ಕೆನಡಾದಲ್ಲಿ ಹತ್ಯೆಯಾದ ಭಾರತಕ್ಕೆ ಬೇಕಾಗಿದ್ದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್‌

ಕೆನಡಾದ ಸರ್ರೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತ ಸರ್ಕಾರಕ್ಕೆ ಬೇಕಾಗಿದ್ದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತನಾಗಿದ್ದಾನೆ. ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಪಂಜಾಬಿ ಪ್ರಾಬಲ್ಯದ ಸರ್ರೆ ನಗರದಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರದಲ್ಲಿ ನಿಯೋಜಿತ ಭಯೋತ್ಪಾದಕ ಮತ್ತು ಖಲಿಸ್ತಾನ್ ಬೆಂಬಲಿಗ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇತ್ತೀಚೆಗೆ, ಭಾರತ ಸರ್ಕಾರ ಬಿಡುಗಡೆ … Continued

ಇಸ್ರೇಲಿ ಬೀಚ್‌ನಲ್ಲಿ ಓಡಾಡುತ್ತಿದ್ದ ಮಹಿಳೆಗೆ ಕಂಡಿತು 3,000 ವರ್ಷ ಹಳೆಯ ಈಜಿಪ್ಟ್​ ದೇವತೆ ಪ್ರತಿಮೆ..!

ಟೆಲ್ ಅವೀವ್: ಟೆಲ್ ಅವೀವ್‌ನ ದಕ್ಷಿಣಕ್ಕೆ ಇಸ್ರೇಲ್‌ನ ಪಲ್ಮಹಿಮ್ ಬೀಚ್‌ನಲ್ಲಿ ಅಡ್ಡಾಡುತ್ತಿದ್ದ 74 ವರ್ಷದ ಮಹಿಳೆಯೊಬ್ಬರು ಮೂರು ಸಾವಿರ ವರ್ಷಗಳಷ್ಟು ಹಳೆಯದಾದ ಈಜಿಪ್ಟ್ ದೇವತೆಯ ಪ್ರತಿಮೆಯನ್ನು ಕಂಡು ಪುಳಕಿತಗೊಂಡಿದ್ದಾರೆ. ನಾನು ಮತ್ತು ಪತಿ ಒಂದು ದಿನ ಸಮುದ್ರದ ಬಳಿ ಹೋಗುವಾಗ ಬಿರುಗಾಳಿ ಬಂತು. ಆ ಸಮಯದಲ್ಲಿ ಒಂದು ವಸ್ತು ಹೊರಹೊಮ್ಮುವುದನ್ನು ನೋಡಿದೆ. ಹತ್ತಿರ ಹೋಗಿ ನೋಡಿದರೆ … Continued

ಬಾಹ್ಯಾಕಾಶದಲ್ಲಿ ಅರಳಿದ ಸುಂದರ ಹೂವು : ನಾಸಾ ಬಿಡುಗಡೆಗೊಳಿಸಿದ ಹೂವಿನ ಫೋಟೋಕ್ಕೆ ಎಲ್ಲರೂ ಫಿದಾ

ಬಾಹ್ಯಾಕಾಶ ಮತ್ತು ಬ್ರಹ್ಮಾಂಡವನ್ನು ಕುತೂಹಲಗಳ ಗುಚ್ಛ ಎಂದೇ ಕರೆಯುತ್ತಾರೆ. ಬಾಹ್ಯಾಕಾಶದ ಸಂಶೋಧನೆ ವೇಳೆ ಆಗಾಗ ಅನೇಕ ಕೌತುಕಗಳು ಹೊರಬೀಳುತ್ತಲೇ ಇರುತ್ತವೆ. ಈಗಾಗಲೇ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ತರಕಾರಿ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಅಂತರಿಕ್ಷದಲ್ಲಿ ಹೂವೊಂದು ಅರಳಿದ್ದು ಎಲ್ಲರ ಕೌತುಕಕ್ಕೆ ಕಾರಣವಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಶೋದನಾ ಸಂಸ್ಥೆ‌ ನಾಸಾ ಬಾಹ್ಯಾಕಾಶದಲ್ಲಿ ಹೂವು ಅರಳಿದ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ … Continued

ಮುಂದಿನ ತಿಂಗಳಿನಿಂದ ತನ್ನ ಆಲ್ಬಮ್ ಆರ್ಕೈವ್ ಸೇವೆ ಬಂದ್‌ ಮಾಡಲಿರುವ ಗೂಗಲ್…!

ನವದೆಹಲಿ: ಜುಲೈ 19 ರಂದು ಆಲ್ಬಮ್ ಆರ್ಕೈವ್ ಅನ್ನು ಸ್ಥಗಿತಗೊಳಿಸಲಾಗುವುದು ಎಂದು ಗೂಗಲ್ ಹೇಳಿದೆ. ಗೂಗಲ್ ಆಲ್ಬಮ್ ಆರ್ಕೈವ್ ಸೇವೆಯು ತನ್ನ ಕೆಲವು ಉತ್ಪನ್ನಗಳಿಂದ ಆಲ್ಬಮ್ ವಿಷಯವನ್ನು ನೋಡಲು ಮತ್ತು ನಿರ್ವಹಿಸಲು ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿದೆ. ಈಗ, ಟೇಕ್‌ಔಟ್ ಬಳಸಿಕೊಂಡು ಬಳಕೆದಾರರು ತಮ್ಮ ಆಲ್ಬಮ್ ಆರ್ಕೈವ್ ಡೇಟಾದ ನಕಲನ್ನು ಡೌನ್‌ಲೋಡ್ ಮಾಡಲು ಸಂಸ್ಥೆಯು ವಿನಂತಿಸುತ್ತಿದೆ. “ಜುಲೈ … Continued

ಎಡಿಎಫ್‌ ಉಗ್ರರಿಂದ ಉಗಾಂಡಾ ಶಾಲೆ ಮೇಲೆ ದಾಳಿ: 38 ವಿದ್ಯಾರ್ಥಿಗಳು, 3 ವಯಸ್ಕರನ್ನು ಬೆಂಕಿ ಇಟ್ಟು ಸುಟ್ಟರು, ಗುಂಡು ಹಾರಿಸಿ, ಮಚ್ಚಿನಿಂದ ಕೊಚ್ಚಿ ಕೊಂದರು

ಉಗಾಂಡಾದ ಅಧ್ಯಕ್ಷ ಯೊವೆರಿ ಮುಸೆವೆನಿ ಆಡಳಿತದ ವಿರುದ್ಧ ಹೋರಾಡುತ್ತಿರುವ ಅಲೈಡ್ ಡೆಮಾಕ್ರಟಿಕ್ ಫೋರ್ಸಸ್ (ADF) ನ ಭಯೋತ್ಪಾದಕರು, ಕಾಂಗೋ ಗಡಿಯ ಸಮೀಪವಿರುವ ಖಾಸಗಿ ಶಾಲೆಯ ಮೇಲೆ ನಡೆಸಿದ ದಾಳಿಯಲ್ಲಿ 38 ವಿದ್ಯಾರ್ಥಿಗಳು ಸೇರಿದಂತೆ 41 ಜನರು ಸತ್ತಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಶಂಕಿತ ಬಂಡುಕೋರರು ಕಾಂಗೋ ಗಡಿಯ ಸಮೀಪವಿರುವ ಮಾಧ್ಯಮಿಕ ಶಾಲೆಯ ಮೇಲೆ ದಾಳಿ ಮಾಡಿ … Continued

ಹಿಂದೂ ಧರ್ಮ ಸ್ವೀಕರಿಸಿದ ಪಾಕಿಸ್ತಾನದ ಪ್ರಭಾವಿ ಶಯಾನ್ ಅಲಿ: ಐಎಸ್‌ಐ ಚಿತ್ರಹಿಂಸೆ ನೀಡಿದಾಗ ಭಗವಾನ್ ಕೃಷ್ಣ ಕೈ ಹಿಡಿದ ಎಂದ ಪ್ರಭಾವಿ

ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಪ್ರಭಾವಿ ಶಯಾನ್ ಅಲಿ ಇತ್ತೀಚೆಗೆ ಜೀವನ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ, ಅವರು ತಾವು ಇಸ್ಲಾಮಿಕ್ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳ ನಿರಂತರ ಕಿರುಕುಳದಿಂದಾಗಿ ತಾವು ದೇಶದಿಂದ ಪಲಾಯನ ಮಾಡುವಂತಾಯಿತು ಎಂದು ಶಯಾನ್ ಹೇಳಿದ್ದಾರೆ. ಈ ಸವಾಲಿನ ಅವಧಿಯಲ್ಲಿ, ತನಗೆ ಶ್ರೀಕೃಷ್ಣನಿಂದ ಸಾಂತ್ವನ ಸಿಕ್ಕಿತು. ಆತ … Continued

ಉತ್ತಮವಾಗಿ ಸಂರಕ್ಷಿಸಲ್ಪಟ್ಟ 3,000 ವರ್ಷಗಳಷ್ಟು ಹಳೆಯ ಕತ್ತಿ ಪತ್ತೆ ಮಾಡಿದ ಪುರಾತತ್ವಶಾಸ್ತ್ರಜ್ಞರು

ಕಂಚಿನ ಯುಗದ ಸಮಾಧಿಯೊಂದರಿಂದ 3,000 ವರ್ಷಗಳಷ್ಟು ಹಳೆಯದಾದ ಖಡ್ಗವನ್ನು ಜರ್ಮನಿಯಲ್ಲಿ ಪುರಾತತ್ತ್ವಜ್ಞರು ಕಂಡುಕೊಂಡಿದ್ದಾರೆ. ಅತ್ಯುತ್ತಮ ಸಂರಕ್ಷಣೆಯಿಂದಾಗಿ ಅದು ಇನ್ನೂ ಹೊಳೆಯುತ್ತಿದೆ. ಸ್ಮಾರಕ ಸಂರಕ್ಷಣೆಗಾಗಿ ಇರುವ ಬವೇರಿಯನ್ ಸ್ಟೇಟ್ ಆಫೀಸ್ ಜೂನ್ 14 ರಂದು ನೀಡಿದ ಹೇಳಿಕೆಯ ಪ್ರಕಾರ, 3,000 ವರ್ಷಗಳಷ್ಟು ಹಳೆಯದಾದ ಖಡ್ಗವು ಬವೇರಿಯನ್ ಪಟ್ಟಣವಾದ ನಾರ್ಡ್ಲಿಂಗೆನ್‌ನಲ್ಲಿ ಪುರುಷ, ಮಹಿಳೆ ಮತ್ತು ಮಗುವಿನ ಸಮಾಧಿಯಲ್ಲಿ ಕಂಡುಬಂದಿದೆ. … Continued

ಐಸಿಸಿ ಟೆಸ್ಟ್‌ ಶ್ರೇಯಾಂಕ ಪ್ರಕಟ ; ಬೌಲಿಂಗ್‌ ನಲ್ಲಿ ಭಾರತದ ಸ್ಪಿನ್ನರ್‌ ಅಶ್ವಿನ್‌ ಗೆ ಅಗ್ರಸ್ಥಾನ

ನವದೆಹಲಿ : ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಹೊಸ ಟೆಸ್ಟ್ ಶ್ರೇಯಾಂಕಗಳನ್ನ ಪ್ರಕಟಿಸಿದೆ. ಬೌಲರ್‌ಗಳ ವಿಭಾಗದಲ್ಲಿ ಅನುಭವಿ ಆಫ್ ಸ್ಪಿನ್ನರ್ ಭಾರತದ ಆರ್‌.ಅಶ್ವಿನ್ ಅವರು ಮೊದಲನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ ವೇಗಿ ಜೇಮ್ಸ್‌ ಆಂಡರ್ಸನ್‌ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಹತ್ತು ಶ್ರೇಯಾಂಕಗಳಲ್ಲಿ ಭಾರತದ ವೇಗಿ ಜಸ್ಪ್ರೀತ್‌ ಬುಮ್ರಾ 8ನೇ ಸ್ಥಾನ ಹಾಗೂ ಸ್ಪಿನ್ನರ್ ರವೀಂದ್ರ ಜಡೇಜಾ 9ನೇ … Continued

ಉತ್ತರ ನೈಜೀರಿಯಾದಲ್ಲಿ ದೋಣಿ ಮುಳುಗಿ ಮದುವೆಯಿಂದ ಬರುತ್ತಿದ್ದ 103 ಮಂದಿ ಸಾವು, ಹಲವರು ನಾಪತ್ತೆ

ಅಬುಜಾ (ನೈಜಿರಿಯಾ) : ಉತ್ತರ ನೈಜೀರಿಯಾದಲ್ಲಿ ಮದುವೆಯಿಂದ ಹಿಂದಿರುಗುತ್ತಿದ್ದ ದೋಣಿ ಮಗುಚಿ, ಮಕ್ಕಳು ಸೇರಿದಂತೆ ಕನಿಷ್ಠ 103 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ರಾಜ್ಯದ ರಾಜಧಾನಿ ಇಲೋರಿನ್‌ನಿಂದ 160 ಕಿಲೋಮೀಟರ್ (100 ಮೈಲುಗಳು) ದೂರದಲ್ಲಿರುವ ಕ್ವಾರಾ ರಾಜ್ಯದ ಪಟೇಗಿ ಜಿಲ್ಲೆಯ ನೈಜರ್ ನದಿಯಲ್ಲಿ ಮುಳುಗಿದ ಕಿಕ್ಕಿರಿದ ದೋಣಿಯಲ್ಲಿದ್ದ ಡಜನ್ಗಟ್ಟಲೆ ಜನರನ್ನು ನಿವಾಸಿಗಳು ಮತ್ತು … Continued

ವಾಷಿಂಗ್ಟನ್‌ನಿಂದ ನ್ಯೂಯಾರ್ಕ್‌ ವರೆಗೆ ರಾಹುಲ್ ಗಾಂಧಿ “ಅಮೆರಿಕನ್ ಟ್ರಕ್ ಯಾತ್ರೆ” | ವೀಕ್ಷಿಸಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ವಾಷಿಂಗ್ಟನ್‌ನಿಂದ ನ್ಯೂಯಾರ್ಕ್‌ಗೆ ಟ್ರಕ್‌ನಲ್ಲಿ ಪ್ರಯಾಣಿಸಿದರು ಮತ್ತು ಅಮೆರಿಕದಲ್ಲಿರುವ ಭಾರತೀಯ ಮೂಲದ ಟ್ರಕ್ ಡ್ರೈವರ್‌ಗಳ ದೈನಂದಿನ ಜೀವನವನ್ನು ಕೇಂದ್ರೀಕರಿಸಿ ಚಾಲಕನೊಂದಿಗೆ ಪ್ರಾಮಾಣಿಕ ಸಂಭಾಷಣೆಯಲ್ಲಿ ತೊಡಗಿದ್ದರು. ಟ್ರಕ್ ಡ್ರೈವರ್‌ಗಳ ಸಮಸ್ಯೆಗಳನ್ನು ಆಲಿಸಲು ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್ ಸವಾರಿ ಮಾಡಿದ ಕೆಲವು ದಿನಗಳ ನಂತರ ರಾಹುಲ್‌ ಗಾಂಧಿ ಅಮೆರಿಕಕ್ಕೆ ಭೇಟಿ … Continued