ಶಿರಸಿ ; ಪಡಿತರ ಅಕ್ಕಿ ಅಕ್ರಮ ಸಾಗಾಟ ; ಲಾರಿ ಸಮೇತ 473 ಚೀಲ ಅಕ್ಕಿ ವಶ

ಶಿರಸಿ: ಪಡಿತರ ವ್ಯವಸ್ಥೆಯಡಿ ಜನರಿಗೆ ವಿತರಿಸಬೇಕಾದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ  ಭಾರಿ ಪ್ರಮಾಣದ ಪಡಿತರ ಅಕ್ಕಿಯನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನೀಲೇಕಣಿ ಬಳಿ ವಶಪಡಿಸಿಕೊಳ್ಳಲಾಗಿದೆ ಎಂದುವರದಿಯಾಗಿದೆ. ಪಡಿತರ ಅಕ್ಕಿಯ ಅಕ್ರಮ ಸಾಗಾಟದ ಜಾಲದ ವಿರುದ್ಧ ಶಿರಸಿ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ  ಸಿದ್ದಾಪುರದಿಂದ ಮಹಾರಾಷ್ಟ್ರದ … Continued

ನಿಮ್ಗೆ ‘ಸಹಾ’ ಸಿನಿಮಾ ಇಷ್ಟವಾಗ್ಲಿಲ್ಲ ಅಂದ್ರೆ ಸರ್ಕಲ್‌ನಲ್ಲಿ ತಲೆ ಬೋಳಿಸಿಕೊಳ್ತೇನೆ: ಪ್ರೇಕ್ಷಕರಿಗೆ ನಟಿಯ ಚಾಲೆಂಜ್

ಹೈದರಾಬಾದ್: ‘ಸಹಾ’ (Sahaa) ಚಿತ್ರದ ಬಿಡುಗಡೆಗೆ ಮುನ್ನ ಚಿತ್ರದ ನಾಯಕಿ ನಟಿ ಶ್ವೇತಾ ಲಕ್ಷ್ಮಣನ್‌ ನೀಡಿರುವ ಹೇಳಿಕೆ ಇದೀಗ ಸಿನಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚಿತ್ರದ ಗುಣಮಟ್ಟದ ಬಗ್ಗೆ ತಮ್ಮ ಅಪಾರ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುವುದರ ಜೊತೆಗೆ ಪ್ರೇಕ್ಷಕರಿಗೆ ನೇರ ಸವಾಲು ಹಾಕಿದರು. “ನಮ್ಮ ಸಿನಿಮಾ ನೋಡಿ ನಿಮಗೆ ನಿರಾಶೆಯಾಗಿದೆಯೆಂದು … Continued

ಬೋರ್‌ವೆಲ್ ಮೋಟಾರ್‌ ಆನ್‌ ಮಾಡುತ್ತಿದ್ದಂತೆ ನಾಡ ಬಾಂಬ್ ಸ್ಫೋಟ ; ಕುಕೃತ್ಯದ ಶಂಕೆ

ತುಮಕೂರು: ರೈತರೊಬ್ಬರ ಹೊಲದಲ್ಲಿ ಬೋರ್‌ವೆಲ್ ಮೋಟಾರ್ ಆನ್ ಮಾಡುತ್ತಿದ್ದಂತೆ ನಾಡ ಬಾಂಬ್ ಸ್ಫೋಟಗೊಂಡ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕನಿಕಲಬಂಡೆ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮತ್ತೊಂದು ಜೀವಂತ ನಾಡ ಬಾಂಬ್ ಸಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಶುಕ್ರವಾರ ನಡೆದಿದ್ದು, ರೈತ ಗಿರಿಯಪ್ಪ ಎಂಬವರು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ … Continued

ಅಮೆರಿಕ-ವೆನಿಜುವೆಲಾ ಮಧ್ಯೆ ವಿಶ್ವದ ಅತಿದೊಡ್ಡ ತೈಲ ಒಪ್ಪಂದ : ಡೊನಾಲ್ಡ್‌ ಟ್ರಂಪ್‌ ಘೋಷಣೆ ; ಏನಿದು ಒಪ್ಪಂದ ?

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ವೆನೆಜುವೆಲಾ ಜತೆಗೆ ಐತಿಹಾಸಿಕ ಹಾಗೂ ವಿಶ್ವದ ಅತಿದೊಡ್ಡ ತೈಲ ಒಪ್ಪಂದಕ್ಕೆ ತಮ್ಮ ಆಡಳಿತ ಸಹಿ ಹಾಕಿರುವುದಾಗಿ ಪ್ರಕಟಿಸಿದ್ದಾರೆ. ಈ ಒಪ್ಪಂದವು ಕಾರ್ಯರೂಪಕ್ಕೆ ಬಂದರೆ, ದಕ್ಷಿಣ ಅಮೆರಿಕದ ರಾಷ್ಟ್ರವಾದ ವೆನೆಜುವೆಲಾದಲ್ಲಿ ಇನ್ನೂ ಸಂಪೂರ್ಣವಾಗಿ ಬಳಸಲಾಗದ ಅಪಾರ ಪ್ರಮಾಣದ ತೈಲ ಸಂಪತ್ತಿಗೆ ಅಮೆರಿಕ ಪ್ರವೇಶ ಪಡೆಯಲಿದ್ದು, ಉತ್ಪಾದನಾ ವೆಚ್ಚದ … Continued

ಸಿದ್ದಾಪುರ : ಸಾಹಿತಿ-ಪತ್ರಕರ್ತ ಗಂಗಾಧರ ಕೊಳಗಿಗೆ ಎಂ.ಎಸ್. ಡಿಸೋಜಾ ಸದ್ಭಾವನಾ ಪ್ರಶಸ್ತಿ

ಸಿದ್ದಾಪುರ : ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ದಿವಂಗತ ಎಂ.ಎಸ್. ಡಿಸೋಜಾ ಅವರ ಸ್ಮರಣಾರ್ಥ ಕೊಡಮಾಡುವ 6ನೇ ವರ್ಷದ ‘ಎಂ.ಎಸ್. ಡಿಸೋಜಾ ಉತ್ತಮ ಶಿಕ್ಷಕ ಪ್ರಶಸ್ತಿ’ ಪ್ರದಾನ ಹಾಗೂ ಎಂ.ಎಸ್. ಡಿಸೋಜಾ ಸದ್ಭಾವನಾ ಪ್ರಶಸ್ತಿಪ್ರದಾನ ಕಾರ್ಯಕ್ರಮ ಆಗಸ್ಟ್ 30ರಂದು (ಭಾನುವಾರ) ಮಧ್ಯಾಹ್ನ 3 ಗಂಟೆಗೆ ಸಿದ್ದಾಪುರದ ಬಾಲ ಭವನದಲ್ಲಿ ನಡೆಯಲಿದೆ. … Continued

ಮೈ ಜುಂ ಎನ್ನುವ ವಿಡಿಯೋ : ಸುತ್ತಲಿನ ಕಟ್ಟಡಗಳನ್ನು ನುಂಗಿದ ನೇಪಾಳದ ರಕ್ಕಸ ಪ್ರವಾಹ ; ಆದ್ರೆ ಅಚಲವಾಗಿ ನಿಂತ ಒಂದು ಮನೆ…!

ಕಠ್ಮಂಡು: ಪ್ರಕೃತಿ ವಿಕೋಪಗಳು ಸಾಮಾನ್ಯವಾಗಿ ಕಣ್ಣೀರು, ನೋವು ಮತ್ತು ವಿನಾಶದ ಕಥೆಗಳನ್ನೇ ಬಿಟ್ಟುಹೋಗುತ್ತವೆ. ಆದರೆ ಕೆಲವೊಮ್ಮೆ ಅವುಗಳ ಭೀಕರತೆಯ ಮಧ್ಯೆಯೇ ಬದುಕಿನ ಮೇಲಿನ ನಂಬಿಕೆಯನ್ನು ಮತ್ತೊಮ್ಮೆ ಗಟ್ಟಿಗೊಳಿಸುವ ಅಚ್ಚರಿಯ ಕಥೆಗಳೂ ಹೊರಹೊಮ್ಮುತ್ತವೆ. ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್‌ ಪ್ರವಾಹದ ದುರಂತದ ನಡುವೆ ಅಂತಹದ್ದೇ ಒಂದು ಪವಾಡದ ರೀತಿಯಲ್ಲಿ ಪಾರಾದವರ ಕಥೆ ಇದೀಗ ಜಗತ್ತಿನಾದ್ಯಂತ ಜನರ ಹೃದಯ … Continued

ನೇಪಾಳದ ಭೀಕರ ಪ್ರವಾಹ : ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯಸ್ಥ ನಾಪತ್ತೆ

ನವದೆಹಲಿ/ಬೆಂಗಳೂರು: ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಠಾತ್‌ ಪ್ರವಾಹ (flash floods) ದುರಂತದ ಬಳಿಕ, ವೈಯಕ್ತಿಕ ಪ್ರವಾಸದಲ್ಲಿದ್ದ ಇನ್ಫೋಸಿಸ್ ಅಂಗಸಂಸ್ಥೆ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯಸ್ಥ ಲಕ್ಷ್ ಗೋಪಿಸೆಟ್ಟಿ ಅವರ ಜೊತೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ ಎಂದು ಇನ್ಫೋಸಿಸ್ ಶುಕ್ರವಾರ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಇನ್ಫೋಸಿಸ್, “ನಮ್ಮ ಸಹೋದ್ಯೋಗಿ ಲಕ್ಷ್ ಗೋಪಿಸೆಟ್ಟಿ … Continued

ನೇಪಾಳದ ಭೀಕರ ಪ್ರವಾಹಕ್ಕೂ ಮುನ್ನವೇ ಸಿಕ್ಕಿತ್ತು ಎಚ್ಚರಿಕೆಯ ಗಂಟೆ : 5 ತಿಂಗಳ ಹಿಂದೆ 2 ವರದಿಗಳು ನೀಡಿದ್ದ ಎಚ್ಚರಿಕೆ ಏನು ಗೊತ್ತೆ ?

ನವದೆಹಲಿ: ಹಿಂದೂ ಕುಶ್ ಹಿಮಾಲಯ (HKH) ಪ್ರದೇಶದಲ್ಲಿ ಹಿಮನದಿಗಳು ಕರಗುತ್ತಿರುವ ವೇಗ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಹಿಮನದಿಗಳ ಹಿಮ ಕರಗುವಿಕೆಯ ಪ್ರಮಾಣ ದುಪ್ಪಟ್ಟಾಗಿದೆ ಎಂದು ಅಂತರ್‌ ಸರ್ಕಾರಿ ಜ್ಞಾನ ಮತ್ತು ಕಲಿಕಾ ಕೇಂದ್ರವಾದ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟನ್ ಡೆವಲಪ್‌ಮೆಂಟ್ (ICIMOD) ಐದು ತಿಂಗಳ ಹಿಂದೆಯೇ ತನ್ನ ಎರಡು ವರದಿಗಳಲ್ಲಿ ಎಚ್ಚರಿಸಿತ್ತು. ಕಠ್ಮಂಡುವಿನಲ್ಲಿ ಕೇಂದ್ರ … Continued

ʼನ್ಯಾಶನಲ್‌ ಕಾನ್ಫರೆನ್ಸ್ʼನಲ್ಲಿ ಭಿನ್ನಮತ ಸ್ಫೋಟ; ಪಕ್ಷ-ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ರೂಹುಲ್ಲಾ ಮೆಹ್ದಿ ನಿರ್ಧಾರ

ಶ್ರೀನಗರ: ಶ್ರೀನಗರ ಲೋಕಸಭಾ ಕ್ಷೇತ್ರದ ನ್ಯಾಶನಲ್‌ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಸಂಸದ ಆಗಾ ರೂಹುಲ್ಲಾ ಮೆಹ್ದಿ ಅವರು ಲೋಕಸಭಾ ಸದಸ್ಯತ್ವ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಶುಕ್ರವಾರ ಪ್ರಕಟಿಸಿದ್ದಾರೆ. ಪಕ್ಷದ ನಾಯಕತ್ವದ ಜೊತೆಗೆ ಉಂಟಾಗಿರುವ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇ ಈ ನಿರ್ಧಾರಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಆಗಾ … Continued

ನಟ ಸೈಫ್ ಅಲಿ ಖಾನಗೆ ಚಾಕು ಇರಿತದ ಪ್ರಕರಣ: ತಪ್ಪೊಪ್ಪಿಗೆ ಮುಂದಾದ ಆರೋಪಿ, ಶಿಕ್ಷೆಯಲ್ಲಿ ವಿನಾಯಿತಿಗೆ ಮನವಿ

ಮುಂಬೈ: 2025ರ ಜನವರಿಯಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಬಾಂದ್ರಾ ನಿವಾಸಕ್ಕೆ ನುಗ್ಗಿ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಾಂಗ್ಲಾದೇಶ ಮೂಲದ ಮೊಹಮ್ಮದ್ ಶರೀಫುಲ್ ಇಸ್ಲಾಂ, ಇದೀಗ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಳ್ಳಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಬಂಧನದ ಬಳಿಕ ನ್ಯಾಯಾಂಗ ಬಂಧನದಲ್ಲಿರುವ ಶರೀಫುಲ್ ಇಸ್ಲಾಂ, ತನ್ನ ವಿರುದ್ಧದ ಆರೋಪಗಳನ್ನು ಒಪ್ಪಿಕೊಳ್ಳಲು … Continued