ನೇತಾಜಿ ಸುಭಾಷಚಂದ್ರ ಬೋಸ್‌ ವಿರುದ್ಧ ಹೇಳಿಕೆ : ಬಿಜೆಪಿ ಸಂಸದನಿಗೆ ನೀಡಿದ್ದ ‘ಬಂಗ ವಿಭೂಷಣ’ ಪ್ರಶಸ್ತಿ ಹಿಂಪಡೆದ ಬಂಗಾಳ ಸರ್ಕಾರ

ಕೋಲ್ಕತ್ತಾ : ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ನಾಗೇಂದ್ರನಾಥ ರೇ ಅಲಿಯಾಸ್ ಅನಂತ ಮಹಾರಾಜ ಅವರಿಗೆ ಪಶ್ಚಿಮ ಬಂಗಾಳ ಸರ್ಕಾರ ನೀಡಿದ್ದ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಬಂಗ ವಿಭೂಷಣ’ವನ್ನು ಗುರುವಾರ ಹಿಂಪಡೆದು ರದ್ದುಪಡಿಸಲಾಗಿದೆ. ಪಶ್ಚಿಮ ಬಂಗಾಳದ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ … Continued

1917ರಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ₹35 ಸಾವಿರ ಸಾಲ ನೀಡಿದ್ದ ಮಧ್ಯಪ್ರದೇಶ ಕುಟುಂಬ :109 ವರ್ಷದ ಹಿಂದಿನ ಸಾಲಕ್ಕೆ ಬ್ರಿಟನ್‌ನಿಂದ ಬಂತು ಸ್ಪಂದನೆ !

ಸೀಹೋರ್: 109 ವರ್ಷಗಳ ಹಿಂದೆ ಬ್ರಿಟಿಷ್ ಸರ್ಕಾರದ ಇಂಡಿಯನ್ ವಾರ್ ಲೋನ್ ಯೋಜನೆಯಲ್ಲಿ ₹35,000 ಹೂಡಿಕೆ ಮಾಡಿದ್ದ ಕುಟುಂಬವೊಂದರ ಕೈಯಲ್ಲಿ ಆ ವ್ಯವಹಾರದ ಮೂಲ ಪ್ರಮಾಣಪತ್ರ ಇಂದಿಗೂ ಉಳಿದಿದೆ. ಆದರೆ ನಂತರದ ಆ ಹಣದ ವಿಚಾರ ಏನಾಯಿತು ಎಂಬುದು ಮಾತ್ರ ಇಂದಿಗೂ ನಿಗೂಢವಾಗಿದೆ. ಮಧ್ಯಪ್ರದೇಶದ ಸೀಹೋರ್ ನಿವಾಸಿ 63 ವರ್ಷದ ವಿವೇಕ ರುಥಿಯಾ ಅವರು ತಮ್ಮ … Continued

ನಾಂದೇಡ್‌ನಲ್ಲಿ ಅಕಾಲಿ ದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಕಿರ್ಪಾನ್‌ನಿಂದ ದಾಳಿ : ಆಸ್ಪತ್ರೆಗೆ ದಾಖಲು

ನಾಂದೇಡ್: ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಅಧ್ಯಕ್ಷ ಹಾಗೂ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಅವರ ಮೇಲೆ ಮಹಾರಾಷ್ಟ್ರದ ನಾಂದೇಡ್‌ನ ಗುರುದ್ವಾರದಲ್ಲಿ ಗುರುವಾರ ದಾಳಿ ನಡೆದಿದೆ. ತೀಕ್ಷ್ಣವಾದ ಆಯುಧದಿಂದ ನಡೆದ ದಾಳಿಯಲ್ಲಿ ಬಾದಲ್ ಅವರ ಕೈಗೆ ಗಾಯವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಂದೇಡ್ … Continued

6 ಸ್ನೇಹಿತರು…ಹುಚ್ಚು ಕನಸು..ಕಾರು ಮಾರಾಟ..₹1.87 ಲಕ್ಷ: ಟೆಕ್‌ ದೈತ್ಯ ಎಚ್‌ಸಿಎಲ್‌ ಕಟ್ಟಿದ ರೋಚಕ ಕಥೆ ಬಿಚ್ಚಿಟ್ಟ ಸಹ-ಸಂಸ್ಥಾಪಕ

ನವದೆಹಲಿ : 1976ರಲ್ಲಿ ಭಾರತದಲ್ಲಿ ಕಂಪ್ಯೂಟರ್ ಕಂಪನಿ ಆರಂಭಿಸುವುದು ಸುಲಭದ ನಿರ್ಧಾರವಾಗಿರಲಿಲ್ಲ. ಕಂಪ್ಯೂಟರ್‌ಗಳು ಅಂದಿನ ಬಹುತೇಕ ಭಾರತೀಯರಿಗೆ ಹೊಸತಾಗಿದ್ದವು. ದೇಶೀಯವಾಗಿ ತಯಾರಾಗುವ ಕಂಪ್ಯೂಟರ್‌ಗಳಿಗೆ ಮಾರುಕಟ್ಟೆಯೂ ಇನ್ನಷ್ಟೇ ರೂಪುಗೊಳ್ಳುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಆರು ಯುವ ವೃತ್ತಿಪರರು ದೊಡ್ಡ ಕನಸು ಕಂಡು, ಅಪಾರ ಅಪಾಯವನ್ನು ಎದುರಿಸಿ ಆರಂಭಿಸಿದ ಸಂಸ್ಥೆಯೇ ಮುಂದೆ  ಭಾರತದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲೊಂದಾದ ಎಚ್‌ಸಿಎಲ್ (HCL) … Continued

ದೆಹಲಿ ಕೆಂಪುಕೋಟೆ ಸ್ಫೋಟದ ಹಿಂದೆ ಅಲ್‌ಖೈದಾ ನಂಟಿರುವ ಉಗ್ರ ಸಂಘಟನೆ ಕೈವಾಡ: ವಿಶ್ವಸಂಸ್ಥೆ ವರದಿಯಲ್ಲಿ ಉಲ್ಲೇಖ

ನವದೆಹಲಿ: 2025ರ ನವೆಂಬರ್‌ನಲ್ಲಿ ದೆಹಲಿಯ ಕೆಂಪುಕೋಟೆ (ರೆಡ್‌ಫೋರ್ಟ್) ಸಮೀಪ ನಡೆದ ಸ್ಫೋಟದ ಹಿಂದೆ ಜಾಗತಿಕ ಭಯೋತ್ಪಾದಕ ಸಂಘಟನೆ ಅಲ್‌ಖೈದಾದ ಅಂಗಸಂಸ್ಥೆಯಾದ ಅಲ್‌ಖೈದಾ ಇನ್ ದಿ ಇಂಡಿಯನ್ ಸಬ್‌ಕಾಂಟಿನೆಂಟ್ (AQIS) ಕೈವಾಡವಿತ್ತು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧಗಳ ಮೇಲ್ವಿಚಾರಣಾ ತಂಡದ ವರದಿ ತಿಳಿಸಿದೆ. ಈ ದಾಳಿಯಲ್ಲಿ 11 ಮಂದಿ ಮೃತಪಟ್ಟಿದ್ದರು. … Continued

ಮನೆಯಲ್ಲಿ ಹಣ ಪತ್ತೆ ಪ್ರಕರಣ ; ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ 3 ಆರೋಪಗಳು ಸಾಬೀತು : ಸದನ ಸಮಿತಿ

ನವದೆಹಲಿ: ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಭಾರೀ ಪ್ರಮಾಣದ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ರಚಿಸಿದ್ದ ತನಿಖಾ ಸಮಿತಿಯು ನ್ಯಾಯಮೂರ್ತಿ ವರ್ಮಾ ವಿರುದ್ಧ ಹೊರಿಸಲಾದ ಮೂರೂ ಆರೋಪಗಳೂ ಸಾಬೀತಾಗಿವೆ ಎಂದು ತೀರ್ಮಾನಿಸಿದೆ. ನವದೆಹಲಿಯ 30, ತುಘಲಕ್ ಕ್ರೆಸೆಂಟ್‌ನಲ್ಲಿರುವ ಅವರ ಅಧಿಕೃತ ನಿವಾಸದ ಸ್ಟೋರ್‌ರೂಮ್‌ನಲ್ಲಿ … Continued

ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ರಾಜೀನಾಮೆ

ಮುಂಬೈ: ಟಾಟಾ ಸಮೂಹದ ಮಹತ್ವದ ನಿರ್ಧಾರವೊಂದರಲ್ಲಿ ಟಾಟಾ ಸನ್ಸ್‌ನ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 2027ರ ಫೆಬ್ರವರಿಯಲ್ಲಿ ತಮ್ಮ ಪ್ರಸ್ತುತ ಅವಧಿ ಪೂರ್ಣಗೊಂಡ ಬಳಿಕ ಮರುನೇಮಕಗೊಳ್ಳಲು ತಾವು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಗಸ್ಟ್ 18ರಂದು ನಡೆಯಲಿರುವ ಟಾಟಾ ಸನ್ಸ್‌ನ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ)ಗೂ ಮುನ್ನ ಈ ಬೆಳವಣಿಗೆ ನಡೆದಿದೆ. … Continued

4 ಮಕ್ಕಳನ್ನು ಏಕಾಂಗಿಯಾಗಿ ಬೆಳೆಸಿದ ತಂದೆ ವೃದ್ಧಾಶ್ರಮದಲ್ಲಿ ಸತ್ತಾಗ ಒಬ್ರೂ ಬರಲಿಲ್ಲ : ಮಕ್ಕಳಿಗೆ ಅಪ್ಪನ “ಡೆತ್‌ ಸರ್ಟಿಫಿಕೆಟ್‌ʼ ಮಾತ್ರ ಬೇಕಂತೆ…!

ಭೋಪಾಲ್ : ಪತ್ನಿಯನ್ನು ಕಳೆದುಕೊಂಡ ಬಳಿಕ ನಾಲ್ವರು ಮಕ್ಕಳನ್ನು ಏಕಾಂಗಿಯಾಗಿ ಸಾಕಿ-ಸಲಹಿ ಬೆಳೆಸಿದ ತಂದೆ. ಮಕ್ಕಳ ಬದುಕು ಕಟ್ಟಿಕೊಡಲು ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರು, ವಯಸ್ಸಾದ ಬಳಿಕ ಕುಟುಂಬದವರ ಸಹಾಯ-ಸಹಕಾರ ದೊರೆಯದೆ ವೃದ್ಧಾಶ್ರಮದ ಆಶ್ರಯ ಪಡೆಯಬೇಕಾಯಿತು. ಕೊನೆಗೆ 70ನೇ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದಾಗ, ಅವರ ಪಕ್ಕದಲ್ಲಿ ಒಬ್ಬ ಮಗನಾಗಲಿ, ಮಗಳಾಗಲಿ ಇರಲಿಲ್ಲ. ಸಾವಿನ ಬಳಿಕವೂ ಮೃತದೇಹ … Continued

ಮೈ ಜುಂ ಎನ್ನುವ ವಿಡಿಯೋ | ಕೆಸರು ಮಿಶ್ರಿತ ನೀರಿನ ರಭಸಕ್ಕೆ ಕ್ಷಣಾರ್ಧದಲ್ಲೇ ಕೊಚ್ಚಿಹೋದ ನೀತಿ ಕಣಿವೆ ಸೇತುವೆ

ಉತ್ತರಾಖಂಡದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಉಂಟಾದ ಪ್ರಬಲ ನೀರಿನ ಪ್ರವಾಹಕ್ಕೆ ಚಮೋಲಿ ಜಿಲ್ಲೆಯ ನೀತಿ ಕಣಿವೆ ಪ್ರದೇಶದಲ್ಲಿದ್ದ ಲೋಹದ ಸೇತುವೆಯೊಂದು ಕೊಚ್ಚಿಕೊಂಡು ಹೋಗಿದೆ. ನೀತಿ ಕಣಿವೆಯಲ್ಲಿ ನಡೆದ ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಒಮ್ಮೆಲೇ ಸುರಿದ ಕುಂಬಧ್ರೋಣ ಮಳೆಯಿಂದಾಗಿ ಭಾರಿ ಪ್ರಮಾಣದ ಕೆಸರು ಮಿಶ್ರಿತ ನೀರು ಗುಡ್ಡದಿಂದ ರಭಸವಾಗಿ ಕೆಳಮುಖವಾಗಿ ಹರಿದು ಬಂದು … Continued

ಏಕಾಂಗಿಯಾಗಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿರುವ ಬೆಂಗಳೂರಿನ ಟೆಕ್ಕಿಗಾಗಿ ಹುಡುಕಾಟ

ಬೆಂಗಳೂರು: ಬೆಂಗಳೂರಿನ ಹೊರವಲಯದ ಶಿವಗಂಗೆ ಬೆಟ್ಟಕ್ಕೆ ಏಕಾಂಗಿಯಾಗಿ ಚಾರಣಕ್ಕೆ ತೆರಳಿದ್ದ 31 ವರ್ಷದ ಸಾಫ್ಟ್‌ವೇರ್ ವೃತ್ತಿಪರ ಅದ್ವೈತ ಉಪಾಧ್ಯಾಯ ನಾಪತ್ತೆಯಾಗಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ಹಾಗೂ ವಿವಿಧ ರಕ್ಷಣಾ ಸಂಸ್ಥೆಗಳ 100ಕ್ಕೂ ಹೆಚ್ಚು ಸಿಬ್ಬಂದಿ ಬೆಟ್ಟದ ಕಲ್ಲುಬಂಡೆಗಳು, ಪೊದೆಗಳು ಮತ್ತು ದಟ್ಟ ಸಸ್ಯವರ್ಗದ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ. ಮಧ್ಯಪ್ರದೇಶದ ಇಂದೋರ್ ಮೂಲದ ಉಪಾಧ್ಯಾಯ, ವೈಟ್‌ಫೀಲ್ಡ್‌ನ … Continued