ಮೃತ ಪತ್ನಿ ನೆನಪಲ್ಲಿ ದೇವಾಲಯ ನಿರ್ಮಾಣ ಮಾಡಿದ ಪತಿ, ನಿತ್ಯವೂ ಪೂಜೆ.. !

ನವದೆಹಲಿ : ವ್ಯಕ್ತಿಯೋರ್ವ ತನ್ನ ಮೃತ ಪತ್ನಿಯ ಹೆಸರಲ್ಲಿ ದೇವಾಲಯ ನಿರ್ಮಾಣ ಮಾಡಿದ್ದಾರೆ. ಮಾತ್ರವಲ್ಲ ಪ್ರೀತಿಯ ಪತ್ನಿಗೆ ಪೂಜೆ ಸಲ್ಲಿಸಿ ಅಪರೂಪದ ಪ್ರೇಮ ತೋರುತ್ತಿದ್ದಾರೆ. ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಸಂಪಖೇಡಾ ಗ್ರಾಮದ ನಾರಾಯಣ್‌ ಸಿಂಗ್‌ ರಾಥೋಡ್‌ ಅವರ ಪತ್ನಿ ಗೀತಾ ಬಾಯಿ ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದರು. ಆದರೆ ಪತ್ನಿಯ ನೆನಪು ನಾರಾಯಣ್‌ ಸಿಂಗ್‌ ಅವರನ್ನು ಕಾಡುತ್ತಲೇ … Continued

ಭಾರತದ ಆಕಾಶ್ ಕ್ಷಿಪಣಿಯ ಹೊಸ ಆವೃತ್ತಿ ಆಕಾಶ್ ಪ್ರೈಮ್ ಕ್ಷಿಪಣಿ ಯಶಸ್ವಿ ಪರೀಕ್ಷೆ

ನವದೆಹಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆಕಾಶ್ ಕ್ಷಿಪಣಿಯ ಹೊಸ ಆವೃತ್ತಿಯ- ‘ಆಕಾಶ್ ಪ್ರೈಮ್’ (Akash Missile — ‘Akash Prime’) -ಅನ್ನು ಒಡಿಶಾದ ಚಂಡಿಪುರದ ಸಮಗ್ರ ಪರೀಕ್ಷಾ ಕೇಂದ್ರದಿಂದ (ಐಟಿಆರ್) ಸೋಮವಾರ ಮಧ್ಯಾಹ್ನ ಪರೀಕ್ಷಿಸಿತು. ಕ್ಷಿಪಣಿ ತನ್ನ ಮೊದಲ ಪರೀಕ್ಷೆಯಲ್ಲಿ ಸುಧಾರಣೆಗಳ ನಂತರ ಶತ್ರು ವಿಮಾನವನ್ನು ಅನುಕರಿಸುವ ಮಾನವರಹಿತ ವೈಮಾನಿಕ ಗುರಿಯನ್ನು … Continued

ಭಾರತ್ ಬಂದ್ ಯಶಸ್ವಿ ಎಂದ ಟಿಕಾಯತ್; ಹಲವಡೆ ತೀವ್ರ, ಹಲವೆಡೆ ಭಾಗಶಃ ಪ್ರತಿಕ್ರಿಯೆ

ನವದೆಹಲಿ: ಸೋಮವಾರ ಸಂಜೆ 4 ಗಂಟೆಗೆ ಕೊನೆಗೊಂಡ 10 ಗಂಟೆಗಳ ಭಾರತ್ ಬಂದ್ ಯಶಸ್ವಿಯಾಗಿದೆ ಎಂದು ಪ್ರತಿಭಟನಾ ನಿರತ ರೈತ ನಾಯಕರು ಸೋಮವಾರ ಹೇಳಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿದ ಮೂರು ಕೃಷಿ ಕಾನೂನುಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ (SKM) ಭಾರತದಾದ್ಯಂತ ಬಂದ್​​ಗೆ ಕರೆ ನೀಡಿತ್ತು. ‘ಭಾರತ್ ಬಂದ್’ ಯಶಸ್ವಿಯಾಯಿತು. ನಮಗೆ … Continued

ಇದು ಹೈಟೆಕ್ ಮೋಸ: ರೀಟ್ ಪರೀಕ್ಷೆಯಲ್ಲಿ ಮೋಸ ಮಾಡಲು 6 ಲಕ್ಷ ರೂ. ಬ್ಲೂಟೂತ್ ಚಪ್ಪಲ್ ಬಳಕೆ..!

ಬಿಕಾನೇರ್: ಪರೀಕ್ಷೆಯ ಸಮಯದಲ್ಲಿ ಮಾಡಿದ ಮೋಸದ ಘಟನೆಯೊಂದು ಇತ್ತೀಚಿನ ಹೈಟೆಕ್ ಪ್ರಕರಣದಲ್ಲಿ ಮುನ್ನಾಭಾಯಿ ಎಂಬಿಬಿಎಸ್ ಚಲನಚಿತ್ರವನ್ನು ಖಂಡಿತವಾಗಿ ನಿಮಗೆ ನೆನಪಿಸುತ್ತದೆ. ಚಪ್ಪಲಿಯಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡಿ ಪರೀಕ್ಷೆಯಲ್ಲಿ ನಕಲು ಮಾಡುವ ಜಾಲ ಭೇದಿಸಿದ್ದಾರೆ..! ವಂಚನೆಗೆ ಸಹಾಯ ಮಾಡಲು ಬ್ಲೂ ಟೂತ್ ಸಾಧನಗಳುಳ್ಳ ವಿಶೇಷ ಚಪ್ಪಲಿಗಳನ್ನು ಧರಿಸಿದ್ದಕ್ಕಾಗಿ 5 ಜನರನ್ನು ಬಿಕನೇರ್‌ನಲ್ಲಿ ಬಂಧಿಸಲಾಯಿತು. ಬಂಧಿತರಲ್ಲಿ ಇಬ್ಬರು ಗ್ಯಾಂಗ್ … Continued

ಬಲೂಚಿಸ್ತಾನದಲ್ಲಿ ನಡೆದ ಸ್ಫೋಟದಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮಹಮ್ಮದ್‌ ಅಲಿ ಜಿನ್ನಾ ಪ್ರತಿಮೆ ಧ್ವಂಸಗೊಳಿಸಿದ ಬಲೂಚ್ ಉಗ್ರರು..!!

ಕರಾಚಿ: ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಪ್ರತಿಮೆಯನ್ನು ಬಲೂಚ್ ಉಗ್ರರು ಬಾಂಬ್‌ ದಾಳಿಯಲ್ಲಿ ಧವಂಸಗೊಳಿಸಿದ್ದಾರೆ. ಬಲೂಚಿಸ್ತಾನ ಪ್ರಾಂತ್ಯದ ಕರಾವಳಿ ನಗರವಾದ ಗ್ವಾದರ್ ನಲ್ಲಿ ಪ್ರವಾಸಿಗರ ವೇಷ ಧರಿಸಿ ಬಾಂಬ್ ಇಟ್ಟು ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಜೂನ್ ತಿಂಗಳಲ್ಲಿ ಮೆರೈನ್ ಡ್ರೈವ್‌ನಲ್ಲಿ ಸ್ಥಾಪಿಸಲಾದ ಪ್ರತಿಮೆ ಸುರಕ್ಷಿತ ವಲಯವೆಂದು ಪರಿಗಣಿಸಲಾಗಿದೆ – ಭಾನುವಾರ ಬೆಳಿಗ್ಗೆ ಪ್ರತಿಮೆಯ ಕೆಳಗೆ … Continued

ಬಿಜೆಪಿ ಭವಾನಿಪುರ ಚುನಾವಣಾ ಪ್ರಚಾರದ ವೇಳೆ ಗದ್ದಲ: ಟಿಎಂಸಿ ಕಾರ್ಯಕರ್ತರ ಪ್ರತಿಭಟನೆ ವೇಳೆ ಬಂದೂಕು ಹೊರತೆಗೆದ ದಿಲೀಪ್ ಘೋಷ್ ಭದ್ರತಾ ಸಿಬ್ಬಂದಿ

ಕೋಲ್ಕತ್ತಾ: ಭವಾನಿಪುರ ವಿಧಾನಸಭಾ ಉಪಚುನಾವಣೆ ಹತ್ತಿರವಾಗುತ್ತಿದ್ದಂತೆ, ಬಿಜೆಪಿ ಮುಖಂಡ ದಿಲೀಪ್ ಘೋಷ್ ಅವರ ವಿರುದ್ಧ ಘೋಷಣೆ ಕೂಗಿ ಅವರನ್ನು ಮುತ್ತಿಗೆ ಹಾಕಿದ ಘಟನೆ ದಕ್ಷಿಣ ಕೊಲ್ಕತ್ತಾ ಕ್ಷೇತ್ರದಲ್ಲಿ ಪ್ರಚಾರದ ಸಮಯದಲ್ಲಿ ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಗುಂಪನ್ನು ಚದುರಿಸಲು ಅವರ ಭದ್ರತಾ ಸಿಬ್ಬಂದಿ ತಮ್ಮ ಬಂದೂಕು ತೋರಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ಸೋಮವಾರ ಬೆಳಿಗ್ಗೆ, ಭವಾನಿಪುರ … Continued

ಭಾರತ್ ಬಂದ್​: ದೆಹಲಿ ಗಡಿಗಳಲ್ಲಿ ವಾಹನಗಳ ಸಾಲು ಸಾಲು

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತಸಂಘಟನೆಗಳು ಇಂದು (ಸೋಮವಾರ) ನಡೆಸುತ್ತಿರುವ ಭಾರತ್ ಬಂದ್​ನ ಬಿಸಿ ದೇಶದ ರಾಜಧಾನಿ ದೆಹಲಿಯ ಜನರಿಗೆ ಹೆಚ್ಚಾಗಿ ತಾಗುತ್ತಿದೆ. ಇಂದು ಬೆಳಿಗ್ಗೆಯಿಂದಲೇ ದೆಹಲಿಯ ಗಡಿಭಾಗಗಳಲ್ಲಿ ಭಾರೀ ಪ್ರಮಾಣದ ಟ್ರಾಫಿಕ್​ ಜ್ಯಾಮ್​ಗಳು ಏರ್ಪಟ್ಟಿರುವುದು ವರದಿಯಾಗಿದೆ. ಸಂಯುಕ್ತ ಕಿಸಾನ್​​ ಮೋರ್ಚಾ ವೇದಿಕೆಯಡಿ 40 ರೈತ ಸಂಘಟನೆಗಳು ಒಟ್ಟಾಗಿ, ಇಂದು ಬೆಳಿಗ್ಗೆ … Continued

ಅಮೆಜಾನ್‌ ಕಂಪನಿ ಈಸ್ಟ್​ ಈಸ್ಟ್​ ಇಂಡಿಯಾ ಕಂಪನಿ 2.0 ಎಂದು ಹೋಲಿಕೆ ಮಾಡಿ ಟೀಕಿಸಿದ ಆರ್​ಎಸ್​ಎಸ್​ ಮುಖವಾಣಿ ಪಾಂಚಜನ್ಯ

ನವದೆಹಲಿ: ಅಮೆಜಾನ್ (Amazon) ವಿಶ್ವದ ಅತಿದೊಡ್ಡ ಆನ್​ಲೈನ್ ಮಾರುಕಟ್ಟೆ. ಇ-ಕಾಮರ್ಸ್​ನ (E-Commerce) ಪ್ರಮುಖ ಕಂಪೆನಿ ಬಗ್ಗೆ ಆರ್​ಎಸ್​​ಎಸ್​ ಸಂಘಟನೆಯ ಮುಖವಾಣಿ ಪಾಂಚಜನ್ಯ (PanchaJanya) ಈ ಕಂಪನಿ “ಈಸ್ಟ್​ ಇಂಡಿಯಾ ಕಂಪೆನಿ 2.0” (East India 2.0) ಹೋಲಿಕೆ ಮಾಡಿದೆ ಎಂದು ವರದಿಗಳು ತಿಳಿಸಿವೆ. ಈ ಕಂಪನಿ ಸರ್ಕಾರದಿಂದ ಅನುಕೂಲಕರ ನೀತಿಗಳನ್ನು ಪಡೆಯುವ ಸಲುವಾಗಿ ಕೋಟ್ಯಂತರ ರೂಪಾಯಿ … Continued

ಮಹಾರಾಷ್ಟ್ರ: ನಿಧಿ ಆಸೆಗಾಗಿ ಹೆಂಡತಿಯನ್ನೇ ನರಬಲಿ ನೀಡಲು ಮುಂದಾಗಿದ್ದ ಪತಿರಾಯ..!

ಜಲ್ನಾ: ಮುಂಬೈ; ನಿಧಿಯನ್ನು ಪಡೆಯುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನೇ ನರಬಲಿ ನೀಡಲು ಮುಂದಾದ ಘಟನೆ ಮಹಾರಾಷ್ಟ್ರದ (Maharashtra) ಜಲ್ನಾ ಜಿಲ್ಲೆಯ ಜಫ್ರಾಬಾದ್ ತಹಸಿಲ್‌ನಲ್ಲಿ ನಡೆದಿದೆ. ಮಹಿಳೆಯನ್ನು ಬಲಿ ನೀಡಿದರೆ ಅಪಾರ ನಿಧಿ ಸಿಗುತ್ತದೆ ಎಂಬ ಆಸೆಯಿಂದ ನರಬಲಿ ನೀಡಲು ಮುಂದಾಗಿದ್ದರು ಎನ್ನಲಾಗಿದೆ. ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಜಫ್ರಾಬಾದ್ ತಹಸಿಲ್‌ನಲ್ಲಿ ತನ್ನ ಹೆಂಡತಿಯನ್ನು ನರಬಲಿಗಾಗಿ ಕೊಲ್ಲಲು … Continued

ಭಾರತದಲ್ಲಿ 26,041 ಹೊಸ ಕೋವಿಡ್ -19 ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 26,041 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ. ಇದು ಭಾನುವಾರ ದಾಖಲಾಗಿದ್ದಕ್ಕಿಂತ 8.1 ರಷ್ಟು ಕಡಿಮೆಯಾಗಿದೆ. ದೇಶದ ಒಟ್ಟು ಪ್ರಕರಣಗಳನ್ನು ಈಗ 3,36,78,786ಕ್ಕೆ ಒಯ್ದಿದೆ. ಕಳೆದ 24 ಗಂಟೆಗಳಲ್ಲಿ, ಭಾರತವು 276 ಕೋವಿಡ್ ಸಾವುಗಳನ್ನು ವರದಿ ಮಾಡಿದೆ, ದೇಶದಲ್ಲಿ ವರದಿಯಾದ ಒಟ್ಟು ಕೋವಿಡ್ ಸಾವುಗಳ ಸಂಖ್ಯೆ 4,47,194 ಕ್ಕೆ … Continued