ಭಾರತದ ಸರಕುಗಳ ಮೇಲೆ ಮೇಲೆ ಶೇ.50 ರಷ್ಟು ಸುಂಕ ನಾಳೆಯಿಂದ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ನವದೆಹಲಿ: ಭೌಗೋಳಿಕ ರಾಜಕೀಯ ಒತ್ತಡಗಳ ನೆರಳಿನಲ್ಲಿ ಭಾರತದ ಸರಕುಗಳ ಮೇಲೆ ಸುಂಕವನ್ನು ಹೆಚ್ಚಿಸಲು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ನಿರ್ಧರಿಸಿದ ನಂತರ, ಆಗಸ್ಟ್‌ 27ರಿಂದ ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇಕಡಾ 50ರಷ್ಟು ಸುಂಕವನ್ನು ಜಾರಿಗೆ ತರಲು ಅಮೆರಿಕ ಕಸ್ಟಮ್ಸ್ ಮತ್ತು ಗಡಿ ರಕ್ಷಣೆ (CBP) ಕರಡು ಸೂಚನೆ ಹೊರಡಿಸಿದೆ. ಭಾರತದಿಂದ ಆಮದು ಮಾಡಿಕೊಳ್ಳುವ … Continued

ವೀಡಿಯೊ…| ಜೈಸಲ್ಮೇರಿನಲ್ಲಿ 21 ಕೋಟಿ ವರ್ಷಗಳಷ್ಟು ಜುರಾಸಿಕ್ ಯುಗದ ಹಳೆಯ ಪಳೆಯುಳಿಕೆಗಳು ಪತ್ತೆ…!

ಜೈಸಲ್ಮೇರ್: ರಾಜಸ್ಥಾನದ ಜೈಸಲ್ಮೇರ್‌ನ ಭೂ ವಿಜ್ಞಾನಿಗಳು ಬಹುಶಃ ಡೈನೋಸಾರ್ ಅವಶೇಷಗಳು ಸೇರಿದಂತೆ ಜುರಾಸಿಕ್ ಯುಗದ ಅಪರೂಪದ ಕಶೇರುಕದ(vertebrate) ಪಳೆಯುಳಿಕೆಗಳನ್ನು ಪತ್ತೆಹಚ್ಚಿದ್ದಾರೆ. ಇದು ಈ ಪ್ರದೇಶದ ಇತಿಹಾಸಪೂರ್ವ ಪರಿಸರ ವಿಜ್ಞಾನ ಮತ್ತು ಜೀವವೈವಿಧ್ಯದ ಬಗ್ಗೆ ಹೊಸ ಒಳನೋಟಗಳನ್ನು ನೀಡುತ್ತವೆ ಎಂದು ನಿರೀಕ್ಷಿಸಲಾಗಿದೆ. ಪ್ರಾಥಮಿಕ ಅಧ್ಯಯನಗಳು ಪಳೆಯುಳಿಕೆಗಳು ಫೈಟೊಸಾರ್‌ಗೆ ಸೇರಿವೆ ಎಂದು ಸೂಚಿಸುತ್ತವೆ, ಫೈಟೊಸಾರ್‌ ಎಂಬುದು ನದಿ ವ್ಯವಸ್ಥೆಗಳ … Continued

ವರದಕ್ಷಿಣೆ ಕಿರುಕುಳ; ಪುಟ್ಟ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ

ಜೋಧಪುರ: ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿ ಶುಕ್ರವಾರ ಉಪನ್ಯಾಸಕಿಯೊಬ್ಬರು ತಮ್ಮ ಮೂರು ವರ್ಷದ ಮಗಳ ಜೊತೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳು ಯಶಸ್ವಿ ಸ್ಥಳದಲ್ಲೇ ಸಾವಿಗೀಡಾದರೆ, ಆಕೆಯ ತಾಯಿ ಹಾಗೂ ಉಪನ್ಯಾಸಕಿ ಸಂಜು ಬಿಷ್ಣೋಯ ಶನಿವಾರ ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ವರದಕ್ಷಿಣೆಗಾಗಿ ಪತಿ ಮತ್ತು ಅತ್ತೆ-ಮಾವ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಆತ್ಮಹತ್ಯೆ ಪತ್ರವನ್ನು … Continued

ಹೆಣ್ಣು ಮಕ್ಕಳು ಜನಿಸಿದರೆ ಹೆರಿಗೆಗೆ ಯಾವುದೇ ಶುಲ್ಕ ತೆಗೆದುಕೊಳ್ಳದ ಈ ಡಾಕ್ಟರ್‌…! ಕೈಗಾರಿಕೋದ್ಯಮಿ ಆನಂದ ಮಹೀಂದ್ರಾ ಶ್ಲಾಘನೆ

ಭಾರತದ ಖ್ಯಾತ ಕೈಗಾರಿಕೋದ್ಯಮಿ ಆನಂದ ಮಹೀಂದ್ರಾ ಇತ್ತೀಚೆಗೆ ಡಾ. ಗಣೇಶ ರಖ್ ಅವರ ಅಸಾಧಾರಣ ಕಾರ್ಯ ಮತ್ತು ಮಾನವೀಯತೆಯನ್ನು ಶ್ಲಾಘಿಸಿದ್ದಾರೆ. ಪುಣೆ ಮೂಲದ ವೈದ್ಯರ ಕಥೆಯನ್ನು ಐಎಎಸ್ ಅಧಿಕಾರಿ ಡಿ. ಪ್ರಶಾಂತ ನಾಯರ್ ಅವರು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ಆನಂದ ಮಹೀಂದ್ರಾ ಅವರಿಂದ ಪ್ರಶಂಸೆ ವ್ಯಕ್ತವಾಗಿದೆ. ಪ್ರಶಾಂತ ನಾಯರ್ ಅವರ ಪೋಸ್ಟ್ ಪ್ರಕಾರ, ದಿನಗೂಲಿ ಕಾರ್ಮಿಕರೊಬ್ಬರು … Continued

“ಎಷ್ಟೇ ಒತ್ತಡ ಬರಲಿ…ನಾವು ಅದನ್ನು ತಡೆದುಕೊಳ್ಳುತ್ತೇವೆ”: ಅಮೆರಿಕದ ಸುಂಕದ ಗಡುವು ಮುಕ್ತಾಯದ ಮುನ್ನ ಪ್ರಧಾನಿ ಮೋದಿ

ನವದೆಹಲಿ: ಭಾರತೀಯ ಸರಕುಗಳ ಆಮದುಗಳ ಮೇಲಿನ ಅಮೆರಿಕದ ಸುಂಕದ ಗಡುವು ಎರಡು ದಿನಗಳು ಬಾಕಿ ಇರುವಾಗ, ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಮ್ಮ ಸರ್ಕಾರ ರೈತರು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಹಿತಾಸಕ್ತಿಗಳ ಬಗ್ಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಒತ್ತಿ ಹೇಳಿದ್ದಾರೆ. “ನಮ್ಮ ಮೇಲಿನ ಒತ್ತಡ ಹೆಚ್ಚಾಗಬಹುದು, ಆದರೆ ನಾವು ಅದನ್ನು ಭರಿಸುತ್ತೇವೆ” ಎಂದು ಹೇಳಿದ್ದಾರೆ. … Continued

ಶಿರಸಿ : 35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಶಿರಸಿ: ಹಳೆಯ ಪ್ರಕರಣವೊಂದರಲ್ಲಿ ಬೇಕಾಗಿದ್ದ ಕಳೆದ ಸುಮಾರು 35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಪ್ರಸ್ತುತ ನವದೆಹಲಿಯಲ್ಲಿ ವಾಸವಾಗಿದ್ದು, ದಾಂಡೇಲಿಗೆ ಬರುವ ಬಗ್ಗೆ ಖಚಿತ ಮಾಹಿತಿ ದೊರಕಿತ್ತು. ಅಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. 1990ರ ನವೆಂಬರ್ 29 ರಂದು ಶಿರಸಿಯ ಐದು ರಸ್ತೆಯ ಬಳಿ ದಿನಕರ ನಾರಾಯಣ … Continued

ಪ್ರಧಾನಿ ಮೋದಿ ಪದವಿ ಪ್ರಮಾಣ ಪತ್ರ ; ಸಿಐಸಿ ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪದವಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸಬೇಕೆಂಬ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ನೀಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಪ್ರಧಾನಿ ಮೋದಿ ಅವರ ಪದವಿಗೆ ಸಂಬಂಧಿಸಿದ ಮಾಹಿತಿ ಒದಗಿಸುವಂತೆ ವಿಶ್ವವಿದ್ಯಾಲಯಕ್ಕೆ ಸಿಐಸಿ 2017ರಲ್ಲಿ ನೀಡಿದ್ದ ಆದೇಶ ಪ್ರಶ್ನಿಸಿ ದೆಹಲಿ ವಿಶ್ವವಿದ್ಯಾಲಯ ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಸಚಿನ್ ದತ್ತ ಪುರಸ್ಕರಿಸಿದರು. … Continued

ವೀಡಿಯೊಗಳು…| ಭಾರೀ ಮಳೆ : ಅಣೆಕಟ್ಟು ತುಂಬಿ ಹರಿದು 2 ಕಿಮೀ ಉದ್ದ, 100 ಅಡಿ ಅಗಲ, 55 ಅಡಿ ಆಳದ ʼಬೃಹತ್‌ ಕಂದಕʼ ನಿರ್ಮಾಣ…!

ಜೈಪುರ: ಸುರ್ವಾಲ್ ಅಣೆಕಟ್ಟು ಉಕ್ಕಿ ಹರಿದ ನಂತರ ರಾಜಸ್ಥಾನದ ಸವಾಯಿ ಮಾಧೋಪುರ ಗ್ರಾಮದ ಗ್ರಾಮದಲ್ಲಿ 2 ಕಿ.ಮೀ. ಕಂದಕ ರೂಪುಗೊಂಡಿದೆ. ನೀರು ಹೊಲಗಳಲ್ಲಿ ಹರಿದಿದೆ ಮತ್ತು ಜಾದಾವಟ ಗ್ರಾಮವು ಹೆಚ್ಚಿನ ವಿನಾಶವನ್ನು ಅನುಭವಿಸಿದೆ. ಗ್ರಾಮದ ಬಳಿ 2 ಕಿ.ಮೀ ಉದ್ದ, ಸುಮಾರು 100 ಅಡಿ ಅಗಲ ಮತ್ತು 55 ಅಡಿ ಆಳದ ಕಂದಕವು ರೂಪುಗೊಂಡಿದೆ. ಮಳೆ … Continued

ಆನ್‌ಲೈನ್‌ ಅಕ್ರಮ ಬೆಟ್ಟಿಂಗ್‌: ಶಾಸಕ ವೀರೇಂದ್ರ ಪಪ್ಪಿ ಆಗಸ್ಟ್‌ 28ರವರೆಗೆ ಇ ಡಿ ಕಸ್ಟಡಿಗೆ

ಬೆಂಗಳೂರು : ಆನ್‌ಲೈನ್‌ ಮತ್ತು ಆಫ್‌ಲೈನ್‌ ಅಕ್ರಮ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ ಸಿ ವೀರೇಂದ್ರ ಅಲಿಯಾಸ್‌ ವೀರೇಂದ್ರ ಪಪ್ಪಿ ಅವರನ್ನು ಬೆಂಗಳೂರಿನ ಜಾರಿ ನಿರ್ದೇಶನಾಲಯದ ನ್ಯಾಯಾಲಯವು ಆಗಸ್ಟ್‌ 28ರವರೆಗೆ ಜಾರಿ ನಿರ್ದೇಶನಾಲಯ(ಇ.ಡಿ)ದ ಕಸ್ಟಡಿಗೆ ನೀಡಿದೆ. ಸಿಕ್ಕಿಂನ ಗ್ಯಾಂಗ್ಟಕ್‌ನಲ್ಲಿ ಶನಿವಾರ ಬೆಳಿಗ್ಗೆ ವೀರೇಂದ್ರ ಪಪ್ಪಿ ಅವರನ್ನು ಬಂಧಿಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು … Continued

ಭಾರತದ ಕೆಲಹಾವುಗಳು ಸತ್ತ ಕೆಲಗಂಟೆಗಳ ನಂತರವೂ ಕಚ್ಚುತ್ತವೆ…ವಿಷ ಕಕ್ಕುತ್ತವೆ ಎಚ್ಚರ…!

ಭಾರತದಲ್ಲಿನ ಮಾರಕ ಹಾವು ಪ್ರಭೇದಗಳಾದ ಉಗುಳುವ (ಏಕವರ್ಣದ) ನಾಗರಹಾವುಗಳು ಮತ್ತು ಕ್ರೈಟ್‌ (ಕಟು ಹಾವು)ಗಳು ಸತ್ತ ನಂತರವೂ ಅವು ನಮಗೆ ಕಚ್ಚಿ ವಿಷವನ್ನು ದೇಹದೊಳಗೆ ಕಕ್ಕಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಇಲ್ಲಿಯವರೆಗೆ, ಸತ್ತ ಕೆಲಗಂಟೆಗಳ ನಂತರವೂ ವಿಷವನ್ನು ಚುಚ್ಚುವ ಸಾಮರ್ಥ್ಯವು ಅಮೇರಿಕನ್ ರಾಟಲ್‌ಸ್ನೇಕ್‌ಗಳು, ತಾಮ್ರಮುಖಿಗಳು, ಏಷ್ಯನ್ ಮತ್ತು ಉಪ-ಸಹಾರನ್ ಉಗುಳುವ ನಾಗರಹಾವುಗಳು ಮತ್ತು ಆಸ್ಟ್ರೇಲಿಯಾದ … Continued