ವೀಡಿಯೊ : ಸಾರಾಯಿ ಕುಡಿಯಲು ಹಣ ನೀಡದ್ದಕ್ಕೆ ವಿದ್ಯುತ್ ಕಂಬ ಏರಿ ‘ಹೈ ಟೆನ್ಷನ್ ವೈರ್’ ಮೇಲೆ ಮಲಗಿದ ಭೂಪ….!

ಅಮರಾವತಿ: ಯುವಕನೋರ್ವ ತನ್ನ ತಾಯಿ ಸಾರಾಯಿ ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನೆ ಬಳಿ ಇದ್ದ ಹೈ ಟೆನ್ಷನ್ ವೈರ್ ಮೇಲೆ ಮಲಗಿರುವ ಅಘಾತಕಾರಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಎಂ ಸಿಂಗಾಪುರಂ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕುಡಿದ ಮತ್ತಿನ್ನಲ್ಲಿದ್ದ ಯುವಕ … Continued

ಮಹಿಳೆಗೆ ಬಂದ ಪಾರ್ಸೆಲ್‌ ನಲ್ಲಿ ಇತ್ತು ಅಪರಿಚಿತ ವ್ಯಕ್ತಿಯ ಶವ…! ₹ 1.3 ಕೋಟಿ ಹಣದ ಬೇಡಿಕೆಯ ಪತ್ರ…!!

ಅಮರಾವತಿ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಯ ಶವವಿದ್ದ ಪಾರ್ಸೆಲ್ ಬಂದಿದ್ದು, ಅದನ್ನು ನೋಡಿ ಮಹಿಳೆ ಆಗಾತಕ್ಕೆ ಒಳಗಾಗಿದ್ದಾಳೆ…! ಪಶ್ಚಿಮ ಗೋದಾವರಿ ಜಿಲ್ಲೆಯ ಉಂಡಿ ಮಂಡಲದ ಯಂಡಗಂಡಿ ಗ್ರಾಮದಲ್ಲಿ ಈ ಭಯಾನಕ ಘಟನೆ ವರದಿಯಾಗಿದೆ. ನಾಗ ತುಳಸಿ ಎಂಬ ಮಹಿಳೆಯೊಬ್ಬರು ಮನೆ ನಿರ್ಮಿಸಲು ಆರ್ಥಿಕ ಸಹಾಯಕ್ಕಾಗಿ ಕ್ಷತ್ರಿಯ ಸೇವಾ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. … Continued

ಕುವೈತಿನಿಂದ ಆಂಧ್ರಕ್ಕೆ ಬಂದು ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಸಂಬಂಧಿ ಕೊಲೆ ಮಾಡಿ ವಾಪಸ್‌ ಹೋದ ವ್ಯಕ್ತಿ…! ನಂತ್ರ ಯೂಟ್ಯೂಬ್‌ನಲ್ಲಿ ತಪ್ಪೊಪ್ಪಿಗೆ

ಕುವೈತ್‌ನ ವಲಸೆ ಕಾರ್ಮಿಕನೊಬ್ಬ ಶನಿವಾರ (ಡಿಸೆಂಬರ್ 7) ಕುವೈತ್‌ನಿಂದ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಗೆ ಆಗಮಿಸಿ 59 ವರ್ಷದ ತನ್ನ ಮಗಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ವಿಕಲಚೇತನ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಕೊತ್ತಮಂಗಲಂಪೇಟೆ ಗ್ರಾಮದ ಆಂಜನೇಯ ಪ್ರಸಾದ (37) ಎಂದು ಗುರುತಿಸಲಾಗಿದೆ. ಕೊಲೆಯ ಹೊಣೆ ಹೊತ್ತು ಆರೋಪಿ ಸಾಮಾಜಿಕ … Continued

ವೀಡಿಯೊ..| ವಿದ್ಯಾರ್ಥಿಗೆ ಮನಸೋ ಇಚ್ಛೆ ಥಳಿಸಿದ ಕೋಚಿಂಗ್ ಸೆಂಟರ್ ಸಂಸ್ಥಾಪಕ ; ವ್ಯಾಪಕ ಆಕ್ರೋಶ

ಆಂಧ್ರಪ್ರದೇಶದಲ್ಲಿ ಖಾಸಗಿ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರೊಬ್ಬರು ವಿದ್ಯಾರ್ಥಿಯೊಬ್ಬನಿಗೆ ಥಳಿಸಿದ ಕೆಲ ತಿಂಗಳ ಹಿಂದಿನ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕೋಚಿಂಗ್ ಇನ್‌ಸ್ಟಿಟ್ಯೂಟ್ ‘ಇಂಡಿಯನ್ ಆರ್ಮಿ ಕಾಲಿಂಗ್’ ಸಂಸ್ಥಾಪಕ ಬಸವ ವೆಂಕಟ ರಮಣ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ವಿದ್ಯಾರ್ಥಿಗೆ ಬೆಲ್ಟ್‌ನಿಂದ ಥಳಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ವಿದ್ಯಾರ್ಥಿಯು ಅಳುವುದು ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳಲು ಒದ್ದಾಡುತ್ತಿರುವುದನ್ನು … Continued

ವೀಡಿಯೊ..| ದೀಪಾವಳಿಗಾಗಿ ಒಯ್ಯುತ್ತಿದ್ದ ʼಈರುಳ್ಳಿ ಬಾಂಬ್’ ಪಟಾಕಿ ಸ್ಫೋಟ ; ಒಬ್ಬರು ಸಾವು, 6 ಮಂದಿಗೆ ಗಾಯ

ಹೈದರಾಬಾದ್ : ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಪಟಾಕಿ ಸಿಡಿಸಿದ ಅವಘಡದಲ್ಲಿ ಒಬ್ಬರು ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯೊಬ್ಬರು ದೀಪಾವಳಿ ಹಬ್ಬದ ವಿಶೇಷ ಪಟಾಕಿ-ಈರುಳ್ಳಿ ಬಾಂಬ್‌ಗಳನ್ನು ಸಾಗಿಸುತ್ತಿದ್ದಾಗ ಸ್ಥಳೀಯ ದೇವಸ್ಥಾನದ ಬಳಿಯ ಗುಂಡಿಗೆ ಬೈಕ್ ಡಿಕ್ಕಿ ಹೊಡೆದು ಆ ಈರುಳ್ಳಿ ಬಾಂಬ್‌ಗಳು ಬಿದ್ದು ಸ್ಫೋಟಗೊಂಡಿವೆ. ವರದಿಗಳು ದೀಪಾವಳಿಯ ‘ಈರುಳ್ಳಿ ಬಾಂಬ್‌’ಗಳ ಸ್ಫೋಟದ ಪರಿಣಾಮವು … Continued

ಜಗನ್ ಮೋಹನ್ ರೆಡ್ಡಿ vs ವೈಎಸ್ ಶರ್ಮಿಳಾ | ಕುಟುಂಬದ ಒಡೆತನದ ಷೇರುಗಳ ವರ್ಗಾವಣೆ ; ಸಹೋದರಿ, ತಾಯಿ ವಿರುದ್ಧ ಎನ್‌ಸಿಎಲ್‌ಟಿಗೆ ಜಗನ್ ರೆಡ್ಡಿ ಮೊರೆ

ಹೈದರಾಬಾದ್‌ : ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಅವರ ಸಹೋದರಿ ವೈ.ಎಸ್. ಶರ್ಮಿಳಾ ನಡುವಿನ ಆಸ್ತಿ ಜಗಳ ಉಲ್ಬಣಗೊಂಡಿದ್ದು, ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಕುಟುಂಬದ ಒಡೆತನದ ಷೇರುಗಳ ವರ್ಗಾವಣೆಗೆ ಸಂಬಂಧಿಸಿದಂತೆ ತಮ್ಮ ಸಹೋದರಿ ಮತ್ತು ತಾಯಿ ವೈ.ಎಸ್. ವಿಜಯ ರಾಜಶೇಖರ ರೆಡ್ಡಿ ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ … Continued

ವೀಡಿಯೊ…| ಮಿತಿಮೀರಿ ಕುಡಿದ ವ್ಯಕ್ತಿಯನ್ನು ಸುತ್ತಿಕೊಂಡ ಹೆಬ್ಬಾವು; ರಕ್ಷಣೆಗೆ ಧಾವಿಸಿದ ಗ್ರಾಮಸ್ಥರು

ಆಂಧ್ರಪ್ರದೇಶದಲ್ಲಿ ದೈತ್ಯ ಹೆಬ್ಬಾವೊಂದು ಕುಡಿದು ವ್ಯಕ್ತಿಯೊಬ್ಬನನ್ನು ಸುತ್ತಿಕೊಂಡ ಘಟನೆಯೊಂದು ನಡೆದಿದ್ದು, ಇದರ ವೀಡಿಯೊ ವೈರಲ್‌ ಆಗಿದೆ. ಮಿತಿಮೀರಿ ಕುಡಿದಿದ್ದ ಟ್ರಕ್ ಚಾಲಕನನ್ನು ಈ ಹಾವು ಸುತ್ತಿಕೊಂಡಿದೆ. ಕರ್ನೂಲ್ ಜಿಲ್ಲೆಯ ಸಿಂಗನಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ತೆಲುಗು ಸ್ಕ್ರೈಬ್‌ ಪ್ರಕಾರ, ಮಿತಿ ಮೀರಿ ಕುಡಿದಿದ್ದರಿಂದ ಮನೆಗೆ ತೆರಳಲು ಸಾಧ್ಯವಾಗದ ಚಾಲಕ ಹೊರಾಂಗಣದಲ್ಲಿ ಮಲಗಿದ್ದ. … Continued

ವೀಡಿಯೊ..| ಹೃದಯ ವಿದ್ರಾವಕ ; ಆಸ್ಪತ್ರೆಗೆ ಹೋಗಲು ನಾಲೆಯ ಮೇಲೆ ಉಕ್ಕಿ ಹರಿದ ಹೊಳೆಯಲ್ಲೇ ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತೊಯ್ದ ವ್ಯಕ್ತಿ…!

ಹೈದರಾಬಾದ್: ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ವ್ಯಕ್ತಿಯೊಬ್ಬ ತನ್ನ ಭುಜದ ಮೇಲೆ ಹೊತ್ತುಕೊಂಡು ತುಂಬಿ ಹರಿಯುತ್ತಿರುವ ಅಣೆಕಟ್ಟಿನ ಮೇಲೆ ರಭಸವಾಗಿ ಹರಿಯುವ ಹೊಳೆ ದಾಟುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗದ ಜನವಸತಿ ಪ್ರದೇಶದ ಪಿಂಜರಿಕೊಂಡ ಎಂಬ ಪುಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. … Continued

ಮುಂಬೈ ಮೂಲದ ಮಾಡೆಲ್-ನಟಿಯ ಅಕ್ರಮ ಬಂಧನ ; ಆಂಧ್ರದ ಮೂವರು ಐಪಿಎಸ್ ಅಧಿಕಾರಿಗಳ ಅಮಾನತು

ಅಮರಾವತಿ : ಮುಂಬೈ ಮೂಲದ ಮಾಡೆಲ್ ಹಾಗೂ ನಟಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ. ಅಮಾನತುಗೊಂಡ ಆಂಧ್ರಪ್ರದೇಶದ ಮೂವರು ಐಪಿಎಸ್ ಅಧಿಕಾರಿಗಳಲ್ಲಿ ಡೈರೆಕ್ಟರ್ ಜನರಲ್ ಶ್ರೇಣಿಯ ಒಬ್ಬರು, ಇನ್ಸ್ ಪೆಕ್ಟರ್ ಜನರಲ್ ಮತ್ತು ಇನ್ಸ್ ಪೆಕ್ಟರ್ ಜನರಲ್ ಶ್ರೇಣಿಯ ಒಬ್ಬರು ಮತ್ತು … Continued

ಫಾರ್ಮಾ ಕಂಪನಿ ಘಟಕದಲ್ಲಿ ರಿಯಾಕ್ಟರ್ ಸ್ಫೋಟ; 15 ಮಂದಿ ಸಾವು, ಹಲವರಿಗೆ ಗಾಯ

ಬುಧವಾರ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಔಷಧ ತಯಾರಿಕಾ ಘಟಕದಲ್ಲಿ ರಿಯಾಕ್ಟರ್ ಸ್ಫೋಟಗೊಂಡ ನಂತರ ಕನಿಷ್ಠ ಹದಿನೈದು ಜನರು ಮೃತಪಟ್ಟಿದ್ದಾರೆ ಮತ್ತು ಸುಮಾರು 41 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಚ್ಯುತಪುರಂ ವಿಶೇಷ ಆರ್ಥಿಕ ವಲಯದಲ್ಲಿರುವ ಎಸ್ಸೆಂಟಿಯಾ ಕಂಪನಿಯ ಘಟಕದಲ್ಲಿ ಈ ಘಟನೆ ನಡೆದಿದೆ. ಫಾರ್ಮಾ ಸಂಸ್ಥೆಯ ಸ್ಥಾವರದಲ್ಲಿ ಸಂಭವಿಸಿದ ಸ್ಫೋಟವು ಗಮನಾರ್ಹ ಹಾನಿಯನ್ನುಂಟುಮಾಡಿತು ಮತ್ತು ಅನೇಕರು … Continued