ಉಕ್ರೇನ್ ಬಿಕ್ಕಟ್ಟು: ಫೇಸ್‌ಬುಕ್‌ನಲ್ಲಿ ಹಣಗಳಿಸದಂತೆ ರಷ್ಯಾದ ಮಾಧ್ಯಮಗಳನ್ನು ನಿರ್ಬಂಧಿಸಿದ ಮೆಟಾ

ಸದ್ಯ ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ರಷ್ಯಾದ ದಾಳಿಯಿಂದ ಕೋಪಗೊಂಡ ಹಲವು ದೇಶಗಳು ಅದರ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿವೆ. ಈ ನಡುವೆ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಫೇಸ್‌ಬುಕ್ ರಷ್ಯಾದ ಮಾಧ್ಯಮ ಚಾನೆಲ್‌ಗಳ ಮೇಲೆ ನಿಷೇಧವನ್ನು ಘೋಷಿಸಿದೆ. ನೆರೆಯ ಉಕ್ರೇನ್‌ನ ಮಾಸ್ಕೋದ ಆಕ್ರಮಣವು ಕೈವ್‌ನ ಬೀದಿಗಳನ್ನು ತಲುಪಿದ … Continued

ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ ನ್ಯಾಯಾಧೀಶರನ್ನು ತಯಾರಿಸಿದ ಚೀನಾ, ಈ ನ್ಯಾಯಾಧೀಶರು 97% ನಿರ್ಧಾರಗಳನ್ನು ಸರಿಯಾಗಿ ನೀಡ್ತಾರಂತೆ..!

ಬೀಜಿಂಗ್: ಸೂಪರ್‌ ಕಂಪ್ಯೂಟರ್‌ನಿಂದ ರೋಬೋಟ್‌ಗಳ ವರೆಗೆ, ಚೀನಾ ಕೃತಕ ಬುದ್ಧಿಮತ್ತೆಯನ್ನು ಹೊಂದಿರುವ ನ್ಯಾಯಾಧೀಶರನ್ನು ರಚನೆ ಮಾಡಿದೆ..! ಇದು ವಿಶ್ವದಲ್ಲೇ ಮೊದಲನೆಯದು. ಈ ನ್ಯಾಯಾಧೀಶರು ಮೌಖಿಕ ವಾದಗಳನ್ನು ಆಲಿಸಿದ ನಂತರ ಶೇಕಡಾ 97 ರಷ್ಟು ಸರಿಯಾದ ನಿರ್ಧಾರಗಳನ್ನು ನೀಡುತ್ತಾರೆ ಎಂದು ಹೇಳಲಾಗಿದೆ. ಈ ನ್ಯಾಯಾಧೀಶರನ್ನು ಶಾಂಘೈ ಪುಡಾಂಗ್ ಪೀಪಲ್ಸ್ ಪ್ರೊಕ್ಯುರೇಟರೇಟ್ ರಚನೆ ಮಾಡಿದೆ. ಇದು ಚೀನಾದ ಅತ್ಯಂತ … Continued

ಭಾರತ-ರಷ್ಯಾ ಸಂಬಂಧಗಳು, ಅಮೆರಿಕ-ರಷ್ಯಾ ಸಂಬಂಧಗಳಿಗಿಂತ ಭಿನ್ನವಾಗಿವೆ…’: ಭಾರತದ ಸಂದಿಗ್ಧತೆಯನ್ನು ವಿಶ್ವದ ದೊಡ್ಡಣ್ಣ ಅರ್ಥಮಾಡಿಕೊಂಡಿದೆಯೇ?

ವಾಷಿಂಗ್ಟನ್/ದೆಹಲಿ: ಉಕ್ರೇನ್ ಮೇಲೆ ರಷ್ಯಾದ ದಾಳಿಯ ನಂತರ (ರಷ್ಯಾ-ಉಕ್ರೇನ್ ಯುದ್ಧ), ವಿಶ್ವದ ಆಸಕ್ತಿ ಭಾರತ ಯಾವ ನಿಲುವು ತೆಗೆದುಕೊಳ್ಳುತ್ತಿದೆ ಎಂಬುದರ ಮೇಲಿದೆ. ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಜೊತೆಗೆ, ವಿಶ್ವದ ಎಲ್ಲ ದೇಶಗಳು ಈ ದಾಳಿಯನ್ನು ಬಹಿರಂಗವಾಗಿ ಟೀಕಿಸಿದವು. ಆದರೆ, ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳೊಂದಿಗೆ ಉತ್ತಮ ಸಂಬಂಧವಿದ್ದರೂ ಭಾರತ ಅವರ ಮಾತಿಗೆ ಕಿವಿಗೊಡಲಿಲ್ಲ. ಅವರು … Continued

ಉಕ್ರೇನ್‌ ರಕ್ಷಣೆಗೆ ಹೋರಾಡಲು ಶಸ್ತ್ರಾಸ್ತ್ರ ಹಿಡಿಯುವ ಘೋಷಣೆ ಮಾಡಿದ ಬಾಕ್ಸಿಂಗ್ ದಂತಕಥೆಗಳಾದ ಕ್ಲಿಟ್ಸ್ಕೊ ಸಹೋದರರು..!

ಕೈವ್‌: ಮಾಜಿ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ವಿಟಾಲಿ ಕ್ಲಿಟ್ಸ್ಕೊ ಅವರು ತಮ್ಮ ದೇಶವಾದ ಉಕ್ರೇನ್‌ನ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ “ರಕ್ತಸಿಕ್ತ ಯುದ್ಧ”ದಲ್ಲಿ ಉಕ್ರೇನ್‌ ರಕ್ಷಣೆಗೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಕೊಳ್ಳುವುದಾಗಿ ಘೋಷಿಸಿದ್ದಾರೆ. ತಮ್ಮ ಜೊತೆ ಸಹೋದರ ಮತ್ತು ಹಾಲ್ ಆಫ್ ಫೇಮರ್ ವ್ಲಾಡಿಮಿರ್ ಕ್ಲಿಟ್ಸ್ಕೊ ಸಹ ಶಸ್ತ್ರಾಸ್ತ್ರ ಹೋರಾಟ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಅಧ್ಯಕ್ಷ ವ್ಲಾಡಿಮಿರ್ … Continued

ರಷ್ಯಾದ ದಾಳಿಯ ಮಧ್ಯೆಯೇ ಬಂಕರ್‌​​ನಲ್ಲೇ ಮಗುವಿಗೆ ಜನ್ಮ ನೀಡಿದ ಉಕ್ರೇನ್ ಮಹಿಳೆ..!

ಕೈವ್: ಉಕ್ರೇನ್‌ನ (Ukraine) ಮೇಲಿನ ರಷ್ಯಾದ ಯುದ್ಧದ ನಡುವೆ ಕೈವ್‌ನಲ್ಲಿ ವಾಯುದಾಳಿ ಶೆಲ್ಟರ್​​ (ಬಂಕರ್)ನಲ್ಲಿ ಆಶ್ರಯ ಪಡೆದಿದ್ದ ಕುಟುಂಬವೊಂದರ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಒಂದೆಡೆ ನೂರಾರು ಜನರು ಯುದ್ಧದಲ್ಲಿ ಸಾವುನೋವು ಅನೂಭವಿಸುತ್ತಿರುವ ನಡುವೆ ಪ್ರಾಣಭೀತಿಯ ನಡುವೆಯೂ ಆ ಕುಟುಂಬ ಸಂತಸದಿಂದ ಮಗುವನ್ನು ಸ್ವಾಗತಿಸಿದೆ.ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಸಂತೋಷದ ಸುದ್ದಿಯನ್ನು ಟ್ವಿಟ್ಟರ್​ನಲ್ಲಿ … Continued

ಎಲ್ಲಕ್ಕಿಂತ ದೇಶ ದೊಡ್ಡದು.. ಯುದ್ಧ ಭೂಮಿಯಲ್ಲಿ ಮದುವೆಯಾದ ಮಾರನೇ ದಿನವೇ ಗನ್​ ಹಿಡಿದು ದೇಶದ ರಕ್ಷಣೆಗೆ ನಿಂತ ಉಕ್ರೇನ್​ ನವದಂಪತಿ!

ಕೈವ್​(ಉಕ್ರೇನ್​): ಉಕ್ರೇನ್​​ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದಾಗಿನಿಂದಲೂ ನೂರಾರು ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧದ ಆತಂಕದ ಮಧ್ಯೆ ಉಕ್ರೇನ್​ ರಾಜಧಾನಿ ಕೀವ್​ನಲ್ಲಿ ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯೊಂದು ಈಗ ದೇಶ ರಕ್ಷಣೆಗೆ ಗನ್‌ ಹಿಡಿದು ಯುದ್ಧಭೂಮಿಗೆ ಧುಮುಕಿದೆ..! ಕೈವ್‌ನಲ್ಲಿ ನಿನ್ನೆ ಶುಕ್ರವಾರವಷ್ಟೇ ವಿವಾಹವಾಗಿದ್ದ 21 ವರ್ಷದ ಅರಿವಾ ಹಾಗೂ 24 … Continued

ರಷ್ಯಾದ ದಾಳಿಯಲ್ಲಿ 198 ಜನರ ಸಾವು, 1,000 ಕ್ಕೂ ಹೆಚ್ಚು ಜನರಿಗೆ ಗಾಯ: ಉಕ್ರೇನ್ ಆರೋಗ್ಯ ಸಚಿವ

ಕೈವ್‌: ರಷ್ಯಾದ ಆಕ್ರಮಣದಲ್ಲಿ ಉಕ್ರೇನಿನ ನೂರಾರು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಉಕ್ರೇನ್ ತನ್ನ ಸೇನೆಯು 1,000 ರಷ್ಯಾದ ಸೈನಿಕರನ್ನು ಕೊಂದಿದೆ ಎಂದು ಹೇಳಿಕೊಂಡರೆ, ರಷ್ಯಾದ ರಕ್ಷಣಾ ಸಚಿವಾಲಯವು ತನ್ನ ಪಡೆಗಳು ಉಕ್ರೇನ್‌ನಲ್ಲಿ 211 ಮಿಲಿಟರಿ ಮೂಲಸೌಕರ್ಯ ಸೌಲಭ್ಯಗಳನ್ನು ಧ್ವಂಸ ಮಾಡಿದೆ ಎಂದು ಹೇಳಿದೆ. ಈ ವಾರ ರಷ್ಯಾದ ವ್ಲಾಡಿಮಿರ್ ಪುಟಿನ್ ಅವರು ಯುದ್ಧ ಘೋಷಣೆ … Continued

ಪಾಕಿಸ್ತಾನದಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೇರಿದ ಮೊದಲ ಹಿಂದೂ ಅಧಿಕಾರಿ

ಪಾಕಿಸ್ತಾನ ಆರ್ಮಿಯ ಹಿಂದೂ ಅಧಿಕಾರಿ, ಕೈಲಾಶ್ ಕುಮಾರ ಲೆಫ್ಟಿನೆಂಟ್ ಹುದ್ದೆಗೆ ಭಡ್ತಿ ಪಡೆದಿದ್ದಾರೆ. ಈ ಮೂಲಕ ಪಾಕಿಸ್ತಾನ ಸೇನೆಯಲ್ಲಿ ಈ ಹುದ್ದೆಗೇರಿದ ಮೊದಲ ಹಿಂದೂ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಈ ಸುದ್ದಿ ಪಾಕಿಸ್ತಾನ ಟಿವಿಯಲ್ಲಿ ಶುಕ್ರವಾರ ಪ್ರಸಾರವಾಗಿದೆ. ಜತೆಗೆ ದೇಶದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲಿಯ ಹಿರಿಯ ಅಧಿಕಾರಿಗಳು ಕೈಲಾಶ್ ಕುಮಾರ ನಮ್ಮ ದೇಶದ … Continued

ರಷ್ಯಾ ತಡೆಯಲು ಯಾರಿಂದಲೂ ಸಾಧ್ಯವಿಲ್ಲ..ವ್ಲಾಡಿಮಿರ್ ಪುಟಿನ್ ಜಗತ್ತನ್ನು ಆಳುತ್ತಾರೆ: ಅಂಧ ಅತೀಂದ್ರಿಯ ಬಾಬಾ ವಂಗಾ ಮೊದಲೇ ಹೇಳಿದ್ದರು…!

ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದು ಖ್ಯಾತಿ ಪಡೆದಿರುವ ಬಾಬಾ ವಂಗಾ 26 ವರ್ಷಗಳ ಹಿಂದೆ ಜಗತ್ತನ್ನು ತೊರೆದಿರಬಹುದು ಆದರೆ ಅವರ ಭವಿಷ್ಯವಾಣಿಗಳು ಇಂದಿಗೂ ಜೀವಂತವಾಗಿವೆ. 5079 ರವರೆಗಿನ ಅತೀಂದ್ರಿಯ ಮುನ್ಸೂಚನೆಗಳ ಸರಣಿಯಲ್ಲಿ 9/11 ಭಯೋತ್ಪಾದಕ ದಾಳಿಗಳು ಮತ್ತು ಬ್ರೆಕ್ಸಿಟ್‌ನಂತಹ ಪ್ರಮುಖ ಘಟನೆಗಳನ್ನು ವಂಗಾ ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗುತ್ತದೆ. ಈಗ, ರಷ್ಯಾ ಉಕ್ರೇನ್ ಮೇಲೆ ವಿಧ್ವಂಸಕ ದಾಳಿಯನ್ನು … Continued

ಕೈವ್‌ನಲ್ಲಿರುವ ‘ಭಯೋತ್ಪಾದಕರು, ಮಾದಕ ವ್ಯಸನಿಗಳ’ ಸರ್ಕಾರ ಉರುಳಿಸಿ: ಉಕ್ರೇನ್ ಸೇನೆಗೆ ರಷ್ಯಾ ಅಧ್ಯಕ್ಷ ಪುಟಿನ್ ಕರೆ

ಮಾಸ್ಕೋ: ಕೈವ್‌ನಲ್ಲಿ ದೇಶದ ಪ್ರಜಾಸತ್ತಾತ್ಮಕವಾಗಿ ಚುನಾಯಿತ ನಾಯಕತ್ವವನ್ನು ಉರುಳಿಸಲು ವ್ಲಾಡಿಮಿರ್ ಪುಟಿನ್ ಉಕ್ರೇನಿಯನ್ ಸೇನೆಗೆ ಕರೆ ನೀಡಿದ್ದಾರೆ. ರಷ್ಯಾದ ಅಧ್ಯಕ್ಷರು ಉಕ್ರೇನಿಯನ್ ನಾಯಕತ್ವವನ್ನು “ಭಯೋತ್ಪಾದಕರು” ಮತ್ತು “ಮಾದಕ ವ್ಯಸನಿಗಳು ಮತ್ತು ನವ-ನಾಜಿಗಳ ಗುಂಪು” ಎಂದು ಉಲ್ಲೇಖಿಸಿದ್ದಾರೆ. ರಷ್ಯಾದ ಪಡೆಗಳ ವಿರುದ್ಧ ಉಕ್ರೇನ್ ತನ್ನ ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸುತ್ತಿದೆ ಎಂದು ಆರೋಪಿಸಿದ ಪುಟಿನ್, ” ನಿಮ್ಮ … Continued