ತನ್ನ ಮಗಳ ಮೇಲೆಯೇ ಅತ್ಯಾಚಾರ ಮಾಡಲು ತನ್ನ ಪ್ರಿಯಕರ-ಸಹಾಯಕನಿಗೆ ಕುಮ್ಮಕ್ಕು ನೀಡಿದ ಬಿಜೆಪಿ ಮಾಜಿ ನಾಯಕಿ..! ಮೂವರ ಬಂಧನ

ಹರಿದ್ವಾರ: ಉತ್ತರಾಖಂಡದ ಮಾಜಿ ಬಿಜೆಪಿ ನಾಯಕಿಯ ಗೆಳೆಯ ಮತ್ತು ಆತನ ಸಹಾಯಕ ಅವಳ 13 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿದ್ದು, ಇದಕ್ಕೆ ಮಹಿಳೆಯೇ ಅವಕಾಶ ನೀಡಿದ್ದಾಳೆ ಎಂಬ ಆರೋಪ ಹೊರಿಸಲಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವರ್ಷದ ಜನವರಿಯಿಂದ ಮಾರ್ಚ್ ವರೆಗೆ 13 ವರ್ಷದ ಬಾಲಕಿಯ ಮೇಲೆ ಹಲವು … Continued

ರೆಸಾರ್ಟ್‌ ರಿಸೆಪ್ಶನಿಸ್ಟ್‌ ಅಂಕಿತಾ ಭಂಡಾರಿ ಕೊಲೆ ಪ್ರಕರಣ : ಬಿಜೆಪಿಯ ನಾಯಕನ ಪುತ್ರ, ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆ

ಡೆಹ್ರಾಡೂನ್: ಅಂಕಿತಾ ಭಂಡಾರಿ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಉತ್ತರಾಖಂಡದ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಕೋಟ್ವಾರ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿಗಳಾದ ಪುಲ್ಕಿತ್ ಆರ್ಯ, ಸೌರಭ ಭಾಸ್ಕರ ಮತ್ತು ಅಂಕಿತ ಗುಪ್ತಾ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 201 (ಸಾಕ್ಷ್ಯ ನಾಶಪಡಿಸುವುದು), 120 ಬಿ (ಕ್ರಿಮಿನಲ್ … Continued

ಬೆಚ್ಚಿಬೀಳಿಸುವ ವೀಡಿಯೊ…| ಮಲಗಿದ್ದ ವ್ಯಕ್ತಿಯ ಮೈಮೇಲೆ ಹರಿದಹೋದ ಬೃಹತ್‌ ಕಾಳಿಂಗ ಸರ್ಪ; ಆದ್ರೂ ಆತ ಶಾಂತವಾಗಿ ಮಲಗಿದ್ದ…!

ಡೆಹ್ರಡೂನ್‍: ಹಾವೆಂದರೆ ಸಾಕು ಎಲ್ಲರೂ ಬೆಚ್ಚಿಬೀಳುತ್ತಾರೆ. ಅಂಥದ್ದರಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ಮೇಲೆ ಬೃಹತ್‌ ಕಾಳಿಂಗ ಸರ್ಪ ಹರಿದು ಹೋದರೂ ತಲೆಕೆಡಿಸಿಕೊಳ್ಳದೆ ಶಾಂತವಾಗಿ ಮಲಗಿರುವ ವೀಡಿಯೊವೊಂದು ವೈರಲ್‌ ಆಗಿದೆ. ಹಾಸಿಗೆಯ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬ ಎಚ್ಚರದಲ್ಲಿದ್ದಾಗಲೇ ಆತನ ಮೈಮೇಲೆ ಕಾಳಿಂಗ ಸರ್ಪ (King Cobra) ತೆವಳಿಕೊಂಡು ಹೋಗಿದೆ. ಮೈ ಮೇಲೆ ಹಾವು ಹರಿಯುತ್ತಿರುವುದು ಆತನಿಗೆ ಗೊತ್ತಿದ್ದರೂ … Continued

ಭಾರಿ ಹಿಮಪಾತ: ಬಿಆರ್‌ಒ 47 ಕಾರ್ಮಿಕರು ಸಿಲುಕಿರುವ ಶಂಕೆ

ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾನಾ ಬಳಿ ಶುಕ್ರವಾರ ಸಂಭವಿಸಿದ ಭಾರೀ ಹಿಮಪಾತದಲ್ಲಿ ಗಡಿ ರಸ್ತೆ ಸಂಸ್ಥೆ(ಬಿಆರ್‌ಒ)ಯ ಕನಿಷ್ಠ 47 ಕಾರ್ಮಿಕರು ಹಿಮದಡಿಯಲ್ಲಿ ಸಿಲುಕಿರುವ ಶಂಕೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ 50ಕ್ಕೂ ಹೆಚ್ಚು ಕಾರ್ಮಿಕರು ಹಿಮಪಾತದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮಾನಾದ ಗಡಿ ಪ್ರದೇಶದ … Continued

ಪರಸ್ಪರರ ಕಚೇರಿ ಮೇಲೆ ಗುಂಡಿನ ದಾಳಿ, ಕಲ್ಲು ಎಸೆತ : ಹಿಂಸಾಚಾರಕ್ಕೆ ತಿರುಗಿದ ಬಿಜೆಪಿ ನಾಯಕ-ಶಾಸಕರ ನಡುವಿನ ರಾಜಕೀಯ ವೈಷಮ್ಯ; ಬಂಧನ

ಉತ್ತರಾಖಂಡದ ರೂರ್ಕಿಯಲ್ಲಿ ಬಿಜೆಪಿಯ ಮಾಜಿ ಶಾಸಕ ಕುನ್ವರ್ ಪ್ರಣವ ಸಿಂಗ್ ಚಾಂಪಿಯನ್ ಮತ್ತು ಪಕ್ಷೇತರ ಶಾಸಕ ಉಮೇಶಕುಮಾರ ನಡುವಿನ ವೈಷಮ್ಯ ಭಾನುವಾರ ಹಿಂಸಾಚಾರಕ್ಕೆ ತಿರುಗಿದ್ದು, ಪರಸ್ಪರರ ಕಚೇರಿಗೆ ಗುಂಡು ಹಾರಿಸಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ. ಘಟನೆಯ ವೀಡಿಯೋದಲ್ಲಿ ಚಾಂಪಿಯನ್ ತನ್ನ ಬೆಂಬಲಿಗರೊಂದಿಗೆ ಉಮೇಶಕುಮಾರ ಅವರ ಕಚೇರಿಯ ಮೇಲೆ ಹಲವಾರು ಗುಂಡುಗಳನ್ನು ಹಾರಿಸುವುದನ್ನು ತೋರಿಸುತ್ತದೆ. … Continued

ಉತ್ತರಾಖಂಡದಲ್ಲಿ ಇಂದಿನಿಂದ ಏಕರೂಪ ನಾಗರಿಕ ಸಂಹಿತೆ (UCC) ಜಾರಿ ; ಇದನ್ನು ಜಾರಿಗೆ ತಂದ ಮೊದಲ ರಾಜ್ಯ ; ಏನೇನು ಬದಲಾವಣೆ..?

ನವದೆಹಲಿ: ಉತ್ತರಾಖಂಡದಲ್ಲಿ ಇಂದಿನಿಂದ (ಜನವರಿ 27) ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿಯಾಗುತ್ತಿದ್ದು, ಎಲ್ಲಾ ನಾಗರಿಕರಿಗೆ ಮದುವೆ, ವಿಚ್ಛೇದನ, ಆಸ್ತಿ, ಉತ್ತರಾಧಿಕಾರ ಮತ್ತು ದತ್ತು ಕಾನೂನುಗಳಿಗೆ ಸಂಬಂಧಿಸಿದಂತೆ ಏಕರೂಪದ ಚೌಕಟ್ಟನ್ನು ಹಾಕುತ್ತದೆ. ಇದು ಗೋವಾದ ನಂತರ ನಾಗರಿಕರಿಗೆ ಏಕರೂಪದ ಕಾನೂನು ಚೌಕಟ್ಟನ್ನು ಹೊಂದಲಿರುವ ಎರಡನೇ ರಾಜ್ಯವಾಗಲಿದೆ. 2022ರ ಉತ್ತರಾಖಂಡದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ … Continued

ಜನಸಮೂಹದ ಮುಂದೆಯೇ ಜೋರಾಗಿ ಅತ್ತುಕರೆದು ಗೋಳಾಡಿ ಬೊಬ್ಬೆ ಹೊಡೆದ ಕಾಂಗ್ರೆಸ್ ಶಾಸಕಿ…! ವೀಡಿಯೊ ವೈರಲ್

ಉತ್ತರಾಖಂಡದ ಪೌರ ಚುನಾವಣೆ ನಾಟಕೀಯ ತಿರುವು ಪಡೆದುಕೊಂಡಿದ್ದು, ಭಗವಾನಪುರದ ಮತಗಟ್ಟೆಯಲ್ಲಿ ಗದ್ದಲ ನಡೆದಿದೆ. ಕಾಂಗ್ರೆಸ್ ಶಾಸಕಿ ಮಮತಾ ರಾಕೇಶ ಅವರು ತಮ್ಮ ಪುತ್ರ ಹಾಗೂ ಬೆಂಬಲಿಗರೊಂದಿಗೆ ಸ್ಥಳಕ್ಕೆ ಆಗಮಿಸಿ ಜನರನ್ನು ಮತದಾನ ಮಾಡದಂತೆ ಪೊಲೀಸರು ತಡೆದಿದ್ದಾರೆ ಎಂದು ಆರೋಪಿಸಿ ಜೋರಾಗಿ ಅತ್ತ ಘಟನೆ ನಡೆದಿದೆ ಎಂದು ವರದಿಯಾಗಿದೆ. ಶಾಸಕಿ ಅತ್ತು ಕರೆದು ಮಾಡುತ್ತಿರುವ ವೀಡಿಯೊ ಸಾಮಾಜಿಕ … Continued

3 ಮದುವೆಗಳು, ₹ 1.25 ಕೋಟಿ ಲೂಟಿ : ಶ್ರೀಮಂತರನ್ನೇ ಟಾರ್ಗೆಟ್‌ ಮಾಡಿ ಹಣ ಪೀಕುತ್ತಿದ್ದ ‘ಲೂಟಿ ವಧು’…!

ನವದೆಹಲಿ : ಲೂಟಿಕೋರ ವಧು ಎಂದು ಪೊಲೀಸರು ಬಣ್ಣಿಸಿರುವ ಮಹಿಳೆಯೊಬ್ಬಳು ದಶಕಕ್ಕೂ ಹೆಚ್ಚು ಕಾಲ ಅನೇಕರನ್ನು ಮದುವೆಯಾಗಿ ಸೆಟಲ್ ಮೆಂಟ್ ಹೆಸರಿನಲ್ಲಿ ಒಟ್ಟು ₹ 1.25 ಕೋಟಿ ವಸೂಲಿ ಮಾಡಿದ್ದು, ಈಗ ಆಕೆ ಪೊಲೀಸರ ಅತಿಥಿಯಾಗಿದ್ದಾಳೆ. ಉತ್ತರಾಖಂಡ ನಿವಾಸಿಯಾಗಿರುವ ಸೀಮಾ ಉರುಫ್‌ ನಿಕ್ಕಿ ಎಂಬಾಕೆ 2013ರಲ್ಲಿ ಮೊದಲು ಆಗ್ರಾದ ಉದ್ಯಮಿಯೊಬ್ಬರನ್ನು ವಿವಾಹವಾಗಿದ್ದಳು. ಕೆಲ ಸಮಯದ ಬಳಿಕ … Continued

ಉತ್ತರಾಖಂಡದಲ್ಲಿ 2025ರ ಜನವರಿಯಿಂದ ಏಕರೂಪ ನಾಗರಿಕ ಸಂಹಿತೆ ಜಾರಿಗೆ

ಡೆಹ್ರಾಡೂನ್‌ : 2025ರ ಜನವರಿಯಿಂದ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಪ್ರಕಟಿಸಿದ್ದಾರೆ. ವರದಿಗಳ ಪ್ರಕಾರ, ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಮತ್ತು ಸ್ವಾತಂತ್ರ್ಯದ ನಂತರ ಉತ್ತರಾಖಂಡವು ಏಕರೂಪ ನಾಗರಿಕ ಸಂಹಿತೆ(UCC)ಯನ್ನು ಜಾರಿಗೆ ತರುವ ಮೊದಲ ರಾಜ್ಯವಾಗಲಿದೆ. ಬುಧವಾರ (ಡಿಸೆಂಬರ್ 18) ಸೆಕ್ರೆಟರಿಯೇಟ್‌ನಲ್ಲಿ ನಡೆದ ಉತ್ತರಾಖಂಡ ಹೂಡಿಕೆ ಮತ್ತು … Continued

ಬಸ್ಸು ಕಮರಿಗೆ ಬಿದ್ದು 22 ಮಂದಿ ಸಾವು

ಅಲ್ಮೋರಾ : ಸೋಮವಾರ ಬೆಳಗ್ಗೆ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ರಾಮನಗರ ಬಳಿ ಬಸ್ ಕಮರಿಗೆ ಬಿದ್ದು ಕನಿಷ್ಠ 22 ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಬಸ್‌ನಲ್ಲಿ ಓವರ್‌ಲೋಡ್‌ ಇತ್ತು ಮತ್ತು ಮೃತಪಟ್ಟವರಲ್ಲಿ ಹಲವಾರು ಮಕ್ಕಳು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಸ್ ಗರ್ವಾಲ್‌ನಿಂದ ಕುಮಾನ್‌ಗೆ ಹೋಗುತ್ತಿದ್ದಾಗ ಅಲ್ಮೋರಾದ ಮಾರ್ಚುಲಾದಲ್ಲಿ ಅಪಘಾತ ಸಂಭವಿಸಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲೋಕಕುಮಾರ ಪಾಂಡೆ … Continued