ಅಯೋಧ್ಯೆಯಲ್ಲಿ ₹14.5 ಕೋಟಿಗೆ ಭೂಮಿ ಖರೀದಿಸಿದ ಅಮಿತಾಬ ಬಚ್ಚನ್ : ವರದಿ

ನವದೆಹಲಿ : ಸೂಪರ್‌ಸ್ಟಾರ್ ಅಮಿತಾಬ ಬಚ್ಚನ್ ಉತ್ತರ ಪ್ರದೇಶದ ಪಟ್ಟಣವಾದ ಅಯೋಧ್ಯೆಯಲ್ಲಿ ಸೆವೆನ್ ಸ್ಟಾರ್ ಎನ್‌ಕ್ಲೇವ್‌ನಲ್ಲಿ ಪ್ಲಾಟ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರವು ಈ ತಿಂಗಳ ಕೊನೆಯಲ್ಲಿ ಬಾಗಿಲು ತೆರೆಯಲಿದೆ. ಮುಂಬೈ ಮೂಲದ ಡೆವಲಪರ್ ದಿ ಹೌಸ್ ಆಫ್ ಅಭಿನಂದನ ಲೋಧಾ (HoABL) ಪ್ಲಾಟ್‌ನ ಗಾತ್ರ ಮತ್ತು ಮೌಲ್ಯವನ್ನು ಬಹಿರಂಗಪಡಿಸಿಲ್ಲ. ಆದರೆ … Continued

ಆಂಧ್ರ ಕಾಂಗ್ರೆಸ್ ಅಧ್ಯಕ್ಷ ಗಿಡುಗು ರುದ್ರರಾಜು ರಾಜೀನಾಮೆ : ವೈಎಸ್ ಶರ್ಮಿಳಾಗೆ ಹುದ್ದೆ…?

ಆಂಧ್ರ ಕಾಂಗ್ರೆಸ್ ಮುಖ್ಯಸ್ಥ ಗಿಡುಗು ರುದ್ರರಾಜು ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ, ಅವರ ರಾಜೀನಾಮೆಯು ವೈಎಸ್ ಶರ್ಮಿಳಾ ರಾಜ್ಯ ಘಟಕದ ಉಸ್ತುವಾರಿ ವಹಿಸಿಕೊಳ್ಳಲು ದಾರಿ ಮಾಡಿಕೊಟ್ಟಿದೆ. ನವೆಂಬರ್ 22 ರಿಂದ ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಅಧ್ಯಕ್ಷರಾಗಿರುವ ರಾಜು ಅವರು ಆಂಧ್ರ ಪ್ರದೇಶ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ. “ಆಂಧ್ರಪ್ರದೇಶದ ಪಿಸಿಸಿ ಅಧ್ಯಕ್ಷ … Continued

ಕೆವೈಸಿ ಅಪೂರ್ಣವಾಗಿದೆಯೇ..? ನಿಮ್ಮ ಫಾಸ್ಟ್‌ ಟ್ಯಾಗ್‌ ಜನವರಿ 31ರ ನಂತರ ನಿಷ್ಕ್ರಿಯವಾಗಲಿದೆ…!

ನವದೆಹಲಿ: ಖಾತೆಯಲ್ಲಿ ಬ್ಯಾಲೆನ್ಸ್ ಹೊಂದಿರುವ ಆದರೆ ಅಪೂರ್ಣ ಕೆವೈಸಿ (KYC) ಹೊಂದಿರುವ ಫಾಸ್ಟ್‌ಟ್ಯಾಗ್‌ಗಳನ್ನು ಜನವರಿ 31ರ ನಂತರ ಬ್ಯಾಂಕ್‌ಗಳು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಸೋಮವಾರ ತಿಳಿಸಿದೆ. ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಚಲನೆಯನ್ನು ಒದಗಿಸಲು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) … Continued

ವೀಡಿಯೊ…: ಗೇಮಿಂಗ್ ಅಪ್ಲಿಕೇಶನ್ ಪ್ರಚಾರದ ಸಚಿನ್ ತೆಂಡೂಲ್ಕರ್ ʼಡೀಪ್‌ ಫೇಕ್‌ʼ ವೀಡಿಯೊ ವೈರಲ್ ; ‘ತಂತ್ರಜ್ಞಾನ ದುರ್ಬಳಕೆ’ ವಿರುದ್ಧ ಧ್ವನಿ ಎತ್ತಿದ ಕ್ರಿಕೆಟ್‌ ದಿಗ್ಗಜ

ಡೀಪ್‌ಫೇಕ್ ವೀಡಿಯೊಗಳಿಗೆ ಬಲಿಯಾದ ಸೆಲೆಬ್ರಿಟಿಗಳ ಪೈಕಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇತ್ತೀಚಿನವರಾಗಿದ್ದಾರೆ. ಗೇಮಿಂಗ್ ಅಪ್ಲಿಕೇಶನ್ ಆದ “ಸ್ಕೈವರ್ಡ್ ಏವಿಯೇಟರ್ ಕ್ವೆಸ್ಟ್” ಅನ್ನು ಸಚಿನ್‌ ತೆಂಡೂಲ್ಕರ್‌ ಅವರು ಬೆಂಬಲಿಸುವ ರೀತು ಮಾತನಾಡುವ ಡೀಪ್‌ಫೇಕ್ ವೀಡಿಯೊವು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿದೆ. ಗೇಮಿಂಗ್ ಅಪ್ಲಿಕೇಶನ್ ಪರವಾಗಿ ಕ್ರಿಕೆಟ್ ಐಕಾನ್ ಹೇಳುತ್ತಿರುವುದನ್ನು ವೀಡಿಯೊ ಪ್ರದರ್ಶಿಸುವುದು ಮಾತ್ರವಲ್ಲದೆ ಅವರ … Continued

ಹೊಸ ದಾಖಲೆ : ಷೇರು ಮಾರುಕಟ್ಟೆಯಲ್ಲಿ ಸಂಕ್ರಾಂತಿ ಸಡಗರ; ಇದೇ ಮೊದಲ ಬಾರಿಗೆ 73,000ದ ಗಡಿ ದಾಟಿದ ಸೆನ್ಸೆಕ್ಸ್

ಮುಂಬೈ: ಸಂಕ್ರಾಂತಿ ಹಬ್ಬದ ದಿನದಂದು ಷೇರುಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 73,000ಕ್ಕೆ ಏರಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ದಾಖಲೆಯ ಮಟ್ಟಕ್ಕೇರಿದ್ದು, ಸೆನ್ಸೆಕ್ಸ್ ಮೊದಲ ಬಾರಿಗೆ 73,000 ಪಾಯಿಂಟ್ಸ್‌ ಗೆ ಏರಿದೆ ಗೇರಿದೆ. ನಿಫ್ಟಿ ಕೂಡ ಐತಿಹಾಸಿಕ 22,000-ಮಾರ್ಕ್ ಅನ್ನು ದಾಟಿತು. ಸೋಮವಾರದ ವಹಿವಾಟಿನಲ್ಲಿ ಐಟಿ ಷೇರುಗಳು ಗಣನೀಯ ಏರಿಕೆ ಕಂಡಿದೆ. … Continued

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧೆ : ಮಾಯಾವತಿ ಘೋಷಣೆ

ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷವು ಯಾವುದೇ ಮೈತ್ರಿಕೂಟದ ಭಾಗವಾಗುವುದಿಲ್ಲ, ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತ ಅಥವಾ ವಿರೋಧ ಪಕ್ಷದ ಮೈತ್ರಿಕೂಟದ ವಾಗುವುದಿಲ್ಲ ಮತ್ತು ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಪ್ರಕಟಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಬಿಎಸ್‌ಪಿ ಯಾವುದೇ ಮೈತ್ರಿಕೂಟದ ಭಾಗವಾಗುವುದಿಲ್ಲ ಮತ್ತು ಲೋಕಸಭೆ ಚುನಾವಣೆಯಲ್ಲಿ … Continued

ವೀಡಿಯೋ: ವಿಮಾನ ವಿಳಂಬದ ಬಗ್ಗೆ ಘೋಷಣೆ ಮಾಡುತ್ತಿದ್ದಾಗ ದೆಹಲಿ-ಗೋವಾ ಇಂಡಿಗೋ ಕ್ಯಾಪ್ಟನ್‌ ಗೆ ಗುದ್ದಿದ ಪ್ರಯಾಣಿಕ

ನವದೆಹಲಿ : ವಿಮಾನ ವಿಳಂಬದ ಬಗ್ಗೆ ಘೋಷಣೆ ಮಾಡುತ್ತಿದ್ದಾಗ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಮಾನದ ಪೈಲಟ್‌ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದು, ಹಲ್ಲೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ (6E-2175) ಈ ಘಟನೆ ನಡೆದಿದ್ದು, ಮಂಜಿನಿಂದಾಗಿ ವಿಮಾನ ಹೊರಡುವುದು ಹಲವು ಗಂಟೆಗಳ ಕಾಲ ವಿಳಂಬವಾಗಿತ್ತು. … Continued

ಮಂದಿರ ನಿರ್ಮಾಣಕ್ಕೆ 20 ರೂ. ದೇಣಿಗೆ ನೀಡಿದ್ದ ಕಸ ಸಂಗ್ರಹಿಸುವ ವೃದ್ಧೆಗೆ ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ…

ಅಯೋಧ್ಯೆ : ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಹಲವಾರು ಭಕ್ತರು ತಮ್ಮ ಕೈಲಾದಷ್ಟು ಹಾಗೂ ತಮ್ಮ ಶಕ್ತಿಗೂ ಮೀರಿ ದೇಣಿಗೆಯನ್ನು ನೀಡಿದ್ದಾರೆ. ಇದೇ ರೀತಿ ಛತ್ತೀಸ್‌ಗಢದ ಪ್ರಯಾಗರಾಜ ಎಂದೂ ಕರೆಯಲ್ಪಡುವ ರಾಜೀಂ ಎಂಬಲ್ಲಿ ಕಸ ಸಂಗ್ರಹಿಸುವ ಬಿಹುಲಾ ಬಾಯಿ ಕೂಡ 20 ರೂ. ದೇಣಿಗೆ ನೀಡಿದ್ದಾರೆ. ಇದಕ್ಕಾಗಿ ಅಯೋಧ್ಯೆಯ ರಾಮಮಂದಿರದಲ್ಲಿನ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಅವರನ್ನು … Continued

ಅಯೋಧ್ಯಾ ರಾಮ ಮಂದಿರ ಉದ್ಘಾಟನೆ: 55 ದೇಶಗಳಿಂದ 100ಕ್ಕೂ ಹೆಚ್ಚು ಗಣ್ಯರ ಆಗಮನ

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇದೇ ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ 55 ದೇಶಗಳಿಂದ 100ಕ್ಕೂ ಹೆಚ್ಚು ಗಣ್ಯರು ಆಗಮಿಸಲಿದ್ದಾರೆ ಎಂದು ವಿಶ್ವ ಹಿಂದೂ ಫೌಂಡೇಶನ್‌ ಸಂಸ್ಥಾಪಕ ಮತ್ತು ಮುಖ್ಯಸ್ಥ ಸ್ವಾಮಿ ವಿಜ್ಞಾನಂದ ಹೇಳಿದ್ದಾರೆ. 55 ದೇಶಗಳಿಂದ ರಾಯಭಾರಿಗಳು, ಸಚಿವರು, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಸಾಕ್ಷಿಯಾಗಲಿದ್ದಾರೆ. ಪ್ರಭು ಶ್ರೀ ರಾಮನ … Continued

ರಾಜತಾಂತ್ರಿಕ ಗದ್ದಲದ ನಡುವೆ ಮಾರ್ಚ್ 15ರೊಳಗೆ ತನ್ನ ಸೈನ್ಯ ಹಿಂತೆಗೆದುಕೊಳ್ಳುವಂತೆ ಭಾರತಕ್ಕೆ ಹೇಳಿದ ಮಾಲ್ಡೀವ್ಸ್

ನವದೆಹಲಿ: ಭಾರತ ಸರ್ಕಾರವು ಮಾರ್ಚ್ 15ಕ್ಕಿಂತ ಮೊದಲು ದ್ವೀಪಸಮೂಹ ರಾಷ್ಟ್ರವಾದ ಮಾಲ್ಡೀವ್ಸ್‌ನಿಂದ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹಿಂತೆಗೆದುಕೊಳ್ಳುವಂತೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಪ್ರಸ್ತಾಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಮಾಲ್ಡೀವ್ಸ್‌ನ ಮೂವರು ಸಚಿವರು ಇತ್ತೀಚಿನ ಅವಹೇಳನಕಾರಿ ಹೇಳಿಕೆಗಳಿಂದ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿರುವ ಮಧ್ಯೆ ಭಾರತವು ತನ್ನ ದೇಶದಲ್ಲಿರುವ ಮಿಲಿಟರಿಯನ್ನು … Continued