ವೀಡಿಯೊಗಳು..| ಅಪರೂಪದ ಮದುವೆ : ಅವಳಿ ಸಹೋದರರ ಜೊತೆ ನಡೆದ ಅವಳಿ ಸಹೋದರಿಯರ ವಿವಾಹ…!

ಕಾಮರೆಡ್ಡಿ : ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಅಪರೂಪದ ವಿವಾಹವೊಂದು ನಡೆದಿದೆ. ಅವಳಿ ಸಹೋದರರಾದ ವಿಜಯ ಮತ್ತು ವಿನಯ ಅವರು, ನಿಜಾಮಾಬಾದ್ ಜಿಲ್ಲೆಯ ಡೆಮಿ ಕಲಾನ್ ಗ್ರಾಮದ ಅವಳಿ ಸಹೋದರಿಯರಾದ ಕೀರ್ತನಾ ಮತ್ತು ಕೀರ್ತಿ ಎಂಬವರನ್ನು ವಿವಾಹವಾದರು. ಫೆಬ್ರವರಿ 22 ರ ಭಾನುವಾರದಂದು ಒಂದೇ ಮುಹೂರ್ತದಲ್ಲಿ (ಶುಭ ಸಮಯ) ಈ ವಿಶಿಷ್ಟ ವಿವಾಹ ಸಮಾರಂಭ ನಡೆಯಿತು, ಇದು … Continued

ತೆಲಂಗಾಣದಲ್ಲಿ ಹೊಸ ಪಕ್ಷ ಘೋಷಿಸಿದ ಕೆಸಿಆರ್‌ ಪುತ್ರಿ ಕವಿತಾ

ಹೈದರಾಬಾದ್: ತೆಲಂಗಾಣ ಜಾಗೃತಿ ಅಧ್ಯಕ್ಷೆ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯೆ ಕಲ್ವಕುಂಟ್ಲ ಕವಿತಾ ಅವರು ರಾಜ್ಯದಲ್ಲಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಮುಂಬರುವ ಮೇ ತಿಂಗಳಿನಲ್ಲಿ ಪಕ್ಷಕ್ಕೆ ಚಾಲನೆ ಸಿಗಲಿದ್ದು, ಪಕ್ಷದ ಹೆಸರಿನಲ್ಲಿ ‘ತೆಲಂಗಾಣ’ ಎಂಬ ಪದ ಇರಲಿದೆ ಎಂದು ಅವರು ತಿಳಿಸಿದ್ದಾರೆ. “ತೆಲಂಗಾಣ ನಮ್ಮ ಮದರ್ ಬೋರ್ಡ್ ಇದ್ದಂತೆ. ‘ಸಾಮಾಜಿಕ … Continued

ಪೈಶಾಚಿಕ ಕೃತ್ಯ | ಪಂಚಾಯತ ಚುನಾವಣೆ ಸ್ಪರ್ಧಿಸಲು ಮಗಳನ್ನೇ ಕಾಲುವೆಗೆ ಎಸೆದು ಕೊಂದ ತಂದೆ…!

ಹೈದರಾಬಾದ್: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಹಪಾಹಪಿಗೆ ಬಿದ್ದ ವ್ಯಕ್ತಿಯೊಬ್ಬ, ತನ್ನ ಆಸೆಗೆ ಅಡ್ಡಿಯಾಗಿದ್ದ ಆರು ವರ್ಷದ ಮಗಳನ್ನೇ ತೆಲಂಗಾಣದ ಕಾಲುವೆಯೊಂದಕ್ಕೆ ಎಸೆದು ಹತ್ಯೆ ಮಾಡಿರುವ ಘೋರ ಘಟನೆ ನಡೆದಿದೆ. ಮಹಾರಾಷ್ಟ್ರದ ಚುನಾವಣಾ ನಿಯಮದ ಪ್ರಕಾರ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ ಎಂಬ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ … Continued

ತೆಲಂಗಾಣದಲ್ಲಿ ವಿಷಪೂರಿತ ಇಂಜೆಕ್ಷನ್ ನೀಡಿ ಬೀದಿ ನಾಯಿಗಳ ಹತ್ಯೆ ; ಸಾವಿನ ಸಂಖ್ಯೆ 900ಕ್ಕೆ ಏರಿಕೆ

ಹೈದರಾಬಾದ್: ತೆಲಂಗಾಣದಲ್ಲಿ ಬೀದಿ ನಾಯಿಗಳ ಹತ್ಯೆ ಪ್ರಕರಣಗಳು ಮುಂದುವರಿದಿದ್ದು, ಜಗತಿಯಾಲ ಜಿಲ್ಲೆಯಲ್ಲಿ ಸುಮಾರು 300 ನಾಯಿಗಳನ್ನು ಕೊಲ್ಲಲಾಗಿದೆ ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಈ ತಿಂಗಳು ಹತರಾದ ನಾಯಿಗಳ ಸಂಖ್ಯೆ 900ಕ್ಕೆ ಏರಿದೆ ಎಂದು ಹೇಳಲಾಗಿದೆ. ಜಗತಿಯಾಲ ಜಿಲ್ಲೆಯ ಪೆಗಡಪಲ್ಲಿ ಗ್ರಾಮದಲ್ಲಿ ಜನವರಿ 22 ರಂದು ಸುಮಾರು 300 ಬೀದಿ ನಾಯಿಗಳಿಗೆ … Continued

ತೆಲಂಗಾಣದಲ್ಲಿ ಮಾರಕ ಇಂಜೆಕ್ಷನ್ ನೀಡಿ 500 ಬೀದಿ ನಾಯಿಗಳ ಮಾರಣಹೋಮ…!

ಹೈದರಾಬಾದ್: ತೆಲಂಗಾಣದಲ್ಲಿ ಬೀದಿ ನಾಯಿಗಳ ಸಾಮೂಹಿಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಹನುಮಕೊಂಡ ಮತ್ತು ಕಾಮಾರೆಡ್ಡಿ ಜಿಲ್ಲೆಗಳ ಏಳು ಮಂದಿ ಗ್ರಾಮ ಪಂಚಾಯt ಅಧ್ಯಕ್ಷರು (ಸರಪಂಚ್‌ಗಳು) ಸೇರಿದಂತೆ ಒಟ್ಟು 15 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಹೊಸ ವರ್ಷದ ಮೊದಲ ಎರಡು ವಾರಗಳಲ್ಲಿ ಕನಿಷ್ಠ 500 ನಾಯಿಗಳಿಗೆ ವಿಷ ಹಾಕಿ ಕೊಲ್ಲಲಾಗಿದ್ದು, … Continued

ಇರುವೆಗಳ ಭಯದಿಂದ ಆತ್ಮಹತ್ಯೆ ಮಾಡಿಕೊಂಡ ಮಹಿಳೆ…!

ಹೈದರಾಬಾದ್ : ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ 25 ವರ್ಷದ ಮಹಿಳೆಯೊಬ್ಬರು ಇರುವೆಗಳ ಭಯದಿಂದ (ಮೈರ್ಮೆಕೊಫೋಬಿಯಾ) ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಈ ದುರಂತವು ನವೆಂಬರ್ 4 ರಂದು ಸಂಭವಿಸಿದೆ. 2022 ರಲ್ಲಿ ವಿವಾಹವಾಗಿದ್ದ ಮತ್ತು ಮೂರು ವರ್ಷದ ಮಗಳಿರುವ ಈ ಮಹಿಳೆ ಸೀಲಿಂಗ್ ಫ್ಯಾನ್‌ಗೆ ಸೀರೆಯಿಂದ ಬಿಗಿದುಕೊಂಡ … Continued

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ತೆಲಂಗಾಣ ಸಚಿವರಾಗಿ ಪ್ರಮಾಣ ವಚನ

ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ಮೊಹಮ್ಮದ್ ಅಜರುದ್ದೀನ್ ಅವರು ತೆಲಂಗಾಣ ಸಚಿವರಾಗಿ ಇಂದು (ಅಕ್ಟೋಬರ್‌ 31) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಸಮಾರಂಭದಲ್ಲಿ ರಾಜ್ಯಪಾಲರಾದ ಜಿಷ್ಣು ದೇವ ವರ್ಮಾ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ಸೇರ್ಪಡೆಯು ಕಾಂಗ್ರೆಸ್ … Continued

8ನೇ ತರಗತಿಯ ಹುಡುಗಿ ಮದುವೆಯಾದ 40 ವರ್ಷದ ವ್ಯಕ್ತಿ…! ಹುಡುಗಿಯ ಶಿಕ್ಷಕರಿಂದ ಪ್ರಕರಣ ಬೆಳಕಿಗೆ

ತೆಲಂಗಾಣದಲ್ಲಿ ರಂಗಾ ರೆಡ್ಡಿ ಜಿಲ್ಲೆಯಲ್ಲಿ ನಿಜ ಜೀವನದ ‘ಬಾಲಿಕಾ ವಧು’ ಪ್ರಕರಣ ವರದಿಯಾಗಿದೆ. ಆಕೆಯ ಶಿಕ್ಷಕರು ಜಿಲ್ಲಾ ಮಕ್ಕಳ ರಕ್ಷಣೆ ಸೇವೆಗಳ ಸಿಬ್ಬಂದಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಆಕೆಯನ್ನು ರಕ್ಷಿಸಲಾಗಿದೆ. ಮೇ 28 ರಂದು 8 ನೇ ತರಗತಿಯ ವಿದ್ಯಾರ್ಥಿನಿಯನ್ನು ರಂಗಾರೆಡ್ಡಿ ಜಿಲ್ಲೆಯ ಕಂಡಿವಾಡಾದ 40 ವರ್ಷದ ಶ್ರೀನಿವಾಸ್ ಗೌಡ್‌ ಎಂಬ ವ್ಯಕ್ತಿಗೆ … Continued

ಬೆಳಗಿನ ವಾಕಿಂಗ್‌ ವೇಳೆ ಖಾರದಪುಡಿ ಎರಚಿ ಸಿಪಿಐ ನಾಯಕನ ಗುಂಡಿಟ್ಟು ಕೊಂದ ದುಷ್ಕರ್ಮಿಗಳು

ಹೈದರಾಬಾದ್: ಮಂಗಳವಾರ ಬೆಳಿಗ್ಗೆ ದಿಲ್ಸುಖ್‌ ನಗರದ ಸಲಿವಾಹನ ಪಾರ್ಕ್ ಹೊರಗೆ ಬೆಳಗಿನ ವಾಕಿಂಗ್‌ ನಂತರ ಜ್ಯೂಸ್ ಕುಡಿಯಲು ನಿಂತಿದ್ದಾಗ ಸಿಪಿಐ ನಾಯಕರೊಬ್ಬರನ್ನು ನಾಲ್ವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾರೆ. ಅವರಲ್ಲಿ ಒಬ್ಬ ಅವರ ಮಾಜಿ ಸ್ನೇಹಿತ ಎಂದು ನಂಬಲಾಗಿದೆ. ದಾಳಿಯ ನಂತರ ಹಲ್ಲೆಕೋರರು ಕಾರಿನಲ್ಲಿ ಪರಾರಿಯಾಗಿದ್ದಾರೆ. ದಾಳಿಕೋರರು ಮೃತ ಕೆ. ಚಂದು ರಾಥೋಡ ಅಲಿಯಾಸ್ ಚಂದು … Continued

ಔಷಧ ಕಾರ್ಖಾನೆಯಲ್ಲಿ ರಿಯಾಕ್ಟರ್ ಸ್ಫೋಟ : 12 ಸಾವು, 13 ಕಾರ್ಮಿಕರ ರಕ್ಷಣೆ

ಹೈದರಾಬಾದ್ : ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಪಾಸಮೈಲಾರಂ ಹಂತ 1 ರ ಪ್ರದೇಶದ ಸಿಗಾಚಿ ಫಾರ್ಮಾ ಕಂಪನಿಯಲ್ಲಿ ಸೋಮವಾರ ಸಂಭವಿಸಿದ ಸ್ಫೋಟದಲ್ಲಿ 12 ಜನರು ಸಾವಿಗೀಡಾಗಿದ್ದಾರೆ ಹಾಗೂ 13 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ ಎಂದು ವರದಿಯಾಗಿದೆ. ಸ್ಫೋಟ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಕಾರ್ಖಾನೆಯಲ್ಲಿನ ರಿಯಾಕ್ಟರ್ ಸ್ಫೋಟಗೊಂಡ ನಂತರ ನಡೆದ ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ ಎಂದು … Continued