ಪಶ್ಚಿಮ ಬಂಗಾಳ ಚುನಾವಣೆ : ಬಿಜೆಪಿಗೆ ಸೇರ್ಪಡೆಯಾದ ಟೆನ್ನಿಸ್ ದಿಗ್ಗಜ ಲಿಯಾಂಡರ್ ಪೇಸ್

ನವದೆಹಲಿ: 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಖ್ಯಾತ ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು ಮಂಗಳವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗಿದ್ದಾರೆ. ಕೇಂದ್ರ ಸಚಿವ ಕಿರಣ ರಿಜಿಜು ಮತ್ತು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಕಾಂತ ಮಜುಂದಾರ್ ಅವರ ಸಮ್ಮುಖದಲ್ಲಿ ಲಿಯಾಂಡರ್‌ … Continued

ಬಿಹಾರದಲ್ಲಿ ಹೊಸ ನಾಯಕತ್ವಕ್ಕೆ ದಾರಿ: ಪರಿಷತ್ ಸದಸ್ಯತ್ವಕ್ಕೆ ನಿತೀಶಕುಮಾರ ರಾಜೀನಾಮೆ

ಪಾಟ್ನಾ: ಬಿಹಾರದ ಸುದೀರ್ಘ ಅವಧಿಯ ಮುಖ್ಯಮಂತ್ರಿ ನಿತೀಶಕುಮಾರ ಸೋಮವಾರ (ಮಾರ್ಚ್ 30) ತಮ್ಮ ಬಿಹಾರ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ತಿಂಗಳ ಆರಂಭದಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಮಾರ್ಚ್ 16 ರಂದು ನಿತೀಶಕುಮಾರ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. … Continued

ಅಮೆರಿಕದಿಂದ ಭೂದಾಳಿಯ ಭೀತಿ : 10 ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಸಜ್ಜುಗೊಳಿಸಿದ ಇರಾನ್….!

ತೆಹ್ರಾನ್: ಅಮೆರಿಕವು ತನ್ನ ದೇಶದ ಮೇಲೆ ಭೂಸೇನೆಯ ಮೂಲಕ ದಾಳಿ ಮಾಡಬಹುದೆಂಬ ಭೀತಿಯ ನಡುವೆ, ಇರಾನ್ ತನ್ನ ರಕ್ಷಣಾ ಪಡೆಯನ್ನು ಬೃಹತ್ ಮಟ್ಟದಲ್ಲಿ ಸಜ್ಜುಗೊಳಿಸಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಸೈನಿಕರು ಮತ್ತು ಹೋರಾಟಗಾರರು ಅಮೆರಿಕದ ಸಂಭಾವ್ಯ ಆಕ್ರಮಣವನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂದು ಇರಾನ್ ಹೇಳಿದೆ. ಅಮೆರಿಕವು ಭೂದಾಳಿ ನಡೆಸಲು ಮುಂದಾಗಬಹುದು ಎಂಬುದು ಇರಾನ್ ಜನರಲ್ಲಿ … Continued

ಗುಡ್‌ ನ್ಯೂಸ್‌ ನೀಡಿದ ಕೇಂದ್ರ ಸರ್ಕಾರ ; ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ

ನವದೆಹಲಿ: ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆಯೇ ಕೇಂದ್ರ ಸರ್ಕಾರವು ಬೆಲೆ ಏರಿಕೆಯ ಆತಂಕದಲ್ಲಿದ್ದ ದೇಶದ ಜನತೆಗೆ ದೊಡ್ಡ ರಿಲೀಫ್‌ ನೀಡಿದೆ. ಶುಕ್ರವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು (Excise Duty) ಪ್ರತಿ ಲೀಟರ್‌ಗೆ ತಲಾ 10 ರೂಪಾಯಿಗಳಷ್ಟು ಕಡಿತಗೊಳಿಸಿ ಆದೇಶ ಹೊರಡಿಸಿದೆ. ಈ ಮಹತ್ವದ ನಿರ್ಧಾರದಿಂದಾಗಿ, ಪೆಟ್ರೋಲ್ ಮೇಲಿನ ಸುಂಕ ಲೀಟರ್‌ಗೆ 3 … Continued

ಭಾರತಕ್ಕೆ ಇರಾನ್ ಅಭಯ: ಯುದ್ಧದ ನಡುವೆಯೂ ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳ ಮುಕ್ತ ಸಂಚಾರಕ್ಕೆ ಗ್ರೀನ್ ಸಿಗ್ನಲ್

ತೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಜಯ ಸಿಕ್ಕಿದೆ. ಜಗತ್ತಿನ ಅತಿ ದೊಡ್ಡ ತೈಲ ಸಾಗಾಣಿಕಾ ಮಾರ್ಗದಲ್ಲಿ ಒಂದಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಭಾರತದ ಹಡಗುಗಳ ಸಂಚಾರಕ್ಕೆ ಇಡುವುದಾಗಿ ಇರಾನ್ ಪ್ರಕಟಿಸಿದೆ. ಕಳೆದ ತಿಂಗಳು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಯುದ್ಧ ಸಾರಿದ ನಂತರ, ಇರಾನ್ ಈ … Continued

ಯುದ್ಧ ಕೊನೆಗೊಳಿಸುವ ಅಮೆರಿಕದ ಪ್ರಸ್ತಾವನೆ ತಿರಸ್ಕರಿಸಿದ ಇರಾನ್ ; ಐದು ಕಠಿಣ ಷರತ್ತುಗಳನ್ನು ಮುಂದಿಟ್ಟ ತೆಹ್ರಾನ್‌ : ವರದಿ

ಅಮೆರಿಕವು ಯುದ್ಧವನ್ನು ಕೊನೆಗೊಳಿಸಲು ಮುಂದಿಟ್ಟಿರುವ ಪ್ರಸ್ತಾವನೆಯನ್ನು ಇರಾನ್ ತಿರಸ್ಕರಿಸಿದೆ. ಯುದ್ಧವನ್ನು ತನ್ನದೇ ಆದ ನಿಯಮಗಳು ಮತ್ತು ಷರತ್ತುಗಳ ಮೇಲೆ ಕೊನೆಗೊಳಿಸುವುದಾಗಿ ಇರಾನ್ ಹೇಳಿದೆ. ಅಮೆರಿಕದ ಈ ಪ್ರಸ್ತಾವನೆಯು “ಅತಿಯಾದ ಬೇಡಿಕೆಗಳಿಂದ ಕೂಡಿದೆ” ಎಂದು ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ‘ಪ್ರೆಸ್ ಟಿವಿ’ಗೆ ತಿಳಿಸಿದ್ದಾರೆ. “ಇರಾನ್ ಯಾವಾಗ ನಿರ್ಧರಿಸುತ್ತದೆಯೋ ಮತ್ತು ಅದರ ಷರತ್ತುಗಳು ಯಾವಾಗ ಈಡೇರುತ್ತವೆಯೋ ಆಗ ಮಾತ್ರ … Continued

18 ವರ್ಷದ ಹಿಂದೆ ವಾರ್ನ್‌ ಮಾಡಿದ್ದ ಆ ಒಂದು ಸಹಿಗೆ ಈಗ ರಾಜಸ್ಥಾನ್ ರಾಯಲ್ಸ್ ಮಾರಾಟದಿಂದ ಕುಟುಂಬಕ್ಕೆ ಸಿಗಲಿದೆ ₹450 ಕೋಟಿ..!

ನವದೆಹಲಿ: ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಕೇವಲ ಮೈದಾನದಲ್ಲಿ ಮಾತ್ರವಲ್ಲ, ವ್ಯವಹಾರದಲ್ಲೂ ಚಾಣಾಕ್ಷ ಎನ್ನುವುದು ಈಗ ಸಾಬೀತಾಗಿದೆ. 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭವಾದಾಗ ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಅವರು ಮಾಡಿಕೊಂಡಿದ್ದ ಒಂದು ವಿಶೇಷ ಒಪ್ಪಂದವು, ಈಗ ಅವರ ಕುಟುಂಬಕ್ಕೆ ಸುಮಾರು 450 ರಿಂದ 460 ಕೋಟಿ ರೂಪಾಯಿಗಳ ಬಂಪರ್ ಲಾಭವನ್ನು ತಂದುಕೊಡಲಿದೆ … Continued

ಹಿಂದೂ, ಬೌದ್ಧ, ಸಿಖ್‌ ಬಿಟ್ಟು ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ಸಿಗಲ್ಲ : ಸುಪ್ರೀಂ ಕೋರ್ಟ್

ನವದೆಹಲಿ: ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಕ್ಕೆ ಸೇರಿದ ವ್ಯಕ್ತಿಗಳು ಮಾತ್ರ ಪರಿಶಿಷ್ಟ ಜಾತಿ (SC) ಸ್ಥಾನಮಾನವನ್ನು ಪಡೆಯಲು ಅರ್ಹರು. ಇತರ ಧರ್ಮಗಳಿಗೆ ಮತಾಂತರಗೊಂಡರೆ ಅವರು ಈ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮವನ್ನು ಅನುಸರಿಸುವ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ … Continued

ಹಾರ್ಮುಜ್ ಜಲಸಂಧಿ ಬಿಕ್ಕಟ್ಟು : ಇರಾನ್ ವಿರುದ್ಧದ ಯುದ್ಧಕ್ಕೆ ಸೌದಿ ಅರೇಬಿಯಾ, ಯುಎಇ ಎಂಟ್ರಿ..? ಸಂಘರ್ಷ ಮತ್ತಷ್ಟು ತೀವ್ರ ?

ಪ್ರಸ್ತುತ ನಡೆಯುತ್ತಿರುವ ಅಮೆರಿಕ-ಇರಾನ್ ಸಂಘರ್ಷವು ಭಾರಿ ಉಲ್ಬಣದತ್ತ ಸಾಗುತ್ತಿದ್ದು, ಕೊಲ್ಲಿಯ ಪ್ರಮುಖ ಆರ್ಥಿಕ ಶಕ್ತಿಗಳಾದ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಈಗ ಯುದ್ಧದಲ್ಲಿ ಭಾಗಿಯಾಗುವ ಹಾದಿಯಲ್ಲಿವೆ ಎಂಬ ಸೂಚನೆಗಳು ಸಿಗುತ್ತಿವೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಹೇಳಿದೆ. ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ಈ ಎರಡೂ … Continued

ಪಾಕಿಸ್ತಾನದ ಒಳಹೊಕ್ಕು ವೈರಿ ಸೇನೆಯನ್ನೇ ಸೇರಿ ಅದರ ಪರಮಾಣು ರಹಸ್ಯವನ್ನೇ ಭೇದಿಸಿದ್ದ ಭಾರತದ ಈ ಅಪ್ರತಿಮ ಗೂಢಚಾರಿ ಯಾರು ಗೊತ್ತೆ…?

ನವದೆಹಲಿ: ಬಾಲಿವುಡ್‌ನ ‘ಪಠಾಣ್’, ‘ಟೈಗರ್’ ಅಥವಾ ‘ಧುರಂಧರ್’ ಅಂತಹ ಸಿನಿಮಾಗಳಲ್ಲಿ ಹೀರೊಗಳು ಶತ್ರು ರಾಷ್ಟ್ರದೊಳಗೆ ನುಗ್ಗಿ ಸಾಹಸ ಮಾಡುವುದನ್ನು ನೋಡಿದ್ದೇವೆ. ಆದರೆ, ಬೆಳ್ಳಿತೆರೆಯ ಈ ಕಲ್ಪಿತ ಕಥೆಗಳಿಗಿಂತಲೂ ಮಿಗಿಲಾದ ಹಾಗೂ ಅದ್ಭುತವಾದ ಮತ್ತು ರೋಚಕವಾದ ಜೀವನ ನಡೆಸಿದ ಅಪ್ಪಟ ದೇಶಭಕ್ತ ರವೀಂದ್ರ ಕೌಶಿಕ ಅವರ ಬಗ್ಗೆ ಅನೇಕರಿಗೆ ತಿಳಿದಿಲ್ಲವೇನೋ? ಶತ್ರು ರಾಷ್ಟ್ರವಾದ ಪಾಕಿಸ್ತಾನದ ಗುಂಡಿನ ನೆರಳಲ್ಲೇ … Continued