ವೀಡಿಯೊ..| ಎರಡು ತಲೆ, 3 ಕಣ್ಣುಗಳಿರುವ ಆಕಳ ಕರು ಜನನ ; ಜನರಿಂದ ಪೂಜೆ

ಬಾಗ್ಪತ್ : ಉತ್ತರ ಪ್ರದೇಶದ ಭಾಗ್ಪತ್‌ನ ಟಿಕ್ರಿ ಗ್ರಾಮದಲ್ಲಿ ಎರಡು ತಲೆಗಳಿರುವ ಕರುವೊಂದು ಜನಿಸಿದ ಅಪರೂಪದ ವಿದ್ಯಮಾನ ವರದಿಯಾಗಿದೆ. ಈ ಕರುವಿಗೆ 2 ತಲೆಗಳು ಮತ್ತು 3 ಕಣ್ಣುಗಳಿವೆ. ಪ್ರಸ್ತುತ ಅದು ಆರೋಗ್ಯವಾಗಿದೆ. ಈ ಅದ್ಭುತ ದೃಶ್ಯವನ್ನು ವೀಕ್ಷಿಸಲು ಬಾಗ್‌ಪತ್ ಸುತ್ತಮುತ್ತಲಿನ ಜನರು ಮತ್ತು ಸ್ಥಳೀಯರು ಆಗಮಿಸುತ್ತಿದ್ದಾರೆ. ಜೂನ್ 18ರಂದು ಕರು ಜನಿಸಿದೆ ಎಂದು ಹಸುವಿನ … Continued

ವೇದಿಕೆಯಲ್ಲಿ ಪಕ್ಷದ ನಾಯಕನಿಗೆ ಹಾರ ಹಾಕಿ ಎಲ್ಲರೆದುರೇ ಹಲವು ಬಾರಿ ಕೆನ್ನೆಗೆ ಹೊಡೆದ ಕಾರ್ಯಕರ್ತ ; ವೀಡಿಯೊ ವೈರಲ್‌

ಜೌನಪುರ : ಉತ್ತರ ಪ್ರದೇಶದ ಜೌನಪುರ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸುಹೇಲ್‌ದೇವ ಸ್ವಾಭಿಮಾನ ಪಕ್ಷದ (ಎಸ್‌ಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ರಾಜಭರ ಅವರಿಗೆ ವೇದಿಕೆಯ ಮೇಲೆ ಹಾರ ಹಾಕಿದ ಪಕ್ಷದ ಕಾರ್ಯಕರ್ತನೊಬ್ಬ ನಂತರ ಪದೇ ಪದೇ ಅವರಿಗೆ ಕೆನ್ನೆಗೆ ಬಾರಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮಹಾರಾಜ ಸುಹೇಲ್‌ದೇವ ಅವರ ವಿಜಯೋತ್ಸವದ … Continued

“ಮೂವರು ಪುರುಷರು, ಹಿಂದಿ ಮಾತಾಡ್ತಾರೆ, ಸ್ಥಳೀಯರಲ್ಲ” : ʼಹನಿಮೂನ್ ಕೊಲೆʼ ಪ್ರಕರಣ ಭೇದಿಸಲು ಸಹಾಯ ಮಾಡಿದ ಪ್ರವಾಸಿ ಗೈಡ್‌ ನೀಡಿದ ಸುಳಿವು…

ನವದೆಹಲಿ: ರಾಜಾ ರಘುವಂಶಿಯನ್ನು ಜೀವಂತವಾಗಿ ನೋಡಿದ ಕೊನೆಯ ವ್ಯಕ್ತಿಯಾಗಿದ್ದ ಪ್ರವಾಸಿ ಮಾರ್ಗದರ್ಶಿಯ ಹೇಳಿಕೆಯೊಂದು, ಬಾಲಿವುಡ್ ಸಿನಿಮಾದ ಕಥಾವಸ್ತುವಿನಂತೆ ಅನೇಕ ಟ್ವಿಸ್ಟ್‌ ಗಳಿಂದ ಕೂಡಿರುವ ಭೀಕರ ಕೊಲೆ ಪ್ರಕರಣವನ್ನು ಭೇದಿಸಲು ನೆರವಾಗಿದೆ. ಪ್ರವಾಸಿ ಗೈಡ್‌ ನೀಡಿದ ಹೇಳಿಕೆಯ ಆಧರಿಸಿ ಮೇಲೆ ತನಿಖೆ ನಡೆಸಿದ ಪೊಲೀಸರು ಸುಮಾರು ಹದಿನೈದು ದಿನಗಳಿಂದ ರಹಸ್ಯವಾಗಿಯೇ ಉಳಿದಿದ್ದ ಕೊಲೆ ಪ್ರಕರಣವನ್ನು ಕೊನೆಗೂ ಭೇದಿಸಿದ್ದಾರೆ. … Continued

ಪಾಕಿಸ್ತಾನ್ ಮುರ್ದಾಬಾದ್ ಎಂದ ಬಾಲಕನಿಗೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು…

ಶಹಜಹಾನಪುರ : ಪಾಕಿಸ್ತಾನದಲ್ಲಿನ ಭಯೋತ್ಪಾದಕ ಕೇಂದ್ರಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ ವೈಮಾನಿಕ ದಾಳಿಯ ನಂತರ, ಉತ್ತರ ಪ್ರದೇಶದ ಶಹಜಹಾನಪುರ ಜಿಲ್ಲೆಯ ಹಳ್ಳಿಯಲ್ಲಿ ನಡೆದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರದ ಮೇಲೆ ಭಾರತ ನಡೆಸಿದ ವಾಯುದಾಳಿಯ ನಂತರ ಸಾರ್ವಜನಿಕರ ಸಂಭ್ರಮದ ವೇಳೆ ಎಂಟು ವರ್ಷದ … Continued

ಗಡ್ಡ ತೆಗೆಯಲು ಒಪ್ಪದ ಗಂಡ ; ‘ಕ್ಲೀನ್ ಶೇವ್’ ಮಾಡುತ್ತಿದ್ದ ಗಂಡನ ತಮ್ಮನ ಜೊತೆ ಓಡಿಹೋದ ಮಹಿಳೆ…!

ಮೀರತ್‌ : ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ವಿಚಿತ್ರ ಅಸಾಮಾನ್ಯ ಪ್ರಕರಣವೊಂದರಲ್ಲಿ, ಎಷ್ಟೇ ಹೇಳಿದರೂ ಗಡ್ಡ ತೆಗೆಯಲು ನಿರಾಕರಿಸಿದ ಗಂಡನನ್ನು ಬಿಟ್ಟು ಮಹಿಳೆಯೊಬ್ಬಳು ತನ್ನ ಗಂಡನ ಸಹೋದರ ಜೊತೆ ಓಡಿಹೋಗಿದ್ದಾಳೆ…! ಮೀರತ್‌ನ ಉಜ್ವಲ್ ಗಾರ್ಡನ್ ಕಾಲೋನಿಯಲ್ಲಿ ವಾಸಿಸುವ ಮುಸ್ಲಿಂ ಧರ್ಮಗುರು ಶಕೀರ್ ಎಂಬ ವ್ಯಕ್ತಿ ಏಳು ತಿಂಗಳ ಹಿಂದೆಯಷ್ಟೇ 25 ವರ್ಷದ ಅರ್ಷಿ ಎಂಬ ಮಹಿಳೆಯನ್ನು … Continued

ವೀಡಿಯೊ…| 10 ಸಲ ಕಚ್ಚಿದ ವಿಷಕಾರಿ ಹಾವು ಶವದ ಪಕ್ಕದಲ್ಲೇ ಬೆಳಗಿನ ತನಕ ಮಲಗಿತ್ತು ; ಆದ್ರೆ ಕತ್ತುಹಿಸುಕಿ ಕೊಲೆಯಾಗಿದ್ದು ಬಯಲಾಯ್ತು..!

ಮೀರತ್ : ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಆಘಾತಕಾರಿ ಹಾಗೂ ನಂಬಲಸಾಧ್ಯವಾದ ಘಟನೆಯೊಂದರಲ್ಲಿ ಯಾರೂ ಊಹಿಸದ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಘಾತಕಾರಿ ಘಟನೆಯಲ್ಲಿ ವಿಷಕಾರಿ ಹಾವೊಂದು ಹತ್ತು ಬಾರಿ ಕಚ್ಚಿ 25 ವರ್ಷದ ವ್ಯಕ್ತಿಯೊಬ್ಬನನ್ನು ಸಾಯಿಸಿದೆ ಎಂದು ನಂಬಲಾಗಿತ್ತು. ಆದರೆ ವಿಷಕಾರಿ ಹಾವು ಕಚ್ಚಿದ್ದು, ಹೌದು ಆದರೆ ದಿಗ್ಭ್ರಮೆಗೊಳಿಸಿದ ಸಂಗತಿಯೆಂದರೆ ಆ ವ್ಯಕ್ತಿಯನ್ನು … Continued

ಎರಡನೇ ಪತಿಗೆ ಡೈವೋರ್ಸ್‌ ನೀಡಿ, ಹಿಂದೂ ಧರ್ಮಕ್ಕೆ ಮತಾಂತರಗೊಂಡು 12ನೇ ತರಗತಿ ವಿದ್ಯಾರ್ಥಿಯನ್ನು ಮದುವೆಯಾದ 3 ಮಕ್ಕಳ ತಾಯಿ…!

ಅಮ್ರೋಹಾ : 30 ವರ್ಷದ ಮಹಿಳೆಯೊಬ್ಬರು ಹಿಂದೂ ಧರ್ಮಕ್ಕೆ ಮತಾಂತರಗೊಂಡು 12 ನೇ ತರಗತಿಯ ವಿದ್ಯಾರ್ಥಿನಿಯನ್ನು ದೇವಾಲಯದ ಸಮಾರಂಭದಲ್ಲಿ ವಿವಾಹವಾದ ವಿದ್ಯಮಾನ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಸನ್‌ಪುರದ ವೃತ್ತ ಅಧಿಕಾರಿ ದೀಪಕುಮಾರ ಪಂತ್ ಅವರ ಪ್ರಕಾರ, ಶಿವಾನಿ ಎಂಬ ಮಹಿಳೆಯನ್ನು ಈ ಹಿಂದೆ ಶಬ್ನಮ್ ಎಂದು ಕರೆಯಲಾಗುತ್ತಿತ್ತು.ಈ … Continued

ವೀಡಿಯೊ | ರಾಮನವಮಿಯಂದು ಅಯೋಧ್ಯೆ ರಾಮಂದಿರದಲ್ಲಿ ರಾಮಲಲ್ಲಾನ ಹಣೆಗೆ ಸ್ಪರ್ಷಿಸಿದ ʼಸೂರ್ಯ ತಿಲಕʼ : ವೀಕ್ಷಿಸಿ

ಅಯೋಧ್ಯಾ : ಇಂದು ರಾಮನವಮಿಯ ಶುಭ ಸಂದರ್ಭದಲ್ಲಿ, ಉತ್ತರ ಪ್ರದೇಶದ ಪವಿತ್ರ ನಗರವಾದ ಅಯೋಧ್ಯೆ ರಾಮಮಂದಿರವು ರಾಮ ಲಲ್ಲಾ ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣವು ನೇರವಾಗಿ ಬೀಳುವ ‘ಸೂರ್ಯ ತಿಲಕ’ ಎಂದು ಕರೆಯಲ್ಪಡುವ ವಿದ್ಯಮಾನದ ಒಂದು ದೈವಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಇದು ಸಾಂಕೇತಿಕವಾಗಿ ಭಗವಾನ್ ರಾಮನ ಜನ್ಮವನ್ನು ಆಚರಿಸಿತು. ಅಯೋಧ್ಯೆಯ ರಾಮಮಂದಿರದಲ್ಲಿ ಪುರೋಹಿತರು ರಾಮಲಲ್ಲಾನಿಗೆ … Continued

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ; ಅಖಿಲ ಭಾರತ ಮುಸ್ಲಿಂ ಜಮಾತ್ ಸ್ವಾಗತ

ಬರೇಲಿ : ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಗುರುವಾರ ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ ಅಂಗೀಕಾರವಾಗಿದ್ದನ್ನು ಸ್ವಾಗತಿಸಿದ್ದಾರೆ. ಇದು ಬಡ ಹಾಗೂ ಹಿಂದುಳಿದ ಮುಸ್ಲಿಮರಿಗೆ ಗಮನಾರ್ಹ ಆರ್ಥಿಕ ಲಾಭ ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಮಸೂದೆಯ ಪರವಾಗಿ ಮತ ಚಲಾಯಿಸಿದ ಎಲ್ಲಾ ಲೋಕಸಭಾ ಸದಸ್ಯರಿಗೆ ನಾನು … Continued

ವೀಡಿಯೊ…| 14ನೇ ಮಗುವಿಗೆ ಜನ್ಮ ನೀಡಿದ 50 ವರ್ಷದ ಮಹಿಳೆ…! ಆಂಬುಲೆನ್ಸ್‌ ನಲ್ಲಿ ಹೆರಿಗೆ

ಹಾಪುರ: ಉತ್ತರ ಪ್ರದೇಶದ ಹಾಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು 14ನೇ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. 50 ವರ್ಷದ ಗರ್ಭಿಣಿ ಮಹಿಳೆ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ತೆರಳುತ್ತಿದ್ದಾಗ ಆಂಬ್ಯುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಇಮಾಮುದ್ದೀನ್ ಎಂಬ ವ್ಯಕ್ತಿಯ ಪತ್ನಿ ಗುಡಿಯಾ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಂಬ್ಯುಲೆನ್ಸ್‌ನಲ್ಲಿ ತನ್ನ 14 ನೇ ಮಗುವನ್ನು ಸ್ವಾಗತಿಸಿದರು. … Continued