ಗಡ್ಡ ತೆಗೆಯಲು ಒಪ್ಪದ ಗಂಡ ; ‘ಕ್ಲೀನ್ ಶೇವ್’ ಮಾಡುತ್ತಿದ್ದ ಗಂಡನ ತಮ್ಮನ ಜೊತೆ ಓಡಿಹೋದ ಮಹಿಳೆ…!

ಮೀರತ್‌ : ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ವಿಚಿತ್ರ ಅಸಾಮಾನ್ಯ ಪ್ರಕರಣವೊಂದರಲ್ಲಿ, ಎಷ್ಟೇ ಹೇಳಿದರೂ ಗಡ್ಡ ತೆಗೆಯಲು ನಿರಾಕರಿಸಿದ ಗಂಡನನ್ನು ಬಿಟ್ಟು ಮಹಿಳೆಯೊಬ್ಬಳು ತನ್ನ ಗಂಡನ ಸಹೋದರ ಜೊತೆ ಓಡಿಹೋಗಿದ್ದಾಳೆ…! ಮೀರತ್‌ನ ಉಜ್ವಲ್ ಗಾರ್ಡನ್ ಕಾಲೋನಿಯಲ್ಲಿ ವಾಸಿಸುವ ಮುಸ್ಲಿಂ ಧರ್ಮಗುರು ಶಕೀರ್ ಎಂಬ ವ್ಯಕ್ತಿ ಏಳು ತಿಂಗಳ ಹಿಂದೆಯಷ್ಟೇ 25 ವರ್ಷದ ಅರ್ಷಿ ಎಂಬ ಮಹಿಳೆಯನ್ನು … Continued

ವೀಡಿಯೊ…| 10 ಸಲ ಕಚ್ಚಿದ ವಿಷಕಾರಿ ಹಾವು ಶವದ ಪಕ್ಕದಲ್ಲೇ ಬೆಳಗಿನ ತನಕ ಮಲಗಿತ್ತು ; ಆದ್ರೆ ಕತ್ತುಹಿಸುಕಿ ಕೊಲೆಯಾಗಿದ್ದು ಬಯಲಾಯ್ತು..!

ಮೀರತ್ : ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಆಘಾತಕಾರಿ ಹಾಗೂ ನಂಬಲಸಾಧ್ಯವಾದ ಘಟನೆಯೊಂದರಲ್ಲಿ ಯಾರೂ ಊಹಿಸದ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಘಾತಕಾರಿ ಘಟನೆಯಲ್ಲಿ ವಿಷಕಾರಿ ಹಾವೊಂದು ಹತ್ತು ಬಾರಿ ಕಚ್ಚಿ 25 ವರ್ಷದ ವ್ಯಕ್ತಿಯೊಬ್ಬನನ್ನು ಸಾಯಿಸಿದೆ ಎಂದು ನಂಬಲಾಗಿತ್ತು. ಆದರೆ ವಿಷಕಾರಿ ಹಾವು ಕಚ್ಚಿದ್ದು, ಹೌದು ಆದರೆ ದಿಗ್ಭ್ರಮೆಗೊಳಿಸಿದ ಸಂಗತಿಯೆಂದರೆ ಆ ವ್ಯಕ್ತಿಯನ್ನು … Continued

“ಪಾಪಾ ಡ್ರಮ್ ಒಳಗಿದ್ದಾರೆ…” : ತಾಯಿಯಿಂದಲೇ ನಡೆದ ತಂದೆಯ ಭೀಕರ ಹತ್ಯೆಯನ್ನು ಬಯಲು ಮಾಡಿದ 6 ವರ್ಷದ ಮಗಳು…!

ಮೀರತ್ :  ಉತ್ತರಪ್ರದೇಶದ ಮೀರತ್​ನಲ್ಲಿ ನಡೆದ ಸೌರಭ್ ರಜಪೂತ್ ಹತ್ಯೆ ಪ್ರಕರಣ ದೇಶಾದ್ಯಂತ ದಿಗ್ಭ್ರಮೆಗೆ ಕಾರಣವಾಗಿದೆ. ಪ್ರೀತಿಸಿ, ಮದುವೆಯಾದವಳಿಗಾಗಿ ಕುಟುಂಬದವರಿಂದ ದೂರವಾಗಿದ್ದ ಸೌರಭ್ ಕೊನೆಗೆ ತಾನು ಪ್ರೀತಿಸಿದವಳಿಂದಲೇ ಹತ್ಯೆಯಾಗಿದ್ದ. ನಂತರ ಆತನ ಶವವನ್ನು ಹದಿನೈದು ತುಂಡುಗಳನ್ನಾಗಿ ಕತ್ತರಿಸಿ ಅದನ್ನು ಡ್ರಮ್‌ನಲ್ಲಿ ಹಾಕಿ ಅದಕ್ಕೆ ಸಿಮೆಂಟ್‌ನಿಂದ ಕಾಂಕ್ರೀಟ್‌ ಹಾಕಿ ಮುಚ್ಚಲಾಗಿತ್ತು. ಆದರೂ ಈ ಕೊಲೆ ಬಯಲಾಗಿದೆ. ಹಾಗೂ … Continued

ದಂಪತಿ, ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ….!

ಮೀರತ್ : ಉತ್ತರ ಪ್ರದೇಶದ ಮೀರತ್‌ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯಲ್ಲಿ ಲಿಸಾರಿ ಗೇಟ್ ಪ್ರದೇಶದ ಸೊಹೈಲ್‌  ಗಾರ್ಡನ್‌ ನಲ್ಲಿರುವ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಶವಗಳು ಪತ್ತೆಯಾಗಿವೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ವರದಿಯಾಗಿದೆ. ಓರ್ವ ಪುರುಷ, ಓರ್ವ ಮಹಿಳೆ ಮತ್ತು ಅವರ ಮೂವರು ಹೆಣ್ಣುಮಕ್ಕಳನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ … Continued

ತಂದೆ ನಮ್ಮ ತಾಯಿಗೆ ಹೊಡೆಯುತ್ತಾರೆ…ನಮಗೆ ಸಹಾಯ ಮಾಡಿ..: ದೂರು ನೀಡಲು ಪೊಲೀಸ್‌ ಠಾಣೆಗೆ ಬಂದ 3 ಮತ್ತು 5 ವರ್ಷದ ಪುಟಾಣಿಗಳು…!

ನವದೆಹಲಿ: ಮೂರು ವರ್ಷದ ಬಾಲಕ ಮತ್ತು ಆತನ 5 ವರ್ಷದ ಸಹೋದರ ಪೊಲೀಸರಿಗೆ ದೂರು ನೀಡಲು ಠಾಣೆಗೆ ಬಂದಿದ್ದು, ದುಃಖದ ನಡುವೆ ತಮ್ಮ ತಾಯಿಯನ್ನು ಥಳಿಸುತ್ತಾರೆ ಎಂದು ತಂದೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಪಿಲೋಖಾರಿ ಔಟ್‌ಪೋಸ್ಟ್ ಇನ್‌ಚಾರ್ಜ್ ರಾಹುಲ್ ಯಾದವ್ ಮಾತನಾಡಿ, ಪೊಲೀಸರು ಮಕ್ಕಳಿಗೆ ಟಾಫಿ … Continued

ಬಾಲಿವುಡ್‌ ನಟನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅಪಹರಣ, ನಂತರ ಹಣಕ್ಕಾಗಿ 12 ಗಂಟೆಗಳ ಕಾಲ ಚಿತ್ರಹಿಂಸೆ…!

ನವದೆಹಲಿ : ಹಮ್‌ ಹೇ ರಾಹಿ ಪ್ಯಾರ್‌ ಕೆ ಮತ್ತು ವೆಲ್‌ಕಮ್‌ ಚಿತ್ರಗಳ ನಟನೆಗೆ ಹೆಸರಾದ ಚಲನಚಿತ್ರ ನಟ ಮುಷ್ತಾಕ್‌ ಖಾನ್‌ ಅವರನ್ನು ಅಪಹರಿಸಿ, ಗಂಟೆಗಟ್ಟಲೆ ಚಿತ್ರಹಿಂಸೆ ನೀಡಿ ₹ 2 ಲಕ್ಷ ನೀಡುವಂತೆ ಒತ್ತಾಯಿಸಿ ನಂತರ ದುಷ್ಕರ್ಮಿಗಳು ಪರಾರಿಯಾದ ಘಟನೆ ವರದಿಯಾಗಿದೆ. ಉತ್ತರ ಪ್ರದೇಶದ ಮೀರತ್‌ನಲ್ಲಿ ನವೆಂಬರ್ 20 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ … Continued

ವೀಡಿಯೊ..| ಕುದುರೆ ಮೇಲೆ ಮೆರವಣಿಗೆಯಲ್ಲಿ ಹೊರಟಿದ್ದ ವರನ ಕೊರಳಲ್ಲಿದ್ದ ನೋಟಿನ ಹಾರ ಕದ್ದೊಯ್ದ ಮಿನಿಟ್ರಕ್‌ ಚಾಲಕ ; ಸಿನಿಮೀಯ ರೀತಿ ಬೆನ್ನಟ್ಟಿ ಹಿಡಿದ ಮದುಮಗ..!

ಸಿನೆಮಾದಲ್ಲಿ ಮಾತ್ರ ಕಾಣಬಹುದಾದ ದೃಶ್ಯದಂತೆ  ಉತ್ತರ ಪ್ರದೇಶದ ಮೀರತ್‌ನಿಂದ ವರದಿಯಾದ ಘಟನೆಯೊಂದರಲ್ಲಿ ಕುದುರೆ ಮೇಲೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ವರನೊಬ್ಬನಿಗೆ ಹಾಕಿದ್ದ ನೋಟುಗಳ ಮಾಲೆಯನ್ನು ದೋಚಿರುವ ಘಟನೆ ವರದಿಯಾಗಿದ್ದು, ನಂತರ ಮಿನಿಟ್ರಕ್‌ನಲ್ಲಿ ಸಾಗುತ್ತಿದ್ದ ಕಳ್ಳನನ್ನು ವರನೇ ಬೆನ್ನಟ್ಟಿ ಹಿಡಿದಿದ್ದಾನೆ…! ಇದರಿಂದ ಮದುವೆ ಮೆರವಣಿಗೆಯಲ್ಲಿ ಕೆಲ ಕಾಲ ಗೊಂದಲ ಉಂಟಾಗಿತ್ತು. ಉತ್ತರ ಪ್ರದೇಶದ ಮೀರತ್‌ನಲ್ಲಿ ವರನಿಗೆ ಹಾಕಿದ್ದ ನೋಟುಗಳ … Continued

ವಕೀಲೆ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ : 20 ಲಕ್ಷ ರೂ. ಕೊಡ್ತೇವೆ ಹೇಳಿ ಕೇವಲ ₹ 1 ಲಕ್ಷ ಕೊಟ್ರು ; ಪೊಲೀಸರಿಗೆ ದೂರು ನೀಡಿದ ವಕೀಲೆಯ ಕೊಲೆ ಆರೋಪಿ…!

ಮೀರತ್‌ : ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಒಂದು ವರ್ಷದ ಹಿಂದಿನ ಕೊಲೆ ಪ್ರಕರಣವು ಅಚ್ಚರಿಯ ತಿರುವು ಪಡೆದುಕೊಂಡಿದೆ. ಕೊಲೆ ಮಾಡಿದ್ದಕ್ಕಾಗಿ ಭರವಸೆ ನೀಡಿದಷ್ಟು ಹಣ ಕೊಟ್ಟಿಲ್ಲ ಎಂದು ಗುತ್ತಿಗೆ ಕೊಲೆಗಾರನೇ ಪೊಲೀಸರಿಗೆ ದೂರು ನೀಡಿದ ಪ್ರಕರಣ ವರದಿಯಾಗಿದೆ. ವಕೀಲೆ ಅಂಜಲಿ ಅವರನ್ನು ಕೊಲ್ಲಲು 20 ಲಕ್ಷ ರೂ.ಗಳ ಗುತ್ತಿಗೆ ನೀಡಲಾಗಿತ್ತು, ಆದರೆ ಆ ಭರವಸೆ … Continued

ವೀಡಿಯೊ..| ದಿಢೀರನೆ ಕುಸಿದು ರಸ್ತೆ ಮೇಲೆ ಬಿದ್ದ ಕಟ್ಟಡ ; ಕೂದಲೆಳೆ ಅಂತರದಿಂದ ಪಾರಾದ ಇಬ್ಬರು ಪುಟ್ಟ ಮಕ್ಕಳು

ಉತ್ತರ ಪ್ರದೇಶದ ಮೀರತ್‌ನ ಸದರ್ ಬಜಾರ್ ಪ್ರದೇಶದಲ್ಲಿ ಶುಕ್ರವಾರ ಕಟ್ಟಡ ಕುಸಿತದಿಂದ ಅವಶೇಷಗಳ ಅಡಿಗೆ ಸಿಲುಕುವುದರಿಂದ ಇಬ್ಬರು ಪುಟ್ಟ ಮಕ್ಕಳು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿರಿದಾದ ರಸ್ತೆ ಮೂಲಕ ಸ್ಕೂಟರ್ ಹಾದುಹೋಗುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ, ನಂತರ ಬೈಸಿಕಲ್ ಮೇಲೆ ಮಗು ಹೋಗುತ್ತದೆ. ನಂತರ ಮಹಿಳೆ ನಡೆದುಕೊಂಡು … Continued

ಉತ್ತರ ಪ್ರದೇಶದ ಯುವತಿಯನ್ನು ಮದುವೆಯಾಗಲು ಏಳು ಸಮುದ್ರ ದಾಟಿ ಫಿಜಿಯಿಂದ ಬಂದ 3 ಮಕ್ಕಳ ತಂದೆ ಈಗ ಪೊಲೀಸರ ಅತಿಥಿ…

ಮೀರತ್‌ : 3 ಹೆಣ್ಣು ಮಕ್ಕಳ ತಂದೆ ತನ್ನ ಗೆಳತಿಯನ್ನು ಮದುವೆಯಾಗಲು ಏಳು ಸಮುದ್ರಗಳನ್ನು ದಾಟಿ ಮೀರತ್ ತಲುಪಿದ ನಂತರ ಹುಡುಗಿಯ ಸಂಬಂಧಿಕರು ಆತನ ಮೇಲೆ ಪೊಲೀಸ್ ದೂರು ನೀಡಿದ ನಂತರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಗುಪ್ತಚರ ದಳ ಆತನ ವಿಚಾರಣೆ ನಡೆಸುತ್ತಿದೆ. ಫಿಜಿಯ ಕಂಪ್ಯೂಟರ್ ಎಂಜಿನಿಯರ್ ಸೈಯದ್ ಫಜಲ್ ಆನ್‌ಲೈನ್‌ ನಲ್ಲಿ ಸಂಪರ್ಕಕ್ಕೆ … Continued