ಪಾಕಿಸ್ತಾನ ಪರ ಬೇಹುಗಾರಿಕೆ ; ನೌಕಾಪಡೆ ಪ್ರಧಾನ ಕಚೇರಿಯ ಸಿಬ್ಬಂದಿ ಬಂಧನ : ಆಪರೇಶನ್‌ ಸಿಂಧೂರ ವೇಳೆಯೂ ಮಾಹಿತಿ ರವಾನೆ

ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರವಾಗಿ ವರ್ಷಗಳಿಂದ ಮತ್ತು ಆಪರೇಷನ್ ಸಿಂಧೂರ ಸಮಯದಲ್ಲಿಯೂ ಸಹ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ದೆಹಲಿಯಲ್ಲಿರುವ ಭಾರತೀಯ ನೌಕಾಪಡೆಯ ಪ್ರಧಾನ ಕಚೇರಿಯ ಉದ್ಯೋಗಿಯನ್ನು ಬಂಧಿಸಲಾಗಿದೆ. ಹಣಕ್ಕಾಗಿ ವಿಶಾಲ ಯಾದವ್ ಎಂಬ ಸಿಬ್ಬಂದಿ ನೌಕಾಪಡೆ ಮತ್ತು ಇತರ ರಕ್ಷಣಾ ಘಟಕಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಇದನ್ನು ನಿರ್ವಹಿಸುತ್ತಿದ್ದ ಪಾಕಿಸ್ತಾನಿ ಮಹಿಳೆಗೆ … Continued

‘ಮಕ್ಕಳು ನನ್ನನ್ನು ಅವಮಾನಿಸಿದರು…’: ನೊಂದ ನಿವೃತ್ತ ಸೇನಾಧಿಕಾರಿಯಿಂದ ದೇವಸ್ಥಾನಕ್ಕೆ 4 ಕೋಟಿ ರೂ. ಮೌಲ್ಯದ ಆಸ್ತಿ ದಾನ

ಅಚ್ಚರಿಯ ನಡೆಯಲ್ಲಿ, ತಮ್ಮ ಹೆಣ್ಣುಮಕ್ಕಳು ಪಿತ್ರಾರ್ಜಿತ ಆಸ್ತಿಗಾಗಿ ತಮ್ಮನ್ನು ಅವಮಾನಿಸಿದ್ದಾರೆ ಎಂಬ ಆರೋಪಿಸಿದ ನಂತರ 65 ವರ್ಷದ ನಿವೃತ್ತ ಸೇನಾಧಿಕಾರಿಯೊಬ್ಬರು ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರುಲ್ಮಿಗು ರೇಣುಗಾಂಬಳ್ ಅಮ್ಮನ್ ದೇವಸ್ಥಾನಕ್ಕೆ 4 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ ಹೆಣ್ಣುಮಕ್ಕಳಿಂದ ವರ್ಷಗಳಿಂದ ಕಡೆಗಣಿಸಲ್ಪಟ್ಟ ನಂತರ ತೀವ್ರವಾಗಿ ನೊಂದು ನಿವೃತ್ತ … Continued

‘ನನ್ನನ್ನು ಮುಟ್ಟಿದ್ರೆ ನಿನ್ನನ್ನು 35 ತುಂಡುಗಳಾಗಿ ಕತ್ತರಿಸ್ತೇನೆ..; ಮದುವೆ ಮೊದಲ ರಾತ್ರಿ ಚಾಕು ಹಿಡಿದು ಗಂಡನಿಗೆ ಕೊಲೆ ಬೆದರಿಕೆ ಹಾಕಿದ ನವವಿವಾಹಿತೆ…!

ನವವಿವಾಹಿತೆಯೊಬ್ಬಳು ಮೊದಲ ರಾತ್ರಿಯೇ ಚಾಕು ಹಿಡಿದುಕೊಂಡು ನನ್ನನ್ನು ಮುಟ್ಟಿದರೆ 35 ತುಂಡುಗಳಾಗಿ ಕತ್ತರಿಸುವೆ ಎಂದು ಗಂಡನಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. “ನನ್ನನ್ನು ಮುಟ್ಟಿದರೆ ನಿನ್ನನ್ನು 35 ತುಂಡುಗಳಾಗಿ ಕತ್ತರಿಸುವೆ. ನಾನು ಅಮನ್‌ಗೆ ಸೇರಿದವಳು” ಎಂದು ಎಚ್ಚರಿಸುತ್ತ ಪತ್ನಿ ಕೋಣೆಯ ಒಂದು ಮೂಲೆಯಲ್ಲಿ ಕುಳಿತು, ತಲೆಯ ಮುಸುಕಿನ ಕೆಳಗೆ ಹರಿತವಾದ ಚಾಕುವನ್ನು … Continued

ಭಾರಿ ಮಳೆ: ಜೂನ್‌ 26ರಂದು ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ

ಮಂಗಳೂರು : ನಿರಂತರವಾಗಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಎಲ್ಲಾ ಅಂಗನವಾಡಿಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜೂನ್‌ 26ರಂದು ರಜೆ ನೀಡಲಾಗಿದೆ. ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ಅದು ಮುಂದುವರಿಯುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಳ್ತಂಗಡಿ ತಾಲೂಕಿನ ಎಲ್ಲಾ ಅಂಗನವಾಡಿಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜೂನ್‌ 26ರಂದು ರಜೆ … Continued

ಹಾರಲು ಅನುಮತಿ ಕೇಳಬೇಡಿ’…: ಮೋದಿ ಲೇಖನದ ಕುರಿತು ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಟೀಕೆಗಳ ನಂತ್ರ ಶಶಿ ತರೂರ ಮಾರ್ಮಿಕ ಪೋಸ್ಟ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಕ್ಕಾಗಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪಕ್ಷದ ನಾಯಕ ಶಶಿ ತರೂರ್ ಅವರನ್ನು ಟೀಕಿಸಿದ ಕೆಲವೇ ಗಂಟೆಗಳ ನಂತರ, ತಿರುವನಂತಪುರಂ ಸಂಸದ X ನಲ್ಲಿ ಮಾರ್ಮಿಕವಾದ ಪೋಸ್ಟ್ ಮಾಡಿದ್ದಾರೆ. ಇದು ಅವರ ಪಕ್ಷದ ಸಹೋದ್ಯೋಗಿಗಳ ವಾಗ್ದಾಳಿಗೆ ಉತ್ತರವಾಗಿ ಕಂಡುಬಂದಿದೆ. “ಹಾರಲು ಅನುಮತಿ ಕೇಳಬೇಡಿ. ರೆಕ್ಕೆಗಳು ನಿಮ್ಮವು. … Continued

ವೀಡಿಯೊ..| ಬಾಹ್ಯಾಕಾಶಕ್ಕೆ ಹಾರಿದ ಶುಭಾಂಶು ಶುಕ್ಲಾ ; 41 ವರ್ಷಗಳ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ

ನವದೆಹಲಿ: ಭಾರತವು ತನ್ನ ಕಾಸ್ಮಿಕ್ ಜಿಗಿತವನ್ನು ಮಾಡಿದೆ. ಭಾರತೀಯ ವಾಯುಪಡೆಯ ಪೈಲಟ್ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39A ನಿಂದ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಫಾಲ್ಕನ್ 9 ರಾಕೆಟ್‌ನಲ್ಲಿ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿದ್ದಾರೆ. 1969 ರಲ್ಲಿ ಅಪೊಲೊ 11 ರಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ … Continued

ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿ ಅದನ್ನೇ ನಿಗ್ರಹಿಸಿದ ಯುವಕ..! ದೃಶ್ಯ ವೀಡಿಯೊದಲ್ಲಿ ಸೆರೆ-ವೀಕ್ಷಿಸಿ

ಸೋಮವಾರ ಉತ್ತರಪ್ರದೇಶದ ಲಖಿಂಪುರ ಖೇರಿಯ ಧೌರಪುರ ಅರಣ್ಯ ಪ್ರದೇಶದ ಜುಗ್ನುಪುರದ ಇಟ್ಟಂಗಿ ತಯಾರಿಕೆ ಘಟಕದ ಕೆಲಸಗಾರರ ಮೇಲೆ ಕಪ್ಪು ಚಿರತೆಯೊಂದು ದಾಳಿ ನಡೆಸಿದೆ. ನಾಟಕೀಯ ಹಾಗೂ ಅಪರೂಪದ ವಿದ್ಯಮಾನದಲ್ಲಿ ಹೆದರದ ಯುವಕನೊಬ್ಬ ಚಿರತೆಯನ್ನು ಕೆಡವಿ ಬಾಯಿಯನ್ನು ಹಿಡಿದು ನೆಲಕ್ಕೆ ಒತ್ತಿ ಹಿಡಿದು ಅದನ್ನು ನಿಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾನೆ. ಗದ್ದಲದಿಂದ ಎಚ್ಚೆತ್ತ ಗ್ರಾಮಸ್ಥರು ಒಟ್ಟುಗೂಡಿ ಚಿರತೆಯ ಮೇಲೆ ಇಟ್ಟಿಗೆಗಳು … Continued

ಮಾದಕ ವಸ್ತು ಪ್ರಕರಣ : ನಟ ಶ್ರೀಕಾಂತ ಬಂಧನ

ಚೆನ್ನೈ: ಕೊಕೇನ್ ಸಂಬಂಧಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರಿಯ ತಮಿಳು ಮತ್ತು ತೆಲುಗು ಚಲನಚಿತ್ರ ನಟ ಶ್ರೀಕಾಂತ ಅವರನ್ನು ಪೊಲೀಸರು ಬಂಧಿಸಿದ್ದು, ಚೆನ್ನೈ ನ್ಯಾಯಾಲಯವು ಜುಲೈ 7 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ನುಂಗಂಬಾಕ್ಕಂ ಪೊಲೀಸ್ ಠಾಣೆಯಲ್ಲಿ ನಟನನ್ನು ಹಲವಾರು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಯಿತು ಮತ್ತು ಅಧಿಕೃತವಾಗಿ ಬಂಧಿಸಲಾಯಿತು. ಸೋಮವಾರ ಮಧ್ಯಾಹ್ನ ನಟ ಶ್ರೀಕಾಂತ ಅವರನ್ನು … Continued

ತನ್ನ ಬಿಟ್ಟು ಬೇರೊಬ್ಬಳನ್ನು ಮದುವೆಯಾದ ವ್ಯಕ್ತಿ ಸಿಲುಕಿಸಲು 21 ಸಲ ಬಾಂಬ್ ಬೆದರಿಕೆ ಹಾಕಿದ್ದ ಮಹಿಳಾ ರೊಬೊಟಿಕ್ಸ್ ಎಂಜಿನಿಯರ್ ಬಂಧನ…!

ಅಹಮದಾಬಾದ್ : 30 ವರ್ಷದ ರೊಬೊಟಿಕ್ಸ್ ಎಂಜಿನಿಯರ್ ಒಬ್ಬಳ ಏಕಪಕ್ಷೀಯ ಪ್ರೀತಿ ಅಪಾಯಕಾರಿ ತಿರುವು ಪಡೆದುಕೊಂಡಿದೆ, ಏಕೆಂದರೆ ಅವಳು ಪ್ರೀತಿಸಿದ ವ್ಯಕ್ತಿಯ ಮೇಲೆ ಸುಳ್ಳು ಪ್ರಕರಣ ದಾಖಲಾಗುವಂತೆ ಮಾಡಲು ಆಕೆ ದೇಶಾದ್ಯಂತ ಹಲವಾರು ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಹಾಕಿದ್ದಾಳೆ…! ಚೆನ್ನೈನ ಉನ್ನತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಹಿರಿಯ ಸಲಹೆಗಾರ್ತಿಯಾಗಿರುವ ರೆನೆ ಜೋಶಿಲ್ಡಾ ಎಂಬ ಮಹಿಳೆಯನ್ನು ಅಹಮದಾಬಾದ್ … Continued

ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ…!

ಸಾಂಗ್ಲಿ : ವಿದ್ಯಾರ್ಥಿನಿ ತನ್ನ 10 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ. 92.60 ಅಂಕಗಳನ್ನು ಗಳಿಸಿದ್ದಾಳೆ. ಆದರೆ ಒಂದು ವರ್ಷದ ನಂತರ,  ಅಣಕು ಪರೀಕ್ಷೆ(mock test)ಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ ಕಾರಣಕ್ಕೆ ಅವಳ ತಂದೆ ಅವಳನ್ನು ಹೊಡೆದು ಕೊಂದ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವರದಿಯಾಗಿದೆ. ಮಹಾರಾಷ್ಟ್ರದ ಸಾಂಗ್ಲಿಯ ಸಾಧನಾ ಭೋಂಸ್ಲೆ – ಪೂರ್ವ ವೈದ್ಯಕೀಯ … Continued