ತಮಿಳುನಾಡಿನಲ್ಲಿ ಪಟಾಕಿ ಘಟಕ ಸ್ಫೋಟ:೧೩ ಸಾವು, ೨೨ ಜನರಿಗೆ ಗಾಯ

ಚೆನ್ನೈ: ತಮಿಳುನಾಡಿನಲ್ಲಿ ಪಟಾಕಿ ಘಟಕದಲ್ಲಿ ಸ್ಫೋಟಗೊಂಡ ಪರಿಣಾಮ 13 ಮಂದಿ ಮೃತಪಟ್ಟಿದ್ದು, 22 ಮಂದಿಗೆ ಗಾಯಗಳಾಗಿವೆ. ಶುಕ್ರವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ವೆಂಬಕೊಟ್ಟೈ ನ ಕೊಟ್ಟೈಪಾಟಿಯಲ್ಲಿರುವ ಅಚಂಕುಲಂ ಈ ಅವಘಡ ನಡೆದಿದ್ದು, ಮೃತಪಟ್ಟವರ 11 ಮಂದಿಯ ಪೈಕಿ 9 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗಾಯಗೊಂಡ ಇಬ್ಬರನ್ನು ಸಟ್ಟೂರ್‌ ಆಸ್ಪತ್ರೆಗೆ ಸೇರಿಸಲಾಯಿತಾದರೂ ಗಂಭೀರ ಗಾಯಗಳಾಗಿದ್ದ ಾವರು ಚಿಕಿತ್ಸೆ … Continued

ಭಾರತದ ಭೂಪ್ರದೇಶ ಚೀನಾಕ್ಕೆ ನೀಡಿದ ಹೇಡಿ: ಪ್ರಧಾನಿ ಮೋದಿಗೆ ಜರೆದ ರಾಹುಲ್‌

ನವ ದೆಹಲಿ: ಪೂರ್ವ ಲಡಾಖ್‌ನ ಪಾಂಗೊಂಗ್‌ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಲ್ಲಿ ಭಾರತ ಮತ್ತು ಚೀನಾ ಸೇನಾ ಹಿಂತೆಗೆತದ ಕುರಿತು ಒಪ್ಪಂದ ಮಾಡಿಕೊಂಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಘೋಷಿಸಿದ ಒಂದು ದಿನದ ನಂತರ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಭೂಪ್ರದೇಶವನ್ನು … Continued

ಸುಳ್ಳು ಸುದ್ದಿ ಪರಿಶೀಲನಾ ಕಾರ್ಯವಿಧಾನ ಮಾಹಿತಿ ಕೋರಿ ಅರ್ಜಿ: ಕೇಂದ್ರ ಸರ್ಕಾರ, ಟ್ವಿಟ್ಟರ್‌ಗೆ ಸುಪ್ರೀಂ ಕೋರ್ಟ್‌ ನೋಟಿಸ್‌

ನವ ದೆಹಲಿ: ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಮತ್ತು ಟ್ವಿಟರ್ಗೆ ನೋಟಿಸ್ ನೀಡಿದೆ. ನಕಲಿ ಸುದ್ದಿಗಳ ಮೂಲಕ ದ್ವೇಷ ಹರಡುವ ಮತ್ತು ನಕಲಿ ಖಾತೆಗಳ ಮೂಲಕ ಪ್ರಚೋದನೆ ಮಾಡುವ ಸಂದೇಶಗಳನ್ನು ಪರಿಶೀಲಿಸಲು ಟ್ವಿಟ್ಟರ್‌ ನಕಲಿ ಸುದ್ದಿಗಳನ್ನು ಯಾವ ರೀತಿ ಪರಿಶೀಲಿಸುವ ಕಾರ್ಯವಿಧಾನ ಎಂಬುದನ್ನು ಕೋರಿ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರ ಹಾಗೂ … Continued

ಪಾಂಗೋಂಗ್‌ ಲೇಕ್‌ನಿಂದ ಹಂಹಂತವಾಗಿ ಸೈನ್ಯ ಹಿಂತೆಗೆತ: ರಾಜನಾಥ್‌

ನವದೆಹಲಿ: ಭಾರತ ಹಾಗೂ ಚೀನಾ ದೇಶಗಳ ಮಾತುಕತೆಯಿಂದಾಗಿ ಪಾಂಗೋಂಗ್‌ ಸರೋವರದ ಉತ್ತರ ಹಾಗೂ ದಕ್ಷಿಣ ತೀರದಿಂದ ಸೈನ್ಯ ಹಿಂತೆಗೆಯುವ ಒಪ್ಪಂದಕ್ಕೆ ಕಾರಣವಾಗಿದ್ದು, ಉಭಯ ದೇಶಗಳು ಸಮನ್ವಯತೆಯಿಂದ ಹಂತ ಹಂತವಾಗಿ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳಲಿವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದರು. ಪೂರ್ವ ಲಡಾಕ್‌ನ ಪಂಗೊಂಗ್ ಸರೋವರದ ದಕ್ಷಿಣ ಮತ್ತು ಉತ್ತರದ ದಡಗಳಲ್ಲಿ ಭಾರತೀಯ ಮತ್ತು … Continued

ಎಎಟಿ ಪ್ರೋಟೀನ್‌ ಕೊರತೆಯೇ ಯುರೋಪ್‌-ಉತ್ತರ ಅಮೆರಿಕದ ಜನರಲ್ಲಿ  ಕೊರೋನಾ ತೀವ್ರತೆ ಹೆಚ್ಚಲು ಕಾರಣ: ಕೊಲ್ಕತ್ತಾ ಸಂಸ್ಥೆ ಅಧ್ಯಯನದಲ್ಲಿ ಬೆಳಕಿಗೆ

ಯುರೋಪ್ ಮತ್ತು ಉತ್ತರ ಅಮೆರಿಕಾದ ಜನಸಂಖ್ಯೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರೊಟೀನ್‌ ಕೊರತೆಯ ಕಾರಣದಿಂದ ಅವರು ಕೊವಿಡ್‌-೧೯ ಏಷ್ಯಾದ ಜನರಿಗಿಂತ ಹೆಚ್ಚು ಬಾಧೆಗೊಳಗಾಗಿರಬಹುದು ಎಂದು ಕೊಲ್ಕತ್ತಾ ಮೂಲದ ರಾಷ್ಟ್ರೀಯ ಸಂಸ್ಥೆಯ ಸಂಶೋಧಕರು ಹೇಳಿದ್ದಾರೆ. ಆಲ್ಫಾ -1 ಆಂಟಿಟ್ರಿಪ್ಸಿನ್ (ಎಎಟಿ) ಎಂಬ ಪ್ರೊಟೀನ್‌,  ಶ್ವಾಸಕೋಶದ ಅಂಗಾಂಶಗಳ ಹಾನಿ ತಡೆಯುತ್ತದೆ ಮತ್ತು ಅದರ ಕೊರತೆಯು ಕೊರೊನಾವೈರಸ್ (ಸಾರ್ಸ್-ಕೋವಿ -2) ನ … Continued

ಸೋಶಿಯಲ್‌ ಮೀಡಿಯಾ ವೇದಿಕೆಗಳ ಡಬಲ್ ಸ್ಟ್ಯಾಂಡರ್ಡ್‌ಗೆ ಅವಕಾಶವಿಲ್ಲ: ಟ್ವಿಟ್ಟರ್‌ಗೆ ಸಚಿವರ ಖಡಕ್‌ ಸಂದೇಶ

ನವ ದೆಹಲಿ; ಸಾಮಾಜಿಕ ಮಾಧ್ಯಮ (ಸೋಶಿಯಲ್‌ ಮೀಡಿಯಾ)ವೇದಿಕೆಗಳ ಡಬಲ್ ಸ್ಟ್ಯಾಂಡರ್ಡ್‌ಗೆ ಭಾರತದಲ್ಲಿ ಅವಕಾಶವಿಲ್ಲ ಎಂದು ಐಟಿ ಸಚಿವ ರವಿಶಂಕರ್ ಪ್ರಸಾದ್ ಗುರುವಾರ ಸಂಸತ್ತಿನಲ್ಲಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿ ಹಾಗೂ ದ್ವೇಷದ ಸುದ್ದಿ ಹರಡುವುದನ್ನು ಸರಕಾರ ಸಹಿಸುವುದಿಲ್ಲ ಸಾಮಾಜಿಕ ಜಾಲತಾಣಗಳ ದೈತ್ಯರಾದ ಟ್ವಿಟರ್‌, ಫೇಸ್‌ಬುಕ್‌ ಹಾಗೂ ವ್ಯಾಟ್ಸಪ್‌ ನಮ್ಮ ನೆಲದ ನಿಯಮವನ್ನು ಪಾಲನೆ ಮಾಡಬೇಕು … Continued

ತೆಂಡುಲ್ಕರ್‌, ಲತಾ ಮಂಗೇಶ್ಕರ್‌ ವಿರುದ್ಧ ತನಿಖೆಗೆ ಆದೇಶ:ರಾಜ್ಯಸಭೆಯಲ್ಲಿ ಚರ್ಚೆಗೆ ನೋಟಿಸ್‌

ನವ ದೆಹಲಿ: ಸಚಿನ್ ತೆಂಡೂಲ್ಕರ್ ಮತ್ತು ಲತಾ ಮಂಗೇಶ್ಕರ್ ವಿರುದ್ಧ ಮಹಾರಾಷ್ಟ್ರ ಸರ್ಕಾರ ಆದೇಶಿಸಿರುವ ತನಿಖೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಬಿಜೆಪಿ ಸಂಸದ ಭಗವತ್ ಕರದ್ ಗುರುವಾರ ರಾಜ್ಯಸಭೆಯಲ್ಲಿ ಶೂನ್ಯ ವೇಳೆ ನೋಟಿಸ್ ನೀಡಿದ್ದಾರೆ. ಶೂನ್ಯವೇಳೆಯಲ್ಲಿ ಸಂಸದರು ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ಸಮಸ್ಯೆಗಳನ್ನು ಎತ್ತಬಹುದಾಗಿದ್ದು, ರೈತರ ಪ್ರತಿಭಟನೆ ಕುರಿತು ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್, ಲತಾ … Continued

ಫೆ,೧೮ರಂದು ರಾಷ್ಟ್ರವ್ಯಾಪಿ ರೈಲು ತಡೆ:ಸಂಯುಕ್ತ ಕಿಸಾನ್‌ ಮೋರ್ಚಾ ಘೋಷಣೆ

ನವ ದೆಹಲಿ: ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ತಮ್ಮ ಆಂದೋಲನವನ್ನು ತೀವ್ರಗೊಳಿಸಿದ ರೈತ ಸಂಘಗಳು ಫೆಬ್ರವರಿ 18 ರಂದು ರಾಷ್ಟ್ರವ್ಯಾಪಿ ನಾಲ್ಕು ತಾಸುಗಳ ರೈಲು ತಡೆ ಚಳವಳಿ ಮಾಡುವುದಾಗಿ ಪ್ರಕಟಿಸಿವೆ. ಫೆಬ್ರವರಿ 12 ರಿಂದ ರಾಜಸ್ಥಾನದಲ್ಲಿ ಟೋಲ್ ಸಂಗ್ರಹಣೆಗೆ ನೀಡುವುದಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಪ್ರಕಟಣೆಯಲ್ಲಿ ತಿಳಿಸಿದೆ. ಫೆಬ್ರವರಿ … Continued

ಕೃಷಿ ಕಾಯ್ದೆಯಲ್ಲಿ ತೊಡಕಿದ್ದರೆ ಬದಲಾವಣೆಗೆ ಸಿದ್ಧ: ರೈತರಿಗೆ ಪ್ರಧಾನಿ ಅಭಯ

ನವದೆಹಲಿ: ಇತ್ತೀಚೆಗೆ ಜಾರಿಗೆ ಬಂದ ಕೃಷಿ ಕಾನೂನುಗಳು ಬಲವಂತವಾಗಿಲ್ಲ ಮತ್ತು ಆಯ್ಕೆಗಳನ್ನು ಮಾತ್ರ ನೀಡುತ್ತವೆ. ಒಂದೊಮ್ಮೆ ರೈತರು ಮನವರಿಕೆಯಾಗುವ ಸಮರ್ಥ ಸಲಹೆಯೊಂದಿಗೆ ಬಂದರೆ ಕಾನೂನಿನಲ್ಲಿ ಬದಲಾವಣೆ ಮಾಡಲು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ, ಕೃಷಿ ಮಾರುಕಟ್ಟೆಗಳ ಹಳೆಯ ವ್ಯವಸ್ಥೆ ಮತ್ತು ಎಂಎಸ್‌ಪಿ ಮುಂದುವರಿಯುತ್ತದೆ ಎಂದು ಪುನರುಚ್ಚರಿಸಿದ ಅವರು, … Continued

ಸಂವಿಧಾನ-ಕಾನೂನು ಚೌಕಟ್ಟಿನೊಳಗೆ ಮೀಸಲಾತಿ ಬೇಡಿಕೆ ಬಗ್ಗೆ ತೀರ್ಮಾನ: ಬಿಎಸ್‌ವೈ

ಬೆಂಗಳೂರು: ಸಂವಿಧಾನ ಹಾಗೂ ಕಾನೂನು ಚೌಕಟ್ಟಿನಡಿಯಲ್ಲಿ ವಿವಿಧ ಜಾತಿ, ಸಮುದಾಯಗಳ ಮೀಸಲಾತಿ ಬೇಡಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯನವರ ೧೧೩ನೇ ಜಯಂತಿ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಕೆಂಗಲ್ ಹನುಮಂತಯ್ಯನವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಜಾತಿ-ಸಮುದಾಯಗಳಿಗೆ ಸಂವಿಧಾನದ ಪ್ರಕಾರವೇ … Continued