ಏರ್‌ ಕಂಡಿಶನ್‌ ವ್ಯವಸ್ಥೆ ಇಲ್ಲ ಎಂದು ಮದುವೆಯನ್ನೇ ರದ್ದುಗೊಳಿಸಿದ ಮದುಮಗಳು..! ವರನ ಕುಟುಂದ ವಿರುದ್ಧ ವರದಕ್ಷಿಣೆ ಪ್ರಕರಣವೂ ದಾಖಲು…!!

ಉತ್ತರ ಪ್ರದೇಶದ ಆಗ್ರಾದ ಶಂಶಾಬಾದ್ ಪಟ್ಟಣದಲ್ಲಿ ನಡೆದ ಒಂದು ಅಸಾಮಾನ್ಯ ಘಟನೆಯಲ್ಲಿ, ವರನ ಕುಟುಂಬದವರು ಏರ್ಪಡಿಸಿದ್ದ ಮದುವೆ ಸ್ಥಳದಲ್ಲಿ ಹವಾನಿಯಂತ್ರಣ ವ್ಯವಸ್ಥೆ ಇಲ್ಲದ ಕಾರಣ ವಧುವು ತಮ್ಮ ಮದುವೆಯನ್ನು ರದ್ದುಗೊಳಿಸಿದ್ದಾಳೆ…! ಆರಂಭದಲ್ಲಿ ತೀವ್ರವಾದ ಉಷ್ವಾಣತೆಯಿಂದ ಉಂಟಾದ  ವಾಗ್ವಾದವು ನಂತರ ವರದಕ್ಷಿಣೆ ಬೇಡಿಕೆ ಮತ್ತು ನಿಂದನೆಯ ಆರೋಪಗಳಾಗಿ ಪರಿಣಮಿಸಿತು. ವರದಿಗಳ ಪ್ರಕಾರ, ಸಮಾರಂಭದ ಸಮಯದಲ್ಲಿ ವಧುವು ವರನ … Continued

ವೀಡಿಯೊ…| ಆಘಾತಕಾರಿ ; ಬೊಬ್ಬೆ ಹೊಡೆದ್ರೂ ಕೇಳಿಸಿಕೊಳ್ಳದೆ ಟ್ರಕ್‌ ಕೆಳಗೆ ಸಿಲುಕಿಕೊಂಡಿದ್ದ ಇಬ್ಬರನ್ನು ದೂರದ ವರೆಗೆ ಎಳೆದೊಯ್ದ ಚಾಲಕ…!

ಆಗ್ರಾದಲ್ಲಿ ಟ್ರಕ್ ಚಾಲಕನೊಬ್ಬ ತನ್ನ ವಾಹನದ ಕೆಳಗೆ ಸಿಲುಕಿದ್ದ ಇಬ್ಬರನ್ನು ಸುಮಾರು 300 ಮೀಟರ್ ವರೆಗೆ ಎಳೆದೊಯ್ದಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಕೆಲ ಸ್ಥಳೀಯರು ಟ್ರಕ್‌ ಅನ್ನು ಅಡ್ಡಹಾಕಿ ಚಾಲಕ ಬಲವಂತವಾಗಿ ಟ್ರಕ್ ನಿಲ್ಲಿಸುವಂತೆ ಮಾಡಿದ ನಂತರ ವಾಹನದ ಕೆಳಗಿದ್ದವರನ್ನು ಹೊರತೆಗೆಯಲಾಗಿದೆ. ಪೊಲೀಸರು ಚಾಲಕನನ್ನು ಬಂಧಿಸಿ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಆಗ್ರಾದ ನುನ್ಹೈ ನಿವಾಸಿಗಳಾಗಿರುವ ಇಬ್ಬರು … Continued

ಉತ್ತರ ಪ್ರದೇಶದ ಅತ್ಯಂತ ಜನಪ್ರಿಯ ಪ್ರವಾಸಿ ಸ್ಥಳ ; ತಾಜ್ ಮಹಲ್ ಹಿಂದಿಕ್ಕಿ ನಂ.1 ಸ್ಥಾನಕ್ಕೆ ಏರಿದ ಅಯೋಧ್ಯೆ ರಾಮಮಂದಿರ

ನವದೆಹಲಿ: ಈಗ ಅಯೋಧ್ಯೆಯು ಆಗ್ರಾದ ತಾಜ್ ಮಹಲ್‌ ಅನ್ನು ಹಿಂದಿಕ್ಕಿ ಈಗ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಸ್ಥಳವಾಗಿ ಹೊರಹೊಮ್ಮಿದೆ. ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಪ್ರಕಾರ, 2024 ರ ಜನವರಿ-ಸೆಪ್ಟೆಂಬರ್ ನಡುವೆ ಅಯೋಧ್ಯೆಗೆ 13.55 ಕೋಟಿ ದೇಶೀಯ ಪ್ರವಾಸಿಗರು ಮತ್ತು 3,153 ವಿದೇಶಿಯರು ಭೇಟಿ ನೀಡಿದ್ದಾರೆ. ಇದು ಹೊಸ ದಾಖಲೆಯಾಗಿದೆ. ನಿರೀಕ್ಷಿತ … Continued

ಶಾಕಿಂಗ್‌ …| ನಿಮ್ಮ ಮಗಳು ಸೆಕ್ಸ್‌ ಜಾಲದಲ್ಲಿ ಸಿಲುಕಿದ್ದಾಳೆಂದು ಪೊಲೀಸರ ವೇಷದಲ್ಲಿ ವಂಚಕರಿಂದ ಫೋನ್‌ ಕಾಲ್‌ : ಶಿಕ್ಷಕಿ ಹೃದಯಘಾತದಿಂದ ಸಾವು…!

ಆಗ್ರಾ : ಮೊಬೈಲ್‌ ಕರೆ ವಂಚನೆಗಳು ಹಲವಾರು ಜನರು ಆರ್ಥಿಕ ನಷ್ಟವನ್ನು ಅನುಭವಿಸಲು ಕಾರಣವಾಗಿವೆ, ಆದರೆ ಅಂತಹ ಒಂದು ವಂಚನೆ ಕಾಲ್‌ ಮಹಿಳೆಯೊಬ್ಬರ ಜೀವವನ್ನೇ ಆಹುತಿ ತೆಗೆದುಕೊಂಡ ಘಟನೆ ವರದಿಯಾಗಿದೆ. ಆಗ್ರಾದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಮಾಲ್ತಿ ವರ್ಮಾ (58) ಅವರು ಪೊಲೀಸ್ ಅಧಿಕಾರಿ ಫೋಟೋ ಪೋಸಿನಲ್ಲಿದ್ದ ವ್ಯಕ್ತಿಯಿಂದ ವಾಟ್ಸಾಪ್ ಕರೆ ಸ್ವೀಕರಿಸಿದ್ದಾರೆ. ತನ್ನ ಕಾಲೇಜಿಗೆ … Continued

ವೀಡಿಯೊ..| ವಂದೇ ಭಾರತ ರೈಲಿಗೆ ಚಾಲನೆ ನೀಡುವ ವೇಳೆ ರೈಲ್ವೆ ಹಳಿ ಮೇಲೆ ಬಿದ್ದ ಶಾಸಕಿ…

ಇಟಾವಾ : ಆಗ್ರಾ-ವಾರಾಣಸಿ ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲಿಗೆ ಸೋಮವಾರ ಹಸಿರು ನಿಶಾನೆ ತೋರಿಸುವಾಗ ಬಿಜೆಪಿಯ ಇಟಾವಾ ಶಾಸಕಿ ಸರಿತಾ ಬಹ್ದೌರಿಯಾ ಅವರು ರೈಲ್ವೆ ಹಳಿ ಮೇಲೆ ಬಿದ್ದ ಘಟನೆ ನಡೆದಿದೆ. ಘಟನೆಯ ಉದ್ದೇಶಿತ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ರೈಲು ಆಗಮಿಸುತ್ತಿದ್ದಂತೆ ಕಿಕ್ಕಿರಿದ ಪ್ಲಾಟ್‌ಫಾರ್ಮ್ ನಡುವೆ ಈ … Continued

ತಾಜ್‌ ಮಹಲ್‌ನಲ್ಲಿ ಗಂಗಾಜಲ ಸುರಿದ ಇಬ್ಬರ ಬಂಧನ

ಆಗ್ರಾ:  ಘಟನೆಯೊಂದರಲ್ಲಿ  ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್ ಮಹಲ್‌ನಲ್ಲಿ ಗಂಗಾಜಲ ಪ್ರೋಕ್ಷಣೆ ಮಾಡಿದ್ದಕ್ಕಾಗಿ ಪೊಲೀಸರು ಶನಿವಾರ ಇಬ್ಬರನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಸಮಾಧಿಯಲ್ಲಿ ಪವಿತ್ರ ಗಂಗಾಜಲವನ್ನು ಸಿಂಪಡಿಸಿದ ಆರೋಪದ ಮೇಲೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿಯು ವಿನೇಶ ಮತ್ತು ಶ್ಯಾಮ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ತಾಜ್‌ಮಹಲ್‌ನ ಭದ್ರತೆಯ ಹೊಣೆಯನ್ನು ಸಿಐಎಸ್‌ಎಫ್‌ ಹೊಂದಿದೆ. … Continued

ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಆತನನ್ನು ಜೀವಂತವಾಗಿ ಹುಗಿದ ನಾಲ್ವರು : ಆದ್ರೆ ಮಣ್ಣು ಕೆದಕಿ ಬದುಕಿಸಿದ ನಾಯಿಗಳು…!

ಆಗ್ರಾ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಾಲ್ವರು ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ನಡೆಸಿ ಜೀವಂತವಾಗಿ ಮಣ್ಣಿನಡಿ ಹೂಳಿದ ನಂತರ ಬೀದಿ ನಾಯಿಗಳು ಅಗೆದು ತನ್ನನ್ನು ಬದುಕಿಸಿವೆ ಎಂದು ಉತ್ತರ ಪ್ರದೇಶದ ಆಗ್ರಾದಲ್ಲಿ 24 ವರ್ಷದ ವ್ಯಕ್ತಿಯೊಬ್ಬರು ವಿಚಿತ್ರವಾದ ಹೇಳಿಕೆ ನೀಡಿದ್ದಾರೆ. ಜುಲೈ 18 ರಂದು, ಆಗ್ರಾದ ಅರ್ಟೋನಿ ಪ್ರದೇಶದಲ್ಲಿ ಅಂಕಿತ, ಗೌರವ, ಕರಣ್‌ ಮತ್ತು ಆಕಾಶ … Continued

ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’…

ಉತ್ತರ ಪ್ರದೇಶದ ಆಗ್ರಾದಲ್ಲಿ ನಿರ್ಮಿಸಲು ಸುಮಾರು 104 ವರ್ಷಗಳನ್ನು ತೆಗೆದುಕೊಂಡ ‘ರಾಧಾ ಸ್ವಾಮಿ ಸಮಾಧಿ’ ಎಂದೂ ಕರೆಯಲ್ಪಡುವ ಸೋಮಿ ಬಾಗ್ ಸಮಾಧಿ ವಿಶ್ವ ಪರಂಪರೆಯ ತಾಣವಾದ ತಾಜ್ ಮಹಲಿಗೆ ಹೊಸ ಪ್ರತಿಸ್ಪರ್ಧಿಯಾಗಿದೆ. ಆಗ್ರಾದಲ್ಲಿನ ಸೋಮಿ ಬಾಗ್‌ ಸಮಾಧಿ ಬಿಳಿ ಅಮೃತಶಿಲೆಯಿಂದ ನಿರ್ಮಿಸಲಾಗಿದ್ದು, ಈ ನಿರ್ಮಾಣಕ್ಕೆ 104 ವರ್ಷಗಳು ಬೇಕಾಯಿತು. ತಾಜ್ ಮಹಲ್‌ನಿಂದ ಕೇವಲ 12 ಕಿಲೋಮೀಟರ್ … Continued

ವೀಡಿಯೊ…| ಶಾಲೆಯಲ್ಲೇ ಹೊಡೆದಾಡಿಕೊಂಡ ಪ್ರಾಂಶುಪಾಲೆ-ಶಿಕ್ಷಕಿ

ಲಕ್ನೋ: ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಫೇಶಿಯಲ್ ಮಾಡಿಸಿಕೊಂಡ ಶಿಕ್ಷಕಿಯೊಬ್ಬರಿಗೆ ಮುಖ್ಯಾಧ್ಯಾಪಕಿಯೊಬ್ಬರು ಕಚ್ಚಿದ ಘಟನೆಯ ಹಸಿಯಾಗಿರುವಾಗಲೇ ಶಾಲೆಗೆ ತಡವಾಗಿ ಬಂದ ಆರೋಪದ ಮೇಲೆ ಪ್ರಾಂಶುಪಾಲರೊಬ್ಬರು ಶಿಕ್ಷಕಿಯೊಬ್ಬರಿಗೆ ಥಳಿಸಿರುವ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಗ್ರಾದ ಸೀಗಾನಾ ಗ್ರಾಮದ ಪೂರ್ವ-ಪ್ರೌಢಶಾಲೆಯ ಪ್ರಾಂಶುಪಾಲೆಯು ಶಿಕ್ಷಕಿ ಮೇಲೆ ಹಲ್ಲೆ ನದಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಹೊಡೆದಾಟದ ಸಮಯದಲ್ಲಿ ತನ್ನ ಬಟ್ಟೆಗಳನ್ನು … Continued

ಎಂಥಾ ಲೋಕವಯ್ಯ…! ಪತಿಯನ್ನು ಕೊಂದವರಿಗೆ ₹ 50 ಸಾವಿರ ಬಹುಮಾನ ನೀಡುವೆ : ವಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿಕೊಂಡ ಮಹಿಳೆ…!

ಲಕ್ನೋ: ಪತಿಯನ್ನು ಕೊಲೆ ಮಾಡಿದವರಿಗೆ ₹50 ಸಾವಿರ ನಗದು ಬಹುಮಾನ ನೀಡಲಾಗುವುದು’ ಎಂದು ಮಹಿಳೆಯೊ‌ಬ್ಬರು ತಮ್ಮ ವಾಟ್ಸ್‌ಆಪ್‌ ಖಾತೆಯಲ್ಲಿ ಸ್ಟೇಟಸ್‌ ಹಾಕಿಕೊಂಡಿದ್ದಾರೆ. ಉತ್ತರ ಪ್ರದೇಶದ ಆಗ್ರಾದ ಬಹ್ ಜಿಲ್ಲೆಯ ದಂಪತಿ ನಡುವಿನ ಭಿನ್ನಾಭಿಪ್ರಾಯ ಎಷ್ಟು ತೀವ್ರವಾಗಿದೆಯೆಂದರೆ, ಪತಿ ಹತ್ಯೆಗೆ ಪತ್ನಿ ₹ 50,000 ಬಹುಮಾನ ಘೋಷಿಸಿದ್ದಾರೆ. ಆಕೆ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಈ ಆಫರ್ ನೀಡಿದ್ದಾಳೆ…!! … Continued