ಕೊವಿಡ್‌; ಸಾರ್ಕ್‌-ಸಿಒವಿ-2 ಮೇಲ್ಮೈ ಪ್ರೋಟೀನ್‌ಗಳ 5,600ಕ್ಕೂ ಹೆಚ್ಚು ರೂಪಾಂತರ…!

ಭೋಪಾಲ್: ಐಐಟಿ-ಇಂದೋರ್ ನಡೆಸಿದ ಅಧ್ಯಯನವು ವಿಶ್ವದ ಸಾರ್ಕ್‌-ಸಿಒವಿ-2 ಮೇಲ್ಮೈ ಪ್ರೋಟೀನ್‌ಗಳ 5,600 ಕ್ಕೂ ಹೆಚ್ಚು ರೂಪಾಂತರಗಳನ್ನು ಹೊಂದಿದೆ ಎಂದು ಹೇಳಿದೆ. ಈ ಕುರಿತು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಡಾ.ಹೆಮ್ ಚಂದ್ರ ಝಾ (ಐಐಟಿ-ಇಂದೋರ್‌ನ ಜೈವಿಕ ವಿಜ್ಞಾನ ಮತ್ತು ಬಯೋಮೆಡಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ) ನೇತೃತ್ವದ ಸಂಶೋಧಕರ ತಂಡವು ಏಪ್ರಿಲ್ 2020 ಮತ್ತು ಸೆಪ್ಟೆಂಬರ್ … Continued

ಕೊರೊನಾ 2ನೇ ಅಲೆ ಭೀತಿ: ಹಬ್ಬಗಳ ಸಾರ್ವಜನಿಕ ಆಚರಣೆ-ಕಾರ್ಯಕ್ರಮಗಳಿಗೆ ಸರ್ಕಾರ ನಿಷೇಧ

ಕರ್ನಾಟಕದಲ್ಲಿ ಕೊವಿಡ್‌ -19 ಪ್ರಕರಣಗಳ ಉಲ್ಬಣದ ಹಿನ್ನೆಲೆಯಲ್ಲಿ, ಮುಂಬರುವ ಹಬ್ಬಗಳಾದ ಹೋಳಿ, ಯುಗಾದಿ, ಶಾಬ್-ಎ-ಬರಾತ್ ಮತ್ತು ಶುಭ ಶುಕ್ರವಾರದಂದು ಸಾರ್ವಜನಿಕ ಸಮಾರಂಭ ಹಾಗೂ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ರಾಜ್ಯ ಸರ್ಕಾರ ನಿಷೇಧಿಸಿದೆ. ಸಾರ್ವಜನಿಕ ಮೈದಾನಗಳು, ಉದ್ಯಾನವನಗಳು, ಮಾರುಕಟ್ಟೆಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿನ ಸಭೆ-ಸಮಾರಂಭಗಳು ಇವುಗಳಲ್ಲಿ ಸೇರಿವೆ. ತನ್ನ ಆದೇಶದಲ್ಲಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರು … Continued

ಕೊವಿಡ್‌ ಎರಡನೇ ಅಲೆ ಅವಧಿ 100 ದಿನಗಳ ವರೆಗೆ, ಏಪ್ರಿಲ್‌ನಲ್ಲಿ ಹೆಚ್ಚು ಉಲ್ಬಣ : ಎಸ್‌ಬಿಐ ಅಧ್ಯಯನ ವರದಿ

ಫೆಬ್ರವರಿಯಿಂದ ದೈನಂದಿನ ಹೊಸ ಕೊವಿಡ್‌-19 ಪ್ರಕರಣಗಳಲ್ಲಿ ಭಾರತವು ತೀವ್ರತೆ ಎದುರಿಸುತ್ತಿದೆ, ಇದು ಎರಡನೇ ಅಲೆಯನ್ನುಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಂಶೋಧನಾ ವರದಿ ತಿಳಿಸಿದೆ. ಸಂಶೋಧನಾ ವರದಿಯ ಪ್ರಕಾರ, ಎರಡನೇ ಅಲೆಯು 100 ದಿನಗಳ ವರೆಗೆ ಇರುತ್ತದೆ. ಸ್ಥಳೀಯ ಲಾಕ್‌ಡೌನ್‌ಗಳು “ನಿಷ್ಪರಿಣಾಮಕಾರಿಯಾಗಿದೆ” ಮತ್ತು ಕೊವಿಡ್‌ ವಿರುದ್ಧದ ಯುದ್ಧವನ್ನು ಗೆಲ್ಲುವ ಏಕೈಕ ಮಾರ್ಗವೆಂದರೆ … Continued

ಕೊರೊನಾ ಸೋಂಕು ಹೆಚ್ಚಳ: ಬೆಂಗಳೂರಲ್ಲಿ ಸೋಂಕಿತರ ಕೈಗೆ ಮತ್ತೆ ಸೀಲ್‌…!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಸೋಂಕು ದೃಢಪಟ್ಟಿರುವ ಎಲ್ಲರಿಗೂ ಸೀಲ್ ಹಾಕಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ‌ ಹೆಚ್ಚುತ್ತಿರುವ ಕೋವಿಡ್ ಹರಡುವಿಕೆಯನ್ನ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳ ಜೊತೆ ಸಚಿವರು ಸಮಾಲೋಚನಾ ಸಭೆ ನಡೆಸಿದ ಬಳಿಕ ಮಾತನಾಡಿದಅವರು, ’20 … Continued

ಕೊರೊನಾ ಹೆಚ್ಚಳ: ಕರ್ನಾಟಕದಲ್ಲಿ ಲಾಕ್‌ಡೌನ್‌ ಸದ್ಯಕ್ಕಿಲ್ಲ , ಆದರೆ ಕಠಿಣ ನಿಯಮ..

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಠಿಣ ಮಾರ್ಗಸೂಚಿಗಳನ್ನು ಜಾರಿಗೆ ತರಲು ಸೋಮವಾರ ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಕೊರೊನಾ ಹೆಚ್ಚಳದ ಕುರಿತು ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಲಾಕ್​ಡೌನ್​, ಸೆಮಿಲಾಕ್​ಡೌನ್​, … Continued

ಕೊವಿಡ್‌ ಪರಿಣಾಮ; ನಿವ್ವಳ ಲಾಭದಲ್ಲಿ ಶೇ 44.4 ಕುಸಿತ ಕಂಡ ಸೌದಿ ಇಂಧನ ದೈತ್ಯ ಅರಾಮ್ಕೊ..!

ಕೊವಿಡ್‌ ಸಾಂಕ್ರಾಮಿಕ ರೋಗವು ಜಾಗತಿಕ ಬೇಡಿಕೆಯ ಮೇಲೆ ಪರಿಣಾಮ ಬೀರಿದ ಕಾರಣ ಇಂಧನ ದೈತ್ಯ ಸೌದಿ ಅರಾಮ್ಕೊ 2020ರ ನಿವ್ವಳ ಲಾಭದಲ್ಲಿ ಶೇ 44.4 ರಷ್ಟು ಕುಸಿತ ಕಂಡಿದೆ. ಸೌದಿ ಅರೇಬಿಯಾದ ಹಣದ ಹಸು ಎಂದೇ ಕರೆಯಲ್ಪಡುವ ಅರಾಮ್ಕೊ, 2019ರಲ್ಲಿ ಗಳಿಕೆ ಬಹಿರಂಗಪಡಿಸಲು ಪ್ರಾರಂಭಿಸಿದಾಗಿನಿಂದ ಸತತ ಲಾಭದಲ್ಲಿತ್ತು. ಆದರೆ ಕೊವಿಡ್‌ನಿಂದಾಗಿಬದಲಾದ ಸನ್ನಿವೇಶದಲ್ಲಿ ಕುಸಿತ ಕಂಡಿದೆ. ಇದು … Continued

ಮಹಾರಾಷ್ಟ್ರದಲ್ಲಿ ಕೊವಿಡ್‌ ಕ್ರಮ: ಆರೋಗ್ಯ,ಅಗತ್ಯ ಸೇವೆ ಹೊರತು ಪಡಿಸಿ ಉಳಿದೆಡೆ ಶೇ.೫೦ರಷ್ಟು ಮಾತ್ರ ಹಾಜರಾತಿ

ಮುಂಬೈ: ಹೆಚ್ಚುತ್ತಿರುವ ಕೊವಿಡ್‌ -19 ಪ್ರಕರಣಗಳ ಮಧ್ಯೆ ಮಹಾರಾಷ್ಟ್ರ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಹೊಸ ನಿಯಮಗಳ ಪ್ರಕಾರ, ಆರೋಗ್ಯ ಮತ್ತು ಅಗತ್ಯ ಸೇವೆಗಳಿಗೆ ಸಂಬಂಧಿಸಿದ್ದನ್ನು ಹೊರತು ಪಡಿಸಿ ಖಾಸಗಿ ಕಚೇರಿಗಳು 50 ಪ್ರತಿಶತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. ಆದರೆ ಉತ್ಪಾದನಾ ವಲಯವು ಮಾರ್ಚ್ 31 ರವರೆಗೆ ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಹುದು ಎಂದು ಆದೇಶ … Continued

ಎರಡನೇ ಅಲೆಯೋ.. ಏರಿಳಿತವೋ..?: ಮಹಾರಾಷ್ಟ್ರದಲ್ಲಿ ಕೊರೊನಾ ಉಲ್ಬಣದಿಂದ ಹೆಚ್ಚಿದ ಆತಂಕ

ಮುಂಬೈ: ಕಳೆದ ಕೆಲವು ದಿನಗಳಲ್ಲಿ ಮುಂಬೈ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಕೊವಿಡ್‌-19 ಪ್ರಕರಣಗಳ ಉಲ್ಬಣವು “ಮೊದಲ ಅಲೆಯ ಏರಿಳಿತ” ಅಲ್ಲ, ಆದರೆ “ಭಯಾನಕ ಎರಡನೇ ತರಂಗ” ಎಂದು ಆರೋಗ್ಯದ ಉನ್ನತ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ನ್ಯೂಸ್ ಚಾನೆಲ್ ಎನ್‌ಡಿಟಿವಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕೆಇಎಂ ಆಸ್ಪತ್ರೆಯ ಡೀನ್ ಹೇಮಂತ್ ದೇಶಮುಖ್, ಪ್ರಕರಣದ ಸಂಖ್ಯೆಗಳು … Continued

ಬೆಂಗಳೂರಲ್ಲಿ ಮೂರು ಕೊವಿಡ್‌ ಆರೈಕೆ ಕೇಂದ್ರ, ರಾಜ್ಯದಲ್ಲಿ ಪ್ರತಿದಿನ ೩ ಲಕ್ಷ ಜನರಿಗೆ ಲಸಿಕೆ: ಸಿಎಂ ಬಿಎಸ್‌ವೈ

ಬೆಂಗಳೂರು: ಬೆಂಗಳೂರು, ಕಲಬುರಗಿ ಮತ್ತು ಬೀದರ್ ಈ ಪ್ರದೇಶಗಳಲ್ಲಿ ಕೊವಿಡ್‌ ಪ್ರಕರಣಗಳಲ್ಲಿ ಹೆಚ್ಚಳವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಪ್ರದೇಶಗಳ ಬಗ್ಗೆ ಹೆಚ್ಚು ಗಮನ ಕೊಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಕೆಲವು ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ದೇಶದ ಕೊವಿಡ್‌ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ವಿಡಿಯೋ ಸಮಾವೇಶದ ನಂತರ … Continued

ಕೊವಿಡ್: ಮಾ.೧೭ರಂದು ಸಿಎಂಗಳ ಜೊತೆ ಪ್ರಧಾನಿ ಮೋದಿ ಸಭೆ

ನವ ದೆಹಲಿ: ದೇಶದ ಕೋವಿಡ್ -೧೯ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮಾ.೧೭ (ಬುಧವಾರ) ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದರೆ, ಎರಡನೇ ತರಂಗದ ಭೀತಿ ಮತ್ತು ರಾಜ್ಯ ಸರ್ಕಾರಗಳು ಸಮಯಕ್ಕಿಂತ ಮುಂಚಿತವಾಗಿಯೇ ಇದಕ್ಕೆ ಸಿದ್ಧವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಭೆ ನಡೆಸಲಾಗುತ್ತದೆ. ಕಳೆದ ೨೪ ಗಂಟೆಗಳಲ್ಲಿ, … Continued