ಸಲಿಂಗ ವಿವಾಹಕ್ಕೆ ಕಾನೂನುಬದ್ಧತೆ ತಿರಸ್ಕರಿಸಿದ ಆದೇಶ ಮರುಪರಿಶೀಲಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನು ಅನುಮತಿ ನೀಡಲು ನಿರಾಕರಿಸಿದ ಅಕ್ಟೋಬರ್ 2023 ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ. ಈ ಹಿಂದೆ ಅರ್ಜಿಗಳ ಮುಕ್ತ ವಿಚಾರಣೆಯನ್ನು ನಿರಾಕರಿಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಸೂರ್ಯಕಾಂತ, ಬಿ.ವಿ.ನಾಗರತ್ನ, ಪಿ.ಎಸ್.ನರಸಿಂಹ ಮತ್ತು ದೀಪಂಕರ ದತ್ತ ಅವರಿದ್ದ ಪೀಠವು ಚೇಂಬರ್‌ಗಳಲ್ಲಿ ಅರ್ಜಿಗಳನ್ನು ಪರಿಗಣಿಸಿ ಹಿಂದಿನ ತೀರ್ಪಿನಲ್ಲಿ … Continued

ಹೀಗಾದ್ರೆ ಇಂಡಿಯಾ ಮೈತ್ರಿಕೂಟ ವಿಸರ್ಜಿಸುವುದು ಒಳಿತು…: ದೆಹಲಿ ಚುನಾವಣೆಯಲ್ಲಿ ಎಎಪಿ-ಕಾಂಗ್ರೆಸ್ ಪ್ರತ್ಯೇಕ ಸ್ಪರ್ಧೆ ಬಗ್ಗೆ ಒಮರ್ ಅಬ್ದುಲ್ಲಾ

ನವದೆಹಲಿ: ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ನಾಯಕತ್ವ ಅಥವಾ ಕಾರ್ಯಸೂಚಿಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಮತ್ತು ಕಳೆದ ವರ್ಷ ಸಂಸತ್ತಿನ ಚುನಾವಣೆಗಾಗಿ ಇಂಡಿಯಾ ಮೈತ್ರಿಕೂಟ ರಚಿಸಿದ್ದರೆ ಅದನ್ನು ವಿಸರ್ಜಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಗುರುವಾರ ಹೇಳಿದ್ದಾರೆ. ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಹೋರಾಟಕ್ಕೆ ಸಾಕ್ಷಿಯಾಗಿರುವ ದೆಹಲಿ ವಿಧಾನಸಭಾ … Continued

ವೀಡಿಯೊ : ಕೋಲು ಹಿಡಿದು ರೈಲು ಹಳಿ ಮೇಲಿಂದ ಸಿಂಹವನ್ನು ಓಡಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ…!

ಗುಜರಾತಿನ ಭಾವನಗರದಲ್ಲಿ ರೈಲ್ವೆ ಹಳಿ ಮೇಲೆ ಬರುತ್ತಿದ್ದ ಸಿಂಹವನ್ನು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಯಾವುದೇ ಭಯ ಅಥವಾ ಅಂಜಿಕೆ ಇಲ್ಲದೆ ಒಬ್ಬಂಟಿಯಾಗಿ ಓಡಿಸಿದ್ದಾರೆ. ಘಟನೆಯ ವೀಡಿಯೊ ಆಗಿದ್ದು, ಲಿಲಿಯಾ ನಿಲ್ದಾಣದ ಬಳಿ ಇದನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಸಿಂಹವು ರೈಲ್ವೆ ಟ್ರ್ಯಾಕ್ ದಾಟುತ್ತಿರುವಾಗ ಮತ್ತು ನಂತರ ಮುಂದೆ ನಡೆದುಕೊಂಡು ಹೋಗುತ್ತಿರುವಾಗ ಸಿಬ್ಬಂದಿಯನ್ನು ನೋಡುತ್ತ ಹೋಗುವುದನ್ನು ವೀಡಿಯೊ … Continued

ವೀಡಿಯೊ…| ತಿರುಪತಿ ಕಾಲ್ತುಳಿತದಲ್ಲಿ ಆರು ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ ; ಅಸ್ವಸ್ಥ ಮಹಿಳೆ ಹೊರಬರಲು ಗೇಟ್ ತೆರೆದ ನಂತರ ಗೊಂದಲ

ತಿರುಪತಿ ದೇವಸ್ಥಾನದ ಬಳಿ ಬುಧವಾರ ಸಂಜೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಜನದಟ್ಟಣೆ ಮತ್ತು ಅನಿಯಂತ್ರಿತ ಟೋಕನ್ ವಿತರಣೆಯು ಮಾರಣಾಂತಿಕ ತಿರುಪತಿ ಕಾಲ್ತುಳಿತ ಘಟನೆಗೆ ಕಾರಣಗಳೆಂದು ಚರ್ಚಿಸಲಾಗುತ್ತಿದೆ. ತಿರುಮಲ ಶ್ರೀವಾರಿ ವೈಕುಂಠ ದ್ವಾರ ಟಿಕೆಟ್ ಕೌಂಟರ್ ಬಳಿಯ ವಿಷ್ಣು ನಿವಾಸದ ಬಳಿ ದರ್ಶನ ಟೋಕನ್ ವಿತರಣೆ ವೇಳೆ ಈ … Continued

ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ, ಬರಹಗಾರ ಪ್ರಿತೀಶ್ ನಂದಿ ನಿಧನ

ಮುಂಬೈ : ಹೃದಯ ಸ್ತಂಭನದಿಂದ ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ಪತ್ರಕರ್ತ ಪ್ರಿತೀಶ್ ನಂದಿ (73) ತಮ್ಮ ದಕ್ಷಿಣ ಮುಂಬೈ ನಿವಾಸದಲ್ಲಿ ಬುಧವಾರ ನಿಧನರಾದರು. ಝಂಕಾರ್ ಬೀಟ್ಸ್, ಚಮೇಲಿ, ಹಜಾರೋನ್ ಖ್ವೈಶೇನ್ ಐಸಿ, ಏಕ್ ಖಿಲಾಡಿ ಏಕ್ ಹಸೀನಾ, ಅಂಕಹೀ, ಪ್ಯಾರ್ ಕೆ ಸೈಡ್ ಎಫೆಕ್ಟ್ಸ್, ಬೋ ಬ್ಯಾರಕ್ಸ್ ಫಾರೆವರ್, ಮುಂತಾದ ಹಲವಾರು ಯಶಸ್ವಿ ಚಲನಚಿತ್ರಗಳನ್ನು … Continued

ವೀಡಿಯೊ…| ಒಂದು ವಾರದೊಳಗೆ ಪೂರ್ಣ ತಲೆಯೇ ಬೋಳು : ಮಹಾರಾಷ್ಟ್ರದ 3 ಗ್ರಾಮಗಳಲ್ಲಿ ಸಾಮೂಹಿಕವಾಗಿ ಕೂದಲು ಉದುರುವಿಕೆ…! ಕಾರಣ..?

ಮುಂಬೈ: ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಮೂರು ಗ್ರಾಮಗಳ ಹಲವಾರು ನಿವಾಸಿಗಳು ಕಳೆದ ಕೆಲವು ದಿನಗಳಿಂದ ಸಾಮೂಹಿಕ ಕೂದಲು ಉದುರುವಿಕೆ ತೊಂದರೆ ಎದುರಿಸುತ್ತಿದ್ದು, ನಂತರ ಒಂದು ವಾರದೊಳಗೆ ಅವರ ತಲೆ ಬೋಳಾಗಿದೆ. ಸಾಮೂಹಿಕ ಕೂದಲು ಉದುರುವಿಕೆಯ ಹಿಂದೆ ರಸಗೊಬ್ಬರಗಳಿಂದ ಉಂಟಾಗುವ ಜಲಮಾಲಿನ್ಯ ಕಾರಣ ಎಂದು ಆರೋಗ್ಯ ಅಧಿಕಾರಿಗಳು ಶಂಕಿಸಿದ್ದಾರೆ. ಅಧಿಕಾರಿಗಳು ಆ ಪ್ರದೇಶದಲ್ಲಿನ ನೀರಿನ ಮಾದರಿಗಳನ್ನು ಮತ್ತು … Continued

ತಿರುಪತಿ ವೈಕುಂಠ ಏಕಾದಶಿ ಟೋಕನ್ ಕೌಂಟರಿನಲ್ಲಿ ಕಾಲ್ತುಳಿತ: 6 ಭಕ್ತರು ಸಾವು, ಹಲವರಿಗೆ ಗಾಯ

ತಿರುಪತಿ : ತಿರುಪತಿಯಲ್ಲಿ ಬುಧವಾರ (ಜನವರಿ 8) ರಾತ್ರಿ ವೈಕುಂಠ ಏಕಾದಶಿ ಆಚರಣೆ ನಿಮಿತ್ತ ಸ್ಥಾಪಿಸಲಾಗಿದ್ದ ಟೋಕನ್ ಕೌಂಟರ್‌ಗಳಲ್ಲಿ ಕಾಲ್ತುಳಿತ ಉಂಟಾಗಿ ದುರಂತ ಸಂಭವಿಸಿದೆ. ತಮಿಳುನಾಡಿನ ಸೇಲಂನ ಮಹಿಳೆ ಸೇರಿದಂತೆ 6  ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ತಿರುಪತಿಯ ಬೈರಾಗಿಪಟ್ಟೇಡಾದ ಎಂಜಿಎಂ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ತಾತ್ಕಾಲಿಕ ಕೌಂಟರ್‌ನಲ್ಲಿ ಮಹಿಳೆ ಸೇರಿದಂತೆ … Continued

ಭಯಾನಕ ವೀಡಿಯೊ…| ಉತ್ಸವದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತಿ ಒಗೆದ ಕೋಪಗೊಂಡ ಆನೆ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಉತ್ಸವದ ವೇಳೆ ಆನೆಯೊಂದು ಕೋಪಗೊಂಡ ನಂತರ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಸೇರಿದಂತೆ ಕನಿಷ್ಠ 17 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ತಿರುರ್‌ನ ಪುತಿಯಂಗಡಿ ಉತ್ಸವದಲ್ಲಿ ಈ ಘಟನೆ ಸಂಭವಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಕಾರ್ಯಕ್ರಮದ ದೃಶ್ಯಗಳು ಐದು ಆನೆಗಳು ಉತ್ಸವದಲ್ಲಿ ಪಾಲ್ಗೊಂಡಿರುವುದನ್ನು ತೋರಿಸುತ್ತವೆ. ಆನೆಗಳನ್ನು ಅಲಂಕರಿಸಲಾಗಿದೆ. ಉತ್ಸವದಲ್ಲಿ … Continued

‘ಭಿಕ್ಷುಕನ ಜೊತೆ ಓಡಿಹೋದ ಮಹಿಳೆ’ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್ ; ಆಕೆ ಭಿಕ್ಷುಕನೊಂದಿಗೆ ಓಡಿಹೋಗಿಲ್ಲ : ಮಹಿಳೆ ಮನೆ ಬಿಟ್ಟ ಕಾರಣ….

ಹರ್ದೋಯಿ : ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬಳು ಭಿಕ್ಷುಕನ ಜೊತೆ ಓಡಿಹೋಗಿದ್ದಾಳೆ ಎಂಬ ವ್ಯಾಪಕವಾಗಿ ಪ್ರಸಾರವಾದ ಸುದ್ದಿಗೆ ಈಗ ಟ್ವಿಸ್ಟ್ ಹೊರಹೊಮ್ಮಿದೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಭಿಕ್ಷುಕನ ಜೊತೆ ಓಡಿಹೋಗಿದ್ದಾಳೆ ಎಂದು ಪತಿ ಆರೋಪಿಸಿರುವ ಮಹಿಳೆ, ತನ್ನ ಪತಿ ಪದೇ ಪದೇ ನಿಂದಿಸುತ್ತಿದ್ದುದರಿಂದ ಮತ್ತು ಥಳಿಸುತ್ತಿದ್ದುದರಿಂದ ಸಂಬಂಧಿಕರ ಮನೆಗೆ ತೆರಳಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ತಾನು … Continued

ಮಹಾಕುಂಭ ಮೇಳ 2025 : ‘ಲೌಕಿಕ ಜೀವನʼ ತ್ಯಜಿಸಿ ಸನ್ಯಾಸಿ(ಸಾಧ್ವಿ)ಯಾದ ಐಎಎಸ್ ಆಗಬೇಕೆಂದು ಹಂಬಲಿಸಿದ್ದ 13 ವರ್ಷದ ಬಾಲಕಿ

ಪ್ರಯಾಗರಾಜ್‌ : ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಆಗ್ರಾದ ರಾಖಿ ಎಂಬ 13 ವರ್ಷದ ಬಾಲಕಿ ಮಹಾ ಕುಂಭಮೇಳದಲ್ಲಿ ‘ಸಾಧ್ವಿ’ ಆಗುವ ಇಚ್ಛೆ ವ್ಯಕ್ತಪಡಿಸಿದ ನಂತರ ಆಕೆಯ ಪೋಷಕರು ಆಕೆಯ ನಿರ್ಧಾರವನ್ನು ದೈವಿಕ ಇಚ್ಛೆಯಂತೆ ಸ್ವೀಕರಿಸಿ, ಅವಳನ್ನು ಜುನಾ ಅಖಾಡಾದ ಸುಪರ್ದಿಗೆ ನೀಡಿದ್ದಾರೆ. ವರದಿಗಳ ಪ್ರಕಾರ, ಆಗ್ರಾದ 13 ವರ್ಷದ ಬಾಲಕಿಯೊಬ್ಬಳು ಐಎಎಸ್ ಅಧಿಕಾರಿಯಾಗುವ ಕನಸನ್ನು … Continued