ವೀಡಿಯೊ..| ಪೆಟ್ರೋಲ್ ಹಣ ಕೊಡದೆ ಪರಾರಿಯಾಗುವ ಯತ್ನದಲ್ಲಿ ಬೈಕ್ ಅನ್ನು 7 ಕಿ.ಮೀ ಎಳೆದೊಯ್ದ ಥಾರ್ ಕಾರು….!

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಹಣ ಪಾವತಿಸದೆ ಪರಾರಿಯಾಗಲು ಯತ್ನಿಸಿದ ಚಾಲಕನೊಬ್ಬ, ತನ್ನ ವಾಹನದ ಅಡಿಯಲ್ಲಿ ಸಿಲುಕಿದ ಮೋಟಾರ್ ಸೈಕಲ್ ಅನ್ನು ಹೆದ್ದಾರಿಯಲ್ಲಿ ಹಲವಾರು ಕಿಲೋಮೀಟರ್‌ಗಳವರೆಗೆ ಎಳೆದೊಯ್ದ ಘಟನೆ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಸಂಜೆ ಧೂಮ್ ಮಾಣಿಕ್ಪುರ ಪ್ರದೇಶದ ಪೆಟ್ರೋಲ್ ಬಂಕ್‌ನಲ್ಲಿ ಈ ಘಟನೆ ಸಂಭವಿಸಿದೆ. ಸಿಕಂದರಾಬಾದ್ ಮೂಲದ 22 … Continued

ಎಂಆರ್‌ಐ ಸ್ಕ್ಯಾನ್ ವೇಳೆ ಅವಾಂತರ: 6 ವರ್ಷದ ಬಾಲಕ ಸಾವು

ಗ್ರೇಟರ್ ನೋಯ್ಡಾ: ಉತ್ತರ ಪ್ರದೇಶದ ಗ್ರೇಟರ್‌ ನೊಯ್ಡಾದ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಎಂಆರ್‌ಐ (MRI) ಸ್ಕ್ಯಾನ್‌ಗೆ ಒಳಗಾಗಿದ್ದ ಆರು ವರ್ಷದ ಬಾಲಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ವೈದ್ಯರು ನೀಡಿದ ಅತಿಯಾದ ಪ್ರಮಾಣದ ಇಂಜೆಕ್ಷನ್‌ನಿಂದಲೇ ಸಾವು ಸಂಭವಿಸಿದೆ ಎಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ. ದನ್ಕೌರ್‌ನ ರೀಲ್ಖಾ ನಿವಾಸಿಯಾದ ಪ್ರಶಾಂತ ಕಸಾನಾ ಎಂಬುವವರು ತಮ್ಮ ಆರು ವರ್ಷದ ಮಗನನ್ನು … Continued

ವೀಡಿಯೊ..| ಡೆಲಿವರಿ ಬಾಯ್ ಆಕಸ್ಮಿಕವಾಗಿ ಬೇರೆ ಮನೆ ಬೆಲ್ ಒತ್ತಿದ್ದಕ್ಕೆ ಗಲಾಟೆ ; ಮಾರಾಮಾರಿ

ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದವೊಂದು ವಿಕೋಪಕ್ಕೆ ತಿರುಗಿ, ಡೆಲಿವರಿ ಬಾಯ್ ಮತ್ತು ಸೆಕ್ಯೂರಿಟಿ ಗಾರ್ಡ್‌ಗಳ ನಡುವೆ ರಣಾಂಗಣ ಸೃಷ್ಟಿಯಾದ ಘಟನೆ ಗ್ರೇಟರ್ ನೋಯ್ಡಾದ ಬೀಟಾ-2 ಪ್ರದೇಶದದಲ್ಲಿ ನಡೆದಿದೆ ಎಂದು ಪರಸ್ಪರ ಪಂಚ್, ಕಿಕ್ ಹಾಗೂ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಲಾಗಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಫುಡ್ ಡೆಲಿವರಿ … Continued

ಹೆರಿಗೆ ಆಪರೇಷನ್ ವೇಳೆ ಮಹಿಳೆ ಹೊಟ್ಟೆಯೊಳಗೆ ಅರ್ಧ ಮೀಟರ್ ಸರ್ಜಿಕಲ್ ಬಟ್ಟೆ ಮರೆತು ಹೊಲಿಗೆ ; 15 ತಿಂಗಳ ನಂತರ ಪತ್ತೆ…!

ನವದೆಹಲಿ : ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ಮಹಿಳೆಯೊಬ್ಬರು ಬರೋಬ್ಬರಿ ಒಂದೂವರೆ ವರ್ಷಗಳ ಕಾಲ ನರಕಯಾತನೆ ಅನುಭವಿಸಿದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಹೆರಿಗೆ ಸಮಯದಲ್ಲಿ ನಡೆಸಿದ ಶಸ್ತ್ರಚಿಕಿತ್ಸೆಯ ವೇಳೆ ಮಹಿಳೆಯ ಹೊಟ್ಟೆಯೊಳಗೆ ಅರ್ಧ ಮೀಟರ್ ಉದ್ದದ ಸರ್ಜಿಕಲ್ ಬಟ್ಟೆಯನ್ನು (Surgical Cloth) ಮರೆತು ಹೊಲಿಗೆ ಹಾಕಿದ ಆರೋಪ ಕೇಳಿಬಂದಿದೆ. ಗ್ರೇಟರ್ ನೋಯ್ಡಾ ಆಸ್ಪತ್ರೆಯ … Continued

ವರದಕ್ಷಿಣೆಗಾಗಿ ಪತ್ನಿಯನ್ನು ಸುಟ್ಟುಹಾಕಿದ ಆರೋಪಿ ಪತಿ ಪೊಲೀಸ್‌ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಂಡೇಟು

ನವದೆಹಲಿ: ಗ್ರೇಟರ್ ನೋಯ್ಡಾದಲ್ಲಿ ವರದಕ್ಷಿಣೆಗಾಗಿ ಪತ್ನಿಗೆ ಬೆಂಕಿ ಹಚ್ಚಿ ಕೊಂದ ಆರೋಪಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ ನಂತರ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ನಡೆದ ಎನ್‌ಕೌಂಟರ್‌ನಲ್ಲಿ ಆತನ ಕಾಲಿಗೆ ಗುಂಡು ಹಾರಿಸಲಾಯಿತು ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಆರೋಪಿ ಪತಿಯನ್ನು ವಿಪಿನ್ ಭಾಟಿ ಎಂದು ಗುರುತಿಸಲಾಗಿದ್ದು, ಗುರುವಾರ 36 ಲಕ್ಷ ರೂಪಾಯಿ ವರದಕ್ಷಿಣೆಗಾಗಿ 28 ​​ವರ್ಷದ … Continued

ವಿದ್ಯುತ್ ಇಲ್ಲ ಎಂದು ಹೇಳಲು ಹೋದ ವಸತಿ ಸಮುಚ್ಚಯದ ನಿವಾಸಿಗಳಿಗೆ ದೊಣ್ಣೆಯಿಂದ ಹೊಡೆದ ಕಾವಲುಗಾರರು, ಸಿಬ್ಬಂದಿ ; ವೀಡಿಯೊ ವೈರಲ್‌

ಗ್ರೇಟರ್ ನೋಯ್ಡಾ: ಗ್ರೇಟರ್ ನೋಯ್ಡಾದ ಬಹುಮಹಡಿ ವಸತಿ ಸಮುಚ್ಚಯದಲ್ಲಿ ವಾಸಿಸುವ ನಿವಾಸಿಗಳು ವಿದ್ಯುತ್ ಕಡಿತದ ಬಗ್ಗೆ ದೂರು ನೀಡಿದ ನಂತರ ಅವರನ್ನು ಒದ್ದು, ದೊಣ್ಣೆಯಿಂದ ಹೊಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಗುರುವಾರ ರಾತ್ರಿ ಇಕೋವಿಲೇಜ್-1 ಸೊಸೈಟಿಯಲ್ಲಿ ನಡೆದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ವಾಚ್‌ಮೆನ್‌ಗಳು ಮತ್ತು ಇತರ … Continued

ಗೂಗಲ್ ಮ್ಯಾಪ್ ತೋರಿದ ದಾರಿಯಲ್ಲಿ ಹೋಗಿ ಕಾರು 30 ಅಡಿ ಆಳದ ಚರಂಡಿಗೆ ಬಿದ್ದು ವ್ಯಕ್ತಿ ಸಾವು…!

ನವದೆಹಲಿ: ಗೂಗಲ್ ಮ್ಯಾಪ್ ನಂಬಿ ಹೋಗಿ ಕಾರೊಂದು 30 ಅಡಿ ಆಳದ ಚರಂಡಿಗೆ ಉರುಳಿಬಿದ್ದು ಅದರೊಳಗೆ ಪ್ರಯಾಣಿಸುತ್ತಿದ್ದ 31 ವರ್ಷದ ಸ್ಟೇಷನ್ ಮಾಸ್ಟರ್ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಗ್ರೇಟರ್ ನೋಯ್ಡಾದ ಪಿ-4 ಸೆಕ್ಟರ್ ಬಳಿ ಸಂಭವಿಸಿದ ಅಪಘಾತಕ್ಕೆ ಪ್ರಾಧಿಕಾರ ಹಾಗೂ ಗೂಗಲ್ ಮ್ಯಾಪ್‌ ಕಾರಣ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು … Continued

ವೈದ್ಯರ ಎಡವಟ್ಟು…: ಎಡಗಣ್ಣಿನ ಬದಲು ಬಲಗಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು…!

ನೋಯ್ಡಾ : ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದರಲ್ಲಿ ಗ್ರೇಟರ್ ನೋಯ್ಡಾದ ಆಸ್ಪತ್ರೆಯೊಂದರಲ್ಲಿ ಎಡಗಣ್ಣಿನ ಶಸ್ತ್ರಚಿಕಿತ್ಸೆಗೆ ಹೋದ ಏಳು ವರ್ಷದ ಬಾಲಕನ ಬಲಗಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವರದಿಯಾಗಿದೆ. ನವೆಂಬರ್ 12 ರಂದು ಸೆಕ್ಟರ್ ಗಾಮಾ 1 ರ ಆನಂದ್ ಸ್ಪೆಕ್ಟ್ರಮ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬಾಲಕನ ತಂದೆ ನಿತಿನ್ ಭಾಟಿ ಪ್ರಕಾರ, ಎಡಗಣ್ಣಿನಿಂದ … Continued