ವೀಡಿಯೊಗಳು..| ಭಯೋತ್ಪಾದಕ ದಾಳಿಯ 5 ದಿನಗಳ ನಂತರ ಪಹಲ್ಗಾಮ್‌ ನಲ್ಲಿ ಭರವಸೆಯ ಬೆಳಕು..: ಮತ್ತೆ ಪ್ರವಾಸಿಗರ ಆಗಮನ ಶುರು…

ಪಹಲ್ಗಾಮ್: ಪಹಲ್ಗಾಮ್ ನಲ್ಲಿ 26 ಜೀವಗಳನ್ನು ಬಲಿ ಪಡೆದ ಭಯೋತ್ಪಾದನೆ ಘಟನೆಯಿಂದ ತತ್ತರಿಸಿದ ಕಾಶ್ಮೀರ ಕಣಿವೆಯಲ್ಲಿ ಘಟನೆ ನಡೆದು ಐದು ದಿನಗಳ ನಂತರ ಪ್ರವಾಸೋಸದ್ಯಮ ಮತ್ತೆ ಪುಟಿದೇಳುವ ಲಕ್ಷಣ ಕಂಡುಬಂದಿದೆ. “ಲಿಟಲ್ ಸ್ವಿಟ್ಜರ್ಲೆಂಡ್” ಎಂಬ ಟ್ಯಾಗ್ ಅನ್ನು ಪಡೆದಿದ್ದ ರಮಣೀಯ ಪ್ರದೇಶದಲ್ಲಿ ಮಂಗಳವಾರ ನಡೆದ ಭೀಕರ ಭಯೋತ್ಪಾದಕ ದಾಳಿಯ ದಾಳಿಯ ಐದು ದಿನಗಳ ನಂತರ ಪ್ರವಾಸಿಗರಿಗೆ … Continued

ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿ : ಶಿವಮೊಗ್ಗದ ನಿವಾಸಿ ಸಾವು, ಐವರು ಪ್ರವಾಸಿಗರಿಗೆ ಗಾಯ

ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಶಿವಮೊಗ್ಗದ ನಿವಾಸಿಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅವರ ಪತ್ನಿ ಮತ್ತು ಮಗ ಅಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗದ ವಿಜಯನಗರ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ (47) ಅವರು ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಿದ್ದು, ಐದು ಮಂದಿಗೆ ಗಂಭೀರ ಗಾಯಗಳಾಗಿವೆ. ಇವರ ಪತ್ನಿ ಪಲ್ಲವಿ … Continued

ಗೂಗಲ್ ಮ್ಯಾಪ್ ನಂಬಿ ಕಾರು ಓಡಿಸಿದ ಪ್ರವಾಸಿಗರು : ತುಂಬಿ ಹರಿಯುತ್ತಿದ್ದ ಹೊಳೆಗೆ ಬಿದ್ದ ಕಾರು…!

ಹೈದರಾಬಾದಿನ ಪ್ರವಾಸಿ ತಂಡವು ಕೇರಳದ ಕೊಟ್ಟಾಯಂ ಜಿಲ್ಲೆಯ ಕುರುಪಂಥರಾ ಪ್ರದೇಶದಲ್ಲಿ ಗೂಗಲ್ ನಕ್ಷೆಗಳನ್ನು ಬಳಸಿಕೊಂಡು ದಾರಿ ಹುಡುಕಲು ಹೋಗಿ ಎಸ್‌ಯುವಿ ಕಾರನ್ನು ಹೊಳೆಗೆ ಹಾರಿಸಿದ ಘಟನೆ ನಡೆದಿರುವುದು ವರದಿಯಾಗಿದೆ. ಶನಿವಾರ ಬೆಳಗಿನ ಜಾವ ಮಹಿಳೆ ಸೇರಿದಂತೆ ನಾಲ್ವರು ಪ್ರವಾಸಿಗರು ಅಲಪ್ಪುಳಕ್ಕೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್‌ ಪ್ರವಾಸಿಗರಿಗೆ ಯಾವುದೇ ಗಾಯಗಳಾಗಿಲ್ಲ ಮತ್ತು ಸಮಯಕ್ಕೆ ಸರಿಯಾಗಿ … Continued

ಕುಮಟಾ : ತದಡಿ ಬಳಿ ಪ್ರವಾಸಿಗರ ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ ; 40 ಜನರ ರಕ್ಷಣೆ

ಕಾರವಾರ: ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಪ್ರವಾಸಿಗರ ಬೋಟ್ ಪಲ್ಟಿಯಾಗಿ ನೀರುಪಾಲಾಗುತಿದ್ದ 40 ಪ್ರವಾಸಿಗರನ್ನು ಕರಾವಳಿ ಕಾವಲು ಪಡೆ ಹಾಗೂ ಸ್ಥಳೀಯ ರಕ್ಷಣಾ ತಂಡ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (Kumata) ತಾಲೂಕಿನ ತದಡಿ ಗ್ರಾಮದ ಸಮೀಪ ಭಾನುವಾರ ನಡೆದಿದೆ ಎಂದು ವರದಿಯಾಗಿದೆ. ಪ್ರವಾಸಿ ಬೋಟ್ ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಪ್ರಯಾಣಿಸಿದ್ದಕ್ಕೆ ಈ … Continued

ಮೂರು ದಿನಗಳ ಕಾಲ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿಷೇಧ

ಚಿಕ್ಕಮಗಳೂರು : ಮೂರು ದಿನಗಳಕಾಲ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ನವೆಂಬರ್ 4 ಬೆಳಗ್ಗೆ 6ರಿಂದ ನವೆಂಬರ್ 6ರ ಬೆಳಗ್ಗೆ 10ರ ವರೆಗೆ ಮೂರು ದಿನಗಳ ಕಾಲ ಮುಳ್ಳಯ್ಯನಗಿರಿ ಹಾಗೂ ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿಯಲ್ಲಿ ದತ್ತಮಾಲಾ ಅಭಿಯಾನ ಹಿನ್ನೆಲೆಯಲ್ಲಿ, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, … Continued

ಶ್ರೀಲಂಕಾಕ್ಕೆ ತೆರಳುವ ಭಾರತ, ಇತರ 6 ರಾಷ್ಟ್ರಗಳ ಪ್ರಯಾಣಿಕರಿಗೆ ʼಉಚಿತ ಪ್ರವಾಸಿ ವೀಸಾʼ

ಕೊಲಂಬೊ: ಭಾರತ ಮತ್ತು ಇತರ ಆರು ದೇಶಗಳ ಪ್ರಯಾಣಿಕರಿಗೆ ಉಚಿತ ಪ್ರವಾಸಿ ವೀಸಾ ನೀಡುವ ನೀತಿಗೆ ಶ್ರೀಲಂಕಾ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ವಿದೇಶಾಂಗ ಸಚಿವ ಅಲಿ ಸಬ್ರಿ ಸೋಮವಾರ ಹೇಳಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿರುವ ದ್ವೀಪ ರಾಷ್ಟ್ರದ ಪ್ರವಾಸೋದ್ಯಮ ಕ್ಷೇತ್ರವನ್ನು ಮರುನಿರ್ಮಾಣ ಮಾಡುವ ಪ್ರಯತ್ನಗಳ ನಡುವೆ ಈ ಕ್ರಮ ಬಂದಿದೆ. ಇದನ್ನು ಪ್ರಾಯೋಗಿಕ ಯೋಜನೆಯಾಗಿ … Continued

ವೀಡಿಯೊ ..: ದೂಧ್‌ ಸಾಗರ ಜಲಪಾತ ನೋಡಲು ತೆರಳಿದವರಿಗೆ ಪೊಲೀಸರಿಂದ ಬಸ್ಕಿ ಶಿಕ್ಷೆ | ವೀಕ್ಷಿಸಿ

ಬೆಳಗಾವಿ : ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವಿನ ಗಡಿ ಭಾಗದಲ್ಲಿ ಪಶ್ಚಿಮ ಘಟ್ಟದ ದಟ್ಟ ಅರಣ್ಯದ ನಡುವೆ ಇರುವ ಮನಮೋಹಕ ದೂಧ್‌ ಸಾಗರ ಜಲಪಾತ ನೋಡಲು ಭಾನುವಾರ ತೆರಳಿದ ಪ್ರವಾಸಿಗರಿಗೆ ಗೋವಾ ಪೊಲೀಸರು ಶಾಕ್‌ ನೀಡಿದ್ದಾರೆ. ಪ್ರವಾಸಿಗರಿಗೆ ಬಸ್ಕಿ ಹೊಡೆಸಿ ಶಿಕ್ಷೆ ನೀಡಿ ಕಳುಹಿಸಿದ್ದಾರೆ. ಈ ಕುರಿತ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ … Continued

ಕೇವಲ 500 ರೂ. ಕೊಟ್ರೆ ಒಂದು ದಿನ ಕಾರಾಗೃಹದಲ್ಲಿದ್ದು ಜೈಲುವಾಸದ ಅನುಭವ ಪಡೆಯಲು ಬಯಸುವವರಿಗೆ ಕೊಡ್ತಾರೆ ಈ ಜೈಲಿನಲ್ಲಿ ಅವಕಾಶ

ಉತ್ತರಾಖಂಡ್‌ನ ಹಲ್ದ್ವಾನಿ ಆಡಳಿತವು ಜೈಲಿನಲ್ಲಿರುವ ಅನುಭವ ಪಡೆಯಲು ಬಯಸುವ ಉತ್ಸಾಹಿ ವ್ಯಕ್ತಿಗಳಿಗೆ ಅವಕಾಶ ನೀಡುವ ವಿಶಿಷ್ಟ ಉಪಕ್ರಮದೊಂದಿಗೆ ಬಂದಿದೆ. ಉತ್ತರಾಖಂಡದ ಹಲ್ದ್ವಾನಿಯಲ್ಲಿರುವ ಜೈಲು ಆಡಳಿತವು, ಜೈಲಿನಲ್ಲಿ ಕಳೆದ ಪ್ರತಿ ರಾತ್ರಿಗೆ ₹ 500 ಅಲ್ಪ ಬೆಲೆಗೆ ಜ್ಯೋತಿಷ್ಯದ “ಕೆಟ್ಟ ಕರ್ಮ” ವನ್ನು ತಪ್ಪಿಸಲು ವ್ಯಕ್ತಿಗಳಿಗೆ ಸಹಾಯ ಮಾಡುವ ವಿಶಿಷ್ಟ ಮಾರ್ಗವನ್ನು ಯೋಚಿಸಿದೆ. ನಿಜವಾದ “ಜೈಲು ಅನುಭವವನ್ನು” … Continued