ರಕ್ಷಣಾ ವ್ಯವಸ್ಥೆ ಭೇದಿಸಿ ಇಸ್ರೇಲ್ ರಕ್ಷಣಾ ಕೇಂದ್ರ ಕಚೇರಿಗೆ ಅಪ್ಪಳಿಸಿದ ಇರಾನ್‌ ಕ್ಷಿಪಣಿ : ಅದು ಅಪ್ಪಳಿಸಿದ ಕ್ಷಣದ ದೃಶ್ಯ ವೀಡಿಯೊದಲ್ಲಿ ಸೆರೆ

ಮಧ್ಯಪ್ರಾಚ್ಯ ಉದ್ವಿಗ್ನತೆಯ ನಡುವೆ ಇಸ್ರೇಲ್ ಅನ್ನು ಕ್ಷಿಪಣಿಗಳ ದಾಳಿಯಿಂದ ರಕ್ಷಿಸುತ್ತಿದ್ದ ಐರನ್ ಡೋಮ್ ವಾಯು ರಕ್ಷಣೆಯ ವೈಫಲ್ಯದಲ್ಲಿ ಇರಾನ್ ಟೆಲ್ ಅವಿವ್‌ನಲ್ಲಿರುವ ಇಸ್ರೇಲ್ ರಕ್ಷಣಾ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿದೆ. 24 ಗಂಟೆಗಳ ಒಳಗೆ ಇರಾನ್ ಮೇಲೆ ಇಸ್ರೇಲ್ ನಡೆಸಿದ ಎರಡು ಅಲೆಗಳ ವಾಯುದಾಳಿಯ ನಂತರ ಇರಾನ್ ಪ್ರತಿದಾಳಿ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ … Continued

ವಿಮಾನ ಅಪಘಾತ | ಆಗ ಥಾಯ್ ಏರ್‌ವೇಸ್, ಈಗ ಏರ್‌ ಇಂಡಿಯಾ : 30 ವರ್ಷಗಳ ಹಿಂದೆಯೂ 11A ಸೀಟು ವ್ಯಕ್ತಿಯ ಜೀವ ಉಳಿಸಿತ್ತು…!

ನವದೆಹಲಿ : ವಿಮಾನದಲ್ಲಿ 11A ಸೀಟು ನಿಜವಾಗಿಯೂ ರಕ್ಷಕವೇ ? ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ಅಪಘಾತದ ನಂತರ ಅದೃಷ್ಟಶಾಲಿ ಎಂದು ಹೇಳಲಾದ ಬದುಕುಳಿದ ಏಕೈಕ ವ್ಯಕ್ತಿ ಕುಳಿತಿದ್ದ 11A ಸೀಟಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಥಾಯ್ ಗಾಯಕನೊಬ್ಬ ವಿಮಾನದಲ್ಲಿಅದೇ ಸೀಟಿನಲ್ಲಿ ಕುಳಿತುಕೊಂಡು ಮಾರಕ ವಿಮಾನ ಅಪಘಾತದಲ್ಲಿ ಬದುಕುಳಿದಿದ್ದನ್ನು ಬಹಿರಂಗಪಡಿಸಿದ್ದಾರೆ. ಥಾಯ್ ಏರ್‌ವೇಸ್ ವಿಮಾನದಲ್ಲಿ … Continued

ಅಹಮದಾಬಾದ್ ವಿಮಾನ ಅಪಘಾತ: ಮೃತರ ಸಂಖ್ಯೆ 274ಕ್ಕೆ ಏರಿಕೆ

ಅಹಮದಾಬಾದ್‌ : ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಗುರುವಾರ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ದುರಂತದಲ್ಲಿ ಸಾವಿನ ಸಂಖ್ಯೆ 274ಕ್ಕೆ ಏರಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ಹಲವಾರು ವರದಿಗಳು ತಿಳಿಸಿವೆ. ಸತ್ತವರಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಮಾತ್ರವಲ್ಲದೆ, ಮೇಘನಿನಗರ ಪ್ರದೇಶದ ನಿವಾಸಿಗಳು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುರುವಾರ ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ … Continued

ತಾನು ಮಾಡಿದ ತಪ್ಪಿಗೆ ಭಾರತದ ಕ್ಷಮೆಯಾಚಿಸಿದ ಇಸ್ರೇಲ್‌

ನವದೆಹಲಿ: ಮೊದಲ ಬಾರಿಗೆ, ಇಸ್ರೇಲ್ ರಕ್ಷಣಾ ಪಡೆಗಳು ಭಾರತದ ಅಂತಾರಾಷ್ಟ್ರೀಯ ಗಡಿಗಳ ತಪ್ಪಾದ ನಕ್ಷೆಯನ್ನು ಪ್ರಕಟಿಸಿದ ನಂತರ ಇಸ್ರೇಲ್‌ ಭಾರತದ ಕ್ಷಮೆ ಕೋರಿದೆ. ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿದೆ ಎಂದು ತಪ್ಪಾಗಿ ತೋರಿಸಲಾಗಿದೆ. X ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದೆ. ಐಡಿಎಫ್ ನಕ್ಷೆಯು “ಗಡಿಗಳನ್ನು ನಿಖರವಾಗಿ ಚಿತ್ರಿಸಲು ವಿಫಲವಾಗಿದೆ” ಎಂದು ಒಪ್ಪಿಕೊಂಡಿದೆ. ಆದರೆ ಅದು … Continued

ವೀಡಿಯೊ…| ಅಹಮದಾಬಾದ್‌ ವಿಮಾನ ದುರಂತ ; ಇಡೀ ವಿಮಾನವೇ ಸುಟ್ಟು ಕರಕಲಾದ್ರೂ ಭಗವದ್ಗೀತೆ ಪುಸ್ತಕಕ್ಕೆ ಏನೂ ಆಗಿಲ್ಲ…!

ಅಹಮದಾಬಾದ್‌ : ಗುಜರಾತಿನ ಅಹಮದಾಬಾದ್‌ನಲ್ಲಿ 265 ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾ ಫ್ಲೈಟ್ 171 ವಿಮಾನ ಅಪಘಾತದಲ್ಲಿ ಉಂಟಾದ ಬೆಂಕಿಯಲ್ಲಿ ಧಗಧಗಿಸಿ ಹೋದ ವಿಮಾನದ ಅವಶೇಷಗಳಲ್ಲಿ ಭಗವದ್ಗೀತೆಯ ಪುಸ್ತಕ ಸುಡದೆ ಹಾಗೆಯೇ ಇರುವುದು ಕಂಡುಬಂದಿದೆ. ತೀವ್ರ ತೆರನಾದ ಬೆಂಕಿಯ ಜ್ವಾಲೆಯ ಹೊರತಾಗಿಯೂ, ಪವಿತ್ರ ಗ್ರಂಥವು ಹಾನಿಗೊಳಗಾಗದೆ ಉಳಿದಿದೆ. ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹೋಗುತ್ತಿದ್ದ ಏರ್‌ … Continued

ಪೈಲಟ್‌ ಗೆ ಸೆಲ್ಯೂಟ್….ಇಲ್ದಿದ್ರೆ ಸುಮಾರು 1500 ಜನರು ಸಾಯುತ್ತಿದ್ದರೇನೋ..? ಅಹಮದಾಬಾದ್‌ ವಿಮಾನ ಅಪಘಾತದ ಬಗ್ಗೆ ಪ್ರತ್ಯಕ್ಷದರ್ಶಿ ಹೇಳಿಕೆ

ಅಹಮದಾಬಾದ್‌ : ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಏರ್ ಇಂಡಿಯಾ ವಿಮಾನ AI 171 ಅಪಘಾತಕ್ಕೀಡಾದ ದೃಶ್ಯವನ್ನು ವೀಕ್ಷಿಸಿದ ಸ್ಥಳೀಯ ನಿವಾಸಿಯೊಬ್ಬರು, ವಿಮಾನವೇನಾದರೂ ವಸತಿ ಪ್ರದೇಶಕ್ಕೆ ಡಿಕ್ಕಿ ಹೊಡೆದಿದ್ದರೆ 1,500 ರಿಂದ 2,000 ಜನರು ಸಾಯಬಹದಿತ್ತು ಎಂದು ಹೇಳಿದ್ದಾರೆ. ದೊಡ್ಡ ದುರಂತವನ್ನು ಸ್ವಲ್ಪದರಲ್ಲೇ ತಪ್ಪಿಸಲಾಯಿತು … Continued

ಅಪಘಾತಕ್ಕೀಡಾದ ವಿಮಾನದ ಸೀಟ್ 11A ನಿಗೂಢತೆ : ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಸಾವನ್ನೇ ಗೆದ್ದಿದ್ದು ಹೇಗೆ..?

ಅಹಮದಾಬಾದ್‌ : ಅಪಘಾತಕ್ಕೀಡಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದಲ್ಲಿದ್ದ ಕೇವಲ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ. ಅಹಮದಾಬಾದ್‌ನ ಸರ್ದಾರ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನ AI-171 ರಲ್ಲಿ 11A ಸೀಟಿನಲ್ಲಿ ಕುಳಿತಿದ್ದ ಭಾರತೀಯ ಮೂಲದ ಬ್ರಿಟೀಷ್‌ ಪ್ರಜೆ ವಿಶ್ವಾಸಕುಮಾರ ರಮೇಶ ಎಂಬವರು … Continued

ಅಹಮದಾಬಾದ್‌ ವಿಮಾನ ಅಪಘಾತ : ಪತನಗೊಂಡ ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ

ಅಹಮದಾಬಾದ್‌: ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಪತನಗೊಂಡ ವಿಮಾನದ ಬ್ಲ್ಯಾಕ್‌ ಬಾಕ್ಸ್‌ (Black Box) ಮತ್ತು ಡಿವಿಆರ್​ ಪತ್ತೆಯಾಗಿವೆ. ಗುಜರಾತ್ ಸರ್ಕಾರದ 40 ಸಿಬ್ಬಂದಿಯ ಸಹಾಯದಿಂದ ವಿಮಾನ ಅಪಘಾತ ತನಿಖಾ ಬ್ಯೂರೋ(AAIB)ದ ದೊಡ್ಡ ತಂಡವು ಬ್ಲ್ಯಾಕ್‌ ಬಾಕ್ಸ್‌ ಎಂದು ಕರೆಯಲಾಗುವ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ (DFDR)ಪತ್ತೆ ಮಾಡಿದೆ. ಈ ಬ್ಲ್ಯಾಕ್‌ಬಾಕ್ಸ್‌ನಲ್ಲಿನ ಡಾಟಾದ ಸಹಾಯದಿಂದ ವಿಮಾನ ಅಪಘಾತಕ್ಕೆ ನಿಖರ … Continued

ವಿಮಾನ ಅಪಘಾತ | ಮೃತ ಪತ್ನಿ ಚಿತಾಭಸ್ಮ ವಿಸರ್ಜನೆಗೆ ಬಂದಿದ್ದ ಲಂಡನ್ ವ್ಯಕ್ತಿ ಸಾವು ; ಅಲ್ಲಿ ತಂದೆಗಾಗಿ ಕಾಯುತ್ತಿದ್ದಾರೆ ಇಬ್ಬರು ಕಂದಮ್ಮಗಳು

ಅಹಮದಾಬಾದ್: ಅಹಮದಾಬಾದ್‌ನಲ್ಲಿ ನಡೆದ ವಿನಾಶಕಾರಿ ಏರ್ ಇಂಡಿಯಾ ವಿಮಾನ ಅಪಘಾತದ ನಂತರ ದುಃಖಕರವಾದ ವೈಯಕ್ತಿಕ ಕಥೆಗಳು ಹೊರಬರುತ್ತಿವೆ. ಪ್ರತಿಯೊಂದೂ ಹೃದಯವಿದ್ರಾವಕವಾಗಿದೆ. ಅವುಗಳಲ್ಲಿ ಒಂದು ದುರಂತವು ವಿಧಿಯ ಕ್ರೂರ ತಿರುವುಗಳಂತೆ ಕಂಡುಬರುತ್ತಿದೆ; ಮೃತಪಟ್ಟ ಪತ್ನಿಯ ಕೊನೆಯ ಆಸೆಯನ್ನು ಪೂರೈಸಲು ಲಂಡನ್‌ನಿಂದ ಅಹಮದಾಬಾದ್‌ಗೆ ಬಂದಿದ್ದ ವ್ಯಕ್ತಿಯೊಬ್ಬರು ಆಕೆಯ ಚಿತಾ ಭಸ್ಮವನ್ನು ವಿಸಜರ್ಜಿಸಿ ಲಂಡನ್‌ಗೆ ಹಿಂದಿರುಗುವಾಗ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ … Continued

ಅಹಮದಾಬಾದ್ ವಿಮಾನ ಅಪಘಾತ : ಭಾರತದ 10 ಅತಿ ದೊಡ್ಡ ವಿಮಾನ ದುರಂತಗಳು

ಗುರುವಾರ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನವು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು. ವಿಮಾನದಲ್ಲಿದ್ದ ಒಟ್ಟು ೨೪೨ ಜನರಲ್ಲಿ ಓರ್ವ ಮಾತ್ರ ಬದುಕಿದ್ದಾನೆ. ಉಳಿದ ೨೪೧ ಜನರು ಸಾವಿಗೀಡಾಗಿದ್ದಾರೆ. ವಿಮಾನದಲ್ಲಿ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು 242 ಜನರನ್ನು ಹೊತ್ತು ಲಂಡನ್ … Continued