ಮಮತಾಗೆ ಗಾಯ: ದಾಳಿ ವರದಿ ತಳ್ಳಿಹಾಕಿದ ಚುನಾವಣಾ ಆಯೋಗ

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ದಾಳಿ ನಡೆದಿದೆ ಎಂಬ ವರದಿಯನ್ನು ಭಾರತದ ಚುನಾವಣಾ ಆಯೋಗವು ತಳ್ಳಿಹಾಕಿದೆ. ಆಯೋಗ ನೇಮಕ ಮಾಡಿದ್ದ ಪಶ್ಚಿಮ ಬಂಗಾಳದ ಚುನಾವಣಾ ವೀಕ್ಷಕರು ಮತ್ತು ಮುಖ್ಯ ಕಾರ್ಯದರ್ಶಿಯ ವರದಿ ಆಧರಿಸಿ ಚುನಾವಣಾ ಆಯೋಗ ಈ ನಿರ್ಧಾರಕ್ಕೆ ಬಂದಿದೆ. ಬುಧವಾರ ಸಂಜೆ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ … Continued

ನಾನು ಗಾಯಗೊಂಡ ಹುಲಿ: ಪ್ರಚಾರ ಸಭೆಯಲ್ಲಿ ಗುಡುಗಿದ ಮಮತಾ

ಕೊಲ್ಕತ್ತಾ: ನಾನು ಗಾಯಗೊಂಡ ಹುಲಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಭಾನುವಾರ ಕೊಲ್ಕತ್ತಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಗಾಲಿಕುರ್ಚಿಯಲ್ಲಿಯೇ ಕುಳಿತು ಪ್ರಚಾರ ಭಾಷಣ ಮಾಡಿದ ಅವರು, ಯಾವುದೇ ಸಂಚು ನಡೆದರೂ ನಾನು ತಲೆ ಬಾಗುವುದಿಲ್ಲ ಎಂದು ಹೇಳಿದ್ದಾರೆ. ನನಗೆ ಗಾಯಗಳಾಗಿವೆ. ಆರೋಗ್ಯ ಸರಿಯಿಲ್ಲ. ಆದರೆ ನನ್ನ ಗುರಿ ಬದಲಾಗಿಲ್ಲ. 15 ದಿನಗಳ … Continued

ಗಾಲಿ ಕುರ್ಚಿಯಲ್ಲೇ ಇಂದು ಮಮತಾ ರೋಡ್‌ ಶೋ

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರದ ಸಮಯದಲ್ಲಿ ಗಾಯಗೊಂಡ ಕೆಲವು ದಿನಗಳ ನಂತರ ಗಾಲಿಕುರ್ಚಿಯಲ್ಲಿ ಭಾನುವಾರ ರೋಡ್ ಶೋ ನಡೆಸಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲಗಳು ತಿಳಿಸಿವೆ. ಅವರು ಶನಿವಾರ ಮಧ್ಯಾಹ್ನ ಹಜ್ರಾದಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವಾರದ ಆರಂಭದಲ್ಲಿ ಚುನಾವಣೆ ಪ್ರಚಾರದ ವೇಳೆ ಗಾಯಗೊಂಡ … Continued

ಆಸ್ಪತ್ರೆಯಿಂದ ವೀಲ್‌ಚೇರ್‌ನಲ್ಲಿಯೇ ಹೊರಬಂದ ಮಮತಾ

ಕೊಲ್ಕತ್ತಾ: ಎರಡು ದಿನಗಳ ಹಿಂದೆ ನಂದಿಗ್ರಾಮದಲ್ಲಿ ಗಾಯಗೊಂಡು ಎಸ್‌ಎಸ್ ಕೆಎಂ ಆಸ್ಪತ್ರೆಗೆ ದಾಖಲಾಗಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಿಂದ ವೀಲ್ ಚೇರ್ ನಲ್ಲಿಯೇಅವರು ಹೊರ ಬಂದಿದ್ದಾರೆ. ಮಮತಾ ಬ್ಯಾನರ್ಜಿ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಶುಕ್ರವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಕಳೆದ ಬುಧವಾರ ನಂದಿಗ್ರಾಮದಲ್ಲಿ ನಡೆದ … Continued

ಮಮತಾ ಬ್ಯಾನರ್ಜಿಗೆ ಗಾಯ: ಪಿತೂರಿಯ ಸಂದೇಹ ವ್ಯಕ್ತಪಡಿಸಿದ ದೀದಿ

ನಂದಿಗ್ರಾಮ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ನಂತರ ಇಲ್ಲಿನ ಬಿರುಲಿಯಾ ಬಜಾರ್‌ನಲ್ಲಿ ನಡೆದ ಜನರ ನೂಕು ನುಗ್ಗಲಿನಿಂದಾಗಿ ಗಾಯಗೊಂಡಿದ್ದಾರೆ. ಸ್ಥಳಿಯ ಮತದಾರರನ್ನು ಭೇಟಿ ಮಾಡುತ್ತಿದ್ದ ಸಂದರ್ಭದಲ್ಲಿ ಜನರ ನೂಕಾಟದಿಂದಾಗಿ ಮಮತಾ ಅವರ ಕಾಲಿಗೆ ಗಾಯವಾಗಿದೆ. ಆಕೆಯ ತಲೆಗೆ ಕೂಡ ಪೆಟ್ಟಾಗಿದೆ. ದೇವಸ್ಥಾನದಿಂದ ಕಾರಿನ ಕಡೆಗೆ ಬರುತ್ತಿದ್ದಾಗ, … Continued

ಮಮತಾ ದೀದಿ “ಚುನಾವಣಾ ಹಿಂದೂʼ ಎಂದು ಟೀಕಿಸಿದ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾರ್ವಜನಿಕ ರ್ಯಾಲಿಯಲ್ಲಿ ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿದ್ದನ್ನು ಟೀಕಿಸಿದ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ದೀದಿಯನ್ನು “ಚುನಾವಣಾ ಹಿಂದೂʼ ಎಂದು ಮೂದಲಿಸಿದ್ದಾರೆ. ಮಂಗಳವಾರ ನಂದಿಗ್ರಾಮದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಮತಾ ಸಂಸ್ಕೃತ ಶ್ಲೋಕಗಳನ್ನು ಪಠಿಸಿದ್ದರಲ್ಲದೇ ತಾವು ಕೂಡ ಹಿಂದೂ ಮಹಿಳೆ ಎಂದು ಹೇಳಿದ್ದರು. ಇದನ್ನು ಗಿರಿರಾಜ ಸಿಂಗ್‌ ಹಾಗೂ ಸುವೆಂದು … Continued

ರಾವಣ, ರಾಕ್ಷಸ, ಗೂಂಡಾ ಎಂದೆಲ್ಲ  ಹೀಯಾಳಿಸಿದಿರಿ… ನನ್ನ ಮೇಲೆ ನಿಮಗೆ ಇಷ್ಟೊಂದು ಕೋಪವೇಕೆ ದೀದಿ?: ಬಿಜೆಪಿ ಸಮಾವೇಶದಲ್ಲಿ ಮೋದಿ ಪ್ರಶ್ನೆ

  ಕೊಲ್ಕತ್ತಾ:ದೀದಿ (ಮಮತಾ ಬ್ಯಾನರ್ಜಿ) ನನ್ನ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ. ನನ್ನ ಮೇಲೆ ಅವರಿಗೆ ಕೋಪ ಎಷ್ಟಿತ್ತೆಂದರೆ ಅನೇಕ ಸಲ ರಾವಣ, ರಾಕ್ಷಸ, ಗೂಂಡಾ ಎಂದೆಲ್ಲ ಕರೆದು ನನ್ನನ್ನು ಹೀಯಾಳಿಸಿದ್ದೀರಿ. ದೀದಿಯವರೇ ನನ್ನ ಮೇಲೆ ನಿಮಗೆ ಯಾಕಿಷ್ಟು ಕೋಪ? ಅಂಥದ್ದನ್ನು ನಾನೇನು ಮಾಡಿದ್ದೇನೆ ಎಂದು ಮಾರ್ಮಿಕವಾಗಿ ಕೇಳಿದರು. ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ … Continued

ಗುರು-ಶಿಷ್ಯರ ಕದನ:ದೇಶದ ಕುತೂಹಲದ ಕೇಂದ್ರವಾದ ನಂದಿಗ್ರಾಮ

ಪಶ್ಚಿಮ ಬಂಗಾಳದ ನಂದಿಗ್ರಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ. ಈ ಬಿಜೆಪಿ ಇದನ್ನು ಪ್ರಕಟಿಸಿದ್ದು ಇದು ಪಶ್ಚಿಮ ಬಂಗಾಳದಲ್ಲಿಯೇ ಅತ್ಯಂತ ತುರುಸಿನ ಸ್ಪರ್ಧಾ ಕಣವಾಗಿ ಮಾರ್ಪಡಲಿದೆ. ಬಿಜೆಪಿ ಔಪಚಾರಿಕವಾಗಿ ಈ ಘೋಷಣೆ ಮಾಡಿದ್ದು, ಇದು ನಂದಿಗ್ರಾಮದಲ್ಲಿ ಗುರು (ಮಮತಾ ಬ್ಯಾನರ್ಜಿ) ಶಿಷ್ಯನ (ಸುವೇಂದು ಅಧಿಕಾರಿ) ನಡುವಿನ ಕದನವಾಗಲಿದೆ.ನಂದಿಗ್ರಾಮ ಪಶ್ಚಿಇಮ ಬಂಗಾಳದ … Continued

ಪಶ್ಚಿಮ ಬಂಗಾಳದಲ್ಲಿ ೮ ಹಂತದಲ್ಲಿ ಚುನಾವಣೆ ಆಯೋಜಿಸಲು ಮೋದಿ, ಶಾ ಸೂಚನೆಯಿದೆಯೇ?

ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಸೂಚನೆ ಮೇರೆಗೆ ಪಶ್ಚಿಮ ಬಂಗಾಳದಲ್ಲಿ ೮ ಹಂತಗಳಲ್ಲಿ ಮತದಾನ ನಿಗದಿಪಡಿಸಲಾಗಿದೆಯೇ ಎಂದು ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಆಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೆರಿ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ಪ್ರಚಾರ ನಡೆಸಲು ಮೋದಿ ಮತ್ತು ಶಾ ಅವರಿಗೆ … Continued

ಆನ್‌ಲೈನ್‌ ವೆಬಿನಾರಿಗೆ ನಿರ್ಬಂಧ: ಮಮತಾ ಆಕ್ಷೇಪ

ಕೇಂದ್ರ ಶಿಕ್ಷಣ ಸಚಿವಾಲಯ ರಾಜ್ಯ ಸರಕಾರಗಳೊಂದಿಗೆ ಸಮಾಲೋಚನೆ ನಡೆಸದೇ ಆನ್‌ಲೈನ್‌ ಅಂತಾರಾಷ್ಟ್ರೀಯ ಸಮ್ಮೇಳನಗಳ ಮೇಲೆ ಹಲವು ನಿರ್ಬಂಧಗಳನ್ನು ಹಾಕಿರುವುದನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡಿಸಿದ್ದಾರೆ. ಅವರು ಪ್ರಧಾನಿಗೆ ಪತ್ರ ಬರೆದು, ಕೇಂದ್ರ ಸರಕಾರ ಯಾವುದೇ ಸಮಾಲೋಚನೆ ನಡೆಸದೇ ರಾಜ್ಯ ಸರಕಾರಗಳಿಗೆ ಯಾವುದೇ ಸೂಚನೆ ನೀಡದೇ ವಿಶ್ವವಿದ್ಯಾಲಯಗಳು ತರಬೇತಿ ನೀಡುವ ವರ್ಚುವಲ್‌ ಅಂತಾರಾಷ್ಟ್ರೀಯ ಸಮ್ಮೇಳನಗಳ … Continued