ವೀಡಿಯೊಗಳು…| ಪುಣೆ : ಇಂದ್ರಯಾಣಿ ನದಿ ಪ್ರವಾಸಿ ಸೇತುವೆ ಕುಸಿತ ; ಹಲವರು ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ

ಪುಣೆ: ಭಾನುವಾರ ಮಧ್ಯಾಹ್ನ ಪುಣೆ ಜಿಲ್ಲೆಯ ದೇಹುವಿನ ಕುಂಡ್ಮಲ ಪ್ರದೇಶದಲ್ಲಿ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಪಾದಾಚಾರಿ ಸೇತುವೆ ಕುಸಿದು ಹಲವಾರು ಜನರು ನದಿಯ ರಭಸದ ಪ್ರವಾಹಕ್ಕೆ ಸಿಲುಕಿ ಮುಳುಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಮಧ್ಯಾಹ್ನ 3:30 ರ ಸುಮಾರಿಗೆ ಸಂಭವಿಸಿದ್ದು, ಕನಿಷ್ಠ ಇಬ್ಬರು ಸಾವಿಗೀಡಾಗಿರುವುದು ಎಂದು ದೃಢಪಟ್ಟಿದೆ, ಆದರೆ ಇನ್ನೂ ಅನೇಕರು ಕಾಣೆಯಾಗಿದ್ದಾರೆ. … Continued

ವೀಡಿಯೊ | ಮರದಿಂದ ಹೊರಚಿಮ್ಮಿದ ನೀರು ; ಪವಿತ್ರ ಜಲ ಎಂದು ಕುಂಕುಮ ಹಚ್ಚಿ ಪೂಜಿಸಿದ ಜನ : ನಿಜಕ್ಕೂ ಆಗಿದ್ದೇನಂದ್ರೆ…

ಕುರುಡು ಭಕ್ತಿಯು ಮೂಢನಂಬಿಕೆಗೆ ಕಾರಣವಾಗುವ ಪ್ರಕರಣವೊಂದಕ್ಕೆ ಪುಣೆಯ ವೀಡಿಯೊ ವೈರಲ್ ಪುಷ್ಟಿ ನೀಡಿದೆ. ಸ್ಥಳೀಯರು ಹೂವುಗಳು, ಅರಿಶಿನ ಮತ್ತು ಕುಂಕುಮವನ್ನು ಮರದ ಕಾಂಡಕ್ಕೆ ಅರ್ಪಿಸುವುದನ್ನು ಇದು ತೋರಿಸುತ್ತದೆ. ಅದು ಪವಿತ್ರ ನೀರನ್ನು ಹೊರಹಾಕುತ್ತಿದೆ ಎಂದು ಜನರು ಭಾವಿಸಿ ಜನರು ಅದಕ್ಕೆ ಪೂಜೆ ಮಾಡಿದ್ದಾರೆ. ಆದರೆ, ನಂತರ ಮುನ್ಸಿಪಲ್ ಕಾರ್ಪೊರೇಷನ್ ಈ ಬಗ್ಗೆ ತಪಾಸಣೆ ಮಾಡಿದ ನಂತರ … Continued

ಪೊಲೀಸ್‌ ಠಾಣೆಯಿಂದ 100 ಮೀ. ದೂರದಲ್ಲಿ ಬಸ್‌ನೊಳಗೆ ಮಹಿಳೆ ಮೇಲೆ ಅತ್ಯಾಚಾರ

ಪುಣೆ: ಇಲ್ಲಿನ ಜನನಿಬಿಡ ಸ್ವರ್ಗೇಟ್ ಬಸ್ ನಿಲ್ದಾಣದ ಮಧ್ಯದಲ್ಲಿ ಮಂಗಳವಾರ ಮುಂಜಾನೆ 26 ವರ್ಷದ ಮಹಿಳೆಯೊಬ್ಬರ ಮೇಲೆ ಬಸ್ಸಿನೊಳಗೆ ಅತ್ಯಾಚಾರ ಮಾಡಲಾಗಿದೆ. ಈ ಘಟನೆ ಪೊಲೀಸ್ ಠಾಣೆಯಿಂದ ಸುಮಾರು 100 ಮೀಟರ್ ದೂರದಲ್ಲಿ ನಿಲ್ಲಿಸಿದ್ದ ಬಸ್ಸಿನಲ್ಲಿ ನಡೆದಿದೆ. ಆರೋಪಿಯನ್ನು ದತ್ತಾತ್ರೇಯ ರಾಮದಾಸ ಎಂದು ಹೆಸರಿಸಲಾಗಿದೆ. ಆತನನ್ನು ಸಿಸಿಟಿವಿ ಫೀಡ್ ಮೂಲಕ ಗುರುತಿಸಲಾಗಿದೆ – ಆದರೆ ಇನ್ನೂ … Continued

ವೀಡಿಯೊ..| ದ್ವಿಚಕ್ರ ವಾಹನಕ್ಕೆ ವೇಗವಾಗಿ ಡಿಕ್ಕಿ ಹೊಡೆದ ಕಾರು ; ಗಾಳಿಯಲ್ಲಿ ಎಸೆಯಲ್ಪಟ್ಟ ಬೈಕ್‌ ಸವಾರರು

ಆಘಾತಕಾರಿ ಘಟನೆಯೊಂದರಲ್ಲಿ, ಪುಣೆಯ ವಕಾಡ್ ಪ್ರದೇಶದ ಜನನಿಬಿಡ ಮುಂಬೈ-ಪುಣೆ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಇಬ್ಬರು ವ್ಯಕ್ತಿಗಳು ಗಾಳಿಯಲ್ಲಿ ಹಾರಿಹೋಗಿ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮತ್ತೊಂದು ಕಾರಿನ ಡ್ಯಾಶ್ ಕ್ಯಾಮ್‌ನಲ್ಲಿ ಈ ಘಟನೆ ಸೆರೆಯಾಗಿದೆ. ದೃಶ್ಯಾವಳಿಗಳ ಪ್ರಕಾರ, ವಕಾಡ್ ಪ್ರದೇಶದ … Continued

ವೀಡಿಯೊ…| ಎರಡನೇ ಮಹಡಿ ಮೇಲಿನ ಪಾರ್ಕಿಂಗ್‌ನಿಂದ ಕೆಳಕ್ಕೆ ಬಿದ್ದ ಕಾರು ; ಮುಂದಾಗಿದ್ದು…

ಪುಣೆಯ ಮಲ್ಟಿ ಲೆವೆಲ್ ಪಾರ್ಕಿಂಗ್ ಸೌಲಭ್ಯದ ಮಹಡಿಯಿಂದ ಕಾರು ಕೆಳಕ್ಕೆ ಬೀಳುತ್ತಿರುವ ವೀಡಿಯೊ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಇದು ಮೈ ಜುಂ ಎನ್ನಿಸುವಂತಿದೆ. ಚಾಲಕ ಆಕಸ್ಮಿಕವಾಗಿ ವಾಹನವನ್ನು ರಿವರ್ಸ್‌ ಓಡಿಸಿದಾಗ ಈ ಘಟನೆ ಸಂಭವಿಸಿದ್ದು, ಕಾರು ಗೋಡೆಯನ್ನು ಭೇದಿಸಿ ಮಹಡಿಯಿಂದ ನೆಲಕ್ಕೆ ಬಿದ್ದಿದೆ. ಜನವರಿ 20 ರಂದು ರಾತ್ರಿ 10 ಗಂಟೆಗೆ ಈ ಘಟನೆ ಸಂಭವಿಸಿದೆ ಎಂದು … Continued

ಸಹೋದ್ಯೋಗಿ ಮಹಿಳೆ ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿದ ವ್ಯಕ್ತಿ ; ಸುಮ್ಮನೆ ನೋಡುತ್ತಲೇ ನಿಂತ ಜನ…!

ಪುಣೆ: ಪುಣೆಯ  ಕಂಪನಿಯ ಪಾರ್ಕಿಂಗ್ ಸ್ಥಳದಲ್ಲಿ 28 ವರ್ಷದ ಮಹಿಳೆಯ ಮೇಲೆ ಸಹೋದ್ಯೋಗಿಯೊಬ್ಬರು ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.ಭೀಕರ ದಾಳಿಯನ್ನು ಹಲವಾರು ಜನರು ನೋಡುತ್ತಿದ್ದರೂ ಯಾರೂ ಅದನ್ನು ತಡೆಯಲು ಪ್ರಯತ್ನಿಸಲಿಲ್ಲ ಎಂದು ಹೇಳಲಾಗಿದ್ದು, ಗಾಯಗೊಂಡ ಮಹಿಳೆ ಸಾವಿಗೀಡಾಗಿದ್ದಾಳೆ. ಸುಳ್ಳು ಹೇಳಿ ತನ್ನಿಂದ ಸಾಲ ಪಡೆದಿದ್ದಕ್ಕೆ ಕೋಪಗೊಂಡು ಈ ತರಹ ಮಾಡಿರುವುದು ಕೊಲೆ ಆರೋಪಿ ತಿಳಿಸಿದ್ದಾನೆ … Continued

ಕ್ರಿಕೆಟ್‌ | ಇತಿಹಾಸ ನಿರ್ಮಿಸಿದ ಆರ್ ಅಶ್ವಿನ್…! ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ನಲ್ಲಿ ಈಗ ಅತಿಹೆಚ್ಚು ವಿಕೆಟ್‌ ಪಡೆದ ಆಟಗಾರ…!!

ಪುಣೆ: ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ವಿಶ್ವದಲ್ಲಿ ನಂ. 2 ಸ್ಥಾನದಲ್ಲಿರುವ ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗುರುವಾರ (ಅಕ್ಟೋಬರ್ 24) ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (ಡಬ್ಲ್ಯುಟಿಸಿ) ಅಗ್ರಗಣ್ಯ ವಿಕೆಟ್ ಪಡೆದವರಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾದ ನಾಥನ್ ಲಿಯಾನ್ ಅವರ 187 ವಿಕೆಟ್‌ಗಳ ದಾಖಲೆಯನ್ನು ಅವರು ಮುರಿದಿದ್ದಾರೆ. ಅಶ್ವಿನ್ ಅವರಿಗೆ ನಾಥನ್ ಲಿಯಾನ್ … Continued

ಸಾವರ್ಕರ್ ಮಾನನಷ್ಟ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗುವಂತೆ ರಾಹುಲ್ ಗಾಂಧಿಗೆ ಸಮನ್ಸ್

ಪುಣೆ : ವಿನಾಯಕ ದಾಮೋದರ್ ಸಾವರ್ಕರ್ (ವೀರ್‌ ಸಾವರ್ಕರ್‌) ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಅವರು ಸಲ್ಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಅಕ್ಟೋಬರ್ 23 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಪುಣೆ ನ್ಯಾಯಾಲಯವು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದೆ. . ಕಳೆದ ವರ್ಷ ಯುನೈಟೆಡ್ ಕಿಂಗ್‌ಡಮ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ … Continued

ವೀಡಿಯೊ…| ಪುಣೆ ಸಮೀಪ ಹೆಲಿಕಾಪ್ಟರ್ ಪತನ : ಇಬ್ಬರು ಪೈಲಟ್‌ ಸೇರಿ ಮೂವರು ಸಾವು

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಬುಧವಾರ ಬೆಳಗ್ಗೆ ಹೆಲಿಕಾಪ್ಟರ್ ಪತನಗೊಂಡಿದೆ. ಘಟನೆಯಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ ಮೂವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಲಿಕಾಪ್ಟರ್ ಪುಣೆಯ ಆಕ್ಸ್‌ಫರ್ಡ್ ಗಾಲ್ಫ್ ಕೋರ್ಸ್ ಹೆಲಿಪ್ಯಾಡ್‌ನಿಂದ ಟೇಕಾಫ್ ಆದ ಕೂಡಲೇ ನಗರದ ವಸತಿ ಉಪನಗರವಾದ ಬವ್‌ಧಾನ್‌ ಗುಡ್ಡಗಾಡು ಪ್ರದೇಶದ ಬಳಿ ಇಂದು, ಬುಧವಾರ ಬೆಳಿಗ್ಗೆ 6:45 ರ ಸುಮಾರಿಗೆ ಪತನಗೊಂಡಿದೆ ಎಂದು ವರದಿಯಾಗಿದೆ. ಹೆಲಿಕಾಪ್ಟರ್‌ … Continued

ವೀಡಿಯೊ…| ದಿಢೀರ್ ಬಾಯ್ತೆರೆದ ರಸ್ತೆ : ಸೆಕೆಂಡೆಗಳಲ್ಲೇ ದೊಡ್ಡ ಟ್ಯಾಂಕರ್ ಅನ್ನೇ ಇಡಿಯಾಗಿ ನುಂಗಿದ ಗುಂಡಿ…!

ಇದಕ್ಕಿದ್ದಂತೆ ಬಾಯ್ತೆರೆದ ರಸ್ತೆಯು ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ಸೆಪ್ಟಿಕ್ ಟ್ಯಾಂಕ್ ವಾಹನವನ್ನು ಇಡಿಯಾಗಿ ಆಪೋಶನ ತೆಗೆದುಕೊಂಡ ಘಟನೆ ಶುಕ್ರವಾರ ಪುಣೆಯ ಲಕ್ಷ್ಮೀ ರಸ್ತೆಯ ಸಮಾಧಾನ ಚೌಕದ ಬಳಿ ನಡೆದಿದೆ. ಚಾಲಕ ತನ್ನನ್ನು ರಕ್ಷಿಸಿಕೊಳ್ಳಲು ತಕ್ಷಣವೇ ವಾಹನದಿಂದ ಜಿಗಿದು ಪಾರಾಗಿದ್ದಾನೆ. ಘಟನೆ ವರದಿಯಾದ ನಂತರ ಅಗ್ನಿಶಾಮಕ ದಳದ 20 ಜವಾನರು ಮತ್ತು ಪೊಲೀಸ್ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗಾಗಿ … Continued