ವೀಡಿಯೊ…| ಇರಾನಿನ ಎರಡು F-5 ಯುದ್ಧ ವಿಮಾನ, 8 ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣಾ ವಾಹನ ನಾಶಪಡಿಸಿದ ಇಸ್ರೇಲ್‌

ಇರಾನ್‌ನಾದ್ಯಂತ ಡಜನ್ಗಟ್ಟಲೆ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ರಾತ್ರಿಯಿಡೀ ನಡೆಸಿದ ವ್ಯಾಪಕ ಕಾರ್ಯಾಚರಣೆಯಲ್ಲಿ ಇರಾನಿನ ಎರಡು ಯುದ್ಧ ವಿಮಾನಗಳು ಮತ್ತು ಎಂಟು ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣಾ ವಾಹನಗಳನ್ನು ನಾಶಪಡಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು (IDF) ಭಾನುವಾರ ತಿಳಿಸಿವೆ. 20 ಇಸ್ರೇಲಿ ಯುದ್ಧ ವಿಮಾನಗಳು ನಡೆಸಿದ ಈ ದಾಳಿಗಳು ಡೆಜ್‌ಫುಲ್ ಮತ್ತು ಇಸ್ಫಹಾನ್ ವಿಮಾನ ನಿಲ್ದಾಣಗಳು ಸೇರಿದಂತೆ … Continued

ಬಿ-2 ಸ್ಟೆಲ್ತ್ ಬಾಂಬರ್‌ ಗಳು, ಬಂಕರ್-ಬಸ್ಟರ್ ಬಾಂಬ್ ಎಂದರೇನು ? ಇರಾನ್‌ ಪರಮಾಣು ಕೇಂದ್ರಗಳ ಮೇಲಿನ ದಾಳಿಗೆ ಅಮೆರಿಕ ಇದನ್ನೇ ಬಳಸಿದ್ದು ಯಾಕೆ..?

ವಾಷಿಂಗ್ಟನ್ : ಇಸ್ರೇಲ್ ಮತ್ತು ಇರಾನ್ ನಡುವಿನ ನಡೆಯುತ್ತಿರುವ ಸೇನಾ ಸಂಘರ್ಷದ ನಡುವೆ ಒಂದು ಅಭೂತಪೂರ್ವ ಕ್ರಮದಲ್ಲಿ, ಅಮೆರಿಕವು ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಸೇರಿದಂತೆ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದನ್ನು ಪ್ರಕಟಿಸಿದ್ದು, ಅವರು ಈ ಕಾರ್ಯಾಚರಣೆಯನ್ನು “ಅದ್ಭುತ ಮಿಲಿಟರಿ ಯಶಸ್ಸು” … Continued

ಪಹಲ್ಗಾಮ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ | ದಾಳಿಯಲ್ಲಿ ಭಾಗಿಯಾಗಿದ್ದ ಪಾಕ್ ಎಲ್‌ಇಟಿ ಭಯೋತ್ಪಾದಕರಿಗೆ ಆಶ್ರಯ : ಇಬ್ಬರ ಬಂಧನ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ಪ್ರಮುಖ ಬೆಳವಣಿಗೆಯಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯು 26 ಪ್ರವಾಸಿಗರನ್ನು ಕೊಂದುಹಾಕಿದ ಮತ್ತು 16 ಜನರನ್ನು ತೀವ್ರವಾಗಿ ಗಾಯಗೊಳಿಸಿದ ಕ್ರೂರ ಪಹಲ್ಗಾಮ್‌ ದಾಳಿಗೆ ಕಾರಣರಾದ ಲಷ್ಕರ್-ಎ-ತೊಯ್ಬಾ (LeT) ಭಯೋತ್ಪಾದಕರಿಗೆ ಆಶ್ರಯ ನೀಡಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ. ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 26 ಅಮಾಯಕ ಭಾರತೀಯರ … Continued

ಇರಾನ್-ಇಸ್ರೇಲ್ ಸಂಘರ್ಷ ಉಲ್ಬಣ | ತಮ್ಮ ಉತ್ತರಾಧಿಕಾರಿ ಪಟ್ಟಕ್ಕೆ ಬಂಕರ್‌ ನಿಂದಲೇ ಮೂವರನ್ನು ಹೆಸರಿಸಿದ ಖಮೇನಿ ; ಮಗನ ಹೆಸರಿಲ್ಲ : ವರದಿ

ನವದೆಹಲಿ: ಇಸ್ರೇಲ್ ಜೊತೆಗಿನ ಮಿಲಿಟರಿ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ತಮ್ಮ ಸಂಭಾವ್ಯ ಉತ್ತರಾಧಿಕಾರಿಗೆ ಮೂವರು ಧರ್ಮಗುರುಗಳನ್ನು ಹೆಸರಿಸಿದ್ದಾರೆ, ಆದರೆ ತಮ್ಮ ಮಗ ಮೊಜ್ತಬಾ ಅವರನ್ನು ನಾಮನಿರ್ದೇಶನ ಮಾಡದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ಉಲ್ಲೇಖಿಸಲಾದ ಈ ಬಹಿರಂಗಪಡಿಸುವಿಕೆಯು, ಇಸ್ರೇಲಿ ದಾಳಿಯ ಭಯದಿಂದಾಗಿ ಖಮೇನಿ … Continued

ಇರಾನ್‌-ಇಸ್ರೇಲ್‌ ಯುದ್ಧದಲ್ಲಿ ಅಮೆರಿಕ ಎಂಟ್ರಿ ; ಇರಾನಿನ 3 ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯ ನಾಟಕೀಯ ಏರಿಕೆಯಲ್ಲಿ, ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಸೇರಿದಂತೆ ಇರಾನ್‌ನ ಮೂರು ಪರಮಾಣು ನೆಲೆಗಳ ಮೇಲೆ ಅಮೆರಿಕವು “ಅತ್ಯಂತ ಯಶಸ್ವಿ ದಾಳಿ”ಯನ್ನು ಪೂರ್ಣಗೊಳಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ (ಸ್ಥಳೀಯ ಸಮಯ) ಪ್ರಕಟಿಸಿದ್ದಾರೆ. ಅಮೆರಿಕದ ಸಂಭಾವ್ಯ ದಾಳಿಗಳ ಮೊದಲು ನಿರ್ಧರಿಸಲು ಇರಾನ್‌ಗೆ ಎರಡು ವಾರಗಳ “ಗರಿಷ್ಠ” ಕಾಲಾವಕಾಶ ನೀಡುವ ಟ್ರಂಪ್ … Continued

ದೇಶದಲ್ಲಿ ಮೇಘ ಸ್ಫೋಟ, ಊಹಿಸಲಾಗದ ದುಃಖ, ಸಕ್ರಾಂತಿ ನಂತರ ರಾಜಕೀಯ ಬದಲಾವಣೆ : ಕೋಡಿಮಠ ಶ್ರೀಗಳ ಭವಿಷ್ಯ

ಹಾಸನ: ರಾಜ್ಯ, ದೇಶ, ವಿದೇಶಗಳಲ್ಲಿ ಸಂಭವಿಸಬಹುದಾದ ವಿದ್ಯಮಾನಗಳ ಬಗ್ಗೆ ಕೋಡಿಮಠದ ಸ್ವಾಮೀಜಿ (Kodi Mutt Swamiji) ಭವಿಷ್ಯ ನುಡಿದಿದ್ದಾರೆ. ಮುಂದಿನ 6 ತಿಂಗಳ ಬಗ್ಗೆ ಭವಿಷ್ಯ ನುಡಿದಿರುವ ಕೋಡಿಮಠದ ಶ್ರೀಗಳು, ದೇಶದಲ್ಲಿ ಮೇಘಸ್ಪೋಟವಾಗಲಿದೆ. ಸಂಕ್ರಾಂತಿ ಬಳಿಕ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಊಹಿಸಲಾಗದ ನೋವು ಭಾರತಕ್ಕೆ ಕಾಡಲಿದೆ ಎಂದು ಹೇಳಿದ್ದಾರೆ. … Continued

ಡಿಎನ್ಎ ಬಳಸಿ 10,500 ವರ್ಷಗಳಷ್ಟು ಹಿಂದಿನ ಮಹಿಳೆಯ ಮುಖ ಮರುಸೃಷ್ಟಿಸಿದ ವಿಜ್ಞಾನಿಗಳು…!

ಘೆಂಟ್ ವಿಶ್ವವಿದ್ಯಾಲಯದ ಸಂಶೋಧಕರು 10,500 ವರ್ಷಗಳ ಹಿಂದೆ ಇಂದಿನ ಬೆಲ್ಜಿಯಂನಲ್ಲಿ ವಾಸಿಸುತ್ತಿದ್ದ ಮಸುಕಾದ, ಕಪ್ಪು ಕೂದಲಿನ, ನೀಲಿ ಕಣ್ಣಿನ ಇತಿಹಾಸಪೂರ್ವ ಮಹಿಳೆಯ ಮುಖವನ್ನು ಪುನರ್ನಿರ್ಮಿಸಿದ್ದಾರೆ. ಅವರು ಮ್ಯೂಸ್ ನದಿ ಕಣಿವೆಯಲ್ಲಿ ವಾಸಿಸಿ ಮರಣ ಹೊಂದಿದ ಮಹಿಳೆಯ ಮುಖವನ್ನು ಚಿತ್ರಿಸುವ ಅದ್ಭುತ ಚಿತ್ರವನ್ನು ಪ್ರಾಚೀನ ಡಿಎನ್‌ಎ ಬಳಸಿ ಪುನರ್ನಿಮಿಸಿದ್ದಾರೆ. 1988 ರಲ್ಲಿ, ಮೆಸೊಲಿಥಿಕ್ ಮಹಿಳೆಯ ಅವಶೇಷಗಳು ಡೈನಾಂಟ್‌ಗೆ … Continued

ವೀಡಿಯೊ..| 1000 ಕಿಮೀ ದೂರದಿಂದ ನಿಖರ ಡ್ರೋನ್‌ ದಾಳಿ ; ಕಾರಿನಲ್ಲಿ ಹೋಗುತ್ತಿದ್ದಾಗ ಇರಾನ್‌ ಸೇನಾ ನಾಯಕನ ಹತ್ಯೆ ಮಾಡಿದ ಇಸ್ರೇಲ್‌…!

ಪಶ್ಚಿಮ ಇರಾನ್‌ನಲ್ಲಿ ನಡೆದ ವಾಯುದಾಳಿಯಲ್ಲಿ, ಐಆರ್‌ಜಿಸಿ ಕುಡ್ಸ್ ಪಡೆಯ ಹಿರಿಯ ಅಧಿಕಾರಿ ಬೆಹ್ನಮ್ ಶಹ್ರಿಯಾರಿ ಕೊಲ್ಲಲ್ಪಟ್ಟರು ಎಂದು ಇಸ್ರೇಲ್‌ ಸೇನೆ ಶನಿವಾರ ತಿಳಿಸಿದೆ, ಇಸ್ರೇಲ್‌ನಿಂದ 1,000 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದ ಪ್ರದೇಶದಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ ಇಸ್ರೇಲ್‌ ನಡೆಸಿದ ನಿಖರ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಹೇಳಿದೆ. ಬೆಹ್ನಮ್ ಶಹರಿಯಾರಿ ಪಶ್ಚಿಮ ಇರಾನ್‌ನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲೇ … Continued

ಬೆಂಗಳೂರು | ಮಚ್ಚಿನಿಂದ ಆಕಳಿನ ಕೆಚ್ಚಲು ಕತ್ತರಿಸಿದ ದುಷ್ಕರ್ಮಿಗಳು ; ಹಸು ಸಾವು

ಬೆಂಗಳೂರು: ಕಿಡಿಗೇಡಿಗಳು ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಸೂಲಿವಾರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶಸ್ತ್ರಚಿಕಿತ್ಸೆ ನಡೆಸಿದರೂ ಫಲಕಾರಿಯಾಗದೆ ಹಸು ಮೃತಪಟ್ಟಿದೆ ಎಂದು ಹೇಳಲಾಗಿದೆ. ಸೂಲಿವಾರದ ಡೇರಿ ಅಧ್ಯಕ್ಷರಾದ ಮರಿಬಸವಯ್ಯ ಎಂಬವರಿಗೆ ಸೇರಿದ ಹಸುವಿನ ಕೆಚ್ಚಲು ಕೊಯ್ದಿದ್ದು, ಹಳೆಯ ವೈಷಮ್ಯಕ್ಕೆ ಹಸುವಿನ ಕೆಚ್ಚಲ ಕೊಯ್ದಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದಾರೆ. ಸುಮಾರು … Continued

ಕನಸಿನಲ್ಲಿ ಕಾಣಿಸಿಕೊಂಡ ಆಂಜನೇಯ : ಕ್ರೈಸ್ತ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಇಡೀ ಕುಟುಂಬ

ಯಾದಗಿರಿ: ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ ಕುಟುಂಬವೊಂದು ಇದೀಗ ಹಿಂದೂ ಧರ್ಮಕ್ಕೆ ಮರಳಿ ಬಂದಿರುವ ವಿದ್ಯಮಾನ ಯಾದಗಿರಿಯಲ್ಲಿ ನಡೆದಿದೆ. ಇಲ್ಲಿನ ಗಿರಿನಗರ ಕಾಲೊನಿಯಲ್ಲಿರುವ ಬುಡ್ಗ ಜಂಗಮ ಸಮಾಜದ ವೆಂಕಟೇಶ ಎಂಬುವರು ಕುಟುಂಬ ಸಮೇತ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಈಗ ಮತ್ತೆ ಹಿಂದೂ ಧರ್ಮಕ್ಕೆ ವಾಪಸ್‌ ಆಗಿದ್ದಾರೆ. ಇದಕ್ಕೆ ಕಾರಣ ಆಂಜನೇಯನಂತೆ. ಕನಸಿನಲ್ಲಿ ಆಂಜನೇಯ ಪದೇಪದೇ ಕಾಣಿಸಿಕೊಂಡಿದ್ದರಿಂದ ಹಿಂದೂ … Continued