ಬಿಹಾರ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಮಾಡಿದ ಚುನಾವಣಾ ಆಯೋಗ

ನವದೆಹಲಿ: ದೇಶಾದ್ಯಂತ ಕುತೂಹಲ ಮೂಡಿಸಿದ್ದ ಬಿಹಾರ ಚುನಾವಣೆ (Bihar Assembly Election) ದಿನಾಂಕವನ್ನು ಇಂದು ಸೋಮವಾರ (ಅಕ್ಟೋಬರ್‌ 6) ಘೋಷಣೆ ಮಾಡಿದೆ. ಬಿಹಾರದಲ್ಲಿ 2 ಹಂತದಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತ ನವೆಂಬರ್‌ 6ರಂದು ನಡೆಯಲಿದ್ದು, ಎರಡನೇ ಹಂತದ ಮತದಾನ ನವೆಂಬರ್‌ 11 ರಂದು ನಡೆಯಲಿದೆ. ನವೆಂಬರ್‌ 14 ರಂದು ಫಲಿತಾಂಶ ಹೊರಬೀಳಲಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ … Continued

ಬಿಹಾರ ಚುನಾವಣೆ | 4 ಒಪಿನಿಯನ್‌ ಪೋಲ್‌ ; ಎನ್‌ಡಿಎ, ಆರ್‌ಜೆಡಿ ಮಹಾಘಟಬಂಧನ ಮಧ್ಯೆ ಜಿದ್ದಾಜಿದ್ದಿ : ಯಾರಿಗೆ ಮುನ್ನಡೆ ?

2025 ರ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ನಾಲ್ಕು ಪ್ರಮುಖ ಒಪಿನಿಯನ್‌ ಪೋಲ್‌ಗಳ ಫಲಿತಾಂಶಗಳು ರಾಜ್ಯದ ಮತದಾರರ ಟ್ರೆಂಡ್‌ ಬಗ್ಗೆ ಹೇಳಿವೆ. ಮ್ಯಾಟ್ರಿಕ್ಸ್, ಜೆವಿಸಿ, ಸ್ಪೀಕ್ ಮೀಡಿಯಾ ನೆಟ್‌ವರ್ಕ್ ಮತ್ತು ವೋಟ್ ವೈಬ್ ನಡೆಸಿದ ಸಮೀಕ್ಷೆಗಳು ಬಿಜೆಪಿ, ಜೆಡಿಯು, ಎಲ್‌ಜೆಪಿ (ರಾಮ ವಿಲಾಸ) ಮತ್ತು ಎಚ್‌ಎಎಂ ಒಳಗೊಂಡ ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಮುನ್ನಡೆಯನ್ನು ತೋರಿಸಿವೆ. … Continued

ಬಿಜೆಪಿ ನಾಯಕನ ಕಾರಿನ ಬಾನೆಟ್‌ ಒಳಗೆ ಬೃಹತ್‌ ಹೆಬ್ಬಾವು ಪತ್ತೆ ; ವೀಡಿಯೊ ವೈರಲ್‌…

ಬಾರಾಬಂಕಿ:  ಕಾರಿನ ಬಾನೆಟ್ ಒಳಗೆ ಸೇರಿಕೊಂಡ ಬೃಹತ್ ಗಾತ್ರದ ಹೆಬ್ಬಾವೊಂದು ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ವಿದ್ಯಮಾನ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ಈ ಭಯಾನಕ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾರಿನ ಎಂಜಿನ್ ಬಳಿಯ ಬಾನೆಟ್ ಒಳಗಿನಿಂದ ಬೃಹತ್ ಗಾತ್ರದ ಹಾವನ್ನು ರಕ್ಷಿಸಿದ್ದಾರೆ. ಈ ಕಾರು ಬಿಜೆಪಿ … Continued

ಬಿಜೆಪಿ ಸಂಸದ ಡಾ ಕೆ ಸುಧಾಕರ ಪತ್ನಿಗೆ ಡಿಜಿಟಲ್ ಅರೆಸ್ಟ್ : 14 ಲಕ್ಷ ರೂ. ದೋಚಿದ್ದ ಸೈಬರ್ ವಂಚಕರು…!

ಬೆಂಗಳೂರು: ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ.ಕೆ.ಸುಧಾಕರ ಅವರ ಪತ್ನಿಯೂ ಡಿಜಿಟಲ್‌ ವಂಚನೆ ಮಾಡಿದ್ದು, 14 ಲಕ್ಷ ರೂ.ಗಳನ್ನು ಅವರಿಗೆ ಸೈಬರ್‌ ವಂಚಕರು ವಂಚಿಸಿದ್ದರು. ಆದರೆ ಅವರು ಸಕಾಲಕ್ಕೆ ಈ ಬಗ್ಗೆ ದೂರು ನೀಡಿದ ನಂತರ ಪೊಲೀಸರು ಕಾರ್ಯಪ್ರವೃತ್ತರಾದ ನಂತರ ಹಣವನ್ನು ವಶಕ್ಕೆ ಪಡೆದು ಈಗ ಹಿಂದಿರುಗಿಸಲಾಗಿದೆ. ಮಾಹಿತಿಯ ಪ್ರಕಾರ, ಸಂಸದ ಡಾ.ಕೆ.ಸುಧಾಕರ ಅವರ ಪತ್ನಿ ಡಾ.ಪ್ರೀತಿ … Continued

ನಾಳೆ (ಸೆ.9) ಉಪರಾಷ್ಟ್ರಪತಿ ಚುನಾವಣೆ | ಮತದಾನದಲ್ಲಿ ಪಾಲ್ಗೊಳ್ಳಲ್ಲ ಎಂದು ಘೋಷಿಸಿದ ಬಿಜೆಡಿ, ಬಿಆರ್‌ ಎಸ್‌ : ಲೆಕ್ಕಾಚಾರವೇನು..?

ನವದೆಹಲಿ : ಮಹತ್ವದ ಬೆಳವಣಿಗೆಯಲ್ಲಿ ಉಪರಾಷ್ಟ್ರಪತಿ ಚುನಾವಣೆಯ ಮುನ್ನಾ ದಿನವಾದ ಸೋಮವಾರ (ಸೆಪ್ಟೆಂಬರ್‌ 8) ತೆಲಂಗಾಣದ ಪಕ್ಷ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಹಾಗೂ ಒಡಿಶಾದ ಬಿಜು ಜನತಾ ದಳ (ಬಿಜೆಡಿ) ಸೆಪ್ಟೆಂಬರ್ 9 ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆ ವೇಳೆ ಮತದಾನದಿಂದ ದೂರ ಉಳಿಯಲು ನಿರ್ಧರಿಸಿವೆ. ಈ ನಿರ್ಧಾರ ಎನ್‌ಡಿಎ ಅಭ್ಯರ್ಥಿಗೆ ಅನುಕೂಲಕರ ಹಾಗೂ … Continued

ಡಿ.ಕೆ ಶಿವಕುಮಾರ ದೇಶದ 2ನೇ ಶ್ರೀಮಂತ ಸಚಿವ; ಅವರ ಒಟ್ಟು ಆಸ್ತಿ ಎಷ್ಟು ಗೊತ್ತೆ ?

ನವದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಟಾಪ್ 10 ಶ್ರೀಮಂತ ಸಚಿವರಲ್ಲಿ ಎಂಟು ಮಂದಿ ದಕ್ಷಿಣ ಭಾರತದವರಾಗಿದ್ದಾರೆ. ಟಾಪ್ 10 ಶ್ರೀಮಂತ ಸಚಿವರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಸಂವಹನ ಖಾತೆ ರಾಜ್ಯ ಸಚಿವ ಚಂದ್ರಶೇಖರ ಪೆಮ್ಮಸಾನಿ (ಟಿಡಿಪಿ) ಅವರಿದ್ದಾರೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ … Continued

ವೀಡಿಯೊ…| ಕಾಂಗ್ರೆಸ್‌ ಪಕ್ಷದ ಮತಗಳ್ಳತನ ಬಯಲು ಮಾಡಿದ ಸಿದ್ದರಾಮಯ್ಯ ; ಇದಕ್ಕೇನಂತೀರಿ ಎಂದು ಬಿಜೆಪಿ ವಾಗ್ದಾಳಿ

ಬೆಂಗಳೂರು :ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಿದಾಗ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಚುನಾವಣೆಯಲ್ಲಿ ವಂಚನೆಯಿಂದಾಗಿ ಸೋತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿಕೊಂಡಿದ್ದಾರೆ. ಇದು ಬಿಹಾರದಲ್ಲಿ “ಮತ ಅಧಿಕಾರ ಯಾತ್ರೆ” ಆಯೋಜಿಸಿರುವ ಕಾಂಗ್ರೆಸ್‌ ಮೇಲೆ ವಾಗ್ದಾಳಿ ನಡೆಸಲು ಬಿಜೆಪಿಗೆ ಅವಕಾಶ ನೀಡಿದೆ. 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ (Siddaramaiah) … Continued

ಮತಭೇದ ಇರಬಹುದು… ಆದರೆ ಜಗಳವಿಲ್ಲ” : ಕೇಂದ್ರ ಸರ್ಕಾರದ ಜೊತೆಗಿನ ಸಂಬಂಧದ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಸರಸಂಘಚಾಲಕ ಮೋಹನ ಭಾಗವತ ಅವರು ಬಿಜೆಪಿ ಜೊತೆಗಿನ ಸಂಬಂಧದಲ್ಲಿ ಬಿಕ್ಕಟ್ಟುಗಳಿವೆ ಎಂಬ ಊಹಾಪೋಹಗಳನ್ನು ಗುರುವಾರ ತಳ್ಳಿಹಾಕಿದ್ದಾರೆ. ಬಿಜೆಪಿ ಜೊತೆಗೆ ಮತಭೇದ ಇರಬಹುದು, ಆದರೆ ಯಾವುದೇ ಜಗಳವಿಲ್ಲ ಎಂದು ಸ್ಪಷ್ಟಪಡಿಸಿದರು. ಭಾಗವತ್ ದೆಹಲಿಯ ವಿಜ್ಞಾನ ಭವನದಲ್ಲಿ ‘ಆರ್‌ಎಸ್‌ಎಸ್ ಶತಮಾನೋತ್ಸವ ಉಪನ್ಯಾಸ ಸರಣಿ – 100 ವರ್ಷಗಳ ಸಂಘದ ಪಯಣ: ಹೊಸ ದಿಗಂತಗಳು’ … Continued

ಮೂಡ್ ಆಫ್ ದಿ ನೇಷನ್ ಸರ್ವೆ : ಈಗ ಲೋಕಸಭಾ ಚುನಾವಣೆ ನಡೆದ್ರೆ ಇಂಡಿಯಾ ಬಣಕ್ಕೆ 208 ಸ್ಥಾನಗಳು ; ಮೋದಿ ನೇತೃತ್ವದ ಎನ್‌ಡಿಎಗೆ ಎಷ್ಟು ಸ್ಥಾನ ಸಿಗಲಿದೆ ಗೊತ್ತೆ ?

ಮೂರು ಪ್ರಮುಖ ವಿಧಾನಸಭಾ ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿದ ನಂತರ, ಈಗ ಲೋಕಸಭಾ ಚುನಾವಣೆ ನಡೆದರೆ ಎನ್‌ಡಿಎ ಪ್ರಬಲ ಪ್ರದರ್ಶನ ನೀಡಲಿದೆ ಮತ್ತು 324 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಕಂಡುಬಂದಿದೆ. ಮತ್ತೊಂದೆಡೆ, 2024 ರಲ್ಲಿ 234 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಇಂಡಿಯಾ … Continued

ವೀಡಿಯೊ…| ಧರ್ಮಸ್ಥಳ ಪ್ರಕರಣ | ತನಿಖೆ ಆರಂಭಿಕ ಹಂತದಲ್ಲೇ ಎಡವಿದೆ ; ತಮ್ಮದೇ ಸರ್ಕಾರ ಟೀಕಿಸಿದ ಕಾಂಗ್ರೆಸ್‌ ಶಾಸಕ

ಬೆಂಗಳೂರು: ಧರ್ಮಸ್ಥಳ ಪ್ರಕರಣ ಕುರಿತು ದೇಶಾದ್ಯಂತ ತೀವ್ರ ಚರ್ಚೆಯಾಗುತ್ತಿದ್ದು, ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಹಕಾರ ಸಚಿವ ಕೆ. ಎನ್. ರಾಜಣ್ಣ ಭಾನುವಾರ ತಮ್ಮದೇ ಕಾಂಗ್ರೆಸ್‌ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ… ಧರ್ಮಸ್ಥಳ ದೇವಸ್ಥಾನ ವ್ಯಾಪ್ತಿಯಲ್ಲಿ ಶವ ಹೂತಿರುವುದಾಗಿ ದೂರು ನೀಡಲು‌ ಬಂದ ವ್ಯಕ್ತಿಯು ತಂದಿದ್ದ ತಲೆ ಬುರುಡೆಯ ಪೂರ್ವಾಪರಗಳನ್ನು ವಿಚಾರಿಸದೆ ತನಿಖೆಗೆ ಆದೇಶಿಸಿದ್ದು ಸರಿಯಾದ ಕ್ರಮವಲ್ಲ … Continued