₹22 ಸಾವಿರ ಕೋಟಿ ಸಾಲಕ್ಕೆ ಕೇವಲ ₹6.25 ಕೋಟಿ ಮರುಪಾವತಿ ಯೋಜನೆಗೆ ಎನ್‌ಸಿಎಲ್‌ಟಿ ಸಮ್ಮತಿ: ಉದ್ಯಮಿಗೆ ಭಾರೀ ರಿಲೀಫ್‌

ನವದೆಹಲಿ: ಎಸ್ಸೆಲ್‌ ಸಮೂಹದ ಸಂಸ್ಥಾಪಕ ಸುಭಾಷ ಚಂದ್ರ ಅವರು ಸಲ್ಲಿಸಿದ್ದ ಸಾಲ ಮರುಪಾವತಿ ಯೋಜನೆಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (National Company Law Tribunal (NCLT)) ಅನುಮೋದನೆ ನೀಡಿದೆ.. ಈ ಯೋಜನೆಯ ಪ್ರಕಾರ, ಒಟ್ಟು ₹22,006.57 ಕೋಟಿ ಮೊತ್ತದ ಮಾನ್ಯಗೊಂಡ ಸಾಲದ ಬೇಡಿಕೆಗಳ ವಿರುದ್ಧ ಸಾಲದಾತರಿಗೆ ಕೇವಲ ₹6.25 ಕೋಟಿ ಮಾತ್ರ ವಿತರಿಸಲಾಗುತ್ತದೆ. ಈ … Continued

ಹೆಂಡತಿಯನ್ನು ಕತ್ತು ಹಿಸುಕಿ ಕೊಂದು ಹೃದಯಾಘಾತದಿಂದ ಸತ್ತಿದ್ದಾಳೆ ಎಂದು ಕಥೆ ಕಟ್ಟಿದ್ದ ಪತಿ ಅರೆಸ್ಟ್‌

ಹೊನ್ನಾವರ: ಹೆಂಡತಿಯನ್ನು ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಕತೆ ಕಟ್ಟಿದ್ದ ಗಂಡನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಠಾಣೆ ವ್ಯಾಪ್ತಿಯ ದೊಡ್ಡಗುಂದೆಂಬಲ್ಲಿ ನಡೆದಿದೆ. ಹೊನ್ನಾವರ ತಾಲೂಕಿನ ದೊಡ್ಡಗುಂದ ಗ್ರಾಮದ ಗಣಪತಿ ನಾಯ್ಕ ಬಂಧಿತ ಆರೋಪಿಯಾಗಿದ್ದು, . ಆತನ ಪತ್ನಿ ಮಂಗಲಾ ನಾಯ್ಕ (28) ಕೊಲೆಯಾದ … Continued

ಪೊಲೀಸರಿಗೆ 3 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್‌

ಬೆಂಗಳೂರು: ವಿವಾದವಿದ್ದ  ಉಯಿಲು ಪತ್ರಕ್ಕೆ (ವಿಲ್‌) ಸಾಕ್ಷಿಯಾಗಿ ಸಹಿ ಹಾಕಿದ್ದ  ವ್ಯಕ್ತಿಯೊಬ್ಬರಿಗೆ ತನಿಖೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ ದಿನವೇ ಅವರನ್ನು ಬಂಧಿಸಿದ ಬೆಂಗಳೂರಿನ ವೈಟ್‌ಫೀಲ್ಡ್‌ ಪೊಲೀಸರ ಕ್ರಮಕ್ಕೆ ಗುರುವಾರ ಕರ್ನಾಟಕ ಹೈಕೋರ್ಟ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ, ತನಿಖಾಧಿಕಾರಿ, ಅವರ ಮೇಲಧಿಕಾರಿಗಳಾದ ಉಪ ಪೊಲೀಸ್‌ ಆಯುಕ್ತರು (ಡಿಸಿಪಿ) ಮತ್ತು ಸಹಾಯಕ ಪೊಲೀಸ್‌ ಆಯುಕ್ತರಿಗೆ (ಎಸಿಪಿ) ತಲಾ … Continued

ನೇಪಾಳಕ್ಕೆ ಮತ್ತೊಂದು ಹಠಾತ್‌ ಪ್ರವಾಹದ ಭೀತಿ ? 3 ದಿನದಲ್ಲಿ ʼತಡೆ ಸರೋವರʼ ಒಡೆಯುವ ಅಪಾಯವಿದೆ ಎಂದ ಚೀನಾ

ಕಠ್ಮಂಡು: ಹಠಾತ್‌ ಸಂಭವಿಸಿದ ಭೀಕರ ಪ್ರವಾಹದಿಂದ ತತ್ತರಿಸಿರುವ ನೇಪಾಳದಲ್ಲಿ ಮತ್ತೊಂದು ದೊಡ್ಡ ಅನಾಹುತದ ಆತಂಕ ಎದುರಾಗಿದೆ. ನೇಪಾಳ-ಟಿಬೆಟ್ ಗಡಿಭಾಗದ ಸಮೀಪ ಛೋಚೆನ್ ಖೋಲಾ (Chhochen Khola) ಮತ್ತು ಪ್ಯುರೆಪು ತ್ಸಾಂಗ್ಪೋ (Purepu Tsangpo) ನದಿಗಳ ಸಂಗಮ ಪ್ರದೇಶದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ‘ಬ್ಯಾರಿಯರ್ ಲೇಕ್’ (ತಡೆ ಸರೋವರ) ಮುಂದಿನ ಮೂರು ದಿನಗಳಲ್ಲಿ ಒಡೆಯುವ ಅಪಾಯವಿದೆ ಎಂದು ಚೀನಾ … Continued

ಹಠಾತ್‌ ಭೀಕರ ಪ್ರವಾಹಕ್ಕೆ ನೇಪಾಳ ತತ್ತರ ; ಸಾವಿನ ಸಂಖ್ಯೆ 353ಕ್ಕೆ ಏರಿಕೆ, 1300ಕ್ಕೂ ಹೆಚ್ಚು ಜನರು ನಾಪತ್ತೆ

ಕಠ್ಮಂಡು: ನೇಪಾಳವನ್ನು ತತ್ತರಗೊಳಿಸಿರುವ ಭೀಕರ ಹಠಾತ್‌ ಪ್ರವಾಹ ದುರಂತದಲ್ಲಿ ಸಾವಿನ ಸಂಖ್ಯೆ 353ಕ್ಕೆ ಏರಿಕೆಯಾಗಿದ್ದು, 1,300ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಬದುಕುಳಿದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಯುದ್ಧೋಪಾದಿಯಲ್ಲಿ ಮುಂದುವರಿದಿವೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ. ಬುಧವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಭೋಟೆಕೋಶಿ (Bhotekoshi) ನದಿಯಲ್ಲಿ ಏಕಾಏಕಿ ಉಂಟಾದ ಭೀಕರ ಪ್ರವಾಹವು ನೇಪಾಳದ ಮೂರು … Continued

ಕರ್ನಾಟಕದ 101 ತಾಲೂಕುಗಳು ಬರಪೀಡಿತ ಎಂದು ಘೋಷಿಸಿದ ಸರ್ಕಾರ ; ಅವು ಯಾವುವು ? ಪಟ್ಟಿ ಇಲ್ಲಿದೆ

ಬೆಂಗಳೂರು: ಪ್ರಸಕ್ತ ವರ್ಷ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿ, ಕಂದಾಯ ಸಚಿವ ಡಾ ಜಿ ಪರಮೇಶ್ವರ ಅವರು ಗುರುವಾರ ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ರಾಜ್ಯವು ಪ್ರಸ್ತುತ ಸಾಲಿನಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, 1976ರ ನಂತರ … Continued

ನೇಪಾಳ ಪ್ರವಾಹ ದುರಂತ: ಕರ್ನಾಟಕದ 8 ಮಂದಿ ಸೇರಿ ದಕ್ಷಿಣ ಭಾರತದ 168 ಜನರು ನಾಪತ್ತೆ

ನವದೆಹಲಿ: ಕೈಲಾಸ ಮಾನಸರೋವರ ಯಾತ್ರೆ ಸೇರಿದಂತೆ ವಿವಿಧ ಕಾರಣಕ್ಕೆ ನೇಪಾಳಕ್ಕೆ ತೆರಳಿದ್ದ ದಕ್ಷಿಣ ಭಾರತದ ಸುಮಾರು 168ಕ್ಕೂ ಹೆಚ್ಚು ಯಾತ್ರಿಕರು ಹಾಗೂ ಪ್ರವಾಸಿಗರು ಹಿಮ-ಬಂಡೆಗಳ ಕುಸಿತದಿಂದ ಉಂಟಾದ ಹಠಾತ್‌ ಭೀಕರ ಪ್ರವಾಹದ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರು ಸಿಲುಕಿಕೊಂಡಿದ್ದು, ಕೆಲವರು ನಾಪತ್ತೆಯಾಗಿದ್ದಾರೆ ಹಾಗೂ ಇನ್ನೂ ಹಲವರ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ. ನೇಪಾಳದ ರಸುವಾ … Continued

30 ನಿಮಿಷದಲ್ಲಿ 9 ಮೀಟರ್‌ ಏರಿದ ನದಿ ನೀರಿನ ಮಟ್ಟ: ಹಿಮ-ಬಂಡೆ ಕುಸಿತ ನೇಪಾಳದಲ್ಲಿ ಮಾರಕ ಪ್ರವಾಹವಾಗಿದ್ದು ಹೇಗೆ ?

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್‌ ಪ್ರವಾಹ (ಫ್ಲ್ಯಾಶ್ ಫ್ಲಡ್) ಭಾರೀ ದುರಂತಕ್ಕೆ ಕಾರಣವಾಗಿದ್ದು, ಇದುವರೆಗೆ 162 ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಇನ್ನೂ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಿವೆ. ಈ ಪ್ರವಾಹಕ್ಕೆ ಹಿಮನದಿಯ ಕುಸಿತ (Glacier Collapse) ಕಾರಣ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ನೇಪಾಳ-ಟಿಬೆಟ್ ಗಡಿಯ ಸಮೀಪ ಭೋಟೆಕೋಶಿ ನದಿಯ ಉಪನದಿಯಾದ … Continued

21ರ ಹರೆಯದಲ್ಲೇ ಭಾರತದ ಈಜುಗಾರನಿಂದ ವಿಶ್ವ ದಾಖಲೆ: ಓಷಿಯನ್ಸ್ ಸೆವೆನ್ ಈಜಿ ಗಿನ್ನೆಸ್ ಪಟ್ಟಿಗೆ ಸೇರಿದ ಅಂಶುಮಾನ

ಮುಂಬೈ : ಭಾರತದ ಮುಕ್ತ ನೀರಿನ (Open Water) ಈಜುಗಾರ ಅಂಶುಮಾನ ಜಿಂಗ್ರಾನ್ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿ ಎರಡನೇ ಗಿನ್ನೆಸ್ ವಿಶ್ವ ದಾಖಲೆ (Guinness World Records) ತಮ್ಮದಾಗಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮುಕ್ತ ನೀರಿನ ಈಜು (ಸಾಗರ, ನದಿ, ಸರೋವರ ಅಥವಾ ಜಲಾಶಯಗಳಂತಹ ನೈಸರ್ಗಿಕ ಹೊರಾಂಗಣ ನೀರಿನ ಪ್ರದೇಶ) ಕ್ಷೇತ್ರದ ಅತ್ಯಂತ ಕಠಿಣ ಸವಾಲುಗಳಲ್ಲಿ ಒಂದಾದ … Continued

ವಿನಾಶದ ದೃಶ್ಯಗಳ ಭಯಾನಕ ವಿಡಿಯೊಗಳು : ನೇಪಾಳದಲ್ಲಿ ಹಠಾತ್‌ ಪ್ರವಾಹ: 160 ಜನರು ಸಾವು, 133 ಭಾರತೀಯರು ಸೇರಿ 750 ಮಂದಿ ನಾಪತ್ತೆ

ಕಠ್ಮಂಡು : ಟಿಬೆಟ್ ಗಡಿಭಾಗಕ್ಕೆ ಹೊಂದಿಕೊಂಡಿರುವ ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಹಠಾತ್‌ ಉಂಟಾದ ಭೀಕರ ಪ್ರವಾಹದಲ್ಲಿ ಕನಿಷ್ಠ 160 ಮಂದಿ ಮೃತಪಟ್ಟಿದ್ದು, ಸುಮಾರು 750ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ 133 ಭಾರತೀಯರು ಹಾಗೂ 37 ಅನಿವಾಸಿ ಭಾರತೀಯರು (ಎನ್‌ಆರ್‌ಐ) ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಟಿಬೆಟ್‌ನ ಗ್ಯಿರೋಂಗ್ (Gyirong) ಪ್ರದೇಶದಿಂದ ಭಾರೀ … Continued