ಏರ್‌ ಕಂಡಿಶನ್‌ ವ್ಯವಸ್ಥೆ ಇಲ್ಲ ಎಂದು ಮದುವೆಯನ್ನೇ ರದ್ದುಗೊಳಿಸಿದ ಮದುಮಗಳು..! ವರನ ಕುಟುಂದ ವಿರುದ್ಧ ವರದಕ್ಷಿಣೆ ಪ್ರಕರಣವೂ ದಾಖಲು…!!

ಉತ್ತರ ಪ್ರದೇಶದ ಆಗ್ರಾದ ಶಂಶಾಬಾದ್ ಪಟ್ಟಣದಲ್ಲಿ ನಡೆದ ಒಂದು ಅಸಾಮಾನ್ಯ ಘಟನೆಯಲ್ಲಿ, ವರನ ಕುಟುಂಬದವರು ಏರ್ಪಡಿಸಿದ್ದ ಮದುವೆ ಸ್ಥಳದಲ್ಲಿ ಹವಾನಿಯಂತ್ರಣ ವ್ಯವಸ್ಥೆ ಇಲ್ಲದ ಕಾರಣ ವಧುವು ತಮ್ಮ ಮದುವೆಯನ್ನು ರದ್ದುಗೊಳಿಸಿದ್ದಾಳೆ…! ಆರಂಭದಲ್ಲಿ ತೀವ್ರವಾದ ಉಷ್ವಾಣತೆಯಿಂದ ಉಂಟಾದ  ವಾಗ್ವಾದವು ನಂತರ ವರದಕ್ಷಿಣೆ ಬೇಡಿಕೆ ಮತ್ತು ನಿಂದನೆಯ ಆರೋಪಗಳಾಗಿ ಪರಿಣಮಿಸಿತು. ವರದಿಗಳ ಪ್ರಕಾರ, ಸಮಾರಂಭದ ಸಮಯದಲ್ಲಿ ವಧುವು ವರನ … Continued

70 ವರ್ಷಗಳ ಲಿವ್-ಇನ್ ಸಂಬಂಧದ ನಂತರ 90 ವರ್ಷದ ಸಂಗಾತಿ ಮದುವೆಯಾದ 95 ವರ್ಷದ ವ್ಯಕ್ತಿ…!

ರಾಜಸ್ಥಾನದ ವೃದ್ಧ ದಂಪತಿಯೊಬ್ಬರು 70 ವರ್ಷಗಳ ಕಾಲ ಲಿವ್-ಇನ್ ಸಂಬಂಧ (live-in relationship)ದಲ್ಲಿ ಕಳೆದ ನಂತರ ಈಗ ವಿವಾಹವಾಗಿದ್ದಾರೆ. ಈ ಮದುವೆಯಲ್ಲಿ ವರ 95 ವರ್ಷದ ರಾಮಭಾಯಿ ಅಂಗಾರಿ ಮತ್ತು ವಧು, 90 ವರ್ಷದ ಜೀವಲಿ ದೇವಿ, ಡುಂಗರಪುರ ಜಿಲ್ಲೆಯ ಗಲಂದರ್ ಗ್ರಾಮದಲ್ಲಿ ತಮ್ಮ ಕುಟುಂಬ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಪರಸ್ಪರ ವಿವಾಹವಾದರು. ರಾಜಸ್ಥಾನದ ಬುಡಕಟ್ಟು … Continued

ವೀಡಿಯೊ..| ಮದುವೆ ಸಮಾರಂಭಕ್ಕೆ ಅನಿರೀಕ್ಷಿತವಾಗಿ ಬಂದ ಬೃಹತ್‌ ಖಡ್ಗಮೃಗ ; ಜನರಿಗೆ ಅಚ್ಚರಿ-ಗಾಬರಿ…!

ನೇಪಾಳದಲ್ಲಿ ನಡೆದ ಅಚ್ಚರಿಯ ವಿದ್ಯಮಾನವೊಂದರಲ್ಲಿ ಖಡ್ಗಮೃಗವೊಂದು ಮದುವೆ ಕಾರ್ಯಕ್ರಮಕ್ಕೆ ಅನಿರೀಕ್ಷಿತ ಅತಿಥಿಯಾಗಿ ಆಗಮಿಸುವ ಮೂಲಕ ಎಲ್ಲರಿಗೂ ಅಚ್ಚರಿ ಹಾಗೂ ಗಾಬರಿ ಎರಡನ್ನೂ ಉಂಟು ಮಾಡಿದೆ. ಈ ಘಟನೆ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಚಿಟ್ವಾನ್ ರಾಷ್ಟ್ರೀಯ ಉದ್ಯಾನವನದ ಹೊಂದಿಕೊಂಡಿರುವ ಹಳ್ಳಿಯಲ್ಲಿ ಸಂಭವಿಸಿದೆ, ಈ ವಿಶ್ವ ಪರಂಪರೆ ತಾಣವು ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ ಮತ್ತು 600 ಕ್ಕೂ … Continued

ಮದುಮಗನನ್ನು ಮದುವೆ ಮಂಟಪದಿಂದಲೇ ಅಪಹರಿಸಿದ ನೃತ್ಯಗಾರರ ತಂಡ…!

ಮದುವೆಯೊಂದರಲ್ಲಿ ಸಾಂಪ್ರದಾಯಿಕ ಸಂಭ್ರಮಾಚರಣೆಗೆಂದು ಕರೆಸಿದ್ದ ನೃತ್ಯ ತಂಡವು ವರನನ್ನು ಮಂಟಪದಿಂದಲೇ ಅಪಹರಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಈ ಘಟನೆ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸ್ಥಳದಲ್ಲಿದ್ದ ಜನರ ಪ್ರಕಾರ, “ಲೌಂಡಾ ನಾಚ್ ಪಾರ್ಟಿ” – ಸಾಮಾನ್ಯವಾಗಿ ಮದುವೆಗಳಿಗೆ ನೇಮಿಸಿಕೊಳ್ಳುವ ಸಾಂಪ್ರದಾಯಿಕ ನೃತ್ಯ ತಂಡವಾಗಿದ್ದು, ಈ ನೃತ್ಯ … Continued

ಜಮಖಂಡಿಯಲ್ಲಿ ಘೋರ ದುರಂತ ; ತಾಳಿ ಕಟ್ಟಿದ 15-20 ನಿಮಿಷದಲ್ಲೇ ಮದುಮಗ ಸಾವು…!

ಬಾಗಲಕೋಟೆ : ತಾಳಿ ಕಟ್ಟಿದ 15- 20 ನಿಮಿಷದಲ್ಲಿ ವರ (Groom) ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಜಮಖಂಡಿಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ವೇದಿಕೆಯ ಮೇಲೆ ತಾಳಿಕಟ್ಟಿ ಅಕ್ಷತೆ ಬಿದ್ದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಮದುಮಗ ಕುಸಿದುಬಿದ್ದಿದ್ದಾರೆ. ಇದೆಲ್ಲವೂ ಎರಡೂ ಕುಟುಂಬಗಳು ಹಾಗೂ ಆಪ್ತರ … Continued

ಪಹಲ್ಗಾಮ್ ದಾಳಿ | ಪಾಕ್‌ ಹುಡುಗಿ ಜತೆ ನಡೆಯಬೇಕಿದ್ದ ವಿವಾಹಕ್ಕೆ ಭಾರತದ ವರನಿಗೆ ಗಡಿಯಲ್ಲಿ ನೋ ಎಂಟ್ರಿ ; ದಿಬ್ಬಣ ವಾಪಸ್‌..

ನವದೆಹಲಿ: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಭಾರತ-ಪಾಕಿಸ್ತಾನ ಸಂಬಂಧಗಳನ್ನು ಹದಗೆಟ್ಟ ನಂತರ, ಭಾರತ- ಪಾಕಿಸ್ತಾನದ ವಧು-ವರರ ನಡುವೆ ನಡೆಯಬೇಕಿದ್ದ ಮದುವೆಯೊಂದು ಸ್ಥಗಿತಗೊಂಡಿದೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಕುಟುಂಬವೊಂದರ ವರ ಪಾಕಿಸ್ತಾನದ ಯುವತಿಯ ಜೊತೆ ಮದುವೆ ನಿಶ್ಚಯವಾಗಿತ್ತು. ಏಪ್ರಿಲ್ 30 ರಂದು ನಿಗದಿಯಾಗಿದ್ದ ವಿವಾಹದ ಕಾರ್ಯಕ್ರಮಕ್ಕೆ ದಿಬ್ಬಣದೊಂದಿಗೆ ಗುರುವಾರ ವಾಘಾ-ಅಟ್ಟಾರಿ ಗಡಿಯನ್ನು … Continued

60ನೇ ವಯಸ್ಸಿನಲ್ಲಿ ಪಕ್ಷದ ಸಹೋದ್ಯೋಗಿ ಜೊತೆ ವಿವಾಹವಾದ ಪಶ್ಚಿಮ ಬಂಗಾಳದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ದಿಲೀಪ ಘೋಷ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ಮಾಜಿ ಅಧ್ಯಕ್ಷ ದಿಲೀಪ ಘೋಷ್ ಅವರು ಪಕ್ಷದ ಸಹೋದ್ಯೋಗಿ ರಿಂಕು ಮಜುಂದಾರ್ ಅವರನ್ನು ಶುಕ್ರವಾರ ವಿವಾಹವಾದರು. ಸಾಂಪ್ರದಾಯಿಕ ಬಂಗಾಳಿ ವಿವಾಹ ಉಡುಪನ್ನು ಧರಿಸಿ ತಲೆಯ ಮೇಲೆ ‘ಟೋಪೋರ್’ ಧರಿಸಿ, ದಿಲೀಪ್ ಘೋಷ್ ಅವರು ವಿವಾಹದ ವಿಧಿವಿಧಾನಗಳನ್ನು ಪೂರೈಸಿದರು. “ಎಲ್ಲರ ಶುಭ ಹಾರೈಕೆಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ನನಗೆ ಶುಭ ಹಾರೈಸಿದ … Continued

ಮದುವೆಗೆ 10 ದಿನಗಳ ಮೊದಲು ತನ್ನ ಮಗಳ ಜೊತೆಗೆ ಮದುವೆ ನಿಶ್ಚಿತಾರ್ಥವಾದ ವರನೊಂದಿಗೆ ಪರಾರಿಯಾದ ವಧುವಿನ ತಾಯಿ…!

ಅಲಿಗಢದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಮದ್ರಾಕ್ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದ ಮಹಿಳೆಯೊಬ್ಬರು ಮದುವೆಗೆ ಕೇವಲ ಒಂಬತ್ತು ದಿನಗಳ ಮೊದಲು ತನ್ನ ಮಗಳ ಜೊತೆ ಮದುವೆ ನಿಶ್ಚಯವಾಗಿದ್ದ ಹುಡುಗನೊಂದಿಗೆ ಪರಾರಿಯಾದ ಘಟನೆ ವರದಿಯಾಗಿದೆ. ವರನ ಪ್ರೇಮಪಾಶದಲ್ಲಿ ಸಿಲುಕಿದ್ದ ವಧುವಿನ ತಾಯಿ ಹಾಗೂ ತನ್ನ ಭಾವಿ ಅತ್ತೆಯ ಪ್ರೇಮಪಾಶದಲ್ಲಿ ಸಿಲುಕಿದ ವರ ಇಬ್ಬರೂ ಓಡಿಹೋಗಲು ಯೋಜನೆ ರೂಪಿಸಿದರು. … Continued

ವೀಡಿಯೊ…| ನೆನಪಿಡುವ ಪ್ರೇಮಕಥೆ ! ಒಂದೇ ಸಮಾರಂಭದಲ್ಲಿ ಇಬ್ಬರು ಯುವತಿಯರನ್ನು ಮದುವೆಯಾದ ವರ…!

ಹೈದರಾಬಾದ್‌ : ಅಪರೂಪದ ಮತ್ತು ಅಚ್ಚರಿಯ ಘಟನೆಯೊಂದರಲ್ಲಿ, ತೆಲಂಗಾಣದ ಕೊಮಾರಂ ಭೀಮ್ ಆಸಿಫಾಬಾದ್ ಜಿಲ್ಲೆಯ ವ್ಯಕ್ತಿಯೊಬ್ಬರು ಇತ್ತೀಚೆಗೆ ಇಬ್ಬರು ಮಹಿಳೆಯರನ್ನು ಒಂದೇ ಸಮಾರಂಭದಲ್ಲಿ ವಿವಾಹವಾಗಿದ್ದಾರೆ…! ಲಿಂಗಾಪುರ ಮಂಡಲದ ಗುಮ್ನೂರ್ ಗ್ರಾಮದಲ್ಲಿ ನಡೆದ ಮದುವೆಯಲ್ಲಿ ವರ ಸೂರ್ಯದೇವ ಎಂಬವರು ಲಾಲದೇವಿ ಮತ್ತು ಜಲ್ಕರಿ ದೇವಿ ಎಂಬ ಇಬ್ಬರು ಯುವತಿಯರನ್ನು ಇಬ್ಬರನ್ನು ಒಂದೇ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ಸೂರ್ಯದೇವ ಅವರು … Continued

ಚಿತ್ರದುರ್ಗ | ಆರತಕ್ಷತೆ ಭೋಜನದ ವೇಳೆ ಕುಡಿಯುವ ನೀರಿನ ವಿಚಾರಕ್ಕೆ ಜಗಳ ; ಮದುವೆಯೇ ರದ್ದಾಯ್ತು…!

ಚಿತ್ರದುರ್ಗ: ಮದುವೆ ಮಂಟಪದಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ನಡೆದ ಗಲಾಟೆಯಿಂದಾಗಿ ಮದುವೆಯೇ ಮುರಿದು ಬಿದ್ದ ಘಟನೆ (Wedding Cancelled) ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ದಾವಣಗೆರೆ ಜಿಲ್ಲೆ ಜಗಳೂರಿನ ವರ ಹಾಗೂ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿರತಹಳ್ಳಿಯ ವಧುವಿನ ವಿವಾಹ ಅರತಕ್ಷತೆ ಸಮಾರಂಭ ಹಿರಿಯೂರಿನ ಬಲಿಜ ಶ್ರೇಯಾ ಭವನದಲ್ಲಿ ಶನಿವಾರ … Continued