹಲಿ: ಒಂದು ಚಿತ್ರ ಸಾವಿರ ಪದಗಳನ್ನು ಹೇಳುತ್ತದೆ ಎಂಬುದಕ್ಕೆ ಈ ಫೋಟೋ ಒಂದು ಉತ್ತಮ ನಿದರ್ಶನ. ರಾಜಸ್ಥಾನದ ಹಿಂಸಾಚಾರ-ಪೀಡಿತ ಕರೌಲಿಯ ಈ ಫೋಟೋವು ಗಲಭೆಕೋರರು ಬೆಂಕಿ ಹಚ್ಚಿದ ನಂತರ ಸುಡುತ್ತಿರುವ ಕಟ್ಟಡಗಳ ಮಧ್ಯೆ ರಾಜಸ್ಥಾನದ ಪೊಲೀಸ್ ಪೇದೆಯೊಬ್ಬರು ಪುಟ್ಟ ಮಗುವನ್ನು ಎತ್ತಿಕೊಂಡು ಕಿರಿದಾದ ಕಾಲುದಾರಿಗಳ ಮೂಲಕ ಓಡುತ್ತ ಹಾನಿಯಿಂದ ರಕ್ಷಣೆ ಮಾಡಿದ್ದಕ್ಕೆ ಸಾಕ್ಷಿಯಾಗಿದ್ದು, ಎಲ್ಲಾ ಪ್ರಶಂಸೆಗೆ … Continued

ಮಡಿಲಲ್ಲಿ ಪುಟ್ಟ ತಂಗಿಯೊಂದಿಗೆ ತರಗತಿಗಳಿಗೆ ಹಾಜರಾಗುವ 10 ವರ್ಷದ ಮಣಿಪುರದ ಹುಡುಗಿ..! ಅರ್ಪಣಾ ಭಾವಕ್ಕೆ ಶ್ಲಾಘಿಸಿ ಅವಳ ಪದವಿ ವರೆಗಿನ ಶಿಕ್ಷಣದ ಹೊಣೆ ಹೊತ್ತ ಸಚಿವರು

ಇಂಫಾಲ್: ಮಣಿಪುರದ 10 ವರ್ಷದ ಬಾಲಕಿ ಮೈನಿಂಗ್‌ಸಿನ್ಲಿಯು ಪಮೇಯ್ ತನ್ನ ಸಹೋದರಿಯನ್ನು ಮಡಿಲಲ್ಲಿ ಕೂರಿಸಿಕೊಂಡು ಶಾಲೆಯಲ್ಲಿ ಕಲಿಯುತ್ತಾಳೆ. 4ನೇ ತರಗತಿಯ ವಿದ್ಯಾರ್ಥಿನಿ, ತನ್ನ ತಂಗಿಯನ್ನು ಮಡಿಲಲ್ಲಿ ಇಟ್ಟುಕೊಂಡು ಪ್ರಾಥಮಿಕ ಶಾಲೆ ತರಗತಿಗಳಿಗೆ ಹಾಜರಾಗುತ್ತಿರುವ ಪಮೇಯ ಫೋಟೋ ಮತ್ತು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮಣಿಪುರದ ವಿದ್ಯುತ್, ಅರಣ್ಯ ಮತ್ತು ಪರಿಸರ ಸಚಿವ ಟಿ. ಬಿಸ್ವಜಿತ್ … Continued

ದೇವಸ್ಥಾನದ ಹೊರಗೆ ನಿಲ್ಲಿಸಿದ್ದ ಎನ್​ಫೀಲ್ಡ್​ ಬೈಕ್​ ಬೆಂಕಿ ಹೊತ್ತಿಕೊಂಡು ಸ್ಫೋಟ..!-ದಿಕ್ಕೆಟ್ಟು ಓಡಿದ ಜನ..ವೀಕ್ಷಿಸಿ

ಹೈದರಾಬಾದ್: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ರಾಯಲ್ ಎನ್‌ಫೀಲ್ಡ್ (Royal Enfield) ಬೈಕ್​ಗೆ ಹಠಾತ್ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡ ಆಘಾತಕಾರಿ ಘಟನೆ ನಡೆದಿದ್ದು, ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ದೇವಾಲಯದ ಹೊರಗೆ ಜನರ ಗುಂಪು ಜಮಾಯಿಸಿರುವುದನ್ನು ನೋಡಬಹುದು. ಹೊಸ ಬೈಕ್ ಅನ್ನು ದೇವಸ್ಥಾನದ ಹೊರಗೆ ನಿಲ್ಲಿಸಲಾಗಿತ್ತು. ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದೆ, ನಂತರ ಬೈಕ್‌ ಎಲ್ಲರೂ … Continued

ಆಯುಧದೊಂದಿಗೆ ‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತ ಗೋರಖನಾಥ ದೇಗುಲ ಪ್ರವೇಶಕ್ಕೆ ಯತ್ನಿಸಿದ ವ್ಯಕ್ತಿ, ಪೊಲೀಸರ ಮೇಲೆ ದಾಳಿ, ದೃಶ್ಯ ವೀಡಿಯೊದಲ್ಲಿ ಸೆರೆ

ಲಕ್ನೋ: ಮುಸ್ಲಿಂ ಯುವಕನೊಬ್ಬ ಹರಿತ ಆಯುಧದೊಂದಿಗೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾ ಬಲವಂತವಾಗಿ ಗೋರಖ್‍ನಾಥ ದೇವಸ್ಥಾನದ ದಕ್ಷಿಣ ದ್ವಾರವನ್ನು ಪ್ರವೇಶಿಲು ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಅಹ್ಮದ್ ಮುರ್ತಾಜಾ ಅಬ್ಬಾಸಿ ಎಂದು ಗುರುತಿಸಲಾಗಿದೆ. ಈತ ಗೋರಖ್‍ಪುರದ ನಿವಾಸಿ. ಉತ್ತರ ಪ್ರದೇಶದ ಗೋರಖ್‍ಪುರ ಜಿಲ್ಲೆಯ ಗೋರಖ್‍ನಾಥ ದೇವಸ್ಥಾನದ ದಕ್ಷಿಣ ದ್ವಾರದಲ್ಲಿ ಭಾನುವಾರ … Continued

715 ದಿನಗಳ ನಂತರ ಇದೇ ಮೊದಲ ಬಾರಿಗೆ ಭಾರತದಲ್ಲಿ 1,000ಕ್ಕಿಂತ ಕಡಿಮೆ ದೈನಂದಿನ ಕೋವಿಡ್‌-19 ಪ್ರಕರಣಗಳು ದಾಖಲು…!

ನವದೆಹಲಿ: ಭಾರತದಲ್ಲಿ 715 ದಿನಗಳಲ್ಲಿ ಇದೇ ಮೊದಲ ಬಾರಿಗೆ 1,000 ಕ್ಕಿಂತ ಕಡಿಮೆ ಹೊಸ ಕೋವಿಡ್‌-19 ಪ್ರಕರಣಗಳು ದಾಖಲಾಗಿವೆ. ಏಪ್ರಿಲ್ 18, 2020 ರಿಂದ 991 ಪ್ರಕರಣಗಳು ವರದಿಯಾದ ನಂತರ ಭಾರತವು ಮೊದಲ ಬಾರಿಗೆ 1,000 ಕ್ಕಿಂತ ಕಡಿಮೆ ಕೋವಿಡ್‌-19 ಪ್ರಕರಣಗಳನ್ನು ದಾಖಲಿಸಿದೆ. ವೈರಸ್ ಸಂಖ್ಯೆ 4,30,29,044 ಕ್ಕೆ ಏರಿದೆ, ಆದರೆ ಸಕ್ರಿಯ ಸೋಂಕಿನ ಸಂಖ್ಯೆ … Continued

ಸಾರ್ವಜನಿಕರೆದುರೇ 13 ವರ್ಷದ ಹುಡುಗನಿಗೆ ಪದೇ ಪದೇ ಒದ್ದು ಕಪಾಳಮೋಕ್ಷ ಮಾಡಿದ ಪೊಲೀಸ್‌ ಸಿಬ್ಬಂದಿ ಅಮಾನತು..ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಶನಿವಾರ ಗುಜರಾತಿನ ವಡೋದರಾದ ಮಾರುಕಟ್ಟೆಯೊಂದರಲ್ಲಿ 13 ವರ್ಷದ ಹುಡುಗನಿಗೆ ಒದ್ದು, ಕಪಾಳಮೋಕ್ಷ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಯನ್ನು ಶಕ್ತಿಸಿಂಹ ಪಾವ್ರಾ ಎಂದು ಗುರುತಿಸಲಾಗಿದೆ. ಅವರನ್ನು ಛಾನಿ ಪೊಲೀಸ್ ಠಾಣೆಗೆ ಸೇರಿದವರು ಎಂದು ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾವ್ರಾ ಅವರು ತಮ್ಮ ಅಧಿಕೃತ ವಾಹನವನ್ನು ಬಳಸಿಕೊಂಡು ನಗರದ ಮತ್ತೊಂದು … Continued

ಅಣ್ಣಾಮಲೈ ವಿಶ್ವವಿದ್ಯಾಲಯದ ದೂರ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬೇಡಿ: ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ ಯುಜಿಸಿ

ನವದೆಹಲಿ: ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾನಿಲಯವು ದೂರಶಿಕ್ಷಣ ವಿಧಾನದ ಮೂಲಕ ನೀಡುವ ಯಾವುದೇ ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯದಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದು, ವಿಶ್ವವಿದ್ಯಾಲಯವು ಉನ್ನತ ಶಿಕ್ಷಣ ನಿಯಂತ್ರಕರಿಂದ ಅಗತ್ಯವಿರುವ ಅನುಮೋದನೆಯನ್ನು ಹೊಂದಿಲ್ಲ ಎಂದು ಹೇಳಿದೆ. ಅಣ್ಣಾಮಲೈ ವಿಶ್ವವಿದ್ಯಾನಿಲಯವು ಯುಜಿಸಿ (ಓಪನ್ ಮತ್ತು ಡಿಸ್ಟೆನ್ಸ್ ಲರ್ನಿಂಗ್) ಅಡಿಯಲ್ಲಿ 2017ರ ನಿಯಮಗಳು ಮತ್ತು ಕಾಲಕಾಲಕ್ಕೆ … Continued

ಹೈದರಾಬಾದ್ ರೇವ್ ಪಾರ್ಟಿ: ವಿಐಪಿಗಳು-ನಟರು-ರಾಜಕಾರಣಿಗಳ ಮಕ್ಕಳು ಸೇರಿ 142 ಜನರು ವಶಕ್ಕೆ

ಹೈದರಾಬಾದ್: ಬಂಜಾರಾ ಹಿಲ್ಸ್‌ನ ಪಂಚತಾರಾ ಹೋಟೆಲ್‌ನ ಪಬ್‌ನಲ್ಲಿ ಭಾನುವಾರ ಮುಂಜಾನೆ ರೇವ್ ಪಾರ್ಟಿಯನ್ನು ಭೇದಿಸಿದ ಹೈದರಾಬಾದ್ ಪೊಲೀಸ್ ಟಾಸ್ಕ್ ಫೋರ್ಸ್ ತಂಡವು ವಿಐಪಿಗಳು, ನಟರು ಮತ್ತು ರಾಜಕಾರಣಿಗಳ ಮಕ್ಕಳು ಸೇರಿದಂತೆ ಸುಮಾರು 142 ಜನರನ್ನು ವಶಕ್ಕೆ ತೆಗೆದುಕೊಂಡಿದೆ. ಕೊಕೇನ್ ಮತ್ತು ವೀಡ್‌ನಂತಹ ನಿಷೇಧಿತ ಪದಾರ್ಥಗಳು ಅವರ ಬಳಿ ಕಂಡುಬಂದಿವೆ ಎಂದು ವರದಿಗಳು ಹೇಳುತ್ತವೆ. ಬಂಧಿತರಲ್ಲಿ ನಟ … Continued

ಭೂತ ಓಡಿಸುತ್ತೇನೆಂದು ಬಾಲಕಿಗೆ ಥಳಿಸಿ ಧೂಪದ ಕಡ್ಡಿಯಿಂದ ದೇಹ ಸುಟ್ಟ ಮಂತ್ರವಾದಿ ಬಂಧನ: ಬಾಲಕಿ ಆಸ್ಪತ್ರೆಗೆ ದಾಖಲು

ರಾಂಚಿ: ದುಷ್ಟಶಕ್ತಿಗಳನ್ನು ಓಡಸಿಲು 14 ವರ್ಷದ ಬಾಲಕಿಯನ್ನು ಥಳಿಸಿ, ಆಕೆಯ ದೇಹದ ಭಾಗಗಳನ್ನು ಅಗರಬತ್ತಿಗಳಿಂದ ಸುಟ್ಟ ಆರೋಪದ ಮೇಲೆ ಜಾರ್ಖಂಡ್‌ನ ಛತ್ರಾ ಜಿಲ್ಲೆಯಲ್ಲಿ ಮಂತ್ರವಾದಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಕಳೆದ ವಾರ ಹೋಳಿ ಆಡಿದ್ದ ಬಾಲಕಿ ನಂತರ ಬಾಲಕಿ ಅಸ್ವಸ್ಥಳಾಗಿದ್ದಳು. ಮಾಂತ್ರಿಕ ಮೌಲಾನಾ ಎಂ.ಡಿ ವಾಹಿದ್ ಎಂಬಾತ ಅವಳ ಮೈಯಲ್ಲಿ ಭೂತ ಹೊಕ್ಕಿದ್ದು. … Continued