ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರಿಕೆ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಟೀಂ ಇಂಡಿಯಾದ ( ಪುರುಷರು) ಕೋಚಿಂಗ್ ಸಿಬ್ಬಂದಿ ಗುತ್ತಿಗೆ ವಿಸ್ತರಿಸುವುದಾಗಿ ಪ್ರಕಟಿಸಿದ್ದು, ರಾಹುಲ್ ದ್ರಾವಿಡ್ ಭಾರತದ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ. ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಸೇರಿದಂತೆ ಸಹಾಯಕ ಸಿಬ್ಬಂದಿಯ ಇತರ … Continued

ಮುಂದಿನ 48 ಗಂಟೆಗಳಲ್ಲಿ ಬಂಗಾಳಕೊಲ್ಲಿಯಲ್ಲಿ ‘ಮೈಚಾಂಗ್’ ಚಂಡಮಾರುತ ರಚನೆಯಾಗುವ ಸಾಧ್ಯತೆ: ಐಎಂಡಿ ಎಚ್ಚರಿಕೆ

ನವದೆಹಲಿ: ಬಾಂಗ್ಲಾದೇಶದ ಮೇಲೆ ಮಿಧಿಲಿ ಚಂಡಮಾರುತದ ವಿನಾಶಕಾರಿ ಭೂಕುಸಿತದ ಕೇವಲ ಒಂದು ವಾರದ ನಂತರ, ‘ಮೈಚಾಂಗ್’ ಚಂಡಮಾರುತವು ಈಗ ಕಡಿಮೆ ಒತ್ತಡದ ಪ್ರದೇಶವಾಗಿ (LPA) ರೂಪಾಂತರಗೊಂಡಿದೆ. ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯ ಮೇಲಿನ ಕಡಿಮೆ ಒತ್ತಡದ ಪ್ರದೇಶವು ಚಂಡಮಾರುತವಾಗಿ ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ. ಏತನ್ಮಧ್ಯೆ, … Continued

ಸುರಂಗದ ಹೊರಗಿನ ದೇವಸ್ಥಾನದಲ್ಲಿ ‘ಧನ್ಯವಾದ’ ಹೇಳಬೇಕು”: ಸುರಂಗದಲ್ಲಿ ಸಿಕ್ಕಿಬಿದ್ದ 41 ಕಾರ್ಮಿಕರ ರಕ್ಷಣೆಯ ನಂತರ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್

ಉತ್ತರಾಖಂಡದ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರನ್ನು 17 ದಿನಗಳ ನಿರಂತರ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹೊರತಂದ ನಂತರ ಬುಧವಾರ ಬೆಳಿಗ್ಗೆ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರು “ಧನ್ಯವಾದʼ” ಗಳನ್ನು ಹೇಳಲು ಸುರಂಗದ ಹೊರಗಿನ ತಾತ್ಕಾಲಿಕ ದೇವಾಲಯಕ್ಕೆ ಹೋಗಬೇಕಾಗಿದೆ ಎಂದು ಹೇಳಿದ್ದಾರೆ. ದೀರ್ಘಾವಧಿಯ ಕಾರ್ಯಾಚರಣೆಯ ಸಮಯದಲ್ಲಿ ರಕ್ಷಣಾ ಸ್ಥಳದಲ್ಲಿಯೇ ಇದ್ದ ಡಿಕ್ಸ್, ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಣೆ … Continued

ಉತ್ತರಕಾಶಿ ಸುರಂಗದೊಳಗೆ ಸಿಕ್ಕಿಬಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತಂದಿದ್ದು ಈಗ ನಿಷೇಧವಿರುವ ʼಇಲಿ-ರಂಧ್ರ ಗಣಿಗಾರಿಕೆʼ ವಿಧಾನ…! ಇದು ಹೇಗೆ ಕೆಲಸ ಮಾಡುತ್ತದೆ..?

ದೀರ್ಘಾವಧಿಯ ಕಾರ್ಯಾಚರಣೆಯ ಸಮಯದಲ್ಲಿ ಹೈಟೆಕ್, ಬೇರೆ ದೇಶದಿಂದ ತರಿಸಿದ ಯಂತ್ರಗಳು ಕೆಟ್ಟುಹೋದ ನಂತರ ಉತ್ತರಾಖಂಡದ ಸುರಂಗದೊಳಗೆ ಸಿಕ್ಕಿಬಿದ್ದ 41 ಕಾರ್ಮಿಕರ ನೆರವಿಗೆ ʼಅಸುರಕ್ಷಿತʼ ಎಂಬ ಕಾರಣಕ್ಕಾಗಿ ನಿಷೇಧಿಸಲಾದ ಸಾಂಪ್ರದಾಯಿಕ ಗಣಿಗಾರಿಕೆ ಅಭ್ಯಾಸವೇ ನೆರವಿಗೆ ಬಂದಿದೆ…! ಸವಾಲಿನ ಕಾರ್ಯಾಚರಣೆಯ ಕೊನೆಯ ಹಂತದಲ್ಲಿ 25 ಟನ್ ಅಗರ್ ಯಂತ್ರ ವಿಫಲವಾದ ನಂತರ ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸಲು ಇಲಿ-ರಂಧ್ರ ಗಣಿಗಾರಿಕೆ … Continued

ಸಿಎಂಗೆ ಪತ್ರ ಬರೆದ ಶಾಸಕ ಬಿಆರ್ ಪಾಟೀಲ ; ಶಾಸಕ ಸ್ಥಾನಕ್ಕೆ ರಾಜೀನಾಮೆ ಎಚ್ಚರಿಕೆ

ಬೆಂಗಳೂರು : ಕೆಆರ್ ಐಡಿಎಲ್ ಕಾಮಗಾರಿ ಸಂಬಂಧ ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದ್ದು, ಇದು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದೆ. ಅದರಲ್ಲಿ ಅವರು ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕಳೆದ ವಿಧಾನಸಭೆ ಅಧಿವೇಶನದ ವಿಷಯ ಪ್ರಸ್ತಾಪಿಸಿ ಬಿ.ಆರ್‌. ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ … Continued

ರಕ್ಷಣಾ ಕಾರ್ಯಾಚರಣೆ ಯಶಸ್ವಿ : 17 ದಿನಗಳ ಅಗ್ನಿಪರೀಕ್ಷೆಯ ನಂತರ ಸಿಲ್ಕ್ಯಾರ ಸುರಂಗದಿಂದ ಎಲ್ಲ 41 ಕಾರ್ಮಿಕರು ಸುರಕ್ಷಿತವಾಗಿ ಹೊರಕ್ಕೆ

ಉತ್ತರಕಾಶಿ: ಭೂ ಕುಸಿತದಿಂದಾಗಿ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು 17 ದಿನಗಳ ನಂತರ ಮಂಗಳವಾರ ರಾತ್ರಿ ರಕ್ಷಿಸಲಾಗಿದೆ. ಕಠಿಣ ಕಾರ್ಯಾಚರಣೆಯ ನಂತರ ಎಲ್ಲಾ ಕಾರ್ಮಿಕರನ್ನು ಸುರಂಗದಿಂದ ಸುರಕ್ಷಿತವಾಗಿ ಹೊರತರಲಾಗಿದೆ. ರಕ್ಷಣಾ ಕಾರ್ಯಾಚರಣೆಯ ನಂತರ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಂಗಳವಾರ ಸುರಂಗದ ಹೊರಗೆ ಭೇಟಿಯಾದರು. ಕೇಂದ್ರ … Continued

25 ವರ್ಷಗಳು… 23 ಪ್ರಯತ್ನಗಳು : 56ನೇ ವಯಸ್ಸಿನಲ್ಲಿ ಗಣಿತದಲ್ಲಿ ಸ್ನಾತಕೋತ್ತರ ಪದವಿ (MSc) ಪಡೆದ ಸೆಕ್ಯುರಿಟಿ ಗಾರ್ಡ್…!

ಭೋಪಾಲ್‌ :  ದೃಢ ಸಂಕಲ್ಪ   ಮತ್ತು ಪರಿಶ್ರಮದ ಒಂದು ಗಮನಾರ್ಹ ಸಾಧನೆಯಲ್ಲಿ, ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ 56 ವರ್ಷದ ವ್ಯಕ್ತಿಯೊಬ್ಬರು 25 ವರ್ಷಗಳ ನಂತರ ಗಣಿತದಲ್ಲಿ ಎಂಎಸ್‌ಸಿ (MSc) ತೇರ್ಗಡೆಯಾಗುವ ಮೂಲಕ ಮೈಲಿಗಲ್ಲು ಸಾಧಿಸಿದ್ದಾರೆ. ರಾಜಕರಣ್‌ ಬರುವಾ ಅವರು 23 ಬಾರಿ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಾರೆ. ಆದರೆ ಅವರು ತಮ್ಮ ಕನಸನ್ನು ನನಸು … Continued

ವೀಡಿಯೊ….| ಮನೆ ಹೊರಗೆ ನಿಂತಿದ್ದವನ ಮೇಲೆ ಗುಂಡಿನ ದಾಳಿ : ಪೊರಕೆ ಕೋಲು ಹಿಡಿದು ಶೂಟರ್‌ ಗಳನ್ನು ಓಡಿಸಿದ ಧೈರ್ಯಶಾಲಿ ಮಹಿಳೆ

ಭಿವಾನಿ (ಹರಿಯಾಣ) : ಹರಿಯಾಣದ ಭಿವಾನಿಯಲ್ಲಿ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮನೆಯ ಹೊರಗೆ ನಿಂತಿದ್ದ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗುಂಡಿನ ದಾಳಿಯ ಸಮಯದಲ್ಲಿ, ಪೊರಕೆ ಹಿಡಿದ ಮಹಿಳೆಯೊಬ್ಬರು ದಾಳಿಕೋರರನ್ನು ಧೈರ್ಯದಿಂದ ಎದುರಿಸಿ ದಾಳಿಕೋರರು ಸ್ಥಳದಿಂದ ಓಡಿಹೋಗುವಂತೆ ಮಾಡಿದ್ದು, ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಸಿಸಿಟಿವಿ ಕ್ಯಾಮೆರಾದಲ್ಲಿ … Continued

ಅಂತಿಮ ಹಂತದಲ್ಲಿ ಸುರಂಗ ಕೊರೆಯುವ ಕಾರ್ಯಾಚರಣೆ : “ನಿಮ್ಮ ಬ್ಯಾಗ್‌ಗಳನ್ನು ರೆಡಿ ಇಟ್ಟುಕೊಳ್ಳಿ” ಎಂದು ಒಳಗೆ ಸಿಲುಕಿರುವ ಕಾರ್ಮಿಕರ ಕುಟುಂಬಗಳಿಗೆ ಸೂಚನೆ

ಉತ್ತರಕಾಶಿ: ಭೂ ಕುಸಿತದಿಂದಾಗಿ ಎರಡು ವಾರಗಳಿಂದ ಸುರಂಗದೊಳಗೆ ಸಿಕ್ಕಿಬಿದ್ದಿರುವ 41 ಕಾರ್ಮಿಕರ ಸಂಬಂಧಿಕರಿಗೆ “ಸಿದ್ಧರಾಗಿರಿ” ಎಂದು ಸೂಚಿಸಲಾಗಿದೆ. ಏಕೆಂದರೆ ಅವರನ್ನು ತಲುಪಲು ಕೆಲವೇ ಮೂರು ಮೀಟರ್ ಕೊರೆಯವುದು ಮಾತ್ರ ಬಾಕಿ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. “ಅವರ ಬಟ್ಟೆ ಮತ್ತು ಬ್ಯಾಗ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಿ” ಎಂದು ಅಧಿಕಾರಿಗಳು ಕುಸಿದ ಸುರಂಗದ ಹೊರಗೆ ಇರುವ ಕುಟುಂಬಗಳ ಸದಸ್ಯರಿಗೆ ಹೇಳಿದ್ದಾರೆ. … Continued

ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಲು ಅವಕಾಶ : ತಾಯಿಗೆ 40 ವರ್ಷ ಜೈಲು ಶಿಕ್ಷೆ; “ತಾಯ್ತನಕ್ಕೆ ಅವಮಾನʼ ಎಂದ ಕೋರ್ಟ್‌

ತಿರುವನಂತಪುರಂ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಪ್ರಕರಣದಲ್ಲಿ ಮಹಿಳೆಗೆ ಕೇರಳ ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸೋಮವಾರ 40 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 20,000 ದಂಡ ವಿಧಿಸಿದೆ. ಏಳು ವರ್ಷದ ತನ್ನ ಮಗಳ ಮೇಲೆ ತನ್ನ ಪ್ರೇಮಿ ಅತ್ಯಾಚಾರ ಮಾಡಲು ಸಹಾಯ ಮಾಡಿದ್ದಕ್ಕಾಗಿ ಈ ಶಿಕ್ಷೆ ವಿಧಿಸಲಾಗಿದೆ. ತಿರುವನಂತಪುರಂ … Continued