ಎರಡು ಶತಕೋಟಿ ವರ್ಷಗಳಲ್ಲಿ ಸೂರ್ಯನ ಬೆಳಕು ನೋಡದ ಚಂದ್ರನ ಕತ್ತಲೆ ಭಾಗದಲ್ಲಿ ನೀರು-ಮಂಜುಗಡ್ಡೆ ಕಂಡುಹಿಡಿದ ಚಂದ್ರಯಾನ -2

ಚಂದ್ರಯಾನ -2 ರ ಪ್ರಮುಖ ಸಾಧನೆಯಲ್ಲಿ, ಆರ್ಬಿಟರ್‌ನಲ್ಲಿರುವ ಎಂಟು ಪೇಲೋಡ್‌ಗಳಲ್ಲಿ ಒಂದು ಚಂದ್ರನ ಮೇಲೆ ಶಾಶ್ವತವಾಗಿ ನೆರಳಿರುವ ಪ್ರದೇಶಗಳಲ್ಲಿ ನೀರಿನ ಐಸ್ ಇರುವುದನ್ನು ದೃಢಪಡಿಸಿದೆ. ಇತ್ತೀಚಿನ ಸಂಶೋಧನೆಯನ್ನು ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರನ ಕಾರ್ಯಾಚರಣೆಯ ಎರಡು ವರ್ಷಗಳನ್ನು ಪೂರೈಸಲು ಬಿಡುಗಡೆ ಮಾಡಿದ ಹೊಸ ವಿಜ್ಞಾನ ದತ್ತಾಂಶದ ಸೆಟ್ ನಲ್ಲಿ ಬಹಿರಂಗಪಡಿಸಿದೆ. ಚಂದ್ರನ … Continued

ಎನ್‌ಐಆರ್‌ಎಫ್ ಶ್ರೇಯಾಂಕ ಪ್ರಕಟ: ಸಂಶೋಧನೆಗೆ ಬೆಂಗಳೂರು ಐಐಎಸ್‌ಸಿ ದೇಶದಲ್ಲೇ ಬೆಸ್ಟ್‌, ಐಐಟಿ ಮದ್ರಾಸ್ ಅತ್ಯುತ್ತಮ ಸಂಸ್ಥೆ.. ದೇಶದ ಅತ್ಯುತ್ತಮ ಸಂಸ್ಥೆಗಳ ಪಟ್ಟಿ ಇಲ್ಲಿದೆ

ವಿಶ್ವ ವಿದ್ಯಾಲಯಗಳ ವಿಭಾಗಗಳಲ್ಲಿಯೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc )ಗೆ ಅಗ್ರ ಸ್ಥಾನ ಸಿಕ್ಕಿದೆ. ಇನ್ನು ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ ಐಐಎಂ ಬೆಂಗಳೂರಿಗೆ ಎರಡನೇ ಸ್ಥಾನ ಹಾಗೂ ಮೆಡಿಸಿನ್‌ ವಿಭಾಗದಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ಗೆ ಮೂರನೇ ಸ್ಥಾನ ಸಿಕ್ಕಿದೆ. ಕಾನೂನು ಕಾಲೇಜುಗಳಲ್ಲಿ ಬೆಂಗಳೂರಿನ ನ್ಯಾಶನಲ್‌ ಸೂಲ್‌ ಆಫ್‌ ಲಾ ಬಾರತದಲ್ಲಿ ಅತ್ತುತ್ತಮ ಎಂದು ಮೊದಲನೇ ಸ್ಥಾನ ಪಡೆದಿದೆ. … Continued

2 ಬಿಲಿಯನ್ ಡಾಲರ್ ನಷ್ಟದ ನಂತರ ಭಾರತದ ಎರಡೂ ಉತ್ಪಾದನಾ ಘಟಕ ಮುಚ್ಚುವ ನಿರ್ಧಾರ ಮಾಡಿದ ಫೋರ್ಡ್ ಕಂಪನಿ

ಫೋರ್ಡ್ ಮೋಟಾರ್ ಕಂಪನಿಯು ಗುರುವಾರ (September 9) ಭಾರತದಲ್ಲಿ ಉತ್ಪಾದನಾ ಕಾರ್ಯಾಚರಣೆಗಳನ್ನು ಕೊನೆಗೊಳಿಸುವುದಾಗಿ ಹೇಳಿದೆ. ಸನಂದ್ ಮತ್ತು ಚೆನ್ನೈನಲ್ಲಿ ತನ್ನ ಎರಡೂ ಸ್ಥಾವರಗಳನ್ನು ಮುಚ್ಚುವುದಾಗಿ ಹೇಳಿದೆ. ಈ ನಿರ್ಧಾರವು ನಷ್ಟ ಮತ್ತು ಕಷ್ಟಕರವಾದ ಮಾರುಕಟ್ಟೆಯಲ್ಲಿ ಬೆಳವಣಿಗೆಯ ಕೊರತೆಹಿನ್ನೆಲೆಯಲ್ಲಿ ಬಂದಿದೆ.. 2021ರ ನಾಲ್ಕನೇ ತ್ರೈಮಾಸಿಕದ ವೇಳೆಗೆ ಗುಜರಾತಿನ ಸನಂದ್‌ನಲ್ಲಿ ರಫ್ತಿಗಾಗಿ ವಾಹನ ತಯಾರಿಕೆಯನ್ನು ಮತ್ತು 2022 ರ … Continued

ಕುದಿಯುವ ನೀರಿನ ಪಾತ್ರೆಯಲ್ಲಿ ಕುಳಿತ ಧ್ಯಾನಸ್ಥ ಹುಡುಗನ ವಿಡಿಯೋ ವೈರಲ್.: ಮ್ಯಾಜಿಕ್‌ ಟ್ರಿಕ್‌ ಎಂದ ಕೆಲವರು, ನಕಲಿ ಎಂದ ಹಲವರು

ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆದ ಸುದ್ದಿಯೆಂದರೆ ಬಾಲಕನೋರ್ವ ಕುದಿಯುತ್ತಿರುವ ನೀರಿನಲ್ಲಿ ಕುಳಿತಿದ್ದಾನೆ. ಕೇಸರಿ ಶಾಲು ಹೊದ್ದ ಬಾಲಕ ಧ್ಯಾನಸ್ಥನಾಗಿ ನೀರಿನ ದೊಡ್ಡ ಪಾತ್ರೆಯಲ್ಲಿ ಕುಳಿತಿರುವುದನ್ನು ನೋಡಬಹುದು. ಪಾತ್ರೆಯ ಕೆಳಗೆ ಬೆಂಕಿ ಹಚ್ಚಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಫುಲ್ ವೈರಲ್ ಆಗುತ್ತಿದ್ದಂತೆಯೇ ಈ ದೃಶ್ಯದ ಕುರಿತಾಗಿ ಪರ ವಿರೋಧ ಚರ್ಚೆಗಳು ಪ್ರಾರಂಭವಾಗಿದೆ. 30 ಸೆಕೆಂಡ್‌ಗಳ ಕ್ಲಿಪ್‌ನಲ್ಲಿ, … Continued

ಸುಪ್ರೀಕೋರ್ಟಿನಲ್ಲಿ ದೆಹಲಿ ಮೆಟ್ರೋ ವಿರುದ್ಧ ಸುಮಾರು 4660 ಕೋಟಿ ರೂ. ಆರ್ಬಿಟ್ರೇಶನ್‌ ಪ್ರಕರಣ ಗೆದ್ದ ಅನಿಲ್​ ಅಂಬಾನಿ ರಿಲಯನ್ಸ್​ ಇನ್​ಫ್ರಾ

ನವದೆಹಲಿ: ರಿಲಯನ್ಸ್ ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್​ಗೆ ಪ್ರಮುಖ ಗೆಲುವೊಂದು ದೊರೆತಿದೆ. ಕಳೆದ ನಾಲ್ಕು ವರ್ಷದಿಂದ ನಡೆಯುತ್ತಿದ್ದ ಕೋರ್ಟ್‌ ಕದನದಲ್ಲಿ ದೊಡ್ಡ ಗೆಲುವು ಸಿಕ್ಕಿದೆ. ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಸಮಿತಿಯು ಗುರುವಾರ ಅನಿಲ್ ಅಂಬಾನಿಯ ಯೂನಿಟ್​ ಪರವಾಗಿ 2017ರ ಮಧ್ಯಸ್ಥಿಕೆ ತೀರ್ಪು (arbitral award) ಎತ್ತಿಹಿಡಿದಿದೆ. ಈ ಮಧ್ಯಸ್ಥಿಕೆ ನ್ಯಾಯಾಧೀಕರಣ(arbitration tribunal)ದಿಂದ 4660 ಕೋಟಿ ರೂ.ಗಳಿಗಿಂತ ಹೆಚ್ಚು … Continued

ಪರಿಸರ ಸಂಬಂಧಿ ಯೋಜನೆ: 12 ವರ್ಷದ ಮುಂಬೈ ಬಾಲಕನಿಗೆ ಜಾಗತಿಕ ಮನ್ನಣೆ

ವಾಷಿಂಗ್ಟನ್: ಕಠಿಣ ಪರಿಸರದ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನವನ್ನು ಗುರುತಿಸಿ ಮುಂಬೈನ 12 ವರ್ಷದ ಪರಿಸರ ಕಾರ್ಯಕರ್ತನನ್ನು 2021 ಅಂತರಾಷ್ಟ್ರೀಯ ಯುವ ಪರಿಸರ ನಾಯಕ ಎಂದು ಹೆಸರಿಸಲಾಗಿದೆ. ಅಯಾನ್ ಶಂಕ್ಟಾ ಅವರು ಪೊವೈ ಸರೋವರದ ಸಂರಕ್ಷಣೆ ಮತ್ತು ಪುನರ್ವಸತಿಗಾಗಿ 8ರಿಂದ 14 ವಯಸ್ಸಿನ ವಿಭಾಗದಲ್ಲಿ ( in the 8-14 age category for his project … Continued

ಭಾರತದಲ್ಲಿ ಕೊರೊನಾ ಹೊಸ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ, ಕೇರಳ ಪ್ರಮುಖ ಕಾರಣ

ನವದೆಹಲಿ:ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು ಕಳೆದ 24 ಗಂಟೆಯಲ್ಲಿ 43,263 ಜನರಲ್ಲಿ ಹೊಸದಾಗಿ ಸೋಂಕು ವರದಿಯಾಗಿದೆ. ಇದೇ ಸಮಯದಲ್ಲಿ ಮೃತಪಟ್ಟಿದ್ದಾರೆ ಹಾಗೂ 40567 ಜನರು ಗುಣಮುಖರಾಗಿದ್ದಾರೆ. ಕೇರಳದಲ್ಲಿ ಹೊಸದಾಗಿ ಕೋವಿಡ್‌ ಪ್ರಕರಣಗಳು ಮತ್ತೆ ಏರಿಕೆಯಾಗಿದ್ದೇ ಈ ಹೆಚ್ಚಳಕ್ಕೆ ಕಾರಣ. ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 3,31,39,981ಕ್ಕೆ ಹಾಗೂ ಈವರೆಗೆ ಮೃತಪಟ್ಟವರ ಸಂಖ್ಯೆ 441749 … Continued

ಸೆಪ್ಟೆಂಬರ್ 17ರಿಂದ ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ, ಆನ್​ಲೈನ್​ ಬುಕ್ಕಿಂಗ್ ಆರಂಭ

ತಿರುವನಂತಪುರಂ: ಪ್ರಸಿದ್ಧ ಶಬರಿ ಮಲೆ ಅಯ್ಯಪ್ಪ ದೇಗುಲ ಸೆಪ್ಟೆಂಬರ್ 17ರಿಂದ ಐದು ದಿನಗಳ ಕಾಲ ತೆರೆಯಲಿದೆ. ಮೊದಲೇ ಬುಕ್ಕಿಂಗ್‌ ಮಾಡಿಕೊಂಡ ಭಕ್ತಾದಿಗಳಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿರಲಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಿಳಿಸಿದೆ. ಸೆಪ್ಟೆಂಬರ್​ 17ರಿಂದ ಆರಂಭವಾಗಲಿರುವ ಐದು ದಿನಗಳ ಪೂಜಾ ಕಾರ್ಯಗಳಿಗೆ ಭೇಟಿ ನೀಡ ಬಯಸುವ ಭಕ್ತರು ಇಂದಿನಿಂದ ಆನ್​ಲೈನ್​ ಬುಕ್ಕಿಂಗ್​ … Continued

ತಾಲಿಬಾನ್ ಸರ್ಕಾರದ ನೇಮಕಾತಿಗಳಲ್ಲಿ ಪಾಕ್ ಪ್ರಭಾವ: ಭಾರತದ ವಿಮಾನ ಅಪಹರಣಕಾರನ ಮಗ ಅಫ್ಘಾನಿಸ್ತಾನದ ರಕ್ಷಣಾ ಸಚಿವ..!

ನವದೆಹಲಿ: ಭಾರತದ ಐಸಿ -814 ವಿಮಾನ ಅಪಹರಣದ ಮಾಸ್ಟರ್ ಮೈಂಡ್ ಆಗಿದ್ದ ತಾಲಿಬಾನ್ ನ ಮೊದಲ ನಾಯಕ ಮತ್ತು ಸಂಸ್ಥಾಪಕ ಮುಲ್ಲಾ ಒಮರ್ ಅವರ ಪುತ್ರ ಮುಲ್ಲಾ ಮೊಹಮ್ಮದ್ ಯಾಕೂಬ್ ತಾಲಿಬಾನ್ ಆಡಳಿತದಲ್ಲಿ ಅಫ್ಘಾನಿಸ್ತಾನದ ರಕ್ಷಣಾ ಮಂತ್ರಿಯಾಗಿದ್ದಾರೆ…! 1999 ರಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಹರಣವು ಭಯೋತ್ಪಾದಕರನ್ನು ಜೈಲಿನಿಂದ ಬಿಡಿಸಿಕೊಳ್ಳಲು ರೂಪಿಸಿದ ಸಂಚಾಗಿತ್ತು. ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ … Continued

ಬುಧವಾರ ಮತ್ತೆ ಕೇರಳದಲ್ಲಿ 30 ಸಾವಿರ ದಾಟಿದ ಹೊಸ ಕೋವಿಡ್ -19 ಪ್ರಕರಣಗಳು..!

ತಿರುವನಂತಪುರಂ: ಕಳೆದ ಶುಕ್ರವಾರದಿಂದ 30,000ಕ್ಕಿಂತ ಕಡಿಮೆ ಪ್ರಕರಣಗಳನ್ನು ದಾಖಲಿಸಿದ ನಂತರ, ಕೇರಳವು ಬುಧವಾರ 30,196 ಪ್ರಕರಣಗಳನ್ನು ಹೊಸದಾಗಿ ವರದಿ ಮಾಡಿದೆ. ಇದು ರಾಜ್ಯದಲ್ಲಿ ಒಟ್ಟು ಸೋಂಕುಗಳನ್ನು 42,83,494ಕ್ಕೆ ತಳ್ಳಿದೆ. ರಾಜ್ಯವು 181 ಸಾವುಗಳನ್ನು ವರದಿ ಮಾಡಿದೆ, ಈವರೆಗೆ ಒಟ್ಟು ಸಾವುಗಳನ್ನು 22,001 ಕ್ಕೆ ತಲುಪಿದೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿದೆ. ಸಕಾರಾತ್ಮಕತೆ ದರ (TPR), ಕ್ರಮೇಣ … Continued