ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಕಣಕ್ಕೆ: ಎಚ್‌ಡಿಕೆ

ಬೆಂಗಳೂರು: ಬಸವಕಲ್ಯಾಣ, ಮಸ್ಕಿ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಅವರು ಅರಮನೆ ಮೈದಾನದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿ, ಆರ್ಥಿಕ ಸಾಮರ್ಥ್ಯದ ಕೊರತೆಯಿಂದಾಗಿ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ನಿರ್ಧರಿಸಲಾಗಿತ್ತು. ಆದರೆ ಈಗ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಸೆಣೆಸಲಿದ್ದಾರೆ … Continued

ರೈತರ ಹೋರಾಟಕ್ಕೆ ಮಹಾತ್ಮ ಗಾಂಧಿ ಮೊಮ್ಮಗಳು ತಾರಾ ಭಟ್ಟಾಚಾರ್ಜಿ ಬೆಂಬಲ

ಗಾಜಿಯಾಬಾದ್‌: ಮಹಾತ್ಮಾ ಗಾಂಧಿ ಮೊಮ್ಮಗಳು ತಾರಾ ಭಟ್ಟಾಚಾರ್ಜಿ ಕೇಂದ್ರ ಸರಕಾರದ ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಗಾಜಿಯಾಬಾದ್‌ನಲ್ಲಿ ರೈತರು ನಡೆಸುತ್ತಿರುವ ಹೋರಾಟ ಸ್ಥಳಕ್ಕೆ ಭೇಟಿ ನೀಡಿದ ಅವರು, ಶಾಂತಿಯುತವಾಗಿ ಹೋರಾಟ ನಡೆಸುವಂತೆ ರೈತರಿಗೆ ಕರೆ ನೀಡಿದರು. ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಇಲ್ಲಿಗೆ ಬಂದಿಲ್ಲ. ರೈತರು … Continued

ಉತ್ತರಾಖಂಡ ದುರಂತ: ೪೧ ಶವಗಳ ಪತ್ತೆ

ಉತ್ತರಾಖಂಡದ ಚಮೋಲಿಯಲ್ಲಿ ಹಿಮಬಂಡೆ ಕುಸಿದು ಉಂಟಾದ ಪ್ರವಾಹ ದುರಂತದಲ್ಲಿ ಈವರೆಗೆ ೪೧ ಶವಗಳನ್ನು ಹೊರತೆಗೆಯಲಾಗಿದೆ. ರವಿವಾರ ಮಧ್ಯಾಹ್ನದ ವೇಳೆಗೆ ೪೧ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ರಕ್ಷಣಾ ಕಾರ್ಯ ತೀವ್ರಗೊಳಿಸಲಾಗಿದೆ. ಫೆ.೭ರಂದು ಹಿಮಬಂಡೆ ಕುಸಿದು ಪ್ರವಾಹ ಉಂಟಾಗಿತ್ತು. ಪ್ರವಾಹದಿಂದಾಗಿ ಋಷಿಗಂಗಾ ವಿದ್ಯುತ್‌ ಯೋಜನೆ ಕಾಮಗಾರಿ ಹಾನಿಗೊಳಗಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ರಕ್ಷಣೆ ಮಾಡುವ … Continued

ಮೊದಲ ಕೋವಿಡ್‌ ಪ್ರಕರಣಗಳ ಕಚ್ಚಾ ದತ್ತಾಂಶ ಡಬ್ಲುಎಚ್‌ಒ ತಂಡಕ್ಕೆ ನೀಡಲು ನಿರಾಕರಿಸಿದ ಚೀನಾ: ತಂಡದ ಸದಸ್ಯ

ಆರಂಭಿಕ ಕೋವಿಡ್ ಪ್ರಕರಣಗಳ ಬಗ್ಗೆ ಡಬ್ಲ್ಯುಎಚ್‌ಒ ತಂಡಕ್ಕೆ ಕಚ್ಚಾ ಡೇಟಾವನ್ನು ನೀಡಲು ಚೀನಾ ನಿರಾಕರಿಸಿದೆ ಎಂದು ತಂಡದ ಸದಸ್ಯರೊಬ್ಬರು ಹೇಳಿದ್ದಾರೆ. 2019 ರ ಡಿಸೆಂಬರ್‌ನಲ್ಲಿ ಚೀನಾದ ನಗರವಾದ ವುಹಾನ್‌ನಲ್ಲಿ ಏಕಾಏಕಿ ಉಂಟಾದ ಆರಂಭಿಕ ಹಂತದಿಂದ ಚೀನಾ ಗುರುತಿಸಿದ ಕೋವಿಡ್‌-19 174 ಪ್ರಕರಣಗಳ ಬಗ್ಗೆ ರೋಗಿಗಳ ದತ್ತಾಂಶವನ್ನು ತಂಡವು ಕೋರಿತ್ತು, ಆದರೆ ಅವರಿಗೆ ಸಾರಾಂಶವನ್ನು ಮಾತ್ರ ನೀಡಲಾಗಿದೆ, … Continued

ರೈತ ಹೋರಾಟದಲ್ಲಿ ಭಿನ್ನಾಭಿಪ್ರಾಯ

ಲಖನೌ: ರೈತರ ಆಂದೋಲನವನ್ನು ಇನ್ನಷ್ಟು ತೀವ್ರಗೊಳಿಸುವ ದಿಸೆಯಲ್ಲಿ ರೈತ ಸಂಘಟನೆಗಳ ಮಧ್ಯೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದ್ದು, ಭಾರತೀಯ ಕಿಸಾನ್‌ ಯೂನಿಯನ್‌ ರೈಲ್‌ ರೋಕೊ ಕರೆ ನೀಡಿದ್ದರೆ, ಇದಕ್ಕೆ ಸಂಯುಕ್ತ ಕಿಸಾನ್‌ ಮೋರ್ಚಾ ವಿರೋಧ ವ್ಯಕ್ತಪಡಿಸಿದೆ. ನಾವು ರೈಲು ಅಥವಾ ಬಸ್ಸುಗಳ ಸಂಚಾರ ಸ್ಥಗಿತಗೊಳಿಸಲು ಇಚ್ಛಿಸುವುದಿಲ್ಲ. ಸಾರ್ವಜನಿಕರಿಗೆ ತೊಂದರೆ ನೀಡುವುದು ನಮ್ಮ ಉದ್ದೇಶವಲ್ಲ. ನಮ್ಮದು ಶಾಂತಿಯುತ ಹೋರಾಟ ಎಂದು … Continued

ವ್ಯಾಲೆಂಟೈನ್ ಡೇ ಆಚರಣೆ: ವಿಕೃತಿಯ ವ್ಯಾಪಾರೀಕರಣದ ಹುನ್ನಾರ, ಹಿಂದೂ ಸಂಸ್ಕೃತಿಗೆ ಧಕ್ಕೆ,

ಫೆ.೧೪ರಂದು ವಿಶ್ವದಾದ್ಯಂತ ವ್ಯಾಲೈಂಟೇನ್‌ ಡೇ ಆಚರಿಸುತ್ತಾರೆ. ಇದರ ಹಾವಳಿ ವಿರುದ್ಧ ಕಳೆದ ಅನೇಕ ವರ್ಷಗಳಿಂದ ಹೋರಾಡುತ್ತ ಜನಜಾಗೃತಿ ಮೂಡಿಸುತ್ತ ಬರುತ್ತಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಅವರು ಇದರ ಬದಲು ತಂದೆ-ತಾಯಿ  ಪೂಜಾದಿನ ಆಚರಿಲು ಜಾಗೃತಿ ಮೂಡಿಸುತ್ತಿದ್ದಾರೆ. ವ್ಯಾಲೆಂಟೈನ್‌ ಡೇ ಹಿಂದಿರುವ ಹುನ್ನಾರ, ಸಂಸ್ಕೃತಿ ನಾಶ, ವ್ಯಾಪಾರೀಕರಣ, ಡ್ರಗ್‌ ಮಾಫಿಯಾ ಇತ್ಯಾದಿಗಳ ಕುರಿತು ಜಾಗೃತಿ … Continued

ಪ್ರತಿಭಟಿಸುವ ಸ್ವಾತಂತ್ರ್ಯ ಎಲ್ಲ ಸಮಯದಲ್ಲಿ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಪ್ರತಿಭಟಿಸುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಎಲ್ಲ ಸಮಯದಲ್ಲಿ ಮತ್ತು ಎಲ್ಲೆಡೆ ಇರಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ. ಪೌರತ್ವ ಕಾಯಿದೆ ವಿರೋಧಿಸಿ ದೆಹಲಿಯ ಶಹೀನ್‌ಭಾಗ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಈ ಹಿಂದೆ ಸರ್ವೋಚ್ಚ ನ್ಯಾಯಾಲಯ ಕಾನೂನುಬಾಹಿರ ಎಂದು ಹೇಳಿತ್ತು. ಇದನ್ನು ಮರುಪರಿಶೀಲನೆ ಮಾಡುವಂತೆ ಕೋರಿ 12 ಸಾಮಾಜಿಕ ಕಾರ್ಯಕರ್ತರು ಸುಪ್ರೀಂ ಕೋರ್ಟ್‌ ಮೊರೆ … Continued

ಗೂಗಲ್‌ ಮ್ಯಾಪ್‌ಗೆ ಪರ್ಯಾಯವಾಗಿ ಮ್ಯಾಪ್‌ ಮೈ ಇಂಡಿಯಾ ರೂಪಿಸಲು ಇಸ್ರೋ ಸಹಕಾರ

ನವದೆಹಲಿ: ದೇಶದಲ್ಲಿ ಮ್ಯಾಪಿಂಗ್‌ ಸೇವೆಯನ್ನು ಅಭಿವೃದ್ಧಿಪಡಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮ್ಯಾಪ್‌ ಮೈ ಇಂಡಿಯಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ನಕ್ಷೆಗಳು ಹಾಗೂ ಭೌಗೋಳಿಕ ಸ್ಥಳ ಗುತಿಸುವಿಕೆ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ ಮ್ಯಾಪ್‌ ಮೈ ಇಂಡಿಯಾ ಸಂಸ್ಥೆಗೆ ಆದ್ಯತೆ ನೀಡುವುದರೊಂದಿಗೆ ಗೂಗಲ್‌ ಮ್ಯಾಪ್‌ಗೆ ಪರ್ಯಾಯವಾಗಿ ರೂಪಿಸುವುದು ಇದರ ಉದ್ದೇಶವಾಗಿದೆ. ನಕ್ಷೆಗಳು ದೇಶದ ನಿಜವಾದ ಸಾರ್ವಭೌಮತ್ವವನ್ನು ಪ್ರತಿಬಿಂಬಿಸುತ್ತವೆ, … Continued

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಭಾರತೀಯ ಮೂಲದ ಆಕಾಂಕ್ಷಾ ಸ್ಪರ್ಧೆ

ವಿಶ್ವ ಸಂಸ್ಥೆ : ಭಾರತೀಯ ಮೂಲದ ವಿಶ್ವಸಂಸ್ಥೆ ಉದ್ಯೋಗಿ ಕಾಂಕ್ಷಾ ಆರೋರಾ (34) ವಿಶ್ವಸಂಸ್ಥೆಯ ಮುಂದಿನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಲು ಉಮೇದುವಾರಿಕೆ ಘೋಷಿಸಿದ್ದಾರೆ. ಪ್ರಸ್ತುತ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ವಿರುದ್ಧ ಸ್ಪರ್ಧಿಸಲು ಬಯಸಿರುವ ಮೊದಲ ಮಹಿಳಾ ಅಭ್ಯರ್ಥಿ ಇವರಾಗಿದ್ದಾರೆ. ಭಾರತದಲ್ಲಿ ಜನಿಸಿದ ಆಕಾಂಕ್ಷಾ ಕೆನಡಾ ಪಾಸ್‍ಫೋರ್ಟ್ ಹೊಂದಿದ್ದಲ್ಲದೆ ಸಾಗರೋತ್ತರ ಪೌರತ್ವದ ಮೊದಲ ಅಭ್ಯರ್ಥಿ … Continued

ಇಂದಿನಿಂದ ಕೋವಿಡ್‌-೧೯ ಲಸಿಕೆ ಎರಡನೇ ಡೋಸ್‌ ನೀಡಲು ಆರಂಭ

ಮೊದಲ 28 ದಿನಗಳಲ್ಲಿ 8 ದಶಲಕ್ಷ ಫಲಾನುಭವಿಗಳಿಗೆ ಕೋವಿಡ್ -19 ಲಸಿಕೆ ನೀಡಿದೆ.ನೀಡಲಾಗಿದೆ. ಶನಿವಾರದಿಂದ ದೇಶವು ಕೋವಿಡ್ -19 ಲಸಿಕೆಯ ಎರಡನೇ ಪ್ರಮಾಣವನ್ನು ಆರೋಗ್ಯ ಕಾರ್ಯಕರ್ತರ ಆದ್ಯತೆಯ ಗುಂಪಿಗೆ ನೀಡಲು ಪ್ರಾರಂಭಿಸಿತು. ಕ್ಲಿನಿಕಲ್ ಬಳಕೆಯಲ್ಲಿರುವ ಹೆಚ್ಚಿನ ಲಸಿಕೆಗಳಿಗೆ ಎರಡು, ಮೂರು ಅಥವಾ ನಾಲ್ಕು ವಾರಗಳ ಅಂತರದಲ್ಲಿ ಎರಡು-ಡೋಸ್ ನೀಡಬೇಕಾಗುತ್ತದೆ. ಇಂಟ್ರಾಮಸ್ಕುಲರ್ ಮಾರ್ಗದ ಮೂಲಕ ಅವುಗಳನ್ನು ನಿರ್ವಹಿಸಲಾಗುತ್ತಿದೆ. … Continued