ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಅಂತಿಮ ಹಂತದ ಚಂದ್ರನ ಕ್ಷಕೆ ಕಡಿಮೆ ಮಾಡುವ ಪ್ರಯತ್ನ ಯಶಸ್ವಿ : ಮುಂದೇನು…?

ಬೆಂಗಳೂರು: ಭಾರತದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲ್ಮೈಗೆ ಹತ್ತಿರ ತರುವ ತನ್ನ ಅಂತಿಮ ಪ್ರಕ್ರಿಯೆಯನ್ನು ಇಸ್ರೊ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರದಂದು ಬಾಹ್ಯಾಕಾಶ ನೌಕೆಯು ಐದನೇ ಮತ್ತು ಅಂತಿಮ ಕಕ್ಷೆ ಕಡಿಮೆಗೊಳಿಸುವ ಕೌಶಲ್ಯವನ್ನು ನಡೆಸಿದೆ ಎಂದು ಪ್ರಕಟಿಸಿತು ಹಗೂ ಇದು ಕಾರ್ಯಾಚರಣೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಅದು ಗುರುತಿಸಿದೆ. … Continued

ಹಿಮಾಚಲದಲ್ಲಿ ಮನೆಗಳು ಕುಸಿಯುವ ಭಯಾನಕ ವೀಡಿಯೊ: ಶಿಮ್ಲಾದಲ್ಲಿ ಭೂಕುಸಿತದ ನಂತರ ಕುಸಿದುಬಿದ್ದ ಹಲವಾರು ಮನೆಗಳು | ವೀಕ್ಷಿಸಿ

ಶಿಮ್ಲಾ : ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮಂಗಳವಾರ ನಿರಂತರ ಮಳೆಯಿಂದಾಗಿ ಭೂಕುಸಿತದಿಂದ ಮನೆಗಳು ಮತ್ತು ಕಸಾಯಿಖಾನೆ ಸೇರಿದಂತೆ ಹಲವಾರು ಕಟ್ಟಡಗಳು ಕುಸಿದು ಬಿದ್ದಿವೆ. ಭೂಕುಸಿತ ಸಂಭವಿಸಿದ ಸ್ಥಳದ ಪಕ್ಕದಲ್ಲಿರುವ ಮನೆಗಳು ಕುಸಿಯುವ ಭೀತಿಯಿಂದ ಸ್ಥಳೀಯರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. “ಸುಮಾರು 5-6 ಮನೆಗಳು ಕುಸಿದಿವೆ … Continued

ನೂಹ್ ಹಿಂಸಾಚಾರ: ಫರಿದಾಬಾದಿನಲ್ಲಿ ಗೋರಕ್ಷಕ ಬಿಟ್ಟು ಬಜರಂಗಿ ಬಂಧನ

ನವದೆಹಲಿ: ಕಳೆದ ತಿಂಗಳು ನುಹ್, ಗುರುಗ್ರಾಮ ಮತ್ತು ರಾಜ್ಯದ ಇತರ ಪ್ರದೇಶಗಳಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹರಿಯಾಣದ ಗೋರಕ್ಷಕ ಬಿಟ್ಟು ಬಜರಂಗಿಯನ್ನು ಬಂಧಿಸಲಾಗಿದೆ. ಬಿಟ್ಟು ಬಜರಂಗಿ ಮತ್ತು ಬಜರಂಗದಳದ ಸಹ ಕಾರ್ಯಕರ್ತ ಮೋನು ಮಾನೇಸರ್ ಅವರ ಪ್ರಚೋದನಕಾರಿ ಹೇಳಿಕೆಗಳು ಹಿಂಸಾಚಾರಕ್ಕೆ ಕಾರಣವಾಗಿವೆ ಎಂಬ ಆರೋಪಗಳಿವೆ. ಇತರ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಬಿಟ್ಟು ಬಜರಂಗಿಯನ್ನು ಹಿಂಸಾಚಾರ … Continued

ತಿರುಪತಿ ಭಕ್ತರ ಸುರಕ್ಷತೆಗೆ ಕ್ರಮ: ಪಾದಚಾರಿ ಮಾರ್ಗದಲ್ಲಿ ತೆರಳುವ ಭಕ್ತರ ಕೈಗೆ ಇನ್ಮುಂದೆ ಕೊಡ್ತಾರೆ ದೊಣ್ಣೆ …

ತಿರುಪತಿ: ಭಕ್ತಾದಿಗಳ ಸುರಕ್ಷತೆ ಮತ್ತು ಭದ್ರತೆಯು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಪ್ರಮುಖ ಆದ್ಯತೆಯಾಗಿದೆ ಎಂದು ಟಿಟಿಡಿ ಅಧ್ಯಕ್ಷ ಬಿ ಕರುಣಾಕರ ರೆಡ್ಡಿ ಹೇಳಿದ್ದಾರೆ. ತಿರುಪತಿಯ ಶ್ರೀ ಪದ್ಮಾವತಿ ವಿಶ್ರಾಂತಿ ಗೃಹದಲ್ಲಿ ಟಿಟಿಡಿ, ಜಿಲ್ಲೆಯ ಅಧಿಕಾರಿಗಳು ಮತ್ತು ಅರಣ್ಯಾಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ನಂತರ, ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾ ರೆಡ್ಡಿ ಅವರೊಂದಿಗೆ … Continued

ದಕ್ಷಿಣ ರಷ್ಯಾದ ಪೆಟ್ರೋಲ್ ಬಂಕ್‌ನಲ್ಲಿ ಭಾರೀ ಸ್ಫೋಟ: ಕನಿಷ್ಠ 35 ಮಂದಿ ಸಾವು, 80 ಮಂದಿಗೆ ಗಾಯ

ದಾಗೆಸ್ತಾನ್‌ (ರಷ್ಯಾ) :  ಮಂಗಳವಾರ ರಷ್ಯಾದ ಕಾಕಸಸ್ ಗಣರಾಜ್ಯವಾದ ದಾಗೆಸ್ತಾನ್‌ನಲ್ಲಿರುವ ಪೆಟ್ರೋಲ್‌ ಬಂಕ್‌ ನಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ 35 ಜನರು ಸಾವಿಗೀಡಾಗಿದ್ದಾರೆ ಹಾಗೂ 80 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ತುರ್ತು ಸಚಿವಾಲಯವು ವಿತರಿಸಿದ ಚಿತ್ರಗಳು ಭಾರೀ ಪ್ರಮಾಣದ ಬೆಂಕಿಯಿಂದ ಸುಟ್ಟುಹೋದ ಕಾರುಗಳು ಮತ್ತು ರಕ್ಷಣಾ ಕಾರ್ಯಕರ್ತರು ಬೆಂಕಿಯನ್ನು ನಂದಿಸಲು ಮತ್ತು ಅವಶೇಷಗಳನ್ನು … Continued

ʼಸುಲಭ್ ಇಂಟರ್‌ನ್ಯಾಶನಲ್ʼ ಸಂಸ್ಥಾಪಕ- ಸಾರ್ವಜನಿಕ ನೈರ್ಮಲ್ಯದ ಪ್ರವರ್ತಕ ಬಿಂದೇಶ್ವರ ಪಾಠಕ ಇನ್ನಿಲ್ಲ

ನವದೆಹಲಿ: ಸುಲಭ್ ಇಂಟರ್‌ನ್ಯಾಶನಲ್ ಸಂಸ್ಥಾಪಕ ಮತ್ತು ಸಾಮಾಜಿಕ ಕಾರ್ಯಕರ್ತ ಬಿಂದೇಶ್ವರ ಪಾಠಕ ಅವರು ಮಂಗಳವಾರ (ಆಗಸ್ಟ್‌ 15) ಹೃದಯ ಸ್ತಂಭನದಿಂದ  ನಿಧನರಾದರು. ಇಂದು, ಮಂಗಳವಾರ ಬೆಳಗ್ಗೆ ನಡೆದ ಸ್ವಾತಂತ್ರ್ಯ ದಿನಾಚರಣೆಯ ವೇಳೆ 80 ವರ್ಷದ ವೃದ್ಧರು ಅಸ್ವಸ್ಥೆಯಿಂದ ಬಳಲುತ್ತಿದ್ದರು. ನಂತರ ಅವರನ್ನು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್‌)ಗೆ ಕರೆದೊಯ್ಯಲಾಯಿತು ಎಂದು ಸುಲಭ್ … Continued

20 ವರ್ಷಗಳ ನಿಷೇಧದ ನಂತರ ಸ್ವಾತಂತ್ರ್ಯ ದಿನದಂದು ಹಿಂದಿ ಸಿನೆಮಾ ಪ್ರದರ್ಶನಕ್ಕೆ ಮುಂದಾದ ಮಣಿಪುರ: ಇಷ್ಟು ವರ್ಷ ಹಿಂದಿ ಸಿನೆಮಾ ನಿಷೇಧಕ್ಕೆ ಕಾರಣ ಗೊತ್ತಾ?

ಗುವಾಹತಿ : 20 ವರ್ಷಗಳ ಸುದೀರ್ಘ ವಿರಾಮದ ನಂತರ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಮಂಗಳವಾರ (ಆಗಸ್ಟ್ 15) ಹಿಂದಿ ಚಲನಚಿತ್ರವೊಂದು ಪ್ರದರ್ಶನಗೊಳ್ಳಲಿದೆ. ಹಿಂದಿ ಚಲನಚಿತ್ರವು ಮಂಗಳವಾರ (ಆಗಸ್ಟ್ 15) ಸಂಜೆ ಮಣಿಪುರದ ಅತ್ಯಂತ ಹೆಚ್ಚು ಹಿಂಸಾ ಪೀಡಿತ ಚುರಚಂದಪುರ ಜಿಲ್ಲೆಯ ರೆಂಗ್‌ಕೈ ಎಂಬ ಎಚ್‌ಎಸ್‌ಎ (HSA) ಕ್ಯಾಂಪಸ್‌ನಲ್ಲಿ ಪ್ರದರ್ಶಿತವಾಗಲಿದೆ. ಮಣಿಪುರದ ಬುಡಕಟ್ಟು ವಿದ್ಯಾರ್ಥಿಗಳ ಸಂಘಟನೆಯಾದ ಹ್ಮಾರ್ … Continued

ಅವರು ಮನೆಯಲ್ಲಿ ಧ್ವಜಾರೋಹಣ ಮಾಡ್ತಾರೆ’ : ಮುಂದಿನ ವರ್ಷ ಕೆಂಪುಕೋಟೆಯಲ್ಲಿ ಭೇಟಿಯಾಗೋಣ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಖರ್ಗೆ ವ್ಯಂಗ್ಯ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿಯವರ ಸ್ವಾತಂತ್ರ್ಯೋತ್ಸವ ಭಾಷಣದ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯವರ ‘ಕೆಂಪುಕೋಟೆಯಲ್ಲಿ ಮುಂದಿನ ವರ್ಷ ಭೇಟಿಯಾಗೋಣ’ ಎಂಬ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ಖರ್ಗೆ, ಪ್ರಧಾನಿಯವರ ಹೇಳಿಕೆಗಳು ಅವರ “ಅಹಂಕಾರ”ವನ್ನು ತೋರಿಸುತ್ತದೆ ಮತ್ತು ಮುಂದಿನ ವರ್ಷ “ತಮ್ಮ ಮನೆಯಲ್ಲಿ” ಧ್ವಜಾರೋಹಣ ಮಾಡಲಿದ್ದಾರೆ ಎಂದು ಹೇಳಿದರು. ಅವರು [ಮೋದಿ] ಮುಂದಿನ … Continued

ಇದೇ ಸ್ಥಳ, ಇದೇ ಸಮಯ..ಮುಂದಿನ ವರ್ಷ ಕೆಂಪುಕೋಟೆಯಲ್ಲಿ ಭೇಟಿಯಾಗೋಣ : ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಮುಂದಿನ ಅವಧಿಗೆ ದಿಟ್ಟ ಘೋಷಣೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಮುಂದಿನ ವರ್ಷ ಕೆಂಪು ಕೋಟೆಯಿಂದ ರಾಷ್ಟ್ರ ಭಾಷಣ ಮಾಡಲಿದ್ದೇನೆ ಎಂಬ ವಿಶ್ವಾಸವಿದೆ ಮತ್ತು ಜನರಿಗೆ ತಾನು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಮಾಡಿದ ಪ್ರಗತಿಯನ್ನು ವಿವರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬದಲಾವಣೆಯ ಭರವಸೆ ನನ್ನನ್ನು ಇಲ್ಲಿಗೆ ಕರೆತಂದಿತು, ನನ್ನ ಕಾರ್ಯಕ್ಷಮತೆ ನನ್ನನ್ನು ಮತ್ತೊಮ್ಮೆ ಇಲ್ಲಿಗೆ ಕರೆತಂದಿತು. ಮುಂಬರುವ ಐದು ವರ್ಷಗಳು ಅಭೂತಪೂರ್ವ ಅಭಿವೃದ್ಧಿ … Continued

ಮಧ್ಯಮ ವರ್ಗ, ಮಹಿಳಾ ನೇತೃತ್ವದ ಅಭಿವೃದ್ಧಿಗೆ ಆದ್ಯತೆ: ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಪ್ರತಿಪಾದನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ತಮ್ಮ ಕೊನೆಯ ಸ್ವಾತಂತ್ರ್ಯ ದಿನದ ಭಾಷಣವನ್ನು ಮಾಡುವಾಗ “ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಭಾರತದ ವಿಧಾನ”, ಬಡತನವನ್ನು ನಿವಾರಿಸಲು ಸರ್ಕಾರದ ಪ್ರಯತ್ನಗಳು ಮತ್ತು ಬೆಳೆಯುತ್ತಿರುವ ಮಧ್ಯಮ ವರ್ಗದ ಬಗ್ಗೆ ಮಾತನಾಡಿದ್ದಾರೆ. ಹಿಂಸಾಚಾರದಿಂದ ಹಾನಿಗೊಳಗಾದ ಮಣಿಪುರದೊಂದಿಗೆ ದೇಶ ನಿಂತಿದೆ ಎಂದು ಪ್ರಧಾನಿ ಮೋದಿ ಹೇಳಿದರು. … Continued