ಒಬಾಮಾಗೆ ನೀಡಿದಂತೆ ಪ್ರಧಾನಿ ಮೋದಿ ರೈತರಿಗೂ ಆತಿಥ್ಯ ನೀಡಲಿ

ಭರೂಚ್: ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾಗೆ ೨೦೧೫ರಲ್ಲಿ ಆತಿಥ್ಯ ನೀಡಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಭಟನಾ ನಿರತ ರೈತರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಬೇಕು ಹಾಗೂ ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಹೇಳಿದ್ದಾರೆ. ಭಾನುವಾರ ಗುಜರಾತ್‌ನ ಸ್ಥಳೀಯ ಸಂಸ್ಥೆಗಳಿಗೆ ಮುಂಬರುವ ಚುನಾವಣೆಗಾಗಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಎರಡು … Continued

ಟ್ವಿಟರ್ ಇಂಡಿಯಾ ಪಾಲಿಸಿ ಮುಖ್ಯಸ್ಥೆ ಮಹಿಮಾ ಕೌಲ್‌ ರಾಜೀನಾಮೆ

  ನವ ದೆಹಲಿ: ಟ್ವಿಟರ್ ಇಂಡಿಯಾದ ಸಾರ್ವಜನಿಕ ನೀತಿ ಮುಖ್ಯಸ್ಥರಾದ ಮಹಿಮಾ ಕೌಲ್ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾರ್ಚ್ ಅಂತ್ಯದವರೆಗೆ ಕೌಲ್ ತನ್ನ ಸ್ಥಾನದಲ್ಲಿ ಮುಂದುವರಿಲಿದ್ದಾರೆ ಎಂದು ಟ್ವಿಟರ್ ಹೇಳಿಕೆಯಲ್ಲಿ ತಿಳಿಸಿದೆ. ಒಂದು ವರ್ಷದೊಳಗೆ ಇದು ಇಂತಹ ಎರಡನೆಯ ರಾಜೀನಾಮೆಯಾಗಿದ್ದು, 2020ರ ಅಕ್ಟೋಬರ್‌ನಲ್ಲಿ ಫೇಸ್‌ಬುಕ್‌ನ ಭಾರತ ನೀತಿ ಮುಖ್ಯಸ್ಥರಾಗಿ ಅಂಕಿ … Continued

ಶಶಿಕಲಾ ವಿರುದ್ಧ ಎಐಎಡಿಎಂಕೆ ದೂರು ದಾಖಲು

ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತ ಸಹಾಯಕಿ ಶಶಿಕಲಾ ಹಾಗೂ ಅಮ್ಮ ಮಕ್ಕಳ ಮುನೇತ್ರ ಕಜಗಮ್‌ ಪ್ರಧಾನ ಕಾರ್ಯದರ್ಶಿ ದಿನಕರನ್‌ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆಂದು ಹಿರಿಯ ಸಚಿವರು ಸೇರಿದಂತೆ ಎಐಎಡಿಎಂಕೆ ಮುಖಂಡರು ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ಸಚಿವರಾದ ಡಿ.ಜಯಕುಮಾರ, ಪಿ.ತಂಗಮಣಿ ಅಲ್ಲದೇ ಪಕ್ಷದ ಅಧ್ಯಕ್ಷ ಇ. ಮಧುಸೂಧನ್‌ ಪೊಲೀಸ್‌ ಮಹಾನಿರ್ದೇಶಕ ಸಿ.ವಿ.ತ್ರಿಪಾಠಿ ಅವರನ್ನು … Continued

ತೆಂಡುಲ್ಕರ್‌ ಹೇಳಿಕೆಗೆ ಪವಾರ್‌ ಆಕ್ಷೇಪ

ಮುಂಬೈ: ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಹೇಳಿಕೆ ನೀಡುವಾಗ ಜಾಗರೂಕವಾಗಿರಿ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್‌ಗೆ ಸಲಹೆ ನೀಡಿದ್ದಾರೆ. ರೈತರ ಪ್ರತಿಭಟನೆ ಕುರಿತು ಅಂತಾರಾಷ್ಟ್ರೀಯ ಗಣ್ಯರು ನೀಡಿದ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ಸಚಿನ್, ಭಾರತದ ಸಾರ್ವಭೌಮತ್ವದೊಂದಿಗೆ ರಾಜಿ ಮಾಡಲು ಸಾಧ್ಯವಿಲ್ಲ ಮತ್ತು ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಬಹುದು, … Continued

ಪಿಎಸ್‌ಯು ಉತ್ತಮ ನಿರ್ವಹಣೆ ಸರ್ಕಾರದ ಬಯಕೆ: ನಿರ್ಮಲಾ

ನವದೆಹಲಿ: ತೆರಿಗೆದಾರರ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಲು ಕೇಂದ್ರ ಸರಕಾರ ಸ್ಪಷ್ಟ ಕಾರ್ಯತಂತ್ರ ರೂಪಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಬಜೆಟ್‌ ಕುರಿತು ಕುಟುಂಬದ ಬೆಳ್ಳಿಯನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಪ್ರತಿ ಪಕ್ಷಗಳ ಆರೋಪವನ್ನು ವಿತ್ತ ಸಚಿವೆ ತಿರಸ್ಕರಿಸಿದ್ದಾರೆ. ನಿಗದಿತ ಕ್ಷೇತ್ರಗಳಲ್ಲಿನ ಕೆಲವು ಸಾರ್ವಜನಿಕ ವಲಯದ ಉದ್ಯಮಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಸರ್ಕಾರ ಬಯಸಿದೆ, … Continued

ಅಸ್ಸಾಂ ಚಹಾ ವಿರುದ್ಧ ವಿದೇಶಿ ಶಕ್ತಿಗಳ ಪಿತೂರಿ: ಮೋದಿ

ಆಸ್ಸಾಂ: ಕೆಲ ವಿದೇಶಿ ಶಕ್ತಿಗಳು ನಮ್ಮ ಭಾರತೀಯ ಚಹಾದ ಘನತೆ ಕುಂದಿಸುಲ್ಲಿ ನಿರತವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಆಸ್ಸಾಂನಲ್ಲಿ ಚಹಾ ತೋಟಗಳ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿ, ಅಸ್ಸಾಂ ಚಹಾದ ವಿರುದ್ಧ ಕೆಲ ವಿದೇಶಿ ಶಕ್ತಿಗಳು ಪಿತೂರಿ ನಡೆಸಿವೆ. ಭಾರತೀಯ ಚಹಾದ ಘನತೆಯನ್ನು ವಿಶ್ವಾದ್ಯಂತ ವ್ಯವಸ್ಥಿತವಾಗಿ ಹಾಳು ಮಾಡುವಲ್ಲಿ ಕೆಲ ಶಕ್ತಿಗಳು ನಿರತವಾಗಿವೆ ಎಂದರು. … Continued

ಉತ್ತರಾಖಂಡದಲ್ಲಿ ಹಿಮಪದರ ಕುಸಿತ: ೨೬ ಸಾವು, 15 ಜನರ ರಕ್ಷಣೆ

ಉತ್ತರಾಖಂಡ: ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟಗೊಂಡ ನಂತರ ಉತ್ತರಾಖಂಡದ ತಪೋವನ್ ಜಲ-ವಿದ್ಯುತ್ ಶಕ್ತಿ ಅಣೆಕಟ್ಟು ಸಂಪೂರ್ಣವಾಗಿ ಕೊಚ್ಚಿ ಹೋಗಿದೆ ಎಂದು ಭಾರತೀಯ ವಾಯುಪಡೆಯ ಆರಂಭಿಕ ವರದಿಯಲ್ಲಿ ತೋರಿಸಲಾಗಿದೆ. ಧೌಲಿ ಗಂಗಾ ಮತ್ತು ರಿಷಿ ಗಂಗಾ ನದಿಗಳ ಸಂಗಮದಲ್ಲಿರುವ ಅಣೆಕಟ್ಟು ಸಂಪೂರ್ಣವಾಗಿ ನಾಶವಾಗಿದೆ ಎಂದು ಸಮೀಕ್ಷೆಯ ಚಿತ್ರಗಳು ತೋರಿಸಿದೆ. ಮಲಾರಿ ಕಣಿವೆಯ ಪ್ರವೇಶದ್ವಾರದಲ್ಲಿ ಮತ್ತು ತಪೋವನ್ ಬಳಿಯಿರುವ … Continued

ರೈತ ಹೋರಾಟದಲ್ಲಿ ಈಗ ಜಾಟರ ಪ್ರಾಬಲ್ಯ

ಗಾಜಿಪುರ: ರೈತ ಹೋರಾಟ ಹಿಂಸಾತ್ಮಕ ರೂಪ ತಳೆದಿದ್ದಕ್ಕೆ ರೈತ ಮುಖಂಡ ರಾಕೇಶ್‌ ಟಿಕಾಯತ್‌ ಕಣ್ಣೀರು ಸುರಿಸಿದ್ದು ಸುದ್ದಿವಾಹಿನಿಗಳಲ್ಲಿ ಬಿತ್ತರಗೊಂಡ ನಂತರ ಪಂಜಾಬ್‌ ಸಿಖ್‌ ಕೇಂದ್ರಿತ ರೈತರ ಹೋರಾಟ ಈಗ ಜಾಟ್‌ ಪ್ರಾಬಲ್ಯದ ರೈತ ಹೋರಾಟವಾಗಿ ರೂಪುಗೊಂಡಿದೆ. ಸದ್ಯ ಜಾಟ್‌ ಸಮುದಾಯವೇ ಆಂದೋಲನವನ್ನು ನಿಯಂತ್ರಿಸುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಹಿಂದೆ ಸಿಂಗು ಗಡಿಯಲ್ಲಿ ಹೋರಾಟ ತೀವ್ರವಾಗಿತ್ತು. ಆದರೆ ಈಗ … Continued

ಹೊಸ ಸಾರಿಗೆ ನೀತಿಯಿಂದ ೧೦ ಲಕ್ಷ ಕೋಟಿ ಆದಾಯ:ಗಡ್ಕರಿ

ನವದೆಹಲಿ: ಹಳೆಯ ಮತ್ತು ಮಾಲಿನ್ಯಕಾರಕ ವಾಹನಗಳನ್ನುಗುಜರಿಗೆ ಹಾಕಿ ಹೊಸ ವಾಹನಗಳನ್ನು ಖರೀದಿಸುವವರಿಗೆ ಹೊಸ ನೀತಿಯಡಿ ವಿವಿಧ ಪ್ರಯೋಜನಗಳನ್ನು ನೀಡಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತೀನ್‌ ಗಡ್ಕರಿ ತಿಳಿಸಿದರು. ಹೊಸ ಸಾರಿಗೆ ನೀತಿ ವರದಾನವಾಗಿದ್ದು, ಇದರಿಂದ ಮುಂದಿನ ವರ್ಷಗಳಲ್ಲಿ ಭಾರತದ ವಾಹನ ಉದ್ಯಮದ ವಹಿವಾಟು ಶೇ.೩೦ರಷ್ಟು ಹೆಚ್ಚಳವಾಗುವುದಲ್ಲದೇ ೧೦ ಲಕ್ಷ ಕೋಟಿ ರೂ. ಆದಾಯ ದೊರೆಯಲಿದೆ … Continued

ಹೊರಗಿನ ಕೆಲವರಿಂದ ದೇಶದ ಘನತೆಗೆ ಧಕ್ಕೆ: ಮೋದಿ

ಸೋನಿತ್‌ಪುರ (ಆಸ್ಸಾಮ್):‌ ದೇಶದ ಹೊರಗಿರುವ ಕೆಲವರು ದೇಶದ ಘನತೆಗೆ ಕಳಂಕತರುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ರಸ್ತೆ ಅಭಿವೃದ್ಧಿ ಯೋಜನೆ ಅಸೋಮ್‌ ಮಾಲಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೆಲ ವ್ಯಕ್ತಿಗಳು ನಮ್ಮ ದೇಶದ ಘನತೆಯನ್ನು ಹಾಳು ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ರಾಷ್ಟ್ರದ ಸಂಸ್ಕೃತಿಗೆ ಚ್ಯುತಿ ತರುತ್ತಿರುವ ಕುರಿತು ಕೆಲ … Continued