ಭಾರತದ 6 ಯುದ್ಧವಿಮಾನ ಹೊಡೆದಿದ್ದೇವೆ ಎಂಬ ಪಾಕ್‌ ಪ್ರಧಾನಿ ಹೇಳಿಕೆ ಶುದ್ಧ ಸುಳ್ಳು ; ಆರಂಭಿಕ ನಷ್ಟ ಸರಿಪಡಿಸಿಕೊಂಡು ಪಾಕ್ ಮೇಲೆ ನಿಖರ ದಾಳಿ-ಸಿಡಿಎಸ್ ಅನಿಲ ಚೌಹಾಣ

ನವದೆಹಲಿ: ಆಪರೇಷನ್ ಸಿಂಧೂರ ನಂತರದ ನಾಲ್ಕು ದಿನಗಳ ಮಿಲಿಟರಿ ಕಾರ್ಯಾಚರಣೆಯಲ್ಲಿ ಆರು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ ಚೌಹಾಣ ಸಾರಾಸಗಟಾಗಿ ನಿರಾಕರಿಸಿದ್ದಾರೆ. ಆದರೆ, ಅವರ ಮಾತುಗಳಿಂದ ಅನಿರ್ದಿಷ್ಟ ಸಂಖ್ಯೆಯ ಯುದ್ಧ ವಿಮಾನಗಳನ್ನು ಕಳೆದುಕೊಂಡಿರುವುದನ್ನು ಭಾರತದ ಸೇನೆ ಮೊದಲ ಬಾರಿಗೆ ಒಪ್ಪಿಕೊಂಡಂತಿದೆ. ಭಾರತವು “ಯುದ್ಧತಂತ್ರದ … Continued

ವೀಡಿಯೊಗಳು | ಪಾಕಿಸ್ತಾನಕ್ಕೆ ಮತ್ತೊಂದು ಹಿನ್ನಡೆ ; ಪಾಕ್‌ ನ ಮತ್ತೊಂದು ಪ್ರಮುಖ ನಗರ ವಶಪಡಿಸಿಕೊಂಡ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ…!

ನವದೆಹಲಿ: ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಎಂಬ ಪ್ರತ್ಯೇಕತಾವಾದಿ ಗುಂಪು ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದ ಆಯಕಟ್ಟಿನ ನಗರವಾದ ಸುರಬ್ ಅನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಬಲೂಚಿಸ್ತಾನ್ ಪೋಸ್ಟ್ ಹಂಚಿಕೊಂಡ ವೀಡಿಯೊಗಳ ಪ್ರಕಾರ, ನಗರದಾದ್ಯಂತ ಹಲವಾರು ಸ್ಥಳಗಳಿಂದ ದಟ್ಟವಾದ ಕಪ್ಪು ಹೊಗೆ ಮತ್ತು ಜ್ವಾಲೆಗಳು ಹೊರಹೊಮ್ಮುತ್ತಿರುವುದು ಕಂಡುಬಂದಿದ್ದು, ಹಲವಾರು ಪೊಲೀಸ್ ಠಾಣೆಗಳು ಮತ್ತು … Continued

ವೀಡಿಯೊ..| ನಾವು ದಾಳಿ ನಡೆಸುವ ಮೊದಲೇ ಭಾರತ ನಮ್ಮ ವಾಯುನೆಲೆಗಳ ಮೇಲೆ ʼಬ್ರಹ್ಮೋಸ್ʼ ದಾಳಿ ನಡೆಸಿತು ಎಂದು ಒಪ್ಪಿಕೊಂಡ ಪಾಕಿಸ್ತಾನ ಪ್ರಧಾನಿ…!

ನವದೆಹಲಿ: ಮೇ 9-10ರ ಮಧ್ಯರಾತ್ರಿ ರಾವಲ್ಪಿಂಡಿಯ ವಿಮಾನ ನಿಲ್ದಾಣ ಸೇರಿದಂತೆ ನಮ್ಮ ಪ್ರಮುಖ ಸೇನಾ ನೆಲೆಗಳ ಮೇಲೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಉಡಾಯಿಸಿ ನಮ್ಮ ಯೋಜನೆಗಳನ್ನು ಭಾರತವು ವಿಫಲಗೊಳಿಸಿತು ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ಪರವಾಗಿ ನಿಂತ ಕೆಲವೇ ರಾಷ್ಟ್ರಗಳಲ್ಲಿ ಒಂದಾದ ಅಜೆರ್ಬೈಜಾನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಕ್‌ ಪ್ರಧಾನಿ ಷರೀಫ್, … Continued

ವೀಡಿಯೊಗಳು | ಲಾಹೋರ್‌ ರ‍್ಯಾಲಿಯಲ್ಲಿ ಪಹಲ್ಗಾಮ್‌ ದಾಳಿ ಸಂಚುಕೋರ ಸೈಫುಲ್ಲಾ ಕಸೂರಿ ಪ್ರತ್ಯಕ್ಷ : ಉಗ್ರ ಹಫೀಜ್ ಸಯೀದ್ ಪುತ್ರ ಸಹ ಭಾಗಿ

ಲಾಹೋರ್:26 ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ ಪಹಲ್ಗಾಮ್ ದಾಳಿಯ ಯೋಜನೆ ರೂಪಿಸಿದ್ದ ಲಷ್ಕರ್-ಎ-ತೈಬಾ (ಎಲ್‌ಇಟಿ)ಯ ಹಿರಿಯ ಕಮಾಂಡರ್ ಸೈಫುಲ್ಲಾ ಕಸೂರಿ, ಲಾಹೋರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾನೆ. ಮಾಧ್ಯಮ ವರದಿಗಳ ಪ್ರಕಾರ, ಪಾಕಿಸ್ತಾನದ ಪರಮಾಣು ಪರೀಕ್ಷೆಗಳ ವರ್ಷಾಚರಣೆ ಅಂಗವಾಗಿ ಪಾಕಿಸ್ತಾನ ಮರ್ಕಾಜಿ ಮುಸ್ಲಿಂ ಲೀಗ್ (ಪಿಎಂಎಂಎಲ್) ಈ ರ್ಯಾಲಿಯನ್ನು ಆಯೋಜಿಸಿತ್ತು. ಭಾರತದಿಂದ ಗೊತ್ತುಪಡಿಸಿದ ಭಯೋತ್ಪಾದಕ ಎಂದು ಘೋಷುಸಲ್ಪಟ್ಟ, … Continued

ಐಎಸ್‌ಐ ಪರ ಬೇಹುಗಾರಿಕೆ, ಪಾಕಿಸ್ತಾನಕ್ಕೆ 7 ಬಾರಿ ಭೇಟಿ : ಸರ್ಕಾರಿ ನೌಕರನ ಬಂಧನ…

ಜೈಸಲ್ಮೇರ್‌ : ಮೇ 7-10 ರಂದು ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ದೇಶಾದ್ಯಂತ ಬೇಹುಗಾರಿಕೆ ಜಾಲಗಳ ಮೇಲೆ ದಾಳಿ ನಡೆಸಲಾಗುತ್ತಿದ್ದು, ಪಾಕಿಸ್ತಾನದ ಐಎಸ್‌ಐ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ರಾಜಸ್ಥಾನ ಸರ್ಕಾರಿ ನೌಕರನನ್ನು ಜೈಸಲ್ಮೇರ್‌ನಲ್ಲಿ ಬಂಧಿಸಲಾಗಿದೆ. ಬಂಧಿತ ಉದ್ಯೋಗಿಯನ್ನು ಶಕುರ್ ಖಾನ್ ಮಂಗನಿಯಾರ್ ಎಂದು ಗುರುತಿಸಲಾಗಿದ್ದು, ಆತನನ್ನು ಜೈಸಲ್ಮೇರ್‌ನಲ್ಲಿರುವ ಆತನ ಕಚೇರಿಯಲ್ಲಿ ಸಿಐಡಿ … Continued

ಭಾರತದ ಸಾಮರ್ಥ್ಯ ಬಹಿರಂಗ…| ಪಾಕಿಸ್ತಾನದ ಮುರಿದ್ ಸೇನಾ ನೆಲೆಯ ಭೂಗತ ಸೌಲಭ್ಯಗಳ ಮೇಲೆ ದಾಳಿ ನಡೆಸಿದ್ದನ್ನು ತೋರಿಸಿದ ಉಪಗ್ರಹ ಚಿತ್ರಗಳು…!

ನವದೆಹಲಿ: ಭಾರತದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಮುರಿಯದ್ ವಾಯುನೆಲೆಯ ಮೇಲೆ ನಡೆದ ವಾಯುದಾಳಿಗಳು ಭೂಗತ ಮಿಲಿಟರಿ ಸೌಲಭ್ಯವನ್ನು ಗುರಿಯಾಗಿರಿಸಿಕೊಂಡಿರಬಹುದು ಎಂದು ಹೊಸದಾಗಿ ಬಿಡುಗಡೆಯಾದ ಹೈ-ರೆಸಲ್ಯೂಶನ್ ಉಪಗ್ರಹ ಚಿತ್ರಗಳು ತೋರಿಸಿವೆ. ಬುಧವಾರದ ಹೈ-ರೆಸಲ್ಯೂಶನ್ ಉಪಗ್ರಹ ಚಿತ್ರಗಳು ಪಾಕಿಸ್ತಾನದ ಮುರಿಯದ್ ವಾಯುನೆಲೆಗೆ ವ್ಯಾಪಕ ಹಾನಿಯನ್ನು ಬಹಿರಂಗಪಡಿಸಿವೆ, ಪಾಕಿಸ್ತಾನ ವಾಯುಪಡೆಯ ಭೂಮಿ ಅಡಿಯ ಮಿಲಿಟರಿ ಸೌಲಭ್ಯದಿಂದ … Continued

ಭಾರತದ ವಿರುದ್ಧ ತನ್ನ ಸೇನಾ ಕಾರ್ಯಾಚರಣೆ ಫೋಟೊ ಎಂದು ಪಾಕ್‌ ಸೇನಾ ಮುಖ್ಯಸ್ಥರಿಗೆ ‘ಚೀನಾ ಸೇನೆ ಕವಾಯತು ಚಿತ್ರ’ ಗಿಫ್ಟ್‌ ನೀಡಿ ಅಪಹಾಸ್ಯಕ್ಕೀಡಾದ ಪಾಕ್ ಪ್ರಧಾನಿ…!

ನವದೆಹಲಿ: ಅಪಹಾಸ್ಯದ ಮತ್ತೊಂದು ವಿದ್ಯಮಾನದಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತದ ಆಪರೇಶನ್‌ ಸಿಂಧೂರಕ್ಕೆ ಪ್ರತೀಕಾರವಾಗಿ ತಾನು ಭಾರತದ ವಿರುದ್ಧ ನಡೆಸಿದ ಆಪರೇಷನ್ ಬನ್ಯಾನ್ ಅಲ್-ಮಾರ್ಸಸ್ ಕಾರ್ಯಾಚರಣೆ ಚಿತ್ರವೆಂದು ಹೇಳಿಕೊಂಡು ಪಾಕ್‌ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ವರ್ಣಚಿತ್ರವೊಂದನ್ನು ಉಡುಗೊರೆಯಾಗಿ ನೀಡಿ ವ್ಯಾಪಕವಾಗಿ ನಗೆಪಾಟಲಿಗೀಡಾಗಿದ್ದಾರೆ. ಯಾಕೆಂದರೆ ಭಾರತದ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯ ಫೋಟೋ … Continued

ಪಾಕಿಸ್ತಾನಕ್ಕೆ ಭಾರತದ ಹೆದರಿಕೆ ; ಚೀನಾ ಜೊತೆ ಸೇರಿ ಪರಮಾಣು ಶಸ್ತ್ರಾಸ್ತ್ರಗಳ ಆಧುನೀಕರಣ : ಅಮೆರಿಕ ಗುಪ್ತಚರ ವರದಿ

ನವದೆಹಲಿ: ಪಾಕಿಸ್ತಾನವು ಭಾರತವನ್ನು “ಅಸ್ತಿತ್ವಕ್ಕೆ ಬೆದರಿಕೆ” ಎಂದು ಪರಿಗಣಿಸುತ್ತದೆ, ಆದರೆ ಭಾರತವು ಚೀನಾವನ್ನು ತನ್ನ “ಪ್ರಾಥಮಿಕ ಎದುರಾಳಿ” ಪರಿಗಣಿಸುತ್ತದೆ ಹಾಗೂ ಪಾಕಿಸ್ತಾನವನ್ನು ನಿರ್ವಹಿಸಬೇಕಾದ “ಭದ್ರತಾ ಸಮಸ್ಯೆ” ಎಂದು ಪರಿಗಣಿಸುತ್ತದೆ ಎಂದು ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆ 2025 ರ ತನ್ನ ವಿಶ್ವಾದ್ಯಂತ ಬೆದರಿಕೆ ಮೌಲ್ಯಮಾಪನ ವರದಿಯಲ್ಲಿ ತಿಳಿಸಿದೆ. 2025ರ ಮೇ 25ರಂದು ಬಿಡುಗಡೆಯಾದ ಅಮೆರಿಕ ಡಿಫೆನ್ಸ್ … Continued

ವೀಡಿಯೊ | ನೀವು ನಮ್ಮ ನೀರು ನಿಲ್ಲಿಸಿದ್ರೆ ನಾವು ನಿಮ್ಮ…; ಉಗ್ರ ಹಫೀಜ್ ಸಯೀದ್ ಧಾಟಿಯಲ್ಲೇ ಭಾರತಕ್ಕೆ ಪಾಕಿಸ್ತಾನ ಮಿಲಿಟರಿ ವಕ್ತಾರನ ಬೆದರಿಕೆ !

ಪಾಕಿಸ್ತಾನಿ ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಇತ್ತೀಚೆಗೆ ಭಾರತದ ವಿರುದ್ಧ ದ್ವೇಷ ತುಂಬಿದ ಭಾವನೆಗಳನ್ನು ಹೊರಹಾಕಿದ್ದಾರೆ, ಇದು ಹಿಂದೆ ಜಾಗತಿಕ ಭಯೋತ್ಪಾದಕ ಹಫೀಜ್ ಸಯೀದ್ ವ್ಯಕ್ತಪಡಿಸಿದಂತೆಯೇ ಇದೆ ಎಂಬುದು ಹಲವರ ಅಭಿಪ್ರಾಯವಾಗಿದೆ. 2008 ರ ಮುಂಬೈ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎಂದು ವರದಿಯಾಗಿರುವ ಹಫೀಜ್ ಸಯೀದ್, ಭಾರತ ಮತ್ತು … Continued

ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಇಂಡಿಗೋ ವಿಮಾನವು ಅದರ ವಾಯುಪ್ರದೇಶ ಬಳಸಲು ಮಾಡಿದ ಮನವಿ ತಿರಸ್ಕರಿಸಿದ ಪಾಕಿಸ್ತಾನ

 ನವದೆಹಲಿ: ದೆಹಲಿಯಿಂದ ಶ್ರೀನಗರಕ್ಕೆ ಹಾರುತ್ತಿದ್ದ ಇಂಡಿಗೋ ವಿಮಾನವು, ಆಕಾಶದಲ್ಲಿ ತೀವ್ರ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ತುತ್ತಾದ ನಂತರ ಪ್ರಕ್ಷುಬ್ಧತೆ ತಪ್ಪಿಸಲು ಪಾಕಿಸ್ತಾನದ ವಾಯುಪ್ರದೇಶವನ್ನು ಸ್ವಲ್ಪ ಸಮಯ ಪ್ರವೇಶಿಸಲು ಅನುಮತಿ ಕೋರಿತ್ತು, ಆದರೆ ಪಾಕಿಸ್ತಾನದ ಲಾಹೋರ್ ವಾಯು ಸಂಚಾರ ನಿಯಂತ್ರಣವು ತುರ್ತು ಸಂದರ್ಭದ ಈ ಮನವಿಯನ್ನು ತಿರಸ್ಕರಿಸಿದೆ ಎಂದು ಪಿಟಿಐ ಗುರುವಾರ ವರದಿ ಮಾಡಿದೆ. 6E … Continued