ವಿಡಿಯೋ | ಐಪಿಎಲ್ ಇತಿಹಾಸದಲ್ಲೇ ಶ್ರೇಷ್ಠ ಕ್ಯಾಚ್ ? ದಿಗ್ಗಜರನ್ನೇ ಬೆಚ್ಚಿಬೀಳಿಸಿದ ಅಯ್ಯರ್-ಬಾರ್ಟ್ಲೆಟ್ ಜುಗಲ್ಬಂದಿ ಕ್ಯಾಚ್‌

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ರೋಚಕ ಪಂದ್ಯದಲ್ಲಿ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ಅದ್ಭುತ ಫೀಲ್ಡಿಂಗ್ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ. ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಮಾತ್ರವಲ್ಲದೆ, ಡಗೌಟ್‌ನಲ್ಲಿದ್ದ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ ಯಾದವ್ ಕೂಡ ಅಯ್ಯರ್ ಸಾಹಸಕ್ಕೆ ದಂಗಾಗಿದ್ದಾರೆ. ಮುಂಬೈ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ … Continued

ಮಾಜಿ ಕ್ರಿಕೆಟಿಗ ವಿನೋದ ಕಾಂಬ್ಳಿಗೆ ಬ್ರೈನ್ ಸ್ಟ್ರೋಕ್ ಭೀತಿ: ಬಾಲ್ಯದ ಗೆಳೆಯನ ನೆರವಿಗೆ ಧಾವಿಸಿದ ಸಚಿನ್ ತೆಂಡೂಲ್ಕರ್

ಮುಂಬೈ: ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ವಿನೋದ ಕಾಂಬ್ಳಿ ಅವರ ಆರೋಗ್ಯ ಸ್ಥಿತಿ ಇನ್ನೂ ಕಳವಳಕಾರಿಯಾಗಿಯೇ ಮುಂದುವರಿದಿದೆ. 54 ವರ್ಷದ ಕಾಂಬ್ಳಿ ಪ್ರಸ್ತುತ ನೆನಪಿನ ಶಕ್ತಿ ಕಳೆದುಕೊಳ್ಳುವುದು ಮತ್ತು ನರಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದು, ಚೇತರಿಕೆಗಾಗಿ ಹೋರಾಡುತ್ತಿದ್ದಾರೆ. ಕಾಂಬ್ಳಿ ಅವರ ಈ ಕಷ್ಟದ ಸಮಯದಲ್ಲಿ ಅವರ ಬಾಲ್ಯದ ಸ್ನೇಹಿತ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬೆಂಬಲವಾಗಿ ನಿಂತಿದ್ದಾರೆ. … Continued

ಕ್ರಿಕೆಟ್ ಪಂದ್ಯದಲ್ಲಿ ರನ್ ಔಟ್ ವಿವಾದ: ಚಾಕುವಿನಿಂದ ಇರಿದು ಅಂಪೈರ್ ಹತ್ಯೆ

ವಿಶಾಖಪಟ್ಟಣಂ (ಆಂಧ್ರಪ್ರದೇಶ): ಸ್ಥಳೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ರನ್ ಔಟ್ ತೀರ್ಪಿಗೆ ಸಂಬಂಧಿಸಿದಂತೆ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ, 21 ವರ್ಷದ ಯುವ ಅಂಪೈರ್‌ನನ್ನು ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಭಾನುವಾರ ಸಂಜೆ ಸ್ಥಳೀಯ ಮೈದಾನವೊಂದರಲ್ಲಿ ಮೂರು ತಂಡಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಡೋಲಾ … Continued

ಐಪಿಎಲ್ 2026 : 70 ಪಂದ್ಯಗಳ ಪೂರ್ಣ ವೇಳಾಪಟ್ಟಿ ಪ್ರಕಟ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಎರಡನೇ ಹಂತದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ತಿಂಗಳ ಆರಂಭದಲ್ಲಿ ಕೇವಲ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿತ್ತು. ಇದೀಗ ಲೀಗ್ ಹಂತದ ಉಳಿದ 50 ಪಂದ್ಯಗಳ ವಿವರವನ್ನು ಬಿಸಿಸಿಐ ನೀಡಿದ್ದು, ಪ್ಲೇ-ಆಫ್ ಹಂತದ ವೇಳಾಪಟ್ಟಿಯನ್ನು ನಂತರ ಪ್ರಕಟಿಸುವುದಾಗಿ ತಿಳಿಸಿದೆ. … Continued

18 ವರ್ಷದ ಹಿಂದೆ ವಾರ್ನ್‌ ಮಾಡಿದ್ದ ಆ ಒಂದು ಸಹಿಗೆ ಈಗ ರಾಜಸ್ಥಾನ್ ರಾಯಲ್ಸ್ ಮಾರಾಟದಿಂದ ಕುಟುಂಬಕ್ಕೆ ಸಿಗಲಿದೆ ₹450 ಕೋಟಿ..!

ನವದೆಹಲಿ: ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಕೇವಲ ಮೈದಾನದಲ್ಲಿ ಮಾತ್ರವಲ್ಲ, ವ್ಯವಹಾರದಲ್ಲೂ ಚಾಣಾಕ್ಷ ಎನ್ನುವುದು ಈಗ ಸಾಬೀತಾಗಿದೆ. 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭವಾದಾಗ ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಅವರು ಮಾಡಿಕೊಂಡಿದ್ದ ಒಂದು ವಿಶೇಷ ಒಪ್ಪಂದವು, ಈಗ ಅವರ ಕುಟುಂಬಕ್ಕೆ ಸುಮಾರು 450 ರಿಂದ 460 ಕೋಟಿ ರೂಪಾಯಿಗಳ ಬಂಪರ್ ಲಾಭವನ್ನು ತಂದುಕೊಡಲಿದೆ … Continued

ಪಿಎಸ್‌ಎಲ್‌ನಲ್ಲಿ ಆಡಲು ಪಾಕಿಸ್ತಾನಕ್ಕೆ ಬರಬೇಡಿ ; ವಾರ್ನರ್, ಸ್ಮಿತ್‌ಗೆ ಪಾಕ್‌ ಉಗ್ರರ ಗುಂಪಿನಿಂದ ಬೆದರಿಕೆ

ಇಸ್ಲಾಮಾಬಾದ್: ಪಾಕಿಸ್ತಾನ್ ಸೂಪರ್ ಲೀಗ್ (PSL) 2026ರ ಆವೃತ್ತಿಯ ಭವಿಷ್ಯ ಈಗ ಅತಂತ್ರ ಸ್ಥಿತಿಯಲ್ಲಿದೆ. ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯು (PCB) ಕೇವಲ ಎರಡು ನಗರಗಳಲ್ಲಿ ಮತ್ತು ಪ್ರೇಕ್ಷಕರಿಗೆ ಮುಕ್ತ ಪ್ರವೇಶವಿಲ್ಲದೆ (Closed doors) ಪಂದ್ಯಾವಳಿಯನ್ನು ನಡೆಸಲು ನಿರ್ಧರಿಸಿದ್ದರೂ ಸಹ, ಟೂರ್ನಿಯ ಮೇಲೆ ಭೀತಿಯ ನೆರಳು ಆವರಿಸಿದೆ. ಕಳೆದ ಭಾನುವಾರ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು … Continued

ಹಸೆಮಣೆ ಏರಿದ ಟೀಮ್ ಇಂಡಿಯಾ ಸ್ಪಿನ್ನರ್ ಕುಲದೀಪ ಯಾದವ್: ಮಸ್ಸೂರಿಯಲ್ಲಿ ಅದ್ದೂರಿ ವಿವಾಹ

ಟೀಮ್ ಇಂಡಿಯಾದ ಸ್ಪಿನ್ನರ್ ಕುಲದೀಪ ಯಾದವ್ ಅವರು ಶನಿವಾರ (ಮಾರ್ಚ್ 14) ಉತ್ತರಾಖಂಡದ ಮಸ್ಸೂರಿಯಲ್ಲಿ ತಮ್ಮ ಬಾಲ್ಯದ ಗೆಳತಿ ವಂಶಿಕಾ ಸಿಂಗ್ ಅವರನ್ನು ವಿವಾಹವಾಗಿದ್ದಾರೆ. 2026ರ ಟಿ20 ವಿಶ್ವಕಪ್‌ನಲ್ಲಿ ಯಶಸ್ಸಿನ ಬೆನ್ನಲ್ಲೇ ಕುಲದೀಪ ಯಾದವ್ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕಾನ್ಪುರದ ಲಾಲ್ ಬಂಗಲೆ ನಿವಾಸಿಯಾದ ಕುಲದೀಪ ಮತ್ತು ಶ್ಯಾಮ್ ನಗರದ ನಿವಾಸಿಯಾದ ವಂಶಿಕಾ … Continued

ವೀಡಿಯೊ | ವಿವಾದಾತ್ಮಕ ರನ್ ಔಟ್: ಸಿಟ್ಟಿನಿಂದ ಹೆಲ್ಮೆಟ್ ಎಸೆದು ಆಕ್ರೋಶ ವ್ಯಕ್ತಪಡಿಸಿದ ಪಾಕ್ ಬ್ಯಾಟರ್ ಸಲ್ಮಾನ್ ಅಘಾ !

ಢಾಕಾದ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಬಾಂಗ್ಲಾದ ಆಲ್ ರೌಂಡರ್ ಮೆಹಿದಿ ಹಸನ್ ಮಿರಾಜ್ ಅವರ ನಡೆ ಪಾಕಿಸ್ತಾನದ ಬ್ಯಾಟರ್ ಸಲ್ಮಾನ್ ಅಘಾ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಪಂದ್ಯದ 39ನೇ ಓವರ್‌ನಲ್ಲಿ ಮೊಹಮ್ಮದ್ ರಿಜ್ವಾನ್ ನೇರವಾಗಿ ಹೊಡೆದ ಚೆಂಡು ಮಿರಾಜ್ ಕಾಲಿಗೆ ಬಡಿದು … Continued

ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐನಿಂದ ₹131 ಕೋಟಿ ಬಹುಮಾನ ಘೋಷಣೆ

ಅಹಮದಾಬಾದ್‌ನಲ್ಲಿ ನಡೆದ 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದ ಭಾರತದ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ₹131 ಕೋಟಿ ನಗದು ಬಹುಮಾನವನ್ನು ಘೋಷಿಸಿದೆ. 2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಗೆದ್ದಾಗ ನೀಡಿದ್ದ ₹125 ಕೋಟಿ ಬಹುಮಾನಕ್ಕಿಂತ ಹೆಚ್ಚಿನ ಮೊತ್ತವನ್ನು ಬಿಸಿಸಿಐ ಈ ಬಾರಿ ನೀಡಿದೆ. ಸೂರ್ಯಕುಮಾರ … Continued

ವಿಡಿಯೋ | ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸಿಟ್ಟಿನಲ್ಲಿ ಬ್ಯಾಟರನತ್ತ ಚೆಂಡು ಎಸೆದ ಅರ್ಶದೀಪ್ ; ಮಿಚೆಲ್ ಗರಂ : ಸೂರ್ಯಕುಮಾರ ಸಮಾಧಾನ

 ಅಹಮದಾಬಾದ್: ಕ್ರಿಕೆಟ್ ಲೋಕದ ‘ಜಂಟಲ್‌ಮನ್’ ತಂಡಗಳೆಂದೇ ಹೆಸರಾದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೈ-ವೋಲ್ಟೇಜ್ ಡ್ರಾಮಾಗೆ ಸಾಕ್ಷಿಯಾಯಿತು. ಒಂದೆಡೆ ಭಾರತ ಭರ್ಜರಿ ಜಯ ಸಾಧಿಸಿ ಇತಿಹಾಸ ಬರೆದರೆ, ಮತ್ತೊಂದೆಡೆ ಅರ್ಶ್‌ದೀಪ್ ಸಿಂಗ್ ಮತ್ತು ಡೇರಿಲ್ ಮಿಚೆಲ್ ನಡುವಿನ ಘಟನೆ ಗಮನ ಸೆಳೆಯಿತು. ನಂತರ … Continued