ವೀಡಿಯೊ..| ಪ್ರಧಾನಿ ಮೋದಿಯವರ ತವರೂರಾದ ವಡ್ನಗರದಲ್ಲಿ 2800 ವರ್ಷಗಳಷ್ಟು ಪುರಾತನವಾದ ಮಾನವ ವಸಾಹತು ಪತ್ತೆ

ಪ್ರಧಾನಿ ನರೇಂದ್ರ ಮೋದಿಯವರ ತವರು ಗ್ರಾಮವಾದ ಗುಜರಾತಿನ ವಡ್ನಗರದಲ್ಲಿರುವ 2,800 ವರ್ಷಗಳಷ್ಟು ಹಳೆಯದಾದ ಮಾನವ ವಸಾಹತು ಅವಶೇಷಗಳು ಪತ್ತೆಯಾಗಿವೆ. ಐಐಟಿ ಖರಗಪುರ, ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ), ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ (ಪಿಆರ್‌ಎಲ್), ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಮತ್ತು ಡೆಕ್ಕನ್ ಕಾಲೇಜು ನಡೆಸಿದ ಸಂಶೋಧನೆಯಲ್ಲಿ ವಡ್ನಗರದಲ್ಲಿ ಕ್ರಿಸ್ತಪೂರ್ವ 800ರಷ್ಟು ಹಳೆಯದಾದ ಮಾನವ ವಸಾಹತುಗಳ ಪುರಾವೆಗಳು … Continued

ವೀಡಿಯೊ..| 5,000 ಅಮೆರಿಕನ್ ವಜ್ರಗಳು-2 ಕೆಜಿ ಬೆಳ್ಳಿ ಬಳಸಿ ʼರಾಮಮಂದಿರʼ ನೆಕ್ಲೇಸ್ ತಯಾರಿಕೆ : ವಜ್ರದ ವ್ಯಾಪಾರಿಯಿಂದ ಅಯೋಧ್ಯಾ ರಾಮನಿಗೆ ನೆಕ್ಲೇಸ್ ಸಮರ್ಪಣೆ

ಸೂರತ್: ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಮುನ್ನ ವಜ್ರದ ವ್ಯಾಪಾರಿಯೊಬ್ಬರು ರಾಮಮಂದಿರದ ನೆಕ್ಲೇಸ್ ಅನ್ನು ತಯಾರಿಸಿದ್ದಾರೆ. ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿರುವ ಈ ನೆಕ್ಲೇಸ್ ಅನ್ನು 5,000 ಅಮೆರಿಕನ್ ವಜ್ರಗಳು ಮತ್ತು ಎರಡು ಕೆಜಿ ಬೆಳ್ಳಿಯನ್ನು ಬಳಸಿ ತಯಾರಿಸಲಾಗಿದೆ. ‘ಡೈಮಂಡ್-ಸಿಟಿ’ ಸೂರತ್‌ನಲ್ಲಿ ವಜ್ರದ ವ್ಯಾಪಾರದಿಂದ ನೆಕ್ಲೇಸ್ ಮಾಡಲಾಗಿದೆ. ನೆಕ್ಲೇಸ್ ತಯಾರಿಕೆಯಲ್ಲಿ ಏನು ಬಳಸಲಾಗಿದೆ? ಒಟ್ಟು 40 ಕುಶಲಕರ್ಮಿಗಳು … Continued

ಆಘಾತಕಾರಿ….: ಗುಜರಾತಿನಲ್ಲಿ 6 ತಿಂಗಳಲ್ಲಿ ಹೃದಯಾಘಾತದಿಂದ ಸಾವಿಗೀಡಾದವರಲ್ಲಿ 80% ರಷ್ಟು ಮಂದಿ 11-25 ವರ್ಷದವರು…!

ಅಹಮದಾಬಾದ್: ಕಳೆದ ಆರು ತಿಂಗಳಲ್ಲಿ ಗುಜರಾತಿನಲ್ಲಿ ಒಟ್ಟು 1,052 ಜನರು ಹೃದಯಾಘಾತದಿಂದ ಮೃತಪಟ್ಟಿದ್ದು, ಅವರಲ್ಲಿ 80% ರಷ್ಟು ಜನ 11-25 ವಯಸ್ಸಿನವರು ಎಂದು ರಾಜ್ಯ ಶಿಕ್ಷಣ ಸಚಿವ ಕುಬೇರ ದಿಂಡೋರ್ ಶುಕ್ರವಾರ ಹೇಳಿದ್ದಾರೆ. ಹೆಚ್ಚುತ್ತಿರುವ ಹೃದಯಾಘಾತಗಳನ್ನು ಗಮನದಲ್ಲಿಟ್ಟುಕೊಂಡು, ಸುಮಾರು ಎರಡು ಲಕ್ಷ ಶಾಲಾ ಶಿಕ್ಷಕರು ಮತ್ತು ಕಾಲೇಜು ಪ್ರಾಧ್ಯಾಪಕರಿಗೆ ಕಾರ್ಡಿಯೋಪಲ್ಮನರಿ ಪುನರುಜ್ಜೀವನ (ಸಿಪಿಆರ್) ಮಾಡುವಲ್ಲಿ ತರಬೇತಿ … Continued

ಮಿಥನಾಲ್ ಮಿಶ್ರಿತ ಆಯುರ್ವೇದ ಸಿರಪ್ ಸೇವಿಸಿ ಐದು ಮಂದಿ ಸಾವು

ನಾಡಿಯಾದ್ (ಗುಜರಾತ) : ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಮೀಥೈಲ್ ಆಲ್ಕೋಹಾಲ್ ಹೊಂದಿರುವ ಆಯುರ್ವೇದ ಸಿರಪ್ ಸೇವಿಸಿದ ಶಂಕಿತ ಪ್ರಕರಣದಲ್ಲಿ ಕನಿಷ್ಠ ಐವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ನವೆಂಬರ್ 28 ಮತ್ತು 29 ರಂದು ಸಾವು ಸಂಭವಿಸಿದೆ ಎಂದು ಖೇಡಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ ಗಢಿಯಾ ಹೇಳಿದ್ದಾರೆ. ಮೀಥೈಲ್ ಆಲ್ಕೋಹಾಲ್ ಒಂದು ವಿಷಕಾರಿ ವಸ್ತುವಾಗಿದೆ. … Continued

ಗುಜರಾತಿನಲ್ಲಿ ಮಳೆಯ ಅಬ್ಬರ. ಸಿಡಿಲು ಬಡಿದು 20 ಮಂದಿ ಸಾವು

ಗಾಂಧಿನಗರ: ವಾರಾಂತ್ಯದಲ್ಲಿ ಗುಜರಾತಿನಾದ್ಯಂತ ಸಿಡಿಲು ಬಡಿದು ಕನಿಷ್ಠ 20 ಜನರು ಸಾವಿಗೀಡಾಗಿದ್ದಾರೆ, ರಾಜ್ಯವು ಅಕಾಲಿಕ ಮಳೆಯಿಂದ ತತ್ತರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ)ದ ಪ್ರಕಾರ, ಗುಜರಾತ್‌ನ ವಿವಿಧ ಜಿಲ್ಲೆಗಳಿಂದ ಒಟ್ಟು 20 ಮಳೆ ಸಂಬಂಧಿತ ಸಾವುಗಳು ವರದಿಯಾಗಿವೆ. ಭಾನುವಾರ ರಾಜ್ಯದಲ್ಲಿ ಸುರಿದ ತೀವ್ರ ಅಕಾಲಿಕ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು … Continued

ಸಂಬಳ ಕೇಳಿದ್ದಕ್ಕೆ ದಲಿತ ಯುವಕನ ಬಾಯಿಗೆ ಚಪ್ಪಲಿ ತುರುಕಿದ ಮಹಿಳೆ…..!

ಮೊರ್ಬಿ (ಗುಜರಾತ್) : ತನ್ನ ಕಂಪನಿಯಲ್ಲಿ ಹದಿನೈದು ದಿನಗಳ ಕಾಲ ಕೆಲಸ ಮಾಡುತ್ತಿದ್ದ 21 ವರ್ಷದ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಉದ್ಯಮಿ ಮತ್ತು ಇತರ ಆರು ಮಂದಿಯ ವಿರುದ್ಧ ಗುಜರಾತ್‌ನ ಮೊರ್ಬಿ ನಗರದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂಬಳ ನೀಡಲು ಒತ್ತಾಯಿಸಿದ್ದಕ್ಕಾಗಿ ಆತನ ಬಾಯಲ್ಲಿ ಚಪ್ಪಲಿ ತುರುಕಿದ ಮಹಿಳೆ ನಂತರ … Continued

ಸೂರತ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ : ಓರ್ವ ಸಾವು, ಹಲವರಿಗೆ ಗಾಯ

ಸೂರತ್ : ಗುಜರಾತ್‌ನ ಸೂರತ್ ರೈಲು ನಿಲ್ದಾಣದಲ್ಲಿ ಶನಿವಾರ ಕಾಲ್ತುಳಿತ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ದೀಪಾವಳಿಗೆ ತಮ್ಮ ಊರುಗಳಿಗೆ ತೆರಳುವ ಅಪಾರ ಸಂಖ್ಯೆಯ ಜನರು ವಿವಿಧ ರಾಜ್ಯಗಳಿಗೆ ತೆರಳಲು ನಿಲ್ದಾಣದಲ್ಲಿ ಜಮಾಯಿಸಿದ್ದರು. ರೈಲು ಹತ್ತುವಾಗ ಕಾಲ್ತುಳಿತ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವರು ಪ್ರಜ್ಞೆ ತಪ್ಪಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ … Continued

ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಶವ ಪತ್ತೆ

ಸೂರತ್ : ಗುಜರಾತ್‌ನ ಸೂರತ್‌ನಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯ ಪ್ರಕಾರ, ಆರು ಮಂದಿ ವಿಷಕಾರಿ ಪದಾರ್ಥಗಳನ್ನು ಸೇವಿಸಿ ಮೃತಪಟ್ಟಿದ್ದಾರೆ. ಏಳನೇ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಮನೀಶ್ ಸೋಲಂಕಿ, ಅವರ ಪತ್ನಿ ರೀಟಾ, ತಂದೆ ಕಾನು, ತಾಯಿ ಶೋಭಾ … Continued

ಬೀದಿ ನಾಯಿಗಳ ದಾಳಿಯಿಂದ ಗಾಯ : ವಾಘ್ ಬಕ್ರಿ ಕಂಪನಿ ನಿರ್ದೇಶಕ ಪರಾಗ ದೇಸಾಯಿ ಸಾವು

ಅಹಮದಾಬಾದ್‌ : ವಾಘ್ ಬಕ್ರಿ ಟೀ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಪರಾಗ ದೇಸಾಯಿ ಅವರು ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಅವರಿಗೆ ಅವರಿಗೆ 49 ವರ್ಷವಾಗಿತ್ತು. ಅಕ್ಟೋಬರ್ 15 ರಂದು ಬೀದಿ ನಾಯಿಗಳ ದಾಳಿಯ ನಂತರ ದೇಸಾಯಿ ಅವರು ತಮ್ಮ ನಿವಾಸದ ಬಳಿ ಬಿದ್ದು ಅವರ ತಲೆಗೆ ಏಟು ಬಿದ್ದಿತ್ತು ಎಂದು … Continued

ಶಾಲಾ ವಿದ್ಯಾರ್ಥಿಗಳಿಂದ ನಮಾಜ್ ಮಾಡಿಸಿದ ಶಾಲೆ : ಪ್ರತಿಭಟನೆಗಳ ನಂತರ ತನಿಖೆಗೆ ಆದೇಶ

ಅಹಮದಾಬಾದ್: ಅಹಮದಾಬಾದ್‌ನ ಖಾಸಗಿ ಶಾಲೆಯೊಂದು ಜಾಗೃತಿ ಕಾರ್ಯಕ್ರಮದ ಭಾಗವಾಗಿ ಹಿಂದೂ ಧರ್ಮದ ವಿದ್ಯಾರ್ಥಿಗಳನ್ನು ತನ್ನ ಆವರಣದಲ್ಲಿ ನಮಾಜ್ ಮಾಡಲು ಹೇಳಿರುವುದು ಪ್ರತಿಭಟನೆಗೆ ಕಾರಣವಾಗಿದೆ. ಸೆಪ್ಟೆಂಬರ್ 29 ರಂದು ನಡೆದ ಘಟನೆಯ ಕುರಿತು ಘಟ್ಲೋಡಿಯಾ ಪ್ರದೇಶದಲ್ಲಿ ನೆಲೆಗೊಂಡಿರುವ ಕಲೋರೆಕ್ಸ್ ಫ್ಯೂಚರ್ ಸ್ಕೂಲ್ ಎಂಬ ಶಾಲೆಯ ವಿರುದ್ಧ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಶಾಲಾ ಆಡಳಿತ ಮಂಡಳಿಯು ಕ್ಷಮೆಯಾಚಿಸಿದ್ದು, … Continued