ರಾಮಾಯಣ, ಮಹಾಭಾರತವನ್ನು ಅರೇಬಿಕ್ ಭಾಷೆಗೆ ಅನುವಾದಿಸಿದವರನ್ನು ಭೇಟಿಯಾದ ಪ್ರಧಾನಿ ಮೋದಿ

ಕುವೈತ್‌: ಎರಡು ದಿನಗಳ ಕಾಲ ಕುವೈತ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮೊದಲ ದಿನವಾದ ಶನಿವಾರ ಭಾರತದ ಎರಡು ಅಪ್ರತಿಮ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣವನ್ನು ಅರೇಬಿಕ್ ಭಾಷೆಗೆ ಅನುವಾದಿಸಿ ಪ್ರಕಟಿಸಿದ ಇಬ್ಬರು ಕುವೈತ್ ಪ್ರಜೆಗಳನ್ನು ಭೇಟಿ ಮಾಡಿದ್ದಾರೆ. ಲೇಖಕರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಎರಡು ಮಹಾಕಾವ್ಯಗಳ ಅರೇಬಿಕ್ ಆವೃತ್ತಿಗಳಿಗೆ ಸಹಿ ಹಾಕಿದ್ದಾರೆ. “ರಾಮಾಯಣ … Continued

ವೀಡಿಯೊ…| ಪ್ರಧಾನಿ ಮೋದಿ ಮುಂದೆ ಬ್ರೇಜಿಲಿಯನ್ನರಿಂದ ಸಂಸ್ಕೃತ ಭಾಷೆಯ ʼರಾಮಾಯಣ ನೃತ್ಯʼ ರೂಪಕ ಪ್ರದರ್ಶನ…!

ರಿಯೊ ಡಿ ಜನೈರೊ (ಬ್ರೆಜಿಲ್‌) : ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬ್ರೆಜಿಲ್‌ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮಂಗಳವಾರ ಬ್ರೆಜಿಲ್‌ನಲ್ಲಿ G20 ಶೃಂಗಸಭೆಯಲ್ಲಿ(G20 Summit) ಭಾಗಿಯಾದ ನಂತರ ಅಲ್ಲಿ ವಿಶೇಷವಾಗಿ ಆಯೋಜನೆಗೊಂಡಿದ್ದ ಬ್ರೇಜಿಲಿಯನ್ನರೇ ಪಾತ್ರ ನಿರ್ವಹಿಸಿದ್ದ ರಾಮಾಯಣದ ನೃತ್ಯ ರೂಪಕವನ್ನು ಪ್ರಧಾನಿ ಮೋದಿ ವೀಕ್ಷಿಸಿದರು. ಈಗ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ … Continued

ವೀಡಿಯೊ | ರಾಮಾಯಣ ಕಥೆಯ ʼದಿ ರಾಮಾಯಣ ಟ್ರಯಲ್ʼ ವೀಡಿಯೊ ಜಾಹೀರಾತು ಮೂಲಕ ಪೌರಾಣಿಕ ಸ್ಥಳಗಳ ದರ್ಶನ ಮಾಡಿಸುವ ಶ್ರೀಲಂಕಾ ಏರ್‌ಲೈನ್ಸ್…!

ಶ್ರೀಲಂಕಾವು ಪುರಾತನ ಹಿಂದೂ ಮಹಾಕಾವ್ಯವಾದ ರಾಮಾಯಣಕ್ಕೆ ಸಂಬಂಧಿಸಿದಂತೆ ಐಕಾನಿಕ್ ಸ್ಥಳಗಳಿಗೆ ವೀಕ್ಷಕರನ್ನು ಕರೆದೊಯ್ಯುವ ‘ದಿ ರಾಮಾಯಣ ಟ್ರಯಲ್’ ಅನ್ನು ಪ್ರಚಾರ ಮಾಡಲು ಶ್ರೀಲಂಕಾ ಏರ್‌ಲೈನ್ಸ್ ಹೊಸ ಜಾಹೀರಾತನ್ನು ಬಿಡುಗಡೆ ಮಾಡಿದೆ. ಜಾಹೀರಾತು ಶ್ರೀಲಂಕಾದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ನಿರೂಪಣೆಯನ್ನು ಒಳಗೊಂಡಿದೆ, ರಾಮಾಯಣಕ್ಕೆ ಸಂಬಂಧಿಸಿದ ಪೌರಾಣಿಕ ಸ್ಥಳಗಳಿಗೆ ಪ್ರವಾಸಿಗರನ್ನು ಆಹ್ವಾನಿಸುತ್ತದೆ. “ದಿ ರಾಮಾಯಣ ಟ್ರಯಲ್‌ʼನಲ್ಲಿ ರಾಮಾಯಣ ಮಹಾಕಾವ್ಯದ … Continued

31 ವರ್ಷಗಳ ನಂತರ ರಾಮಾಯಣದ ಅನಿಮೇಟೆಡ್‌ ಸಿನಿಮಾ ʼದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮʼ ಅಕ್ಟೋಬರ್‌ 18ಕ್ಕೆ ದೇಶಾದ್ಯಂತ ಬಿಡುಗಡೆ

ನವದೆಹಲಿ : ವಾಲ್ಮೀಕಿ ರಾಮಾಯಣ ಆಧರಿಸಿದ ಆನಿಮೇಟೆಡ್‌ ಸಿನೆಮಾ ‘ರಾಮಾಯಣ; ದಿ ಲೆಜೆಂಡ್‌ ಆಫ್‌ ಪ್ರಿನ್ಸ್‌ ರಾಮ’ ಅಕ್ಟೋಬರ್‌ 18ಕ್ಕೆ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗುತ್ತಿದೆ. ಕೇವಲ ಇಂಗ್ಲಿಷ್‌ನಲ್ಲಿ ಅಷ್ಟೇ ಅಲ್ಲದೆ, ಭಾರತೀಯ ಭಾಷೆಗಳಾದ ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿಯೈ ಈ ಸಿನೆಮಾ ತೆರೆಕಾಣುತ್ತಿದೆ. ಸಿನೆಮಾದ ಟೀಸರ್ ಮತ್ತು ಪೋಸ್ಟರ್ ಅನ್ನು ಗೀಕ್ ಪಿಕ್ಚರ್ಸ್ … Continued

ಸಂಪೂರ್ಣ ʼರಾಮಸೇತುʼವಿನ ಸಮುದ್ರದೊಳಗಿನ ಮೊದಲ ನಿಖರ ನಕ್ಷೆ ರಚಿಸಿದ ಇಸ್ರೋ ವಿಜ್ಞಾನಿಗಳು : ಮತ್ತಷ್ಟು ರಹಸ್ಯ ಬಹಿರಂಗ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ರಾಮಸೇತು(ಆಡಮ್‌ ಬಿಡ್ಜ್‌)ವಿನ ಅತ್ಯಂತ ನಿಖರವಾದ ಸಮುದ್ರ ನಕ್ಷೆಯನ್ನು ತಯಾರಿಸಿದ್ದಾರೆ. ಈಗ ಮುಳುಗಿದ ರಾಮಸೇತು ಭಾರತದ ಧನುಷ್ಕೋಡಿಯಿಂದ ಶ್ರೀಲಂಕಾದ ತಲೈಮನ್ನಾರ್‌ ವರೆಗಿನ ʼಸಂಪರ್ಕʼವನ್ನು ಸಾಬೀತುಪಡಿಸಿದೆ. ‘ಸೈಂಟಿಫಿಕ್ ರಿಪೋರ್ಟ್ಸ್‌’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಇಸ್ರೋ ವಿಜ್ಞಾನಿಗಳು ಅಮೆರಿಕದ ‘ಐಸಿಇಸ್ಯಾಟ್‌-2’ ಉಪಗ್ರಹದ ಸುಧಾರಿತ ಲೇಸರ್ ತಂತ್ರಜ್ಞಾನ ಬಳಸಿಕೊಂಡು ಮುಳುಗಿದ … Continued

ವೀಡಿಯೊ…| ರಾಮಾಯಣದಿಂದ ಪ್ರೇರಣೆ ; ʼಶ್ರವಣಕುಮಾರʼನಾದ ಹಿಸ್ಟರಿ-ಶೀಟರ್ : ತನ್ನ ತೊಡೆಯ ಚರ್ಮದಿಂದ ಪಾದರಕ್ಷೆ ತಯಾರಿಸಿ ತಾಯಿಗೆ ಉಡುಗೊರೆ ನೀಡಿದ..!

ಮಧ್ಯಪ್ರದೇಶದ ಉಜ್ಜಯಿನಿಯ ರೌನಕ್ ಗುರ್ಜರ್ ಎಂಬ ವ್ಯಕ್ತಿಯೊಬ್ಬರು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ತಮ್ಮ ತಾಯಿಗೆ ವಿಶಿಷ್ಟವಾದದನ್ನು ಅರ್ಪಣೆ ಮಾಡಿದ್ದಾರೆ. ಗುರ್ಜರ್ ತನ್ನದೇ ಚರ್ಮದಿಂದ ಒಂದು ಜೊತೆ ಪಾದರಕ್ಷೆ ತಯಾರಿಸಿ ತನ್ನ ತಾಯಿಗೆ ಉಡುಗೊರೆಯಾಗಿ ನೀಡಿದ್ದಾರೆ…! ಇದಕ್ಕೆ ಅವರು ರಾಮಾಯಣದಿಂದ ಪ್ರೇರಣೆ ಪಡೆದಿದ್ದಾಗಿ ಹೇಳಿದ್ದಾರೆ. ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಗುರ್ಜರ್, “ನಾನು ನಿಯಮಿತವಾಗಿ ರಾಮಾಯಣವನ್ನು ಪಠಿಸುತ್ತೇನೆ ಮತ್ತು ಭಗವಾನ್ … Continued

ಸಮಾಜ ವಿಜ್ಞಾನ ಪಠ್ಯಪುಸ್ತಗಳಲ್ಲಿ ರಾಮಾಯಣ, ಮಹಾಭಾರತ ಅಳವಡಿಕೆಗೆ ಎನ್‌ಸಿಇಆರ್‌ಟಿ ಉನ್ನತ ಸಮಿತಿ ಸಮಿತಿ ಶಿಫಾರಸು

ನವದೆಹಲಿ : ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಸೇರಿಸಬೇಕು ಮತ್ತು ಸಂವಿಧಾನದ ಪೀಠಿಕೆಯನ್ನು ತರಗತಿಯ ಗೋಡೆಗಳ ಮೇಲೆ ಬರೆಯಬೇಕು ಎಂದು ಉನ್ನತ ಮಟ್ಟದ ಎನ್‌ಸಿಇಆರ್‌ಟಿ ಸಮಿತಿ ಶಿಫಾರಸು ಮಾಡಿದೆ ಎಂದು ಅದರ ಅಧ್ಯಕ್ಷ ಸಿ.ಐ. ಇಸಾಕ್ ಹೇಳಿದ್ದಾರೆ. ಉನ್ನತಮಟ್ಟದ ಈ ಸಮಿತಿಯ ಈ ಶಿಫಾರಸುಗಳ ಬಗ್ಗೆ ಎನ್‌ಸಿಇಆರ್‌ಟಿ ಇನ್ನೂ ನಿರ್ಧಾರ ಕೈಗೊಂಡಿಲ್ಲ. … Continued

ದೇಶದ ಜನತೆಗೆ ಭಗವದ್ಗೀತೆ, ರಾಮಾಯಣ-ಮಹಾಭಾರತ ತಲುಪಿಸಿದ್ದೆ ಕಾಂಗ್ರೆಸ್: ಬಿಜೆಪಿಗೆ ಡಿಕೆಶಿ ತಿರುಗೇಟು

ಮೈಸೂರು: ಇಡೀ ದೇಶದ ಜನತೆಗೆ ದೂರದರ್ಶನದ ಮೂಲಕ ಭಗವದ್ಗೀತೆ ತಲುಪಿಸಿರುವುದು ಕಾಂಗ್ರೆಸ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ. ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ನಾವು ಸಹ ಹಿಂದೂಗಳೇ ಎಂದು ಹೇಳಿದ್ದಾರೆ. ರಾಜೀವ್ ಗಾಂಧಿಯವರು ರಾಮಾಯಣ, ಮಹಾಭಾರತವನ್ನು ದೇಶದ ಜನತೆ ತೋರಿಸಿದ್ದಾರೆ. … Continued