ವೀಡಿಯೊ..| ಕೊಡೈಕೆನಾಲ್​​​ನಲ್ಲಿ ಕರ್ನಾಟಕದ ಪ್ರವಾಸಿಗರ ₹500 ನೋಟುಗಳ ಬಂಡಲ್ ಗಳನ್ನೇ ಕದ್ದೊಯ್ದ ಕೋತಿ ಮುಂದೆ ಮಾಡಿದ್ದೇನು ಗೊತ್ತೆ..?

ಕೊಡೈಕೆನಾಲ್: ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡೈಕೆನಾಲ್‌ನ ಗುಣ ಗುಹೆಗಳ ಬಳಿ ವ್ಯಕ್ತಿಯೊಬ್ಬರಿಂದ 500 ರೂಪಾಯಿ ನೋಟುಗಳ ಬಂಡಲ್ ಅನ್ನು ಕೋತಿಯೊಂದು ಕದ್ದೊಯ್ದಿದೆ. ನಂತರ ಮರದ ಮೇಲೆ ಏರಿದ ಕೋತಿ ಅಲ್ಲಿಂದ ನೋಟುಗಳನ್ನು ಕೆಳಕ್ಕೆ ಎಸೆದಿದೆ. 500 ರೂಪಾಯಿ ನೋಟುಗಳ ಅನೇಕ ಬಂಡಲ್‌ಗಳನ್ನು ಒಯ್ದಿದ್ದ ಕರ್ನಾಟಕದ ಪ್ರವಾಸಿಗರಿಂದ ಮಂಗ ಹಣವನ್ನು ಕಸಿದುಕೊಂಡಿದೆ. ಮಂಗ ಅನಿರೀಕ್ಷಿತವಾಗಿ ಪ್ರತ್ಯಕ್ಷವಾಯಿತು. … Continued

ಎರಡು ಹಂತಗಳಲ್ಲಿ ಜನಗಣತಿ ; ಜನಗಣತಿಯ ದಿನಾಂಕ ಪ್ರಕಟಿಸಿದ ಕೇಂದ್ರ

ನವದೆಹಲಿ: 2011ರ ನಂತರ ಭಾರತದಲ್ಲಿ ಜನಗಣತಿ ನಡೆಯಲಿದ್ದು, ಇದನ್ನು ಕ್ರಮವಾಗಿ ಅಕ್ಟೋಬರ್ 1, 2026 ಮತ್ತು ಮಾರ್ಚ್ 1, 2027 ರಂದು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ಪ್ರಕಟಿಸಿದೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಎಂಬುದು ‘ಸಾಮಾನ್ಯ ನಾಗರಿಕರ’ ಹೆಸರು, ದಿನಾಂಕ ಮತ್ತು ಜನ್ಮ ಸ್ಥಳ, ರಾಷ್ಟ್ರೀಯತೆ, ಉದ್ಯೋಗ, ವಿಳಾಸ, … Continued

ವೀಡಿಯೊ.| ಸೈಪ್ರಸ್‌ ಭೇಟಿ ವೇಳೆ ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿ ಗೌರವ ಸೂಚಿಸಿದ ಅಲ್ಲಿನ ನಾಯಕಿ…!

ನವದೆಹಲಿ: ಸೈಪ್ರಸ್ ದೇಶದ ನಿಕೋಸಿಯಾ ಕೌನ್ಸಿಲ್ ಸದಸ್ಯೆ ಮೈಕೆಲಾ ಕೈಥ್ರಿಯೋಟಿ ಮ್ಲಾಪಾ ಅವರು ಗೌರವ ಸೂಚಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಐತಿಹಾಸಿಕ ನಿಕೋಸಿಯಾ ಕೇಂದ್ರದಲ್ಲಿ ಮ್ಲಾಪಾ ಅವರು ಪ್ರಧಾನಿ ಮೋದಿಯವರನ್ನು ಸ್ವಾಗತಿಸುತ್ತಿದ್ದರು ಈ ವೇಳೆ ಅವರು ಪ್ರಧಾನಿ ಮೋದಿ ಅವರ ಪಾದಕ್ಕೆರಗಿ ನಮಸ್ಕರಿಸಿದ್ದಾರೆ. ಇದನ್ನು ಹೆಚ್ಚಾಗಿ ಭಾರತೀಯ ಸಂಪ್ರದಾಯದಲ್ಲಿ ಅನುಸರಿಸುತ್ತಾರೆ. … Continued

ಅಪರೂಪದ ಸಾಧನೆ | ಟಿ20 ಪಂದ್ಯದಲ್ಲಿ ಸತತ 5 ಎಸೆತಗಳಲ್ಲಿ 5 ವಿಕೆಟ್ ಪಡೆದ ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ದಿಗ್ವೇಶ್ ರಾಥಿ-ವೀಡಿಯೊ ವೀಕ್ಷಿಸಿ

ಐಪಿಎಲ್ 2025 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಪರ ಆಡಿದ್ದ ಲೆಗ್-ಸ್ಪಿನ್ನರ್ ದಿಗ್ವೇಶ ರಾಥಿ, ಅಪರೂಪದ ಬೌಲಿಂಗ್ ಸಾಧನೆಗಾಗಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ, 24 ವರ್ಷದ ಆಟಗಾರ ಸ್ಥಳೀಯ ಟಿ20 ಲೀಗ್ ಪಂದ್ಯವೊಂದರಲ್ಲಿ ಸತತ ಐದು ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಈ … Continued

ಅಂಡಮಾನ್ ಸಮುದ್ರದಲ್ಲಿ ಪ್ರಮುಖ ತೈಲ ನಿಕ್ಷೇಪದ ಶೋಧದ ಸನಿಹದಲ್ಲಿ ಭಾರತ ; ದೇಶಕ್ಕೆ ತೈಲ ಜಾಕ್‌ಪಾಟ್..?

ನವದೆಹಲಿ: ಅಂಡಮಾನ್ ಸಮುದ್ರದಲ್ಲಿ ಮಹತ್ವದ ತೈಲ ನಿಕ್ಷೇಪ ಪತ್ತೆಯಾಗುವ ಸಾಧ್ಯತೆಗಳ ಬಗ್ಗೆ ಅಧಿಕಾರಿಗಳು ಸೂಚಿಸುತ್ತಿದ್ದು, ಭಾರತಕ್ಕೆ ಒಂದು ಪ್ರಮುಖ ಪ್ರಗತಿಯ ನಿರೀಕ್ಷೆಯಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ ಸಿಂಗ್ ಪುರಿ, ಈ ಸಂಭಾವ್ಯ ಶೋಧ ಮತ್ತು ಗಯಾನಾದಲ್ಲಿ ಪತ್ತೆಯಾದ ಬೃಹತ್ ತೈಲ ನಿಕ್ಷೇಪಗಳ ನಡುವೆ ಹೋಲಿಕೆಗಳನ್ನು ಮಾಡಿದ್ದಾರೆ, ಅದು ಪ್ರಸ್ತುತ ಸುಮಾರು … Continued

ಭಾರಿ ಮಳೆ : ಜೂನ್ 17ರಂದು ಉತ್ತರ ಕನ್ನಡ ಜಿಲ್ಲೆಯ 8 ತಾಲೂಕಿನ ಅಂಗನವಾಡಿ, ಪ್ರಾಥಮಿಕ- ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದನ್ನು ಪರಿಗಣಿಸಿ ಉತ್ತರ ಕನ್ನಡ ಜಿಲ್ಲೆಯ ಎಂಟು ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಜೂನ್ 17ರಂದು ರಜೆ ಘೋಷಿಸಲಾಗಿದೆ. ಜೂನ್ 17ರವರೆಗೆ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ … Continued

ನೇರ ಪ್ರಸಾರದ ವೇಳೆ ಇರಾನ್‌ ಸರ್ಕಾರಿ ಟಿವಿ ಕೇಂದ್ರದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ; ಅರ್ಧಕ್ಕೇ ಹೊರನಡೆದ ನಿರೂಪಕಿ ; ದೃಶ್ಯ ವೀಡಿಯೊದಲ್ಲಿ ಸೆರೆ

ಇರಾನ್‌ನ ಬಹುತೇಕ ಭಾಗಗಳಲ್ಲಿ, ವಿಶೇಷವಾಗಿ ಅದರ ರಾಜಧಾನಿ ತೆಹ್ರಾನ್‌ನಲ್ಲಿ ಆಕಾಶದಿಂದ ಇಸ್ರೇಲ್‌ ಕ್ಷಿಪಣಿಗಳ ಮಳೆ ಗೈಯುತ್ತಿದೆ. ಈಗಾಗಲೇ ಇಸ್ರೇಲ್ ತಾನು ಇರಾನ್‌ ಮೇಲೆ ʼಸಂಪೂರ್ಣ ವಾಯು ಪ್ರಾಬಲ್ಯʼವನ್ನು ಹೊಂದಿರುವುದಾಗಿ ಹೇಳಿಕೊಂಡಿದೆ. ಎರಡು ಪ್ರಮುಖ ಪ್ರತಿಸ್ಪರ್ಧಿಗಳ ನಡುವಿನ ಸಂಘರ್ಷವು ಘಾತೀಯವಾಗಿ ಬೆಳೆಯುತ್ತಿದೆ. ಈಗ ಇಸ್ರೇಲಿನ ಅಂತಹ ಒಂದು ವಾಯು ದಾಳಿಯಲ್ಲಿ, ಇಸ್ರೇಲಿ ಕ್ಷಿಪಣಿಯು ನೇರ ಪ್ರಸಾರ ಕಾರ್ಯಕ್ರಮ … Continued

ವೀಡಿಯೊ | ನಾವು ಭಾರತದ ಐಪಿಎಲ್ ಫ್ಲಡ್‌ಲೈಟ್‌ ಆಫ್‌ ಮಾಡಿದ್ದೇವೆ : ವಿಚಿತ್ರ ಹೇಳಿಕೆಯಿಂದ ನಗೆಪಾಟಲಿಗೀಡಾದ ಪಾಕ್ ರಕ್ಷಣಾ ಸಚಿವ-ವೀಕ್ಷಿಸಿ

ನವದೆಹಲಿ: ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ತಮ್ಮ ವಿಲಕ್ಷಣ ಹೇಳಿಕೆಗಳಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ “ಐಪಿಎಲ್ ಫ್ಲಡ್‌ಲೈಟ್‌ಗಳನ್ನು ಪಾಕಿಸ್ತಾನದವರು ಹ್ಯಾಕಿಂಗ್ ಮಾಡಿದ್ದರು” ಎಂದು ಹೇಳುವ ಮೂಲಕ ಮತ್ತೊಮ್ಮೆ ನಗೆಪಾಟಲಿಗೀಡಾಗಿದ್ದಾರೆ. ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿದ ಖವಾಜಾ ಆಸಿಫ್ ಅವರು , ತಮ್ಮ ದೇಶದ “ಸೈಬರ್ ವಾರಿಯರ್ಸ್” ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ … Continued

ಬೆಂಗಳೂರು ಮಹಿಳೆಗೆ ಬ್ಲ್ಯಾಕ್‌ ಮೇಲ್, ಅತ್ಯಾಚಾರ ಯತ್ನ: ಕೇರಳ ಅರ್ಚಕನ ಬಂಧನ

ಬೆಂಗಳೂರು: ಮಹಿಳೆಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಕೇರಳದ ಅರ್ಚಕರೊಬ್ಬರನ್ನು ಬಂಧಿಸಿದ್ದಾರೆ ಮತ್ತು ತಲೆಮರೆಸಿಕೊಂಡಿರುವ ಇನ್ನೊಬ್ಬ ಅರ್ಚಕನಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಬಂಧಿತ ವ್ಯಕ್ತಿಯನ್ನು ಕೇರಳದಲ್ಲಿರುವ ಪೆರಿಂಗೊಟ್ಟುಕರ ದೇವಸ್ಥಾನದ ಅರುಣ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಾಲಯದ ಪ್ರಧಾನ ಅರ್ಚಕ ಉನ್ನಿ ದಾಮೋದರನ್‌ … Continued

ಇಸ್ರೇಲ್-ಇರಾನ್ ಯುದ್ಧ ಉಲ್ಬಣ | ಭೂಗತ ಬಂಕರ್‌ನಲ್ಲಿ ಅಡಗಿದ ಇರಾನ್‌ ಸರ್ವೋಚ್ಚ ನಾಯಕ ಖಮೇನಿ-ಕುಟುಂಬ : ವರದಿ

ಇಸ್ರೇಲ್‌- ಇರಾನ್‌ನ ಸಂಘರ್ಷದ ಮಧ್ಯೆ ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಈಶಾನ್ಯ ತೆಹ್ರಾನ್‌ನಲ್ಲಿರುವ ಭೂಗತ ಬಂಕರ್‌ಗೆ ಸ್ಥಳಾಂತರಿಸಲಾಗಿದೆ ಎಂದು ಇರಾನ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ. ಖಮೇನಿ ಅವರ ಮಗ ಮೊಜ್ತಬಾ ಸೇರಿದಂತೆ ಅವರ ಕುಟುಂಬದ ಎಲ್ಲಾ ಸದಸ್ಯರು ಸಹ ಅವರೊಂದಿಗೆ ಇದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ. ವರದಿಯ ಪ್ರಕಾರ, … Continued