ನದಿಗೆ ಬಿದ್ದ ಕುದುರೆ ರಕ್ಷಿಸಲು ಹೋಗಿ ಕುದುರೆ ಸಹಿತ ನೀರು ಪಾಲಾದ ಇಬ್ಬರು ಯುವಕರು

ಹೈದರಾಬಾದ್: ಹೃದಯ ವಿದ್ರಾವಕ ಘಟನೆಯೊಂದರಲ್ಲಿ, ಕಿಸ್ಮತ್‌ಪುರದಲ್ಲಿನ ತೆಲಂಗಾಣ ಹಾರ್ಸ್ ರೈಡಿಂಗ್ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನದ 19 ವರ್ಷದ ಕುದುರೆ ತರಬೇತುದಾರ ಅಶು ಸಿಂಗ್ ಮತ್ತು ಅವರ ಸಹೋದ್ಯೋಗಿ ಮೊಹಮ್ಮದ್ ಸೈಫ್ (20) ಅಕಾಡೆಮಿ ಕುದುರೆಯನ್ನು ರಕ್ಷಿಸಲು ಪ್ರಯತ್ನಿಸುವ ವೇಳೆಗ ನೀರು ಪಾಲಾಗಿದ್ದಾರೆ. ಬುಧವಾರ ತಡರಾತ್ರಿ ಹರ್ಕ್ಯುಲಸ್ ಎಂಬ ಕುದುರೆ ಈಸಾ ನದಿಗೆ ಕುದುರೆ ಜಾರಿ … Continued

ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಅತ್ಯಾಚಾರವೆಸಗಿದ್ದರು : ಮೊಕದ್ದಮೆಯ ವಿಚಾರಣೆಯಲ್ಲಿ ಲೇಖಕಿಯ ಆರೋಪ

ನ್ಯೂಯಾರ್ಕ್‌ : ಡೊನಾಲ್ಡ್ ಟ್ರಂಪ್ ಸುಮಾರು 30 ವರ್ಷಗಳ ಹಿಂದೆ ತನ್ನ ಮೇಲೆ ಹೇಗೆ ಅತ್ಯಾಚಾರವೆಸಗಿದ್ದಾರೆಂದು ಬರಹಗಾರರೊಬ್ಬರು ಬುಧವಾರ ಗ್ರಾಫಿಕ್ ಮೂಲಕ ನ್ಯಾಯಾಲಯದ ಮುಂದೆ ವಿವರವಾಗಿ ವಿವರಿಸಿದ್ದಾರೆ. ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಅತ್ಯಾಚಾರವೆಸಗಿದ್ದರಿಂದ ನಾನು ಇಲ್ಲಿದ್ದೇನೆ, ಮತ್ತು ನಾನು ಅದರ ಬಗ್ಗೆ ಬರೆದಾಗ, ಆತ ಅದು ಸುಳ್ಳು ಹೇಳಿದ್ದಾನೆ ಮತ್ತು ಅದು ಸಂಭವಿಸಲಿಲ್ಲ ಎಂದು … Continued

ಅಂಗಿತಾ ದತ್ತಾ ಪ್ರಕರಣ : ಭಾರತೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸಗೆ ಸಿಗದ ಮಧ್ಯಂತರ ಪರಿಹಾರ

ಗುವಾಹತಿ: ಅಸ್ಸಾಂ ಯೂತ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥೆ ಅಂಗಿತಾ ದತ್ತಾ ಅವರು ತಮ್ಮ ವಿರುದ್ಧ ಸಲ್ಲಿಸಿರುವ ಕಿರುಕುಳದ ದೂರುಗಳನ್ನು ರದ್ದುಗೊಳಿಸುವಂತೆ ಕೋರಿ ಭಾರತೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ ಅವರ ಸಲ್ಲಿಸಿದ್ದ ಮನವಿ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಗುವಾಹತಿ ಹೈಕೋರ್ಟ್ ಮಧ್ಯಂತರ ಪರಿಹಾರ ನೀಡಲಿಲ್ಲ. ನ್ಯಾಯಾಲಯವು ಮೇ 2 ರಂದು ವಿಚಾರಣೆಗೆ ಪಟ್ಟಿ ಮಾಡಿದೆ. … Continued

ಅಥಣಿಯಲ್ಲಿ ಸವದಿಗೆ ಬಿಗ್ ಶಾಕ್ : ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್‌ ನಾಯಕ…!

ಅಥಣಿ : ಅಥಣಿಯಲ್ಲಿ ಈ ಬಾರಿ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡು ಚುನಾವಣಾ ಕಣಕ್ಕೆ ಇಳಿದಿರುವ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಬಿಗ್ ಶಾಕ್ ಎದುರಾಗಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಭಾವಿ ಪಂಚಮಸಾಲಿ ಯುವನಾಯಕ ಧರೆಪ್ಪ ಠಕ್ಕಣ್ಣವರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ … Continued

ಪಿಸ್ತೂಲ್, ಪೆಟ್ರೋಲ್ ಬಾಂಬ್ ಹಿಡಿದುಕೊಂಡು ಶಾಲೆಗೆ ಪ್ರವೇಶಿಸಿದ ವ್ಯಕ್ತಿ : ವಿದ್ಯಾರ್ಥಿಗಳ ಒತ್ತೆಯಾಳು ಪ್ರಯತ್ನ ವಿಫಲ | ವೀಕ್ಷಿಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾದ ಶಾಲೆಯೊಂದಕ್ಕೆ ಪ್ರವೇಶಿಸಿದ ಬಂದೂಕು ಹಿಡಿದ ವ್ಯಕ್ತಿಯೊಬ್ಬ ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲು ಪ್ರಯತ್ನಿಸಿದ ಘಟನೆ ವರದಿಯಾಗಿದೆ. ಆದರೆ ನಂತರ ಪೊಲೀಸರು ಆತನ ಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಾಲ್ಡಾದ ಮುಚಿಯಾ ಚಂದ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ವ್ಯಕ್ತಿ ಗನ್ ಹಿಡಿದು ತರಗತಿಗೆ ಪ್ರವೇಶಿಸಿ, ಕುಳಿತು … Continued

ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಯುದ್ಧ ಪೀಡಿತ ಸುಡಾನ್‌ನಿಂದ ರಕ್ಷಿಸಲ್ಪಟ್ ಭಾರತೀಯರ ಮೊದಲ ಬ್ಯಾಚ್‌

ನವದೆಹಲಿ : ಸುಡಾನ್‌ನಿಂದ ರಕ್ಷಿಸಲ್ಪಟ್ಟ 360 ಭಾರತೀಯರನ್ನು ಹೊತ್ತ ವಾಣಿಜ್ಯ ವಿಮಾನವು ಬುಧವಾರ ಸಂಜೆ ನವದೆಹಲಿಯಲ್ಲಿ ಬಂದಿಳಿಯಿತು. ಸೌದಿ ಅರೇಬಿಯನ್ ಏರ್‌ಲೈನ್ಸ್ ವಿಮಾನವು ಜೆಡ್ಡಾ ಕಿಂಗ್ ಅಬ್ದುಲ್ ಅಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1:56 ಕ್ಕೆ ಹೊರಟು ರಾತ್ರಿ 9 ಗಂಟೆಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿತು. ಸುಡಾನ್ ಸೈನ್ಯ ಮತ್ತು … Continued

ಸಿಇಟಿ-2023 : ವಿಶೇಷ ಕ್ಯಾಟಗರಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಸಲ್ಲಿಕೆ ವೇಳಾಪಟ್ಟಿಯಲ್ಲಿ ಬದಲಾವಣೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) ಸಿಇಟಿ-2023ರ ವಿಶೇಷ ಕ್ಯಾಟಗರಿಗಳ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಸಲ್ಲಿಸುವ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನೂ ಪ್ರಕಟಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಮೇ 10ರಂದು ನಡೆಸುತ್ತಿರುವುದರಿಂದ ಹಾಗೂ ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟಿಸುವ ಹಿನ್ನೆಲೆಯಲ್ಲಿ … Continued

ಬೆಳಗಾವಿ ದಕ್ಷಿಣ ರೋಟರಿ ಕ್ಲಬ್‌ ನಿಂದ 28 ದಿನದ ಮಗುವಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆ

ಬೆಳಗಾವಿ : ಬೆಳಗಾವಿ ದಕ್ಷಿಣ ರೋಟರಿ ಕ್ಲಬ್ ವು 28 ದಿನದ ಮಗುವಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡುವ ಮೂಲಕ ಪ್ರಶಂಸೆಗೆ ಪಾತ್ರವಾಗಿದೆ. ಬೆಳಗಾವಿ ದಕ್ಷಿಣ ರೋಟರಿ ಕ್ಲಬ್ ಚಂದಗಡದ ನಡವಾಡೆ ಗ್ರಾಮದ ತನುಜಾ ಕುಂಡೇಕರ ಅವರ 28 ​​ದಿನದ ಮಗುವಿಗೆ ಜೀವದಾನದ ಜಾಗತಿಕ ಅನುದಾನ ಯೋಜನೆಯಡಿ ಉಚಿತ ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿದೆ. … Continued

ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ 5 ದಿನ ಭಾರೀ ಮಳೆ ಮುನ್ಸೂಚನೆ

ನವದೆಹಲಿ: ತಮಿಳುನಾಡಿನ ಕರಾವಳಿಯಲ್ಲಿ ಹವಾಮಾನ ಬದಲಾವಣೆಯಿಂದಾಗಿ ಮುಂದಿನ ಐದು ದಿನ ಕರ್ನಾಟಕ ಸೇರಿ ಹಲವಾರು ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ದೇಶದ ಕೇಂದ್ರ ಹವಾಮಾನ ಮುನ್ಸೂಚನೆ ಸಂಸ್ಥೆ ಭಾರತ ಹವಾಮಾನ ಇಲಾಖೆ (IMD) ಬುಧವಾರ ಮುನ್ಸೂಚನೆ ನೀಡಿದೆ. ದೇಶದ ಮಧ್ಯ, ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದ್ದರೆ, ದಕ್ಷಿಣ ಮತ್ತು ಈಶಾನ್ಯ ಭಾಗಗಳಲ್ಲಿ … Continued

ಮೈಸೂರಿನ ಮೈಲಾರಿ ಹೋಟೆಲ್​​ನಲ್ಲಿ ದೋಸೆ ಮಾಡಿದ ಪ್ರಿಯಾಂಕಾ ಗಾಂಧಿ; ನಂತ್ರ ಕಾಂಗ್ರೆಸ್​ ನಾಯಕರೊಂದಿಗೆ ಉಪಹಾರ ಸೇವನೆ | ವೀಕ್ಷಿಸಿ

ಮೈಸೂರು: ಮೈಸೂರು ನಗರದ 80 ವರ್ಷ ಹಳೆಯ ಮೈಲಾರಿ ದೋಸೆ ಹೋಟೆಲ್‌ಗೆ ಭೇಟಿ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು (Priyanka Gandhi) ತಾವೇ ಕಾವಲಿ ಮೇಲೆ ದೋಸೆ ಹೊಯ್ದಿದ್ದಾರೆ(makes dosa). ದೋಸೆ ಮಾಡಿದ ನಂತರ ತಾವೂ ಸವಿದು, ಕಾಂಗ್ರೆಸ್​ ನಾಯಕರಿಗೂ ನೀಡಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ … Continued