ವಿಮಾನದ ಚಕ್ರದ ಬಳಿ ಅಡಗಿಕೊಂಡು 1000 ಕಿಮೀ ಪ್ರಯಾಣಿಸಿ ದೆಹಲಿಗೆ ಬಂದ 13 ವರ್ಷದ ಅಫ್ಘಾನ್ ಬಾಲಕ; ಬದುಕುಳಿದದ್ದೇ ಪವಾಡ…!

ನವದೆಹಲಿ: ಅಪಘಾನಿಸ್ತಾನದ ಕಾಬೂಲಿನಿಂದ ದೆಹಲಿಗೆ ವಿಮಾನದಲ್ಲಿ ಅದರ ಚಕ್ರದ ಬಳಿ ಲ್ಯಾಂಡಿಂಗ್ ಗೇರಿನಲ್ಲಿ ಅಡಗಿಕೊಂಡು 13 ವರ್ಷದ ಅಫ್ಘಾನ್ ಬಾಲಕ ಪ್ರಯಾಣ ಮಾಡಿದ್ದಾನೆ…! ಈಗ ಈತನನ್ನು ಪುನಃ ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ವಿಮಾನವು ಇರಾನ್‌ಗೆ ಹೋಗುತ್ತಿದೆ ಎಂದು ತಪ್ಪಾಗಿ ಭಾವಿಸಿದ ಬಾಲಕ, ಕಾಬೂಲಿನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಬರುವ KAM … Continued

ವೀಡಿಯೊಗಳು…| ಭಾರತದ ಹಲವೆಡೆ ಆಕಾಶವನ್ನೇ ಬೆಳಗಿದ ಅಪರೂಪದ ಉಲ್ಕಾಪಾತ | ಈ ಅದ್ಭುತ-ಅಪರೂಪದ ದೃಶ್ಯ ವೀಕ್ಷಿಸಿ

ನವದೆಹಲಿ: ಶುಕ್ರವಾರ ದೆಹಲಿ, ನೋಯ್ಡಾ, ಗಾಜಿಯಾಬಾದ್ ಮತ್ತು ಗುರಗಾಂವ್‌ ಮೇಲಿನ ರಾತ್ರಿ ಆಕಾಶವು ಅದ್ಭುತವಾದ ಆಕಾಶ ಘಟನೆಯೊಂದಿಗೆ ಗಮನ ಸೆಳೆದಿದೆ. ಯಾಕೆಂದರೆ ಪ್ರಕಾಶಮಾನವಾದ ಉಲ್ಕೆಯು ದಿಗಂತವನ್ನು ಕೆಲಕಾಲ ಬೆಳಗಿಸಿದೆ. ದೆಹಲಿಯ ದೊಡ್ಡ ಭಾಗಗಳಲ್ಲಿ ಗೋಚರಿಸುತ್ತಿದ್ದ ಈ ಉಲ್ಕಾಶಿಲೆಯು ಆಗಸದಲ್ಲಿ ತನ್ನ ಉರಿಯುತ್ತಿರುವ ಬೆಂಕಿ ಮತ್ತು ನಂತರದ ವಿಘಟನೆಯಿಂದಾಗಿ ನೋಡುಗರನ್ನು ಆಕರ್ಷಿಸಿತು. ಬಾಹ್ಯಾಕಾಶದಿಂದ ಕೆಳಗೆ ಬಂದ ಉರಿಯುತ್ತಿರುವ … Continued

ಉಪರಾಷ್ಟ್ರಪತಿ ಚುನಾವಣೆ : ಬಿಜೆಪಿ ಕಾರ್ಯಾಗಾರದಲ್ಲಿ ಕೊನೆಯ ಸಾಲಿನಲ್ಲಿ ಕುಳಿತ ಪ್ರಧಾನಿ ಮೋದಿ

ನವದೆಹಲಿ: ಬಿಜೆಪಿಯು ತನ್ನ ಎಲ್ಲಾ ಸಂಸದರು ಪಾಲ್ಗೊಳ್ಳುವ ಎರಡು ದಿನಗಳ ಕಾರ್ಯ ಕಾರ್ಯಾಗಾರವನ್ನು ನಡೆಸುವ ಮೂಲಕ ಉಪರಾಷ್ಟ್ರಪತಿ ಚುನಾವಣೆಗೆ ಸಜ್ಜಾಗಿದೆ. ಭಾನುವಾರ (ಸೆಪ್ಟೆಂಬರ್‌ 7) ಪ್ರಾರಂಭವಾದ ಕಾರ್ಯಾಗಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಇತರ ಕಾರ್ಯಕರ್ತರೊಂದಿಗೆ ಕೊನೆಯ ಸಾಲಿನಲ್ಲಿ ಕುಳಿತುಕೊಂಡಿದ್ದು ವಿಶೇಷವಾಗಿ ಗಮನಸೆಳೆಯಿತು. ಸೆಪ್ಟೆಂಬರ್ 3 ರಂದು ಜಿಎಸ್ಟಿ ಕೌನ್ಸಿಲ್ ಅನುಮೋದಿಸಿದ ಪ್ರಮುಖ ಜಿಎಸ್‌ಟಿ … Continued

ಅಡಿಕೆ ಬೆಳೆಗಾರರ ಸಮಸ್ಯೆ ; ದೆಹಲಿಯಲ್ಲಿ ಕೃಷಿ ಸಚಿವರನ್ನು ಭೇಟಿ ಮಾಡಿದ ಕರ್ನಾಟಕದ ಸಂಸದರ ನಿಯೋಗ

ನವದೆಹಲಿ: ಅಡಿಕೆಗೆ ಕೊಳೆ ರೋಗ  ಹರಡಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈ ಸಂಬಂಧ ಕರ್ನಾಟಕದ ಸಂಸದರು ಇಂದು (ಆಗಸ್ಟ್ 21) ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ (Shivraj Singh Chauhan) ಅವರನ್ನು ಭೇಟಿ ಮಾಡಿದ್ದಾರೆ. ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕರ್ನಾಟಕದ ಕೇಂದ್ರ ಸಚಿವರು, ಕರ್ನಾಟಕದ ರಾಜ್ಯದ ಅಡಿಕೆ ಬೆಳೆಯುವ ಪ್ರದೇಶದ ಲೋಕಸಭಾ … Continued

‘ಜನ ಸುನವಾಯಿ’ ಕಾರ್ಯಕ್ರಮದಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ ; ಆರೋಪಿ ಬಂಧನ

ನವದೆಹಲಿ : ಇಂದು, ಬುಧವಾರ ಬೆಳಿಗ್ಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ನಿವಾಸದಲ್ಲಿ ನಡೆದ ಸಾರ್ವಜನಿಕ ಅಹವಾಲು ಆಲಿಕೆ ಸಂದರ್ಭದಲ್ಲಿ ಅವರ ಮೇಲೆ ಹಲ್ಲೆ ನಡೆಸಲಾಯಿತು. 40 ರ ಹರೆಯದ ವ್ಯಕ್ತಿಯೊಬ್ಬರು ‘ಜನಸುನವಾಯಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಖ್ಯಮಂತ್ರಿಯವರ ಮೇಲೆ ಹಲ್ಲೆ ನಡೆಸಿದ್ದಾನೆ. ಸಾರ್ವಜನಿಕ ಸಭೆಯಲ್ಲಿ ಕುಂದುಕೊರತೆ ಹೇಳಿಕೊಳ್ಳುವವನ ವೇಷದಲ್ಲಿ ಬಂದಿದ್ದ ದಾಳಿಕೋರನನ್ನು ಮುಖ್ಯಮಂತ್ರಿಯವರ ಭದ್ರತಾ … Continued

ಮೂವರು ದೆಹಲಿಯಲ್ಲಿ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ : ‘ಸ್ಫೋಟಕʼ ಹೇಳಿಕೆ ನೀಡಿದ ಕೆಎನ್ ರಾಜಣ್ಣ

ತುಮಕೂರು: ನನ್ನನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಮೂವರು ದೆಹಲಿಯಲ್ಲಿ ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ ಮಾಡಿದ್ದಾರೆ ಎಂದು ಮಾಜಿ ಸಚಿವ ಕೆ.ಎನ್‌. ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮಧುಗಿರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಪಿತೂರಿ ವಿದ್ಯೆ ನನಗೂ ಗೊತ್ತಿದೆ. ಈ ಸಂದರ್ಭದಲ್ಲಿ ಅದನ್ನು ಬಳಸುವುದಿಲ್ಲ, ಮುಂದೆ ಕಾಲ ಬಂದೇ ಬರುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಮುಖ್ಯಮಂತ್ರಿ … Continued

ದೆಹಲಿಯ ಹುಮಾಯೂನ್ ಸಮಾಧಿ ಬಳಿ ದರ್ಗಾದ ಛಾವಣಿ ಕುಸಿದು 5 ಮಂದಿ ಸಾವು

ನವದೆಹಲಿ: ದೆಹಲಿಯ ನಿಜಾಮುದ್ದೀನ್‌ನಲ್ಲಿರುವ ಹುಮಾಯೂನ್ ಸಮಾಧಿ ಸಂಕೀರ್ಣದ ಬಳಿಯ ದರ್ಗಾದ ಛಾವಣಿ ಕುಸಿದು ಕನಿಷ್ಠ ಐದು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ದೆಹಲಿ ಪೊಲೀಸರು ಮತ್ತು ಆಸ್ಪತ್ರೆ ಅಧಿಕಾರಿಗಳ ಪ್ರಕಾರ, ಘಟನೆಯ ನಂತರ ಒಟ್ಟು ಒಂಬತ್ತು ಜನರನ್ನು ಏಮ್ಸ್‌ಗೆ ಸಾಗಿಸಲಾಯಿತು, ಅವರಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ. ಸುದ್ದಿಸಂಸ್ಥೆ ಪ್ರಕಾರ, ಮೃತಪಟ್ಟ ಐವರಲ್ಲಿ ಮೂವರು … Continued

ವೀಡಿಯೊಗಳು…| ಮತಗಳ್ಳತನದ ವಿರುದ್ಧ ಪ್ರತಿಭಟನೆ ; ರಾಹುಲ್ ಗಾಂಧಿ ಬಂಧನ, ಮೂರ್ಛೆ ಹೋದ ಸಂಸದೆ ಮಹುವಾ ಮೊಯಿತ್ರಾ

ನವದೆಹಲಿ: ಚುನಾವಣಾ ಆಯೋಗವು ಆಡಳಿತಾರೂಢ ಬಿಜೆಪಿ ಜೊತೆ ಕೈಜೋಡಿಸಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದ ಲೋಕಸಭೆ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್‌ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್, ಶಿವಸೇನೆ (ಯುಬಿಟಿ) ನಾಯಕರಾದ ಸಂಜಯ ರಾವತ್ … Continued

ಪತ್ನಿ, ಇಬ್ಬರು ಪುಟ್ಟ ಮಕ್ಕಳನ್ನು ಕೊಂದು ವ್ಯಕ್ತಿ ಪರಾರಿ

ನವದೆಹಲಿ: ಶುಕ್ರವಾರ ರಾತ್ರಿ ದೆಹಲಿಯ ಕರವಾಲ್ ನಗರ ಪ್ರದೇಶದ ಮನೆಯಲ್ಲಿ ವ್ಯಕ್ತಿಯೊಬ್ಬ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಮಕ್ಕಳು 5 ಮತ್ತು 7 ವರ್ಷದ ಹೆಣ್ಣು ಮಕ್ಕಳಾಗಿದ್ದಾರೆ. 28 ವರ್ಷದ ಪತ್ನಿ ಜಯಶ್ರೀ ಜೊತೆಗಿನ ದೀರ್ಘಕಾಲದ ಜಗಳವೇ ಈ ಕೊಲೆಗಳಿಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಆದಾಗ್ಯೂ, ನಿಖರವಾದ ಕಾರಣವನ್ನು … Continued

ವೀಡಿಯೊ..| ಭಾರತೀಯ ಉಡುಗೆ ತೊಟ್ಟಿದ್ದಕ್ಕಾಗಿ ದಂಪತಿಗೆ ರೆಸ್ಟೋರೆಂಟ್ ಪ್ರವೇಶ ನಿರಾಕರಣೆ ಆರೋಪ ; ಗಂಭೀರವಾಗಿ ಪರಿಗಣಿಸಿದ ಸಿಎಂ ಗುಪ್ತಾ

ನವದೆಹಲಿ: ದೆಹಲಿಯ ಪಿತಾಂಪುರ ಪ್ರದೇಶದಲ್ಲಿರುವ ರೆಸ್ಟೋರೆಂಟ್‌ಗೆ ದಂಪತಿಗೆ ಸಾಂಪ್ರದಾಯಿಕ ಭಾರತೀಯ ಉಡುಗೆ ತೊಟ್ಟಿದ್ದಕ್ಕಾಗಿ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಅದರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ದೆಹಲಿಯ ಪಿತಾಂಪುರ ಪ್ರದೇಶದಲ್ಲಿರುವ ರೆಸ್ಟೋರೆಂಟ್‌ಗೆ ಪ್ರವೇಶ ನಿರಾಕರಿಸಿದ ನಂತರ ದಂಪತಿ ತಮಗೆ ಆದ ತೊಂದರೆ ಬಗ್ಗೆ ಹೇಳಿಕೊಂಡಿದ್ದಾರೆ. ಇತರರನ್ನು ಒಳಗೆ … Continued