ಯೋಗೇಶ ಗೌಡ ಕೊಲೆ ಪ್ರಕರಣ : ಕೋರ್ಟಿಗೆ ಹಾಜರಾದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ವಶಕ್ಕೆ ಪಡೆದ ಸಿಬಿಐ

ಬೆಂಗಳೂರು : ಧಾರಾಡದ ಬಿಜೆಪಿ ಮುಖಂಡ ಯೋಗೇಶ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಶಾಸಕ ವಿನಯ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ನಡೆದಿದ್ದ ಧಾರವಾಡ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದ ಯೋಗೇಶ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌‍ ಶಾಸಕ ವಿನಯ … Continued

ಭಾರತೀಯ ಸಂಜಾತ ಲೇಖಕ ಸಲ್ಮಾನ್ ರಶ್ದಿ ಇರಿದ ವ್ಯಕ್ತಿಗೆ 25 ವರ್ಷ ಜೈಲು ಶಿಕ್ಷೆ

ನ್ಯೂಯಾರ್ಕ್: 2022 ರಲ್ಲಿ ನ್ಯೂಯಾರ್ಕ್ ಉಪನ್ಯಾಸ ವೇದಿಕೆಯಲ್ಲಿ ಖ್ಯಾತ ಲೇಖಕ ಹಾಗೂ ಭಾರತದ ಸಂಜಾತ ಸಲ್ಮಾನ್ ರಶ್ದಿ ಅವರನ್ನು ಇರಿದು, ಅವರ ಒಂದು ಕಣ್ಣನ್ನು ಕುರುಡನನ್ನಾಗಿ ಮಾಡಿದ ಆರೋಪದ ಮೇಲೆ ಶಿಕ್ಷೆಗೊಳಗಾದ ವ್ಯಕ್ತಿಗೆ ಶುಕ್ರವಾರ 25 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. 27 ವರ್ಷದ ಹಾದಿ ಮತರ್ ಎಂಬಾತನನ್ನು ಕೊಲೆ ಯತ್ನ ಮತ್ತು ಹಲ್ಲೆಯ ಆರೋಪದಲ್ಲಿ … Continued

ವೀಡಿಯೊ…| ಕೋರ್ಟ್‌ ಆವರಣದಲ್ಲಿಯೇ ಬಡಿದಾಡಿಕೊಂಡ ಅತ್ತೆ-ಸೊಸೆ, ಸಂಬಂಧಿಕರು…! ವಿಡಿಯೋ ವೈರಲ್‌

ನ್ಯಾಯಾಲಯದ ವಿಚಾರಣೆಗೆಂದು ಬಂದಿದ್ದ ಅತ್ತೆ-ಸೊಸೆ ನಡುವೆ ಮಾರಾಮಾರಿ ನಡೆದ ಘಟನೆ ನಾಸಿಕ್‌ನಲ್ಲಿ ಗುರುವಾರ( ಫೆ.20) ಮಧ್ಯಾಹ್ನ ನಡೆದಿದೆ. ನ್ಯಾಯಾಲಯದ ಪ್ರವೇಶದ್ವಾರದಲ್ಲಿ ನಡೆದ ಹೊಡೆದಾಟವು ಅಲ್ಲಿದ್ದವರನ್ನು ಬೆಚ್ಚಿಬೀಳಿಸಿದೆ. ಕೋರ್ಟ್‌ ವಿಚಾರಣೆಗೆ ಹಾಜರಾಗಿದ್ದ ಅತ್ತೆ ಸೊಸೆ ನ್ಯಾಯಾಲಯದ ಆವರಣದಲ್ಲಿಯೇ ಜಗಳವಾಡಿದ್ದಾರೆ. ತೀವ್ರ ವಾಗ್ವಾದ ನಡೆದ ನಂತರ ಎರಡೂ ಕಡೆಯವರ ನಡುವೆ ದೊಡ್ಡ ಮಾರಾಮಾರಿಯೇ ನಡೆಯಿತು. ವೀಡಿಯೋದಲ್ಲಿ, ಕುಟುಂಬದ ಸದಸ್ಯರು … Continued

ಹಲ್ಲೆ ಪ್ರಕರಣ: ಬಾಲಿವುಡ್‌ ನಟ ಆದಿತ್ಯ ಪಾಂಚೋಲಿ ಶಿಕ್ಷೆ ಎತ್ತಿ ಹಿಡಿದ ನ್ಯಾಯಾಲಯ, ಜೈಲು ಶಿಕ್ಷೆಯಲ್ಲಿ ರಿಲೀಫ್‌

ಮುಂಬೈ: ಮುಂಬೈನ ಸೆಷನ್ಸ್ ನ್ಯಾಯಾಲಯವು 2005 ರ ಪಾರ್ಕಿಂಗ್ ನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಬಾಲಿವುಡ್‌ ನಟ ಆದಿತ್ಯ ಪಾಂಚೋಲಿಯ ಅಪರಾಧವನ್ನು ಎತ್ತಿಹಿಡಿದಿದೆ. ಆದರೆ ಮ್ಯಾಜಿಸ್ಟ್ರೇಟ್ ನೀಡಿದ ಒಂದು ವರ್ಷದ ಜೈಲು ಶಿಕ್ಷೆಯನ್ನು ಮಾರ್ಪಡಿಸಿದೆ ಮತ್ತು ಉತ್ತಮ ನಡವಳಿಕೆಯ ಬಾಂಡ್‌ ಮೇಲೆ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ. ಆದಾಗ್ಯೂ ಸೆಷನ್ಸ್ ನ್ಯಾಯಾಲಯವು 59 ವರ್ಷದ ನಟನಿಗೆ … Continued

1984ರ ಸಿಖ್ ವಿರೋಧಿ ದಂಗೆ ಪ್ರಕರಣ; ಕಾಂಗ್ರೆಸ್‌ ಮಾಜಿ ಸಂಸದ ಸಜ್ಜನಕುಮಾರ ದೋಷಿ

ನವದೆಹಲಿ: 1984ರ ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಇಬ್ಬರು ಸಿಖ್ಖರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಂಸದ ಸಜ್ಜನಕುಮಾರ ಅವರನ್ನು ದೆಹಲಿ ನ್ಯಾಯಾಲಯ ಬುಧವಾರ ದೋಷಿ ಎಂದು ತೀರ್ಪು ನೀಡಿದೆ. ಫೆಬ್ರವರಿ 18 ರಂದು ಶಿಕ್ಷೆಯ ಪ್ರಮಾಣ ಕುರಿತು ವಾದಗಳು ನಡೆಯಲಿವೆ. ಗಲಭೆಗೆ ಸಂಬಂಧಿಸಿದ ಮತ್ತೊಂದು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಪ್ರಸ್ತುತ ತಿಹಾರ್ … Continued

ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಬಂಧನ ವಾರಂಟ್

ಲುಧಿಯಾನ : ಆಪಾದಿತ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ ನ್ಯಾಯಾಲಯವು ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಲೂಧಿಯಾನ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ರಮಣ್‌ಪ್ರೀತ್ ಕೌರ್ ಅವರು ವಾರಂಟ್ ಹೊರಡಿಸಿದ್ದಾರೆ. ಮೋಹಿತ್ ಶುಕ್ಲಾ ಎಂಬಾತ ತನಗೆ 10 ಲಕ್ಷ ರೂಪಾಯಿ ವಂಚಿಸಿದ್ದಾನೆ ಎಂದು ಆರೋಪಿಸಿ ಲೂಧಿಯಾನ ವಕೀಲ ರಾಜೇಶ ಖನ್ನಾ ಅವರು ದಾಖಲಿಸಿರುವ … Continued

ಕೋರ್ಟ್‌ ಮೆಟ್ಟಿಲೇರಿದ ಅಮಿತಾಬ್‌ ಬಚ್ಚನ್‌ ಮೊಮ್ಮಗಳು ಆರಾಧ್ಯ

ನವದೆಹಲಿ : ಬಾಲಿವುಡ್‌ ನಟರಾದ ಅಭಿಷೇಕ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ದಂಪತಿ ಪುತ್ರಿ ಆರಾಧ್ಯ ಬಚ್ಚನ್‌ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅವರ ಅರ್ಜಿ ಪುರಸ್ಕರಿಸಿದ ದೆಹಲಿ ಹೈಕೋರ್ಟ್ ಈ ಸಂಬಂಧ ಗೂಗಲ್‌ ಹಾಗೂ ಕೆಲವು ವೆಬ್‌ಸೈಟ್‌ಗಳಿಗೆ ನೋಟಿಸ್ ಜಾರಿ ಮಾಡಿದೆ. ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುಳ್ಳು ವೀಡಿಯೊಗಳನ್ನು ತೆಗೆದುಹಾಕುವಂತೆ ಆದೇಶ ನೀಡುವಂತೆ ಕೋರಿ … Continued

ಶರೋನ್ ರಾಜ್ ಹತ್ಯೆ ಪ್ರಕರಣ: ಪ್ರೇಯಸಿಗೆ ಮರಣದಂಡನೆ ಶಿಕ್ಷೆ ನೀಡಿದ ಕೋರ್ಟ್‌

ತಿರುವನಂತಪುರಂ : 2022 ರಲ್ಲಿ ತನ್ನ ಬಾಯ್ ಫ್ರೆಂಡ್ ಶರೋನ್ ರಾಜ್‌ಗೆ ಮಾರಕ ಕಳೆನಾಶಕ ಬೆರೆಸಿದ ಆಯುರ್ವೇದ ಮಿಶ್ರಣವನ್ನು ಕುಡಿಸಿ ಕೊಲೆ ಮಾಡಿದ ಆರೋಪದ ಮೇಲೆ ಕನ್ಯಾಕುಮಾರಿ ಜಿಲ್ಲೆಯ ರಾಮವರ್ಮಂಚಿರದ 24 ವರ್ಷದ ಮಹಿಳೆಗೆ ನೆಯ್ಯಟ್ಟಿಂಕರಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ತೀರ್ಪು ಕೇಳಲು ಶರೋನ್ ಪೋಷಕರನ್ನು ನ್ಯಾಯಾಲಯವು ಕರೆಸಿಕೊಂಡಿತ್ತು. ವಾದ ವಿವಾದ … Continued

ಆರ್‌ ಜಿ ಕರ್‌ ಕಾಲೇಜ್‌ ಅತ್ಯಾಚಾರ, ಕೊಲೆ ಪ್ರಕರಣ: ಅಪರಾಧಿ ಸಂಜಯ ರಾಯಗೆ ಜೀವಾವಧಿ ಶಿಕ್ಷೆ

ಕೊಲ್ಕತ್ತಾ: ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಕೊಲ್ಕತ್ತಾದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆಯ ಪ್ರಕರಣದ ಪ್ರಮುಖ ಆರೋಪಿ ಸಂಜಯ ರಾಯ್‌ಗೆ ಕೊಲ್ಕತ್ತಾದ ವಿಚಾರಣಾ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿಗೆ ಮರಣದಂಡನೆ ವಿಧಿಸಲು ಕೋರಿದ್ದ ಪ್ರಾಸಿಕ್ಯೂಷನ್‌ನ ಮನವಿಯನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅನಿರ್ಬನ್ … Continued

ನೀಲಿ ತಾರೆಗೆ ಲಂಚ ಪ್ರಕರಣದಲ್ಲಿ ಟ್ರಂಪ್‌ ಅಪರಾಧಿ; ಬೇಷರತ್‌ ಬಿಡುಗಡೆಯೇ ಶಿಕ್ಷೆ..

ವಾಷಿಂಗ್ಟನ್ : ನೀಲಿ ಚಿತ್ರ ತಾರೆ ಸ್ಟಾರ್ಮಿ ಡೆನಿಯಲ್ಸ್ ಅವರಿಗೆ ಲಂಚ ನೀಡಿದ ಪ್ರಕರಣದಲ್ಲಿ ದೋಷಿಯಾಗಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಜೈಲು ಶಿಕ್ಷೆ ನೀಡದೆ ಅವರಿಗೆ ಬಿಡುಗಡೆಯ ಶಿಕ್ಷೆ ನೀಡಿದ್ದಾರೆ. ಇದರರ್ಥ ಚುನಾಯಿತ ಅಧ್ಯಕ್ಷರು ತಮ್ಮ ಮೇಲಿನ ಆರೋಪಗಳಿಗೆ ತಪ್ಪಿತಸ್ಥರೆಂದು ಕಂಡುಬಂದಿದ್ದಾರೆ, ಆದರೆ ಅವರು ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವುದರಿಂದ ಯಾವುದೇ ಜೈಲು … Continued