ಅಯೋಧ್ಯೆ ಶ್ರೀರಾಮ ದೇಗುಲಕ್ಕೆ ೨೫೦೦ ಕೋಟಿ ರೂ. ಸಂಗ್ರಹ

ಜನವರಿ 14 ರಂದು ಅಯೋಧ್ಯೆಯ ಶ್ರೀರಾಮ ದೇವಸ್ಥಾನಕ್ಕಾಗಿ ಜನಸಮೂಹ ಧನಸಹಾಯ ಅಭಿಯಾನ ಪ್ರಾರಂಭಿಸಿದ ಶ್ರೀ ರಾಮ್‌ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಫೆಬ್ರವರಿ 27 ರಂದು ಅಭಿಯಾನ ಮುಗಿಯುವ ಹೊತ್ತಿಗೆ ಈ ಯೋಜನೆಗೆ 1,100 ಕೋಟಿ ರೂ. ಸಂಗ್ರಹದ ನಿರೀಕ್ಷೆ ಇಟ್ಟಿತ್ತು. ಆದರೆ ೪೪ ದಿನಗಳ ಅಭಿಯಾನದಲ್ಲಿ 2,500 ಕೋಟಿ ರೂ.ಗಳಷ್ಟು ಸಂಗ್ರಹವಾಗಿದೆ ಎಂದು ವಿಶ್ವ … Continued

ಗುರುದ್ವಾರ ಬಾಂಗ್ಲಾ ಸಾಹಿಬ್ ಒಳಗೆ ‘ಭಾರತದ ಅತಿದೊಡ್ಡ’ ಡಯಾಲಿಸಿಸ್ ಸೌಲಭ್ಯ ಆರಂಭ

ನವ ದೆಹಲಿ: ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ (ಡಿಎಸ್‌ಜಿಎಂಸಿ) ಇಲ್ಲಿನ ಗುರುದ್ವಾರ ಬಾಂಗ್ಲಾ ಸಾಹಿಬ್ ಸಂಕೀರ್ಣದಲ್ಲಿ “ಭಾರತದ ಅತಿದೊಡ್ಡ” ಕಿಡ್ನಿ ಡಯಾಲಿಸಿಸ್ ಸೌಲಭ್ಯ ಪ್ರಾರಂಭಿಸಿದೆ. ಗುರು ಹರ್ಕಿಶನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಕಿಡ್ನಿ ಡಯಾಲಿಸಿಸ್ ಆಸ್ಪತ್ರೆ 101 ರೋಗಿಗಳಿಗೆ ಏಕಕಾಲದಲ್ಲಿ ಡಯಾಲಿಸಿಸ್ ಸೌಲಭ್ಯ ನೀಡಲಿದ್ದು, ಇದು ಪ್ರತಿದಿನ 500 ರೋಗಿಗಳಿಗೆ … Continued

ಮಹಾರಾಷ್ಟ್ರ: ಮೂರು ತಿಂಗಳ ನಂತರ ಮತ್ತೆ 11 ಸಾವಿರ ದಾಟಿದ ಪ್ರತಿದಿನದ ಕೊರೋನಾ ಸೋಂಕಿತರ ಸಂಖ್ಯೆ..!

ಮುಂಬೈ: ಮೂರು ತಿಂಗಳ ಅಂತರದ ನಂತರ ಮಹಾರಾಷ್ಟ್ರದಲ್ಲಿ ಭಾನುವಾರ ಕಳೆದ ೨೪ ತಾಸಿನಲ್ಲಿ ಪ್ರತಿದಿನದ 11,000ಕ್ಕೂ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳನ್ನು ದಾಖಲು ಮಾಡಿದೆ. ರಾಜ್ಯಾದ್ಯಂತ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುತ್ತಿದ್ದು, ರಾಜ್ಯವು ಭಾನುವಾರ 11,141 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಇದು ಶನಿವಾರಕ್ಕಿಂತ (10,187) ಸುಮಾರು ಒಂದು ಸಾವಿರದಷ್ಟು ಹೆಚ್ಚಾಗಿದೆ. 38 … Continued

ತಮಿಳುನಾಡಿನಲ್ಲಿ ಒಂದು ಸಾವಿರ ಕೋಟಿ ರೂ.ಕಪ್ಪು ಹಣ ಪತ್ತೆ

ನವ ದೆಹಲಿ: ತಮಿಳುನಾಡಿನ ಚಿನ್ನದ ವ್ಯಾಪಾರಿಗಳು 1 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಕಪ್ಪು ಹಣ ವ್ಯವಹಾರ ನಡೆಸಿರುವುದನ್ನು ಆದಾಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಮಾ.4ರಂದು ಐಟಿ ಅಧಿಕಾರಿಗಳು ಚೆನ್ನೈ , ಮುಂಬೈ, ಕೊಯಮತ್ತೂರು, ಮಧುರೈ, ತಿರುಚಿನಾಪಳ್ಳಿ, ತ್ರಿಶೂರ್, ನೆಲ್ಲೂರು ಸೇರಿದಂತೆ 27ಕ್ಕೂ ಹೆಚ್ಚು ಚಿನ್ನದ ಮಳಿಗೆಗಳ ಮೇಲೆ ದಾಳಿ ನಡೆಸಿದ್ದರು. ದಾಳಿ ಸಂದರ್ಭದಲ್ಲಿ … Continued

ನಾನು ನಾಗರ ಹಾವು, ಕಚ್ಚಿದ್ರೆ ನೀವು ಇರೋಲ್ಲ: ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ ಹೇಳಿಕೆ‌

ಕೊಲ್ಕತ್ತಾ: .ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ತೆರಳಲು ಕೇವಲ ಮೂರು ವಾರಗಳ ಮೊದಲು ಭಾನುವಾರ ಕೊಲ್ಕತ್ತಾದ ಬ್ರಿಗೇಡ್ ಪೆರೇಡ್ ಗ್ರೌಂಡ್ ಸಮಾವೇಶದಲ್ಲಿ ಖ್ಯಾತ ಬಾಲಿವುಡ್‌ ನಟ ಮಿಥುನ್ ಚಕ್ರವರ್ತಿ ಭಾನುವಾರ ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಮತ್ತು ರಾಜ್ಯ ಪಕ್ಷದ ಮುಖ್ಯಸ್ಥ ದಿಲೀಪ್ ಘೋಷ್ ಇತರರು ಅವರನ್ನು … Continued

ಮತ್ತೊಬ್ಬ ಪ್ರತಿಭಟನಾ ನಿರತ ರೈತ ಆತ್ಮಹತ್ಯೆಗೆ ಶರಣು

ಚಂಡೀಗಢ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆ ನೂರು ದಿನ ದಾಟಿದ ಬೆನ್ನಲ್ಲೇ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಟಿಕ್ರಿ-ಬಹದ್ದೂರ್‌ಗ ಗಡಿಯಲ್ಲಿ ಭಾನುವಾರ ಹರಿಯಾಣದ ಹಿಸಾರ್ ಜಿಲ್ಲೆಯ ರೈತ ರಾಜ್ಬೀರ್ (55) ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಕೃಷಿ ಕಾಯ್ದೆ ಹೋರಾಟದಲ್ಲಿ ಪರಿಹಾರ ಸಿಗದ ಹಿನ್ನೆಲೆಯಲ್ಲಿ ನೊಂದ ಮತ್ತೊಬ್ಬ ರೈತ … Continued

ರಾವಣ, ರಾಕ್ಷಸ, ಗೂಂಡಾ ಎಂದೆಲ್ಲ  ಹೀಯಾಳಿಸಿದಿರಿ… ನನ್ನ ಮೇಲೆ ನಿಮಗೆ ಇಷ್ಟೊಂದು ಕೋಪವೇಕೆ ದೀದಿ?: ಬಿಜೆಪಿ ಸಮಾವೇಶದಲ್ಲಿ ಮೋದಿ ಪ್ರಶ್ನೆ

  ಕೊಲ್ಕತ್ತಾ:ದೀದಿ (ಮಮತಾ ಬ್ಯಾನರ್ಜಿ) ನನ್ನ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ. ನನ್ನ ಮೇಲೆ ಅವರಿಗೆ ಕೋಪ ಎಷ್ಟಿತ್ತೆಂದರೆ ಅನೇಕ ಸಲ ರಾವಣ, ರಾಕ್ಷಸ, ಗೂಂಡಾ ಎಂದೆಲ್ಲ ಕರೆದು ನನ್ನನ್ನು ಹೀಯಾಳಿಸಿದ್ದೀರಿ. ದೀದಿಯವರೇ ನನ್ನ ಮೇಲೆ ನಿಮಗೆ ಯಾಕಿಷ್ಟು ಕೋಪ? ಅಂಥದ್ದನ್ನು ನಾನೇನು ಮಾಡಿದ್ದೇನೆ ಎಂದು ಮಾರ್ಮಿಕವಾಗಿ ಕೇಳಿದರು. ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ … Continued

ಐಪಿಎಲ್‌ಗೆ ಮುಹೂರ್ತ ಫಿಕ್ಸ್‌, ಏ೯ರಿಂದ ಆರಂಭ

ನವ ದೆಹಲಿ: ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ 2021ರ ಇಂಡಿಯನ್​ ಪ್ರೀಮಿಯರ್ ಲೀಗ್ (ಐಪಿಎಲ್)​ ಟೂರ್ನಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಏಪ್ರಿಲ್​​ 9 ರಿಂದ ಪಂದ್ಯ ಆರಂಭಗೊಳ್ಳಲಿದೆ. ಒಟ್ಟು ೬೦ ಪಂದ್ಯಗಳನ್ನೊಳಗೊಂಡ ಈ ಐಪಿಎಲ್‌ ಪಂದ್ಯಾವಳಿಯು ಏ.೯ರಿಂದ ಆರಂಭವಾಗಲಿದ್ದು, ಅಂತಿಮ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ. ಪಂದ್ಯಾವಳಿಯು ಏಪ್ರಿಲ್​​ 9 … Continued

ಅಸ್ಸಾಂ: ಕಾಂಗ್ರೆಸ್ಸಿನ 40 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಅಸ್ಸಾಂ: ಅಸ್ಸಾಂ ವಿಧಾನಸಭೆ ಚುನಾವಣೆ ಮಾರ್ಚ್ 27ರಿಂದ ಮೂರು ಹಂತಗಳಲ್ಲಿ ನಡೆಯಲಿದ್ದು, ಕಾಂಗ್ರೆಸ್ ತನ್ನ 40 ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಒಟ್ಟು ೧೨೬ ಸ್ಥಾನಗಳಿಗೆಚುನಾವಣೆ ನಡೆಯಲಿದೆ.ಅಸ್ಸಾಂನಲ್ಲಿ ಸಿಎಎ ಕಾನೂನು ಪ್ರಮುಖ ಚುನಾವಣಾ ವಿಷಯವಾಗಲಿದ್ದು, ಕಾಂಗ್ರೆಸ್‌ ಈ ಬಾರಿ ಉತ್ತರಾಂಚಲದಲ್ಲಿ ಕಳೆದುಕೊಂಡಿರುವ ವರ್ಚಸ್ಸನ್ನು ಮರಳಿ ಪಡೆಯಲು ಯತ್ನಿಸುತ್ತಿದ್ದು, ಅದಕ್ಕಾಗಿ ಅನೇಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. … Continued

ಶ್ವಾಸಕೋಶದ ಕ್ಯಾನ್ಸರ್‌:ಧೂಮಪಾನಿಗಳಲ್ಲದವರ ತಪಾಸಣೆಯೂ ಮುಖ್ಯ – ಪರಿಣಾಮಕಾರಿ, ತೈವಾನ್ ಅಧ್ಯಯನದಲ್ಲಿ ಬೆಳಕಿಗೆ

ಎಂದಿಗೂ ಧೂಮಪಾನ ಮಾಡದವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ತೈವಾನ್‌ನ ಹೊಸ ಅಧ್ಯಯನವು ಈ ರೋಗವನ್ನು ಮೊದಲೇ ಗುರುತಿಸಲು ಕೆಲವು ಅಪಾಯಕಾರಿ ಗುಂಪುಗಳ ತಪಾಸಣೆಯ ಮಹತ್ವವನ್ನು ಒತ್ತಿಹೇಳಿದೆ. ಈ ಅಧ್ಯಯನದ ಬಗ್ಗೆ ದಿ ಪ್ರಿಂಟ್‌ ವಿಸ್ತೃತವಾಗಿ ವರದಿ ಮಾಡಿದೆ. ತೈಪೆಯ ನ್ಯಾಷನಲ್ ತೈವಾನ್ ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಸಿನ್‌ನ ಸಂಶೋಧಕರ ಪ್ರಕಾರ, ಕಡಿಮೆ-ಪ್ರಮಾಣದ ಕಂಪ್ಯೂಟೆಡ್ ಟೊಮೊಗ್ರಫಿ … Continued