ವೀಡಿಯೊ..| ಕಾರವಾರ : ಇದ್ದಕ್ಕಿದ್ದಂತೆ ಹೊತ್ತಿ ಉರಿದ ಗೂಡ್ಸ್‌ ಟೆಂಪೊ

ಕಾರವಾರ: ಗೂಡ್ಸ್ ಟೆಂಪೋ ವಾಹನಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಕಾರವಾರ ನಗರದ ನಗರದ ಬಿಲ್ಟ್ ಸರ್ಕಲ್ ಬಳಿ ನಿಂತಿದ್ದ ಗೂಡ್ಸ್ ವಾಹನ ಬೆಂಕಿಹೊತ್ತಿಕೊಂಡ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಚಾಲಕ ವಾಹನದಲ್ಲಿ ಇರಲಿಲ್ಲ, ನಿಲ್ಲಿಸಿಟ್ಟ ವಾಹನದಲ್ಲಿ ಇದ್ದಕ್ಕಿದ್ದಂತೆ … Continued

ದಾಂಡೇಲಿ : ಗಣೇಶಗುಡಿ ಬಳಿ ಕಂಡುಬಂದ ಅಪರೂಪದ ʼಪಟ್ಟೆ ಕತ್ತೆಕಿರುಬʼ…!

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಅಭಯಾರಣ್ಯದ ಪ್ರದೇಶವಾದ ಗಣೇಶಗುಡಿ ಸೇತುವೆಯ ಬಳಿ ಸ್ಥಳೀಯವಾಗಿ “ಕತ್ತೆ ಕಿರುಬ” (striped hyena) ಎಂದು ಕರೆಯಲ್ಪಡುವ ಅಪರೂಪದ ಪಟ್ಟೆ ಕತ್ತೆ ಕಿರುಬ ಪತ್ತೆಯಾಗಿದೆ. ಬುಧವಾರ ಬೆಳಗಿನ ಜಾವ ಸ್ಥಳೀಯ ನಿವಾಸಿಯೊಬ್ಬರು ವೀಡಿಯೊದಲ್ಲಿ ಸೆರೆಹಿಡಿದ ಪ್ರಾಣಿಯು, ಈ ಹಚ್ಚ ಹಸಿರಿನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮೊದಲ ದಾಖಲಿತ … Continued

ವೀಡಿಯೊ…| ಮುಂಡಗೋಡ: ಭತ್ತ ಕಟಾವು ಮಾಡುತ್ತಿರುವಾಗ ಬೃಹತ್‌ ಹೆಬ್ಬಾವು ಪ್ರತ್ಯಕ್ಷ…! ಅರಣ್ಯ ಅಧಿಕಾರಿಗಳಿಂದ ರಕ್ಷಣೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹಳ್ಳದಮನೆ ಗ್ರಾಮದಲ್ಲಿ ಬೃಹತ್‌ ಹೆಬ್ಬಾವೊಂದು ಮಂಗಳವಾರ ಭತ್ತದ ಕಟಾವು ಸಮಯದಲ್ಲಿ ಕೃಷಿ ಕಾರ್ಮಿಕರನ್ನು ದಿಗ್ಭ್ರಮೆಗೊಳಿಸಿತು. ಕಾರ್ಮಿಕರು ಭತ್ತದ ಗದ್ದೆಯಲ್ಲಿ ಬೆಳೆಗಳನ್ನು ಕಟಾವು ಮಾಡುವುದರಲ್ಲಿ ನಿರತರಾಗಿದ್ದಾಗ, ಇದ್ದಕ್ಕಿದ್ದಂತೆ ಬೃಹತ್ ಹೆಬ್ಬಾವು ಕಾಣಿಸಿಕೊಂಡಿತು, ಇದು ತಕ್ಷಣ ಅಲ್ಲಿದ್ದವರನ್ನು ಭಯಭೀತರನ್ನಾಗಿಸಿತು ಮತ್ತು ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿತು. ಅಲ್ಲಿದ್ದ ಕಾರ್ಮಿಕರು ಈ … Continued

ದಾಂಡೇಲಿ | ಟ್ರ್ಯಾಕ್ಟರ್‌-ಸ್ಕೂಟಿ ಡಿಕ್ಕಿ ; ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಗೆ ಗಂಭೀರ ಗಾಯ

ಕಾರವಾರ: ಮಂಗಳವಾರ ಬೆಳಿಗ್ಗೆ ಸಂಭವಿಸಿದ ಟ್ರ್ಯಾಕ್ಟರ್‌-ಸ್ಕೂಟರ್‌ ಮುಖಾಮುಖು ಡಿಕ್ಕಿಯಲ್ಲಿ ದಾಂಡೇಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಸ್ಥಳೀಯ ನಗರ ಸಭೆ ಹಾಲಿ ಸದಸ್ಯ ಮೋಹನ ಹಲವಾಯಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ನಗರದ ಮುಖ್ಯ ಅಂಚೆ ಕಚೇರಿ ಬಳಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದ್ದು, ಪ್ರಾಥಮಿಕ ವರದಿಗಳ … Continued

ಯಲ್ಲಾಪುರ | ಪತ್ರಕರ್ತ ನರಸಿಂಹ ಸಾತೊಡ್ಡಿ, ಸುಬ್ರಾಯ ಬಿದ್ರೆಮನೆಗೆ ಸಂಕಲ್ಪ ಪ್ರಶಸ್ತಿ ಪ್ರದಾನ

ಯಲ್ಲಾಪುರ: ಕಲಾರಾಧನೆ ಮಾಡುತ್ತ ಸಂಕಲ್ಪ ಸಂಸ್ಥೆ ಬೆಳೆದು ಬಂದಿದೆ,ಉತ್ಸವವೂ ನಿರಂತರವಾಗಿರುತ್ತದೆ ಎಂದು ಶಿರಳಗಿ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ನುಡಿದರು. ಅವರು ಭಾನುವಾರ ರಾತ್ರಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಗಾಂಧಿ ಕುಟೀರದಲ್ಲಿ 39 ನೇ ಸಂಕಲ್ಪ ಉತ್ಸವದಲ್ಲಿ ಸಾಧಕರಿಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಿ‌ ಮಾತನಾಡಿದರು. ಸಂಕಲ್ಪ ಜ್ಞಾನ ಯಜ್ಞದ ಮೂಲಕ ಭಗವಂತನನ್ನು … Continued

ಶಿರಸಿ : ಅಡಕೆಗೆ ಎಲೆ ಚುಕ್ಕೆ ರೋಗ ನಿವಾರಣೆಗೆ ಶ್ರೀ ಕ್ಷೇತ್ರ ಮಂಜುಗುಣಿಯಲ್ಲಿ ವೃಕ್ಷೋತ್ಪಾತ ಶಾಂತಿ ಹವನ

ಶಿರಸಿ: ಅಡಕೆಗೆ ತಗುಲಿದ ಎಲೆಚುಕ್ಕೆ ರೋಗ ನಿವಾರಣೆ ಸಂಬಂಧ ವೃಕ್ಷೋತ್ಪಾತ ಶಾಂತಿ ಹವನವು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶ್ರೀಕ್ಷೇತ್ರ, ಕರ್ನಾಟಕದ ತಿರುಪತಿ ಮಂಜುಗುಣಿಯ ಶ್ರೀವೇಂಕಟರಮಣ ದೇವಸ್ಥಾನದಲ್ಲಿ ಸೋಮವಾರ ನೆರವೇರಿತು. ಶ್ರೀದೇವರ ಸನ್ನಿಧಾನದಲ್ಲಿ ಸ್ವರ್ಣಪಾದುಕೆ ಹಾಗೂ ಕ್ಷೀರಭಸ್ಮಕ್ಕೆ ಪೂಜೆಯ ಜೊತೆಗೆ ರೋಗ ನಿವಾರಣೆಗಾಗಿ ಸಾಮೂಹಿಕ ಪ್ರಾರ್ಥನೆಯನ್ನು ಶ್ರೀ ದೇವಸ್ಥಾನದ ಪ್ರಧಾನ ಅರ್ಚಕ ವೇ. ಮೂ. … Continued

ವೀಡಿಯೊ…| ಗೋಕರ್ಣ ಕಡಲತೀರದಲ್ಲಿ ಡಾಲ್ಫಿನ್‌ ರಕ್ಷಣೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಕಡಲತೀರದಲ್ಲಿ ನಡೆದ ಅಪರೂಪದ ವಿದ್ಯಮಾನದಲ್ಲಿ, ಇಬ್ಬರು ಯುವಕರು ದಡಕ್ಕೆ ಕೊಚ್ಚಿ ಬಂದಿದ್ದ ಡಾಲ್ಫಿನ್‌ನ ಜೀವವನ್ನು ಉಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಗೋಕರ್ಣದ ಕರಾವಳಿಯಲ್ಲಿರುವ ಸೂರ್ಯ ರೆಸಾರ್ಟ್ ಬಳಿ ಕಡಲತೀರಕ್ಕೆ , ಸುಮಾರು ಐದರಿಂದ ಆರು ಅಡಿ ಉದ್ದದ ಡಾಲ್ಫಿನ್ ಮೀನು ಬಂದಿತ್ತು, ಅದು ನೀರಿನ … Continued

ವೀಡಿಯೊ….| ಕಾರವಾರದಲ್ಲಿ ವಿಶ್ವದ ಅತಿ ದೊಡ್ಡ ಪತಂಗದ ಪ್ರಭೇದ ಪತ್ತೆ

ಕಾರವಾರ : ವಿಶ್ವದ ಅತಿದೊಡ್ಡ ಪತಂಗ ಪ್ರಭೇದಗಳಲ್ಲಿ ಒಂದಾದ ಅಟ್ಲಾಸ್ ಪತಂಗದ (Attacus atlas) ಅಸಾಧಾರಣ ಮಾದರಿಯನ್ನು ಇತ್ತೀಚೆಗೆ ಕಾರವಾರ ನಗರದ ಮಿತಿಯಲ್ಲಿರುವ ಗುಡ್ಡೆಹಳ್ಳಿಯಲ್ಲಿ ಗುರುತಿಸಲಾಗಿದೆ. ಈ ಗಮನಾರ್ಹವಾದ ಆವಿಷ್ಕಾರವನ್ನು ಸ್ಥಳೀಯರಾದ ರವಿಗೌಡ ಅವರು ಈ ಪ್ರದೇಶದಲ್ಲಿ ಚಾರಣ ದಂಡಯಾತ್ರೆಯ ಸಮಯದಲ್ಲಿ ಮಾಡಿದ್ದಾರೆ . ಸಾಮಾನ್ಯವಾಗಿ ಅದರ ಗಮನಾರ್ಹ ನೋಟದಿಂದಾಗಿ ಚಿಟ್ಟೆ ಎಂದು ತಪ್ಪಾಗಿ ಭಾವಿಸುವ … Continued

ಅಂಕೋಲಾ | ವಡ್ಡಿ ಘಾಟ್ ತಿರುವಿನಲ್ಲಿ ಮೂರು ಪಲ್ಟಿ ಹೊಡೆದ ಬಸ್ …

ಅಂಕೋಲಾ: ಬಳ್ಳಾರಿಯಿಂದ ಕುಮಟಾ ಕಡೆಗೆ ಪ್ರಯಾಣಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉತ್ತರ ಕನ್ನಡ ಜಿಲ್ಲೆಯ ವಡ್ಡಿ ಘಾಟ್ ತಿರುವಿನಲ್ಲಿ ಮೂರು ಪಲ್ಟಿ ಹೊಡೆದು ಕಂದಕಕ್ಕೆ ಉರುಳಿದ ಪರಿಣಾಮ ಬಸ್ಸಿನಲ್ಲಿದ್ದ ಚಾಲಕ ನಿರ್ವಾಹಕ ಸೇರಿ 49 ಪ್ರಯಾಣಿಕರಿಗೆ ಗಾಯಗಳಾದ ಘಟನೆ ಶನಿವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಕುಮಟಾ ಶಿರಸಿ ರಸ್ತೆಯು ಕಾಮಗಾರಿಯ … Continued

ಉತ್ತರ ಕನ್ನಡ ಜಿಲ್ಲೆ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ

ಶಿರಸಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 2025 – 28ನೇ ಸಾಲಿಗಾಗಿ ರಾಜ್ಯ ಮತ್ತು ರಾಜ್ಯದ ಎಲ್ಲ ಜಿಲ್ಲೆಗಳ ಘಟಕಗಳ ಪದಾಧಿಕಾರಿ ಹುದ್ದೆಗಳಿಗೆ ಚುನಾವಣೆ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮತ್ತು ಇತರ ಹುದ್ದೆಗಳಿಗೆ ನವೆಂಬರ 9 ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್‌ 13ರಂದು ಜಿಲ್ಲಾ ಪತ್ರಿಕಾ … Continued