ಬಿಹಾರ : ಖಾತೆ ಬದಲಾಯಿಸಿದ ಕೆಲವೇ ಗಂಟೆಗಳಲ್ಲಿ ಸಚಿವ ಸ್ಥಾನಕ್ಕೆ ಕಾರ್ತಿಕ್ ಕುಮಾರ್ ರಾಜೀನಾಮೆ

ಪಾಟ್ನಾ : ಅಪಹರಣ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾದ ಬಿಹಾರದ ಸಚಿವ ಮತ್ತು ಆರ್‌ಜೆಡಿ ನಾಯಕ ಕಾರ್ತಿಕ್ ಕುಮಾರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ಅಂಗೀಕರಿಸಿ ರಾಜ್ಯಪಾಲರಿಗೆ ರವಾನಿಸಿದ್ದಾರೆ. ಕಾರ್ತಿಕ್ ಕುಮಾರ್ ಅವರನ್ನು ಕಾನೂನು ಸಚಿವ ಸ್ಥಾನದಿಂದ ತೆಗೆದು ಇಂದು, ಬುಧವಾರ ಬೆಳಿಗ್ಗೆ ಕಬ್ಬು ಸಚಿವರನ್ನಾಗಿ ಮಾಡಿದ ನಂತರ ಅವರ … Continued

ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸುಕೇಶ ಅಪರಾಧಗಳ ಬಗ್ಗೆ ತಿಳಿದಿತ್ತು, ಆದರೂ ಆತನಿಂದ ದುಬಾರಿ ಉಡುಗೊರೆಗಳನ್ನು ಪಡೆದರು: ಇ.ಡಿ ಆರೋಪಪಟ್ಟಿ

ನವದೆಹಲಿ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಸುಕೇಶ್ ಚಂದ್ರಶೇಖರ್ ಅವರಿಂದ 5.71 ಕೋಟಿ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ ಆದರೆ “ಸುಕೇಶ್ ಸಂಚಿಗೆ ತಾನು ಬಲಿಪಶು ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ” ಎಂದು ಜಾರಿ ನಿರ್ದೇಶನಾಲಯದ ಪೂರಕ ಆರೋಪಪಟ್ಟಿ ಹೇಳಿದೆ. ಆಗಸ್ಟ್ 17 ರಂದು ಪಾಟಿಯಾಲ ಹೌಸ್ ನ್ಯಾಯಾಲಯಕ್ಕೆ ಪೂರಕ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಅದರಲ್ಲಿ ಜಾಕ್ವೆಲಿನ್ … Continued

ಜೂನ್ ತ್ರೈಮಾಸಿಕದಲ್ಲಿ ಆರ್ಥಿಕತೆ 13.5% ಬೆಳವಣಿಗೆ; ಒಂದು ವರ್ಷದಲ್ಲಿ ಇದು ಅತಿ ಹೆಚ್ಚು ಬೆಳವಣಿಗೆ, ಆದರೆ ಆರ್‌ಬಿಐ ಊಹಿಸಿದ್ದಕ್ಕಿಂತ ಕಡಿಮೆ

ನವದೆಹಲಿ: ಭಾರತದ ಆರ್ಥಿಕತೆಯು ಒಂದು ವರ್ಷದ ಹಿಂದಿನ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇಕಡಾ 13.5 ರಷ್ಟು ಬೆಳೆದಿದೆ, ಇದು ಒಂದು ವರ್ಷದಲ್ಲಿ ಅದರ ವೇಗದ ವಾರ್ಷಿಕ ವಿಸ್ತರಣೆಯಾಗಿದೆ, ಆದರೆ ಅರ್ಥಶಾಸ್ತ್ರಜ್ಞರು, ವಿಶ್ಲೇಷಕರು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಸ್ಥೂಲವಾಗಿ ಊಹಿಸಿದ್ದಕ್ಕಿಂತ ಕಡಿಮೆಯಾಗಿದೆ. ಜನವರಿಯಿಂದ ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡಾ 4.1 ಕ್ಕೆ ಹೋಲಿಸಿದರೆ. ಜೂನ್ 30ರ ವರೆಗಿನ ಮೂರು … Continued

ಒಂದು ತಿಂಗಳ ಕಾಲ ಕುಟುಂಬದ ಜೊತೆ ಕಾರಿನಲ್ಲಿ ಪ್ರಯಾಣಿಸಿದ ಕಾಳಿಂಗ ಸರ್ಪ: ಅದು ಇದ್ದಿದ್ದೇ ಯಾರಿಗೂ ಗೊತ್ತಾಗಲಿಲ್ಲ..!

ಕೊಟ್ಟಾಯಂ: ಕೇರಳದ ಕೊತ್ತಾಯಂನ ಅರ್ಪುಕರ ಮೂಲದ ಸುಜಿತ್ ಎಂಬವರ ಕಾರಿನಲ್ಲಿ ಸುಮಾರು ಒಂದು ತಿಂಗಳ ಕಾಲ ಅಡಗಿದ್ದ ಕಾಳಿಂಗ ಸರ್ಪ ಕುಟುಂಬ ಎಲ್ಲೆಲ್ಲಿಗೆ ಹೋಗಿದೆಯೋ ಅಲ್ಲೆಲ್ಲ ಪ್ರಯಾಣ ಬೆಳೆಸಿದೆ. ಆದರೆ ಕುಟುಂಬಕ್ಕೆ ಇದು ಗೊತ್ತೇ ಇರಲಿಲ್ಲ..! ಒಂದು ತಿಂಗಳ ಹಿಂದೆ, ಸುಜಿತ್ ಮತ್ತು ಅವರ ಸ್ನೇಹಿತರು ಕೆಲಸದ ನಿಮಿತ್ತ ನಿಲಂಬೂರಿಗೆ ಹೋಗಿದ್ದಾಗ ಕಾರಿನ ಸಮೀಪದಲ್ಲಿ ಕಾಣಿಸಿಕೊಂಡಿದ್ದ … Continued

ಗಣೇಶನ ಹಬ್ಬಕ್ಕೆ ದಾಖಲೆ ಪ್ರಮಾಣದ 316 ಕೋಟಿ ಮೌಲ್ಯದ ವಿಮಾ ಕವರ್‌ ಪಡೆದ ಮುಂಬೈನ ಜಿಎಸ್‌ಬಿ ಸೇವಾ ಮಂಡಲ…!

ಮುಂಬೈ: ಮುಂಬೈನ ಅತ್ಯಂತ ಶ್ರೀಮಂತ ಗಣೇಶ ಮಂಡಲಗಳಲ್ಲಿ ಒಂದಾದ ಗೌಡ್ ಸಾರಸ್ವತ ಬ್ರಾಹ್ಮಣ (GSB) ಸೇವಾ ಮಂಡಲವು ಮುಂಬರುವ ಗಣೇಶ ಚತುರ್ಥಿ ಹಬ್ಬಕ್ಕಾಗಿ 316.40 ಕೋಟಿ ರೂಪಾಯಿಗಳ ವಿಮಾ ರಕ್ಷಣೆಯನ್ನು ಪಡೆದುಕೊಂಡಿದೆ. ಜಿಎಸ್‌ಬಿ (GSB) ಸೇವಾ ಮಂಡಲವನ್ನು 1955 ರಲ್ಲಿ ಮಧ್ಯ ಮುಂಬೈನ ಮಾತುಂಗಾದ ಕಿಂಗ್ಸ್ ಸರ್ಕಲ್ ಬಳಿ ಸ್ಥಾಪಿಸಲಾಯಿತು. ಕೋವಿಡ್ ನಿರ್ಬಂಧಗಳು ಮತ್ತು ಲಾಕ್‌ಡೌನ್‌ಗಳಿಂದಾಗಿ … Continued

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ತಾಯಿ ನಿಧನ

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ತಾಯಿ ಪಾವೊಲಾ ಮೈನೋ ಅವರು ಆಗಸ್ಟ್ 27, ಶನಿವಾರ ಇಟಲಿಯ ತಮ್ಮ ಮನೆಯಲ್ಲಿ ನಿಧನರಾದರು. ಅಂತ್ಯಕ್ರಿಯೆಯು ಮಂಗಳವಾರ, ಆಗಸ್ಟ್ 30 ರಂದು ನಡೆಯಿತು. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. “ಶ್ರೀಮತಿ ಸೋನಿಯಾ ಗಾಂಧಿಯವರ ತಾಯಿ, ಶ್ರೀಮತಿ ಪಾವೊಲಾ ಮೈನೋ ಅವರು … Continued

ಇಮ್ಮೋರ್ಟಲ್‌ ಜೆಲ್ಲಿ ಮೀನುಗಳ ಆನುವಂಶಿಕ ಸಂಕೇತ ಭೇದಿಸಿದ ವಿಜ್ಞಾನಿಗಳು, ಇದರಿಂದ ಮಾನವನ ವಯಸ್ಸಾಗುವಿಕೆಗೆ ಉತ್ತರ ಸಿಗಬಹುದೇ..?

ದೀರ್ಘಾಯುಷ್ಯ, ವಯಸ್ಸಾಗುವಿಕೆ ಮತ್ತು ಅಮರತ್ವವು ಮಾನವರನ್ನು ಕಾಡುವ ಕೆಲವು ಪರಿಕಲ್ಪನೆಗಳು. ಆದರೆ, ಇಲ್ಲಿಯವರೆಗೆ, ಅಮರತ್ವದ ಬಗೆಗಿನ ರಹಸ್ಯವನ್ನು ಅನ್ಲಾಕ್ ಮಾಡುವ ಯಾವುದೇ ಉತ್ತರಗಳಿಲ್ಲ. ವಿಜ್ಞಾನಿಗಳು ಈಗ ಅಮರತ್ವದ ಬಗ್ಗೆ ಜೆಲ್ಲಿ ಮೀನುಗಳಲ್ಲಿ ಉತ್ತರಗಳನ್ನು ಹುಡುಕುತ್ತಿದ್ದಾರೆ, ಇದು ಯಾಕೆಂದರೆ ಅದು ಪದೇಪದೇ ಪುನರ್ಯೌವನಗೊಳ್ಳುವ ಸ್ಥಿತಿಗೆ ಮರಳುವ ಸಾಮರ್ಥ್ಯವನ್ನು ಹೊಂದಿದೆ. ಸ್ಪೇನ್‌ನ ಸಂಶೋಧಕರು ಅಮರ ಜೆಲ್ಲಿ ಮೀನುಗಳ (immortal … Continued

ಕೋವಿಡ್‌ ಸಂಕಟದ 2021ರಲ್ಲಿ ದಿನಗೂಲಿ ಕಾರ್ಮಿಕರು ಅತಿಹೆಚ್ಚು ಆತ್ಮಹತ್ಯೆ : ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

ನವದೆಹಲಿ: 2021 ರಲ್ಲಿ ಭಾರತವು ಕೋವಿಡ್‌-19 ಸಾಂಕ್ರಾಮಿಕದ ಹಿಡಿತದಲ್ಲಿದ್ದಾಗ ಆತ್ಮಹತ್ಯೆಯಿಂದ ಮೃತಪಟ್ಟವರಲ್ಲಿ ದಿನಗೂಲಿ ಕೆಲಸಗಾರರು, ವೇತನದಾರರು, ಸ್ವಯಂ ಉದ್ಯೋಗಿಗಳು, ನಿರುದ್ಯೋಗಿಗಳು ಮತ್ತು ಕೃಷಿ ವಲಯದಲ್ಲಿ ತೊಡಗಿಸಿಕೊಂಡಿರುವರೇ ಹೆಚ್ಚಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿವೆ. ಎನ್‌ಸಿಆರ್‌ಬಿ ಪ್ರಕಾರ, 2021 ರಲ್ಲಿ ದೇಶಾದ್ಯಂತ ಒಟ್ಟು 1,64,033 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. … Continued

ರೈಲು ಬರುವ ಸೂಚನೆಯಿದ್ದರೂ ದಾಟಲು ಹೋಗಿ ಬೈಕ್‌ ಪುಡಿಪುಡಿ, ವ್ಯಕ್ತಿ ಸ್ವಲ್ಪದರಲ್ಲೇ ಪಾರು: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಭಾರತೀಯ ರೈಲ್ವೆಯಿಂದ ಆಗಾಗ್ಗೆ ಎಚ್ಚರಿಕೆಗಳು ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳ ಹೊರತಾಗಿಯೂ, ರೈಲ್ವೆ ಕ್ರಾಸಿಂಗ್‌ನಲ್ಲಿ ನಿಯಮಗಳನ್ನು ನಿರ್ಲಕ್ಷಿಸುವಲ್ಲಿ ಅನೇಕರು ನಿಯಮಗಳನ್ನು ನಿರ್ಲಕ್ಷಿಸುತ್ತಲೇ ಇರುತ್ತಾರೆ, ಇದು ದುರಂತ ಅಪಘಾತಗಳಿಗೆ ಕಾರಣವಾಗುತ್ತದೆ. ಆಗಸ್ಟ್ 26 ರಂದು ಉತ್ತರ ಪ್ರದೇಶದ ಇಟಾವಾದಲ್ಲಿ ಇಂಥ ಒಂದು ಘಟನೆಯೊಂದರಲ್ಲಿ ವ್ಯಕ್ತಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಆದರೆ ಅವರ ಬೈಕ್‌ ರೈಲ್ವೆಗೆ ಸಿಕ್ಕು ಪುಡಿಪುಡಿಯಾಗಿದೆ. ಈ ಘಟನೆ … Continued

ಪಂಜಾಬಿನಲ್ಲಿ ಪಾದ್ರಿ ಕಾರಿಗೆ ಬೆಂಕಿ; ಚರ್ಚ್‌ನ ಪ್ರತಿಮೆಗೆ ಹಾನಿ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಚಂಡೀಗಡ: ಪಂಜಾಬ್‌ನ ತರನ್‌ ತಾರನ್ ಜಿಲ್ಲೆಯಲ್ಲಿ ಜನರ ಗುಂಪೊಂದು ನಿನ್ನೆ ರಾತ್ರಿ ಸ್ಥಳೀಯ ಚರ್ಚ್‌ಗೆ ಬಲವಂತವಾಗಿ ನುಗ್ಗಿ ಯೇಸು ಮತ್ತು ಮೇರಿಯ ಪ್ರತಿಮೆಯನ್ನು ಧ್ವಂಸಗೊಳಿಸಿದೆ. ಪಾದ್ರಿಯ ಕಾರಿಗೂ ಬೆಂಕಿ ಹಚ್ಚಲಾಗಿದೆ. ಸ್ಥಳದ ದೃಶ್ಯಗಳು ಕಾರು ಬೆಂಕಿ ಹೊತ್ತಿಕೊಂಡಿರುವುದನ್ನು ಮತ್ತು ಚರ್ಚ್‌ನೊಳಗೆ ಹಾನಿಗೊಳಗಾದ ಪ್ರತಿಮೆಯನ್ನು ತೋರಿಸುತ್ತವೆ. ಚರ್ಚ್‌ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕೆಂಪು ಶಿರಸ್ತ್ರಾಣವನ್ನು ಧರಿಸಿದ ವ್ಯಕ್ತಿಯೊಬ್ಬರು ವಿಗ್ರಹಕ್ಕೆ … Continued