ಮದುವೆ ಮಂಟಪಕ್ಕೆ ನುಗ್ಗಿ 60ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಬೀದಿ ನಾಯಿ…!

ಬುದೌನ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬುದೌನ್ ಜಿಲ್ಲೆಯ ಮದುವೆ ಸಮಾರಂಭವೊಂದರಲ್ಲಿ ಬೀದಿ ನಾಯಿಗಳು ಅಟ್ಟಹಾಸ ಮೆರೆದಿದ್ದು, ಮದುವೆ ಸಮಾರಂಭಕ್ಕೆ ನುಗ್ಗಿದ ನಾಯಿ 60ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿದೆ. ವಧುವಿನ ಬೀಳ್ಕೊಡುಗೆಯ (Farewell) ಸಂಭ್ರಮದಲ್ಲಿದ್ದ ಜನರು ನಾಯಿ ದಾಳಿಯಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಸೋಮವಾರ ಬಿಸೌಲಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲ್ಸಿ ರಸ್ತೆಯಲ್ಲಿರುವ ‘ಅಭಿನಂದನ್ ಬ್ಯಾಂಕ್ವೆಟ್ … Continued

ವಿಡಿಯೊ | ಸಭೆಯ ನಡುವೆಯೇ ಎಂಟ್ರಿ ಕೊಟ್ಟು ಜಿಲ್ಲಾಧಿಕಾರಿ ಕುರ್ಚಿಯ ಮೇಲೆ ಕುಳಿತ ಮಂಗ

ಉತ್ತರ ಪ್ರದೇಶದ  ಬಾಗಪತ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಪರೂಪದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಧಿಕಾರಿಯೊಬ್ಬರ ಪ್ರಾಣಿ ಪ್ರೇಮ ಮತ್ತು ಶಾಂತ ಸ್ವಭಾವ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಬಾಗಪತ್ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ‘ರೈತರ ದಿನಾಚರಣೆ’ ಅಂಗವಾಗಿ ಜಿಲ್ಲಾಧಿಕಾರಿಗಳು ಹಾಗೂ ರೈತರ ನಡುವೆ ಮಹತ್ವದ ಸಭೆ ನಡೆಯುತ್ತಿತ್ತು. ಜಿಲ್ಲಾಧಿಕಾರಿ ಅಸ್ಮಿತಾ ಲಾಲ್ ಮತ್ತು … Continued

ಒಬ್ಬಳೇ ʼವಧುʼವನ್ನು ಮದುವೆಯಾಗಲು ದಿಬ್ಬಣ ಸಮೇತ ಬಂದ ಇಬ್ಬರು ವರರನ್ನು ನೋಡಿ ಬೆಚ್ಚಿಬಿದ್ದ ವಧುವಿನ ಕುಟುಂಬ..!

ಅಮ್ರೋಹಾ (ಉತ್ತರ ಪ್ರದೇಶ): ಇತ್ತೀಚಿನ ದಿನಗಳಲ್ಲಿ ಮದುವೆ ಮನೆಗಳಲ್ಲಿ ಸಣ್ಣಪುಟ್ಟ ಗಲಾಟೆಗಳು ಸಾಮಾನ್ಯ. ಆದರೆ ಇಲ್ಲೊಂದು ಕಡೆ ವಧುವೊಬ್ಬಳನ್ನು ವರಿಸಲು ಇಬ್ಬರು ವರರು ಮೆರವಣಿಗೆಯೊಂದಿಗೆ ಏಕಕಾಲಕ್ಕೆ ಮಂಟಪಕ್ಕೆ ಬಂದಿಳಿದು ಅಕ್ಷರಶಃ ಸಿನಿಮಾ ಸ್ಟೈಲ್‌ನಲ್ಲಿ ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ ! ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಬೇಕಾದ ಅನಿವಾರ್ಯತೆ ಎದುರಾಯಿತು. ಅಮ್ರೋಹಾದ ಬ್ಯಾಂಕ್ವೆಟ್ ಹಾಲ್ ಒಂದರಲ್ಲಿ ಮದುವೆ … Continued

ಶಾಕಿಂಗ್‌ : ಮಾಜಿ ಪತ್ನಿಯನ್ನು ಬೈಕಿಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ವ್ಯಕ್ತಿ…!

ಬಹ್ರೈಚ್ : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿಯನ್ನು ಮೋಟಾರ್‌ ಸೈಕಲ್‌ಗೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದು ಕೊಲೆಗೆ ಯತ್ನಿಸಿರುವ ಅಮಾನುಷ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ನಾನ್‌ಪಾರಾ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆ ಹಾಗೂ ಆರೋಪಿ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಬಂಧಿತ ಆರೋಪಿಯನ್ನು ರಾಮಗಾಂವ್ ಪ್ರದೇಶದ … Continued

ಅವಳಿ ಸಹೋದರಿಯನ್ನು 84 ಬಾರಿ ಇರಿದು ಕೊಂದ ಇಂಜಿನಿಯರ್‌ ; ತಾಯಿಗೂ ನೀಡಿದ ‘ಡೆಡ್ಲಿ ಸರ್ಪ್ರೈಸ್’

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದ ಈ ಘಟನೆಯು ಅತ್ಯಂತ ಆಘಾತಕಾರಿಯಾಗಿದ್ದು, ಕೇವಲ ವೃತ್ತಿಜೀವನ ಮತ್ತು ವೈಯಕ್ತಿಕ ಸಂಬಂಧದ ಕುರಿತಾದ ಭಿನ್ನಾಭಿಪ್ರಾಯವು ಎಷ್ಟು ಕ್ರೂರ ಹಂತಕ್ಕೆ ತಲುಪಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ವಿಮಾ ಕಂಪನಿಯೊಂದರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ನೀಲಿಮಾ ಅವರ ಭೇಟಿ ಮಾಡಲು ಮಗ ಹಾರ್ದಿಕ್ ಕಳೆದ ವಾರ ಅವರ ಕಚೇರಿಗೆ ಹೋಗಿದ್ದ. “ಅಮ್ಮಾ … Continued

ಇರಾನ್ ಸುಪ್ರೀಂ ನಾಯಕ ಖಮೇನಿ ಸಾವಿನ ನಂತ್ರ ಉತ್ತರ ಪ್ರದೇಶ ಹಳ್ಳಿಗೂ ಇರಾನ್ ಆಡಳಿತಕ್ಕೂ ಇರುವ ನಂಟು ಮತ್ತೆ ಮುನ್ನೆಲೆಗೆ

ತೆಹ್ರಾನ್: ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಮಧ್ಯಪ್ರಾಚ್ಯದಲ್ಲಿ ಯುಧದ ಆತಂಕ ಎದುರಾಗಿದೆ. ಈ ಘಟನೆಯ ನಡುವೆಯೇ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ‘ಕಿಂತೂರ್’ ಎಂಬ ಪುಟ್ಟ ಗ್ರಾಮವೊಂದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ, ಖಮೇನಿಗೂ ಈ ಹಳ್ಳಿಗೂ ಇರುವ ಆಳವಾದ ಪೂರ್ವಜರ … Continued

ನೀಟ್ ಪರೀಕ್ಷೆ ಬರೆ ಎಂದಿದ್ದಕ್ಕೆ ತಂದೆಯನ್ನೇ ಕೊಂದ ಮಗ…! ತಂಗಿಯ ಎದುರೇ ದೇಹ ಕತ್ತರಿಸಿ ಡ್ರಮ್‌ನಲ್ಲಿ ಅಡಗಿಸಿಟ್ಟಿದ್ದ…!

ಲಕ್ನೋ: ತಂದೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 21 ವರ್ಷದ ಯುವಕನೊಬ್ಬನನ್ನು ಲಕ್ನೋ ಪೊಲೀಸರು ಬಂಧಿಸಿದ್ದಾರೆ. ಲಕ್ನೋ ನಗರದ ಆಶಿಯಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಸ್ಥಳೀಯ ಉದ್ಯಮಿ ಮಾನ್ವೇಂದ್ರ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದೆ. ಫೆಬ್ರವರಿ 20 ರಿಂದ ಮಾನ್ವೇಂದ್ರ ಅವರು ನಾಪತ್ತೆಯಾಗಿದ್ದರು. ಪೊಲೀಸರ ತೀವ್ರ ಶೋಧದ ನಂತರ ಅವರ ಮೃತದೇಹ ಪತ್ತೆಯಾಗಿದ್ದು, ಮಗ … Continued

ಪ್ರಾಮಾಣಿಕತೆಗೆ ಸಾಟಿಯಿಲ್ಲ : ಅಚಾತುರ್ಯದಿಂದ ಗುಜರಿಗೆ ಹೋಗಿದ್ದ 15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು 4 ತಿಂಗಳ ನಂತರ ಹಿಂದಿರುಗಿಸಿದ ವ್ಯಾಪಾರಿ…!

ಫರೀದಾಬಾದ್: ಹಳೆಯ ಸಾಮಾನುಗಳ ಜೊತೆ ಅಚಾತುರ್ಯದಿಂದ ಮಾರಾಟ ಮಾಡಲಾಗಿದ್ದ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಗುಜರಿ ವ್ಯಾಪಾರಿಯೊಬ್ಬರು ಅದರ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಫರೀದಾಬಾದ್ ನಿವಾಸಿ ಅಶೋಕ ಶರ್ಮಾ ಎಂಬವರು ಕಳೆದ ವರ್ಷ ಜನವರಿಯಲ್ಲಿ ಕುಂಭಮೇಳಕ್ಕೆ ಹೋಗುವ ಮುನ್ನ, ಕಳ್ಳರ ಭಯದಿಂದ ತಮ್ಮ ಮನೆಯಲ್ಲಿದ್ದ ಸುಮಾರು 100 ಗ್ರಾಂ … Continued

ರಾತ್ರಿ ಮಲಗಿದ್ದ ಯುವತಿ ನಿಗೂಢವಾಗಿ ಕಣ್ಮರೆ: ಆಕೆಯ ಹಾಸಿಗೆಯ ಮೇಲಿತ್ತು ಹಾವಿನ ಪೊರೆ…!

ಔರೈಯಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಸಿಂಗನ್‌ಪುರ ಎಂಬ ಪುಟ್ಟ ಗ್ರಾಮದಲ್ಲಿ ನಡೆದ ಘಟನೆಯೊಂದು ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ರಾತ್ರಿ ಮಲಗಿದ್ದ 20 ವರ್ಷದ ಯುವತಿಯೊಬ್ಬಳು ನಿಗೂಢವಾಗಿ ಮಾಯವಾಗಿದ್ದು, ಆಕೆಯ ಬದಲಿಗೆ ಹಾಸಿಗೆಯ ಮೇಲೆ ಬಟ್ಟೆಗಳ ಜೊತೆಗೆ 5 ಅಡಿ ಉದ್ದದ ಹಾವಿನ ಪೊರೆ ಪತ್ತೆಯಾಗಿರುವುದು ಹಲವು ಅನುಮಾನ ಹಾಗೂ ಚರ್ಚೆಗಳಿಗೆ ದಾರಿ … Continued

ರಸ್ತೆಯಲ್ಲಿ ಬೆನ್ನಟ್ಟಿ ಬಂದು ಶಿಕ್ಷಕಿಯ ತುಟಿ ತುಂಡರಿಸಿದ 12ನೇ ತರಗತಿ ವಿದ್ಯಾರ್ಥಿ…!

ಮೈನ್‌ಪುರಿ (ಉತ್ತರ ಪ್ರದೇಶ): ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಸಂಬಂಧಿಸಿದಂತೆ ತಲೆತಗ್ಗಿಸುವಂತಹ ಘಟನೆಯೊಂದು ಉತ್ತರ ಪ್ರದೇಶದ ಮೈನಪುರಿಯಲ್ಲಿ ನಡೆದಿದೆ. ತನ್ನನ್ನು ನಿರಂತರವಾಗಿ ಪೀಡಿಸುತ್ತಿದ್ದ ವಿದ್ಯಾರ್ಥಿಯ ಕಾಟ ತಾಳಲಾರದೆ ಕೆಲಸ ಬಿಟ್ಟಿದ್ದ ಶಿಕ್ಷಕಿಯನ್ನು ಬೆನ್ನಟ್ಟಿದ ವಿದ್ಯಾರ್ಥಿ, ಜನವರಿ 26ರಂದು  ಹಲ್ಲೆ ನಡೆಸಿ ಆಕೆಯ ಎರಡು ತುಟಿಗಳನ್ನು ಕತ್ತರಿಸಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಆಗ್ರಾ … Continued