ಕೋವಿಡ್ ಉಲ್ಬಣದ ನಡುವೆ ಪುಣೆ-ಚೆನ್ನೈ ಸಂಶೋಧಕರಿಂದ ಮರು-ಸೋಂಕುಗಳಿಗೆ ಎರಡು-ನಗರ ಸ್ಕ್ಯಾನ್

ಮರು-ಸೋಂಕುಗಳು ಭಾರತದ ಸಾಂಕ್ರಾಮಿಕ ರೋಗದ ತೀವ್ರವಾಗಿ ಏರುತ್ತಿರುವ ಎರಡನೇ ತರಂಗಕ್ಕೆ ಕಾರಣವಾಗಿದೆಯೇ ಎಂದು ನಿರ್ಧರಿಸಲು ಚೆನ್ನೈ ಮತ್ತು ಪುಣೆಯ ಆರೋಗ್ಯ ಸಂಶೋಧಕರು ಹೊಸದಾಗಿ ಸೋಂಕಿತ ಕೋವಿಡ್ -19 ರೋಗಿಗಳಿಂದ ರಕ್ತದ ಮಾದರಿಗಳನ್ನು ವ್ಯವಸ್ಥಿತವಾಗಿ ಪರೀಕ್ಷಿಸಲು ಯೋಜಿಸಿದ್ದಾರೆ, ದೃಢಪಡಿಸಿದ ಕೋವಿಡ್-ಪಾಸಿಟಿವ್ ರೋಗಿಗಳ ರಕ್ತದ ಮಾದರಿಗಳಲ್ಲಿ ಚೆನ್ನೈನ ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆ ಮತ್ತು ಪುಣೆಯ ಬೈರಂಜಿ ಜೀಜೀಭಾಯ್ … Continued

ಪಶ್ಚಿಮ ಬಂಗಾಳ ಚುನಾವಣೆ ಎಬಿಪಿ ಸಮೀಕ್ಷೆ ಪೋಸ್ಟ್‌ ಮಾಡಿದ ಟಿಎಂಸಿ ಆಪರೇಟಿವ್.. ಇದು ಫೇಕ್‌ ಎಂದ ಎಬಿಪಿ ನ್ಯೂಸ್‌..

ಟಿಎಂಸಿಗಾಗಿ ಕೆಲಸ ಮಾಡುತ್ತಿರುವ ಡಿಜಿಟಲ್ ಮಾರ್ಕೆಟ್‌ನಿಂದ ಟ್ವೀಟ್ ಮಾಡಲಾದ ನಕಲಿ ಎಬಿಪಿ ನ್ಯೂಸ್ ಸಮೀಕ್ಷೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಮುಜುಗರಕ್ಕೆ ಕಾರಣವಾಗಿದೆ. 2021 ರ ಬಂಗಾಳ ಚುನಾವಣೆಯ ಮೊದಲ ಹಂತದಲ್ಲಿ ಪ್ರಸ್ತುತ ಮಮತಾ ಬ್ಯಾನರ್ಜಿಯ ಟಿಎಂಸಿ 23-26 ಸ್ಥಾನಗಳನ್ನು ಗೆಲ್ಲಲಿದೆ ಎಂದು ನಕಲಿ ಎಬಿಪಿ ನ್ಯೂಸ್ ಪೋಲ್‌ ಚಿತ್ರವನ್ನು ಟಿಎಂಸಿ ಆಪರೇಟಿವ್‌ನ ಪ್ರೀತಮ್ ಸೀಲ್ … Continued

ಮಹಾರಾಷ್ಟ್ರದ ಗಡ್ಚಿರೋಲಿ ಅರಣ್ಯದಲ್ಲಿ ಪೊಲೀಸರ ಜೊತೆ ಗುಂಡಿನ ಚಕಮಕಿ: ಐವರು ನಕ್ಸಲರ ಸಾವು

ಗಡ್ ಚಿರೋಲಿ: ಮಹಾರಾಷ್ಟ್ರದ ಗಡ್ ಚಿರೋಲಿಯ ಖೋಬ್ರಮೇಂಧ ಅರಣ್ಯ ಪ್ರದೇಶದಲ್ಲಿ ಸೋಮವಾರ ನಡೆದ ಎನ್ ಕೌಂಟರ್ ನಲ್ಲಿ ಐವರು ನಕ್ಸಲೀಯರನ್ನು ಪೊಲೀಸರು ಕೊಂದಿದ್ದಾರೆ. ಖುರ್ಖೇಡಾ ಪ್ರದೇಶದ ಖೋಬ್ರಮೇಧ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರು ಹಾಗೂ ಪೊಲೀಸರ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಐವರು ನಕ್ಸಲೀಯರು ಸತ್ತಿದ್ದಾರೆ, ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸರನ್ನು ಕಂಡಾಕ್ಷಣ ಕೂಡಲೇ … Continued

ಕೊರೊನಾ ವೈರಸ್ ಹರಡಿದ್ದು ಯಾವುದರಿಂದ..? ಸೋರಿಕೆಯಾದ ಡಬ್ಲ್ಯುಎಚ್‌ಒ-ಚೀನಾ ಜಂಟಿ ವರದಿಯಲ್ಲಿ ಮಹತ್ವದ ಮಾಹಿತಿ ಬಹಿರಂಗ..!

ಕೋವಿಡ್ -19 ರ ಮೂಲದ ಕುರಿತಾದ ಜಂಟಿ ಡಬ್ಲ್ಯುಎಚ್‌ಒ-ಚೀನಾ ಜಂಟಿ ಅಧ್ಯಯನವು ಬಾವಲಿಗಳಿಂದ ಮತ್ತೊಂದು ಪ್ರಾಣಿಗಳ ಮೂಲಕ ಮನುಷ್ಯರಿಗೆ ವೈರಸ್‌ ಹರಡಿರುವುದು ಬಹುಪಾಲು ಖಚಿತವಾಗಿದೆ. ಪ್ರಯೋಗಾಲಯದಿಂದ ಕೊರೊನಾ ವೈರಸ್ ಹರಡಿರುವ ಸಾಧ್ಯತೆ ಬಹಳ ಕಡಿಮೆ ಇದೆ ಎಂದು ವರದಿ ತಿಳಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಸೋರಿಕೆಯಾದ ಅಧ್ಯಯನ ವರದಿ ಉಲ್ಲೇಖಿಸಿ ಪತ್ರಿಕೆ ಈ … Continued

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ಗೆ ಅನಾರೋಗ್ಯ, ಮಾ.೩೧ರಂದು ಶಸ್ತ್ರ ಚಿಕಿತ್ಸೆ

ಮುಂಬೈ: ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಆರೋಗ್ಯ ಹದಗೆಟ್ಟಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ. ಅವರ ಪಿತ್ತಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಭಾನುವಾರ ಸಂಜೆಯಿಂದ ಶರದ್ ಪವಾರ್ ಅವರ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದು, ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು. ಅವರ ಪಿತ್ತಕೋಶದಲ್ಲಿ ಕಲ್ಲುಗಳು ಇರುವುದನ್ನು ವೈದ್ಯರು ಪತ್ತೆಹಚ್ಚಿದ್ದಾರೆ. ಹೀಗಾಗಿ ಮುಂದಿನ ಅವರ ಎಲ್ಲ … Continued

ಭಾರತದಲ್ಲಿ ಸೋಮವಾರವೂ 68 ಸಾವಿರ ದಾಟಿದ ದೈನಂದಿನ ಕೊರೊನಾ ಪ್ರಕರಣ..!

ನವ ದೆಹಲಿ: ದೇಶಾದ್ಯಂತ ಕೊರೊನಾ ಆರ್ಭಟ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ (ಸೋಮವಾರ) 68,020 ಜನರಲ್ಲಿ ಸೋಂಕು ಪತ್ತೆಯಾಗಿದೆ. 291 ಜನರು ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,20,39,644ಕ್ಕೆ ಏರಿಕೆಯಾಗಿದೆ. ಹಾಗೂ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 1,61,843ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 5,21,808 ಕೊರೊನಾ ಸಕ್ರಿಯ ಪ್ರಕರಣಗಳಿದ್ದು 1,13,55,993 ಸೋಂಕಿತರು ಗುಣಮುಖರಾಗಿದ್ದಾರೆ. … Continued

ಆಘಾತಕಾರಿ ಘಟನೆ: ಅತ್ಯಾಚಾರ ಆರೋಪಿ ಜೊತೆ ಅತ್ಯಾಚಾರ ಸಂತ್ರಸ್ತೆಯನ್ನೂ ಹಗ್ಗಗಳಿಂದ ಕಟ್ಟಿ ಮೆರವಣಿಗೆ..!

ಅಲಿರಾಜ್‌ಪುರ: ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಅಲಿರಾಜ್‌ಪುರ ಜಿಲ್ಲೆಯಲ್ಲಿ 16 ವರ್ಷದ ಬಾಲಕಿಯೊಬ್ಬಳ ಮೇಲೆ 21 ವರ್ಷದ ಯುವಕ ಭಾನುವಾರ ಅತ್ಯಾಚಾರ ಎಸಗಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆರೋಪಿ ಮತ್ತು ಅತ್ಯಾಚಾರ ಸಂತ್ರಸ್ತೆ ಇಬ್ಬರನ್ನೂ ಹಗ್ಗಗಳಿಂದ ಕಟ್ಟಿ, ಥಳಿಸಿ ಸಾರ್ವಜನಿಕವಾಗಿ ಮೆರವಣಿಗೆ ನಡೆಸಿದ ಆಘಾತಕಾರಿ ಘಟನೆ ವರದಿಯಾಗಿದೆ ಎಂದು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಈ … Continued

ಎರಡನೇ ಕೋವಿಡ್ ಅಲೆ ತೀವ್ರ: ಕಂಪೆನಿಗಳಿಗೆ ಕಾರ್ಮಿಕರ ಕೊರತೆ ಚಿಂತೆ ಹೆಚ್ಚಳ

ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮಧ್ಯದಲ್ಲಿ ಭಾರತವಿದೆ. ಕಳೆದ ಕೆಲವು ವಾರಗಳಿಂದ ಕೋವಿಡ್ -೧೯ ಸೋಂಕುಗಳು ಹೆಚ್ಚಾಗುತ್ತಿವೆ. ಕೊರೊನಾ ವೈರಸ್ ಹೆಚ್ಚಳ ಕಾರ್ಮಿಕರ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಹಾಗೂ ಪುನಃ ಅದನ್ನು ಪರಿಶೋಧಿಸುತ್ತದೆ. ಕಳೆದ ವಾರದಲ್ಲಿ ದಿನಕ್ಕೆ ೪೫ ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಭಾನುವಾರ ದೇಶ ೬೮ ಸಾವಿರದ ವರೆಗೆ … Continued

ಪಶ್ಚಿಮ ಬಂಗಾಳ: ಬಿಜೆಪಿ ಸಂಸದೆ ಮೇಲೆ ರಾಸಾಯನಿಕ ಬಣ್ಣ ಎರಚಿದ ಟಿಎಂಸಿ ಕಾರ್ಯಕರ್ತರು

ಹೂಗ್ಲಿ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚುಚುರಾದಲ್ಲಿ ಬಿಜೆಪಿ ಸಂಸದೆ ಲಾಕೆಟ್‌ ಚಟರ್ಜಿ ಮೇಲೆ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಇಲ್ಲಿನ ರವೀಂದ್ರ ಕಲಿತಾಲಾ ಮೈದಾನದಲ್ಲಿ ನಡೆಯುವ ಬಸಂತ್‌ ಉತ್ಸವದಲ್ಲಿ ಪಾಲ್ಗೊಳ್ಳಲು ಹೋದ ಸಂದರ್ಭದಲ್ಲಿ ದುಷ್ಕರ್ಮಿಗಳು ರಾಸಾಯನಿಕ ಲೆಪಿತ ಬಣ್ಣವನ್ನು ಲಾಕೆಟ್‌ ಕಣ್ಣಿಗೆ ಎರಚಿದ್ದಾರೆ. ಬಣ್ಣ ಎರಚುವುದು ಬೇಡವೆಂದರೂ ಬಣ್ಣ ಎರಚಲಾಗಿದೆ. ಕೊಡಲಿಯಾ ಗ್ರಾಮದ ಪ್ರಧಾನ್‌ … Continued

ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಮೊದಲ ಹಂತದಲ್ಲಿ ಬಿಜೆಪಿ ಜಯಭೇರಿ: ಅಮಿತ್‌ ಶಾ

ನವದೆಹಲಿ: ಪಶ್ಚಿಮ ಬಂಗಾಳ ಹಾಗೂ ಆಸ್ಸಾಂ ರಾಜ್ಯಗಳಲ್ಲಿ ನಡೆದ ವಿಧಾನಸಭೆಯ ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದಲ್ಲಿ ೩೦ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೨೬ರಲ್ಲಿ ಹಾಗೂ ಅಸ್ಸಾಂನಲ್ಲಿ ೪೭ ಸ್ಥಾನಗಳಲ್ಲಿ ೩೭ ಸ್ಥಾನಗಳಲ್ಲಿ ಬಿಜೆಪಿ ಗೆಲುವು … Continued