ಭಟ್ಕಳದಲ್ಲಿ ದುರಂತ; ಕಪ್ಪೆ ಚಿಪ್ಪು ಸಂಗ್ರಹಿಸಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ನೀರು ಪಾಲು

ಕಾರವಾರ : ಕಪ್ಪೆ ಚಿಪ್ಪು ಸಂಗ್ರಹಿಸಲು ನದಿಗೆ ಇಳಿದಿದ್ದ ಒಂದೇ ಕುಟುಂಬದ ಎಂಟು ಮಂದಿ ಸಮುದ್ರದ ಅಲೆಗಳ ಅಬ್ಬರಕ್ಕೆ ಕೊಚ್ಚಿಹೋಗಿ ನೀರು ಪಾಲಾದ ಘಟನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೇಕೋಡಿ ಸಮುದ್ರ ತೀರದಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ಇನ್ನೂ ಮೂವರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ​ಭಟ್ಕಳ ತಾಲೂಕಿನ … Continued

ಸಮುದ್ರದಲ್ಲಿ ಸಿಲುಕಿದ ತನ್ನ ಕುಟುಂಬದವರನ್ನು ಬಚಾವ್‌ ಮಾಡಲು ದೈತ್ಯ ಅಲೆಗಳ ಮಧ್ಯೆ 4 ಗಂಟೆ ಈಜಿದ 13 ವರ್ಷದ ಬಾಲಕ…!

ಕ್ವಿಂಡಲಪ್ : “ಅತಿ ಮಾನವ” ಎಂದು ಹೇಳಬಹುದಾದ ಒಂದು ಘಟನೆಯಲ್ಲಿ, ಪರ್ತ್‌ನ 13 ವರ್ಷದ ಬಾಲಕ ಆಳ ಸಮುದ್ರದಲ್ಲಿ ಸಿಲುಕಿದ್ದ ತನ್ನ ತಾಯಿ ಮತ್ತು ಇಬ್ಬರು ಒಡಹುಟ್ಟಿದವರನ್ನು ರಕ್ಷಿಸಲು ಪಶ್ಚಿಮ ಆಸ್ಟ್ರೇಲಿಯಾದ ಒರಟಾದ ಸಮುದ್ರದ ಅಲೆಗಳ ಮಧ್ಯೆ ನಾಲ್ಕು ಗಂಟೆಗಳ ಕಾಲ ಈಜಿರುವ ಘಟನೆ ನಡೆದಿದೆ. ಜನವರಿ 30 ರಂದು  ಕ್ವಿಂಡಲಪ್‌ನಲ್ಲಿ ವಿಹಾರಕ್ಕೆ ತೆರಳಿದ್ದ ವೇಳೆ … Continued

ಕಿರಿಮಂಜೇಶ್ವರ : ಸಮುದ್ರಕ್ಕೆ ಮೀನು ಹಿಡಿಯಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲು

ಉಡುಪಿ: ಮೀನು ಹಿಡಿಯಲು (Fishing) ಸಮುದ್ರಕ್ಕೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ಬೈಂದೂರು (Baindur) ತಾಲೂಕಿನ ಕಿರಿಮಂಜೇಶ್ವರ ಬಳಿ ನಡೆದಿದೆ ಎಂದು ವರದಿಯಾಗಿದೆ. ಕಿರಿಮಂಜೇಶ್ವರ ಬಳಿ ಹೊಸಹಿತ್ಲು ಬೀಚ್‌ನಲ್ಲಿ (Hosahithlu Beach) ಮಂಗಳವಾರ ಸಂಜೆ ಈ ದುರಂತ ಸಂಭವಿಸಿದ್ದು, ಸ್ಥಳೀಯ ನಿವಾಸಿಗಳಾದ ಸಂಕೇತ (16), ಸೂರಜ (15) ಹಾಗೂ ಆಶಿಶ್ (14) ನೀರಿನಲ್ಲಿ ಮುಳುಗಿ … Continued

ಕುಂದಾಪುರ : ಗೋಪಾಡಿ ಬೀಚಿನಲ್ಲಿ ಸಮುದ್ರ ಪಾಲಾದ ಬೆಂಗಳೂರಿನ ಮೂವರು ಯುವಕರು

ಉಡುಪಿ : ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲಾದ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಗೋಪಾಡಿ ಬೀಚ್ ನಲ್ಲಿ ಭಾನುವಾರ ನಡೆದಿದೆ ಎಂದು ವರದಿಯಾಗಿದೆ. ಬೆಂಗಳೂರಿನಿಂದ 10 ಮಂದಿ ಯುವಕರ ತಂಡ ಗೋಪಾಡಿಗೆ ಬಂದಿದ್ದು, ಅದರಲ್ಲಿ 9 ಮಂದಿ ಸಮುದ್ರಕ್ಕೆ ಇಳಿದು ನೀರಿನಲ್ಲಿ ಆಡುತ್ತಿದ್ದರು. ಈ ವೇಳೆ ನಾಲ್ವರು ಅಲೆಗಳಿಗೆ ಸಿಲುಕಿ ನೀರು ಪಾಲಾಗಿದ್ದು, … Continued

ಮೈ ಜುಂ ಎನಿಸುವ ವೀಡಿಯೊ…| ತಾಯಿ-ಮಗಳನ್ನು ಸಮುದ್ರಕ್ಕೆ ಎಳೆದೊಯ್ದ ಬೃಹತ್‌ ಅಲೆಗಳು ; ಜೀವನ್ಮರಣ ಹೋರಾಟದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಎಲ್ಲರೂ ಸಮುದ್ರತೀರದಲ್ಲಿ ಕುಳಿತು ಅಲೆಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಆದರೆ ಅಲೆಗಳು ದೈತ್ಯ ರೂಪವನ್ನು ಪಡೆದರೆ, ಅದು ಅತ್ಯಂತ ಭಯಾನಕ. ಹೀಗಾಗಿ ಅಲೆಗಳ ಸ್ವರೂಪವನ್ನು ಗಮನಿಸಿಯೇ ಸಮುದ್ರಕ್ಕೆ ಇಳಿಯಬೇಕು… ಇಲ್ಲವಾದರೆ ಯಾವುದೇ ಅನಾಹುತ ಸಂಭವಿಸಬಹುದು ಎಂಬುದಕ್ಕೆ ಈ ವೈರಲ್‌ ಆದ ವೀಡಿಯೊವೇ ನಿದರ್ಶನ. ಸಮುದ್ರದ ಅಲೆಗಳು ಯಾರನ್ನಾದರೂ ಹೇಗೆ ಅಸಹಾಯಕರನ್ನಾಗಿ ಮಾಡುತ್ತವೆ ಎಂಬುದನ್ನು ಈ ವೀಡಿಯೊದಲ್ಲಿ ನೋಡಬಹುದು. … Continued

ಕುಮಟಾ: ಮಹಿಳೆ ಸಮುದ್ರಕ್ಕೆ ಹಾರಿದ್ದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ; ಮಹಿಳೆ ಪತ್ತೆ ಹಚ್ಚಿದ ಪೊಲೀಸರು, ಸಾವಿನ ನಾಟಕವಾಡಿದ್ದು ಬಯಲಾಯ್ತು…!

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಾಂತಗಲ್ ಗ್ರಾಮದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಕುಮಟಾದ ಹೆಡ್‌ಬಂದರಿನಲ್ಲಿ ಸಮುದ್ರಕ್ಕೆ ಹಾರಿದ್ದಳು ಎಂಬ ಪ್ರಕರಣಕ್ಕೆ ಈಗ ದೊಡ್ಡ ಟ್ವಿಸ್ಟ್‌ ಸಿಕ್ಕಿದೆ. ತನ್ನ ಎರಡು ಮಕ್ಕಳನ್ನ ನಡು ರಸ್ತೆಯಲ್ಲಿ ಬಿಟ್ಟು ಸಮುದ್ರದಲ್ಲಿ ಮುಳುಗಿದ ನಾಟಕವಾಡಿದ್ದ ಸಾಂತಗಲ್ ಗ್ರಾಮದ ನಿವೇದಿತಾ ಭಂಡಾರಿ ಹೊನ್ನಾವರದ ಬಾಡಿಗೆ ಮನೆಯಲ್ಲಿರುವಾಗ ಪೊಲೀಸರ ಕೈಗೆ ಸಿಕ್ಕಿ … Continued