ವೀಡಿಯೊ…| ಯೋಗ ದಿನಾಚರಣೆ : 51 ಪುಶ್‌-ಅಪ್‌ ಮಾಡಿ ಜನಸಮೂಹ ಬೆರಗುಗೊಳಿಸಿದ 73 ವರ್ಷದ ತಮಿಳುನಾಡು ರಾಜ್ಯಪಾಲರು…!

ಮಧುರೈ : ದೇಶಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿದೆ. ತಮಿಳುನಾಡಿನ ಮಧುರೈನಲ್ಲಿ ನಡೆದ ಕಾರ್ಯಕ್ರಮದಲ್ಲಿ 73 ವರ್ಷದ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ 10,000ಕ್ಕೂ ಹೆಚ್ಚು ಯೋಗಾಸಕ್ತರಿಗೆ ಅಚ್ಚರಿ ಮೂಡಿಸಿದರು. ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಥೀಮ್‌ನೊಂದಿಗೆ 11ನೇ ಅಂತಾರಾಷ್ಟ್ರೀಯ ಯೋಗ ದಿನದ ಜಾಗತಿಕ ಆಚರಣೆಯ … Continued

‘ಟ್ರಂಪ್ ನನ್ನನ್ನು ಭೋಜನಕ್ಕೆ ಆಹ್ವಾನಿಸಿದರು, ಆದರೆ…’: ಒಡಿಶಾದಲ್ಲಿ, ಅಮೆರಿಕಕ್ಕೆ ಭೇಟಿ ನೀಡದಿರುವುದಕ್ಕೆ ಕಾರಣ ನೀಡಿದ ಪ್ರಧಾನಿ ಮೋದಿ

ಭುವನೇಶ್ವರ: “ಜಗನ್ನಾಥ ಮಹಾಪ್ರಭುಗಳ ಭೂಮಿಗೆ ಬರಲು” ಬಯಸಿದ್ದರಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕಕ್ಕೆ ಭೇಟಿ ನೀಡುವ ಆಹ್ವಾನವನ್ನು ತಿರಸ್ಕರಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ಒಡಿಶಾದಲ್ಲಿ ಬಿಜೆಪಿ ಸರ್ಕಾರದ ಒಂದು ವರ್ಷದ ಸ್ಮರಣಾರ್ಥ ಭುವನೇಶ್ವರದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, “ಕೇವಲ ಎರಡು ದಿನಗಳ ಹಿಂದೆ, ನಾನು ಜಿ … Continued

ರಾಷ್ಟ್ರಪತಿ ಮುರ್ಮು ಜನ್ಮದಿನ | ಅವರ ಮುಂದೆಯೇ ಹಾಡು ಹಾಡಿದ ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳು ; ರಾಷ್ಟ್ರಪತಿಗಳ ಕಣ್ಣಲ್ಲಿ ನೀರು-ವೀಕ್ಷಿಸಿ

ಡೆಹ್ರಾಡೂನ್: ಪ್ರಸ್ತುತ ಉತ್ತರಾಖಂಡಕ್ಕೆ ಮೂರು ದಿನಗಳ ಭೇಟಿಯಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ 67 ನೇ ಜನ್ಮದಿನಾಚರಣೆಗೆ ಡೆಹ್ರಾಡೂನ್‌ನಲ್ಲಿರುವ ರಾಷ್ಟ್ರೀಯ ದೃಷ್ಟಿ ವಿಕಲಚೇತನರ ಸಬಲೀಕರಣ ಸಂಸ್ಥೆಯ (NIEPVD) ವಿದ್ಯಾರ್ಥಿಗಳು ವಿಶೇಷ ಜನ್ಮದಿನದ ಹಾಡನ್ನು ಪ್ರದರ್ಶಿಸಿದಾಗ ಅವರು ಭಾವುಕರಾದರು. ವಿದ್ಯಾರ್ಥಿಗಳ ಹೃದಯಸ್ಪರ್ಶಿ ಪ್ರದರ್ಶನ ನೋಡುತ್ತ ತಮ್ಮ ಭಾವನೆಗಳನ್ನು ತಡೆದುಕೊಳ್ಳಲು ಕಷ್ಟಪಡುತ್ತಿದ್ದ ರಾಷ್ಟ್ರಪತಿಯವರ ಈ ಭಾವನಾತ್ಮಕ ಗೌರವವು ಅವರ … Continued

ರಣಥಂಬೋರ್‌ ‘ಮೊಸಳೆ ಬೇಟೆಗಾರ’ ಹೆಣ್ಣು ಹುಲಿ ಸಾವು ; ಅನಾರೋಗ್ಯದಲ್ಲೂ ಸಾಯುವ 3 ದಿನಗಳ ಹಿಂದೆ ಅದು ಮೊಸಳೆ ಬೇಟೆಯಾಡಿದ್ದ ವೀಡಿಯೊ ವೀಕ್ಷಿಸಿ

‘ರಣಥಂಬೋರ್ ರಾಣಿ’ ಎಂದು ಪ್ರಶಂಸಿಸಲ್ಪಟ್ಟ ಮತ್ತು ಮೊಸಳೆ ಬೇಟೆಯಾಡುವ ಪರಾಕ್ರಮಕ್ಕೆ ಹೆಸರುವಾಸಿಯಾದ ‘ಆರೋಹೆಡ್’ ಎಂಬ ಪ್ರಸಿದ್ಧ ಹೆಣ್ಣು ಹುಲಿ 14 ನೇ ವಯಸ್ಸಿನಲ್ಲಿ ಮೆದುಳಿನ ಗೆಡ್ಡೆಯಿಂದ ಸಾವಿಗೀಡಾಗಿದೆ ಎಂದು ಅರಣ್ಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ದಂತಕಥೆ ‘ಮಚ್ಲಿ’ ಎಂಬ ಹೆಣ್ಣು ಹುಲಿಯ ಮೊಮ್ಮಗಳಾದ ಪ್ರಸಿದ್ಧ ಹುಲಿ ‘ಆರೋ ಹೆಡ್’ (T-84) ಮತ್ತು … Continued

ವೀಡಿಯೊ…| ತನ್ನ ವಾಯುನೆಲೆಗಳ ಮೇಲೆ ಭಾರತ ದಾಳಿ ನಡೆಸಿದ್ದನ್ನು ಕೊನೆಗೂ ಬಹಿರಂಗವಾಗಿ ಒಪ್ಪಿಕೊಂಡ ಪಾಕಿಸ್ತಾನ…!

ನವದೆಹಲಿ: ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆ ವೇಳೆ ಭಾರತವು ತನ್ನ ಪ್ರಮುಖ ವಾಯುನೆಲೆಗಳ ಮೇಲಿನ ದಾಳಿ ನಡೆಸಿದೆ ಎಂದು ಪಾಕಿಸ್ತಾನವು ಮತ್ತೊಮ್ಮೆ ಬಹಿರಂಗವಾಗಿ ಒಪ್ಪಿಕೊಂಡಿದೆ. ಭಾರತವು ಅಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ದೇಶದ ಗಮನಾರ್ಹ ವಾಯು ನೆಲೆಗಳು ಹಾನಿಗೊಳಗಾಗಿವೆ ಎಂದು ಪಾಕಿಸ್ತಾನ ದೃಢಪಡಿಸಿದೆ. ಪಾಕಿಸ್ತಾನದ ಉಪ ಪ್ರಧಾನಿ … Continued

ಸನ್ ಟಿವಿ ಕುಟುಂಬ ಕಲಹ: ಸಹೋದರ ಕಲಾನಿಧಿ ಮಾರನ್‌ ಗೆ ಲೀಗಲ್‌ ನೋಟಿಸ್ ಕಳುಹಿಸಿದ ಡಿಎಂಕೆ ಸಂಸದ ದಯಾನಿಧಿ ಮಾರನ್

ಚೆನ್ನೈ: ಪ್ರಭಾವಿ ಸನ್ ಗ್ರೂಪ್ ಕುಟುಂಬದೊಳಗೆ ಗಂಭೀರ ವಿವಾದ ಭುಗಿಲೆದ್ದಿದ್ದು, ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ತಮ್ಮ ಹಿರಿಯ ಸಹೋದರ ಮತ್ತು ಸನ್ ಟಿವಿ ನೆಟ್‌ವರ್ಕ್ ಅಧ್ಯಕ್ಷರಾದ ಕಲಾನಿಧಿ ಮಾರನ್ ಅವರಿಗೆ ಷೇರು ಹಂಚಿಕೆ, ಹಣಕಾಸು ವ್ಯವಹಾರಗಳು ಮತ್ತು ನಿಯಂತ್ರಕ ದಾಖಲಾತಿಗಳಿಗೆ ಸಂಬಂಧಿಸಿದ ವಂಚನೆಯ ಕೃತ್ಯಗಳನ್ನು ಆರೋಪಿಸಿ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಕಾನೂನು ನೋಟಿಸ್ … Continued

ವೀಡಿಯೊ..| ಎರಡು ತಲೆ, 3 ಕಣ್ಣುಗಳಿರುವ ಆಕಳ ಕರು ಜನನ ; ಜನರಿಂದ ಪೂಜೆ

ಬಾಗ್ಪತ್ : ಉತ್ತರ ಪ್ರದೇಶದ ಭಾಗ್ಪತ್‌ನ ಟಿಕ್ರಿ ಗ್ರಾಮದಲ್ಲಿ ಎರಡು ತಲೆಗಳಿರುವ ಕರುವೊಂದು ಜನಿಸಿದ ಅಪರೂಪದ ವಿದ್ಯಮಾನ ವರದಿಯಾಗಿದೆ. ಈ ಕರುವಿಗೆ 2 ತಲೆಗಳು ಮತ್ತು 3 ಕಣ್ಣುಗಳಿವೆ. ಪ್ರಸ್ತುತ ಅದು ಆರೋಗ್ಯವಾಗಿದೆ. ಈ ಅದ್ಭುತ ದೃಶ್ಯವನ್ನು ವೀಕ್ಷಿಸಲು ಬಾಗ್‌ಪತ್ ಸುತ್ತಮುತ್ತಲಿನ ಜನರು ಮತ್ತು ಸ್ಥಳೀಯರು ಆಗಮಿಸುತ್ತಿದ್ದಾರೆ. ಜೂನ್ 18ರಂದು ಕರು ಜನಿಸಿದೆ ಎಂದು ಹಸುವಿನ … Continued

ವೀಡಿಯೊ..| ಜಾಗ್ರೆಬ್‌ : ಭಾರತೀಯ ಉಡುಗೆ ತೊಟ್ಟು ಗಾಯತ್ರಿ ಮಂತ್ರ-ಸಂಸ್ಕೃತ ಶ್ಲೋಕದ ಮೂಲಕ ಮೋದಿಗೆ ಸ್ವಾಗತಕೋರಿದ ಕ್ರೊಯೇಷಿಯನ್ನರು…!

ಜಾಗ್ರೆಬ್‌: ಕೆನಡಾದ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಬುಧವಾರ ಕ್ರೊಯೇಷಿಯಾದ ಜಾಗ್ರೆಬ್‌ಗೆ ಭೇಟಿ ನೀಡಿದ್ದಾರೆ. nIwiಬೆಳಸಿದ್ದಾರೆ. ಪ್ರಧಾನಿ ಮೋದಿಗೆ ಅಲ್ಲಿ ಆತ್ಮೀಯ ಸ್ವಾಗತ ದೊರೆಯಿತು. ಭಾರತೀಯ ಪ್ರಧಾನಿಯೊಬ್ಬರು ಈ ದೇಶಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಅವರು ಹೊಟೇಲಿಗೆ ಆಗಮಿಸಿದಾಗ ಪ್ರಧಾನಿ ಮೋದಿ ಅವರನ್ನು ವಂದೇ ಮಾತರಂ ” ಮತ್ತು ” … Continued

ಇರಾನ್ ಮೇಲಿನ ದಾಳಿ ಯೋಜನೆಗೆ ಖಾಸಗಿಯಾಗಿ ಅನುಮೋದಿಸಿದ ಟ್ರಂಪ್ ; ಅಂತಿಮ ಆದೇಶಕ್ಕೆ ತಡೆ : ವರದಿ

ವಾಷಿಂಗ್ಟನ್‌ : ಇರಾನ್ ಮೇಲಿನ ದಾಳಿ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದಿಸಿದ್ದಾರೆ, ಆದರೆ ಇರಾನ್‌ ತನ್ನ ಪರಮಾಣು ಕಾರ್ಯಕ್ರಮವನ್ನು ಕೈಬಿಡುತ್ತದೆಯೇ ಎಂದು ನೋಡಲು ಅಂತಿಮ ಆದೇಶವನ್ನು ತಡೆಹಿಡಿದಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಬುಧವಾರ ವರದಿ ಮಾಡಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಮುಂದಿನ ಕ್ರಮ ಕೈಗೊಳ್ಳುವ ಮೊದಲು ಇರಾನ್ ತನ್ನ … Continued

ಟೋಲ್ ಶುಲ್ಕ | ಖಾಸಗಿ ವಾಹನಗಳಿಗೆ ₹3000ಕ್ಕೆ ಫಾಸ್ಟ್‌ ಟ್ಯಾಗ್ ವಾರ್ಷಿಕ ಪಾಸ್‌ ಪ್ರಕಟಿಸಿದ ಕೇಂದ್ರ ಸರ್ಕಾರ ; ಆಗಸ್ಟ್‌ 15ರಿಂದ ಜಾರಿ

ನವದೆಹಲಿ: ಟೋಲ್ ಶುಲ್ಕ ಪಾವತಿಸುವುದನ್ನು ಸರಳಗೊಳಿಸುವ ಮತ್ತು ರಸ್ತೆ ಪ್ರಯಾಣವನ್ನು ಸುಧಾರಿಸುವ ಉದ್ದೇಶದ ಒಂದು ಮಹತ್ವದ ಕ್ರಮದಲ್ಲಿ, ಕೇಂದ್ರ ಸರ್ಕಾರವು 3,000 ರೂ.ಗಳಿಗೆ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಯೋಜನೆಯನ್ನು ಆಗಸ್ಟ್‌ 15ರಿಂದ ಜಾರಿಗೆ ತರಲಾಗುತ್ತದೆ ಎಂದು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಬುಧವಾರ ಪ್ರಕಟಿಸಿದ್ದಾರೆ. ಈ ಹೊಸ … Continued