ಬಾಯ್‌ ಫ್ರೆಂಡ್‌ ಜೊತೆ ಇರಲು ಪುಟ್ಟ ಮಗನನ್ನು ಬಿಟ್ಟುಹೋದ ತಾಯಿ ; ಫ್ಲಾಟ್‌ ನಲ್ಲಿ 2 ವರ್ಷಗಳ ಕಾಲ ಏಕಾಂಗಿಯಾಗಿ ಬದುಕಿದ ಬಾಲಕ…!

ಆಘಾತಕಾರಿ ಘಟನೆಯೊಂದರಲ್ಲಿ ತಾಯಿಯೊಬ್ಬಳು ತನ್ನ ಬಾಯ್‌ ಫ್ರೆಂಡ್‌ ಜೊತೆ ವಾಸಿಸಲು ತನ್ನ ಸಣ್ಣ ಮಗನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಘಟನೆ ಬೆಳಕಿಗೆ ಬಂದಾಗ ಒಂಬತ್ತು ವರ್ಷದವನಾಗಿದ್ದ ಬಾಲಕ ಎರಡು ವರ್ಷಗಳ ಕಾಲ ಶೀತಲ ಫ್ಲಾಟ್‌ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಎಂದು ಹೇಳಲಾಗಿದೆ..! ಈ ಘಟನೆ ಫ್ರಾನ್ಸ್‌ನ ಸಣ್ಣ ಪಟ್ಟಣವಾದ ನೆರ್ಸಾಕ್‌ ಎಂಬಲ್ಲಿ ನಡೆದಿದೆ. 2020 ರಿಂದ 2022 … Continued

ಹೃದಯಸ್ಪರ್ಶಿ ವೀಡಿಯೊ | ತಾಯಿ ಪ್ರೀತಿಗೆ ಎಣೆಯುಂಟೇ : ಪ್ರಜ್ಞೆಯೇ ಇಲ್ಲದ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಪಶು ಆಸ್ಪತ್ರೆಗೆ ಹೊತ್ತೊಯ್ದ ತಾಯಿ ನಾಯಿ ; ವೀಕ್ಷಿಸಿ

ಬೆರಗುಗೊಳಿಸುವ ಹೃದಯಸ್ಪರ್ಶಿ ಘಟನೆಯೊಂದರಲ್ಲಿ, ಟರ್ಕಿಯಲ್ಲಿ ಹೆಣ್ಣು ನಾಯಿಯೊಂದು ತನ್ನ ಪ್ರಜ್ಞಾಹೀನ ಮರಿಯನ್ನು ಹತ್ತಿರದ ಪಶುವೈದ್ಯಕೀಯ ಚಿಕಿತ್ಸಾಲಯಕ್ಕೆ ಕೊಂಡೊಯ್ದ ಅಪರೂಪದ ವಿದ್ಯಮಾನ ನಡೆದಿದೆ. ಜನವರಿ 13 ರಂದು ಟರ್ಕಿಯ ಬೇಲಿಕ್ಡುಜು ಆಲ್ಫಾ ವೆಟರ್ನರಿ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದ್ದು, ತಾಯಿ ನಾಯಿ ತನ್ನ ನಿರ್ಜೀವವಾದ ನಾಯಿಮರಿಯನ್ನು ಬಾಯಿಯಲ್ಲಿ ಕಚ್ಚಿಹಿಡಿದುಕೊಂಡು ಸಹಾಯಕ್ಕಾಗಿ ನೇರವಾಗಿ ಪಶು ಚಿಕಿತ್ಸಾಲಯಕ್ಕೆ ಧಾವಿಸುತ್ತಿರುವುದು ಕಂಡುಬಂದಿದೆ. … Continued

ಚಾಮರಾಜನಗರ : ಗುಂಡಲ್ ಜಲಾಶಯದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾವು

ಚಾಮರಾಜನಗರ : ಬಟ್ಟೆ ತೊಳೆಯಲು ಹೋಗಿದ್ದ ವೇಳೆ ತಾಯಿ ಮತ್ತು ಇಬ್ಬರು ಮಕ್ಕಳು ನೀರುಪಾಲಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಗುಂಡಲ್ ಜಲಾಶಯದಲ್ಲಿ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ. ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಗೋಪಿನಾಥಂ ಗ್ರಾಮ ಪಂಚಾಯತ ವ್ಯಾಪ್ತಿಯ ಪುದೂರು ಗ್ರಾಮದ ನಿವಾಸಿ ಮೀನಾ … Continued

ಮಯಾಂಕ ಯಾದವ್ 2 ವರ್ಷಗಳಿಂದ ಸಸ್ಯಾಹಾರಿಯಾಗಿದ್ದಾನೆ : ಐಪಿಎಲ್ 2024ರಲ್ಲಿ ಗಮನಸೆಳೆದ ಯುವ ವೇಗಿ ತಾಯಿಯ ಹೇಳಿಕೆ

ನವದೆಹಲಿ : ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವೇಗಿ ಮಯಾಂಕ ಯಾದವ್ ತನ್ನ ವೇಗದ ಬೌಲಿಂಗ್‌ನಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ನಲ್ಲಿ ಗಮನ ಸೆಳೆದಿದ್ದಾರೆ. ಅವರ ಗಂಟೆಗೆ 150 ಕಿಮೀಗಿಂತಲೂ ಹೆಚ್ಚಿನ ವೇಗದ ಎಸೆತಗಳು ಎದುರಾಳಿ ಬ್ಯಾಟರ್‌ ಅನ್ನು ಕಂಗೆಡಿಸುತ್ತಿವೆ. ಅವರ ವೇಗದ ಬೌಲಿಂಗ್‌ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ T20 ಐಪಿಎಲ್ … Continued

ವೀಡಿಯೊ…| ರಾಮಾಯಣದಿಂದ ಪ್ರೇರಣೆ ; ʼಶ್ರವಣಕುಮಾರʼನಾದ ಹಿಸ್ಟರಿ-ಶೀಟರ್ : ತನ್ನ ತೊಡೆಯ ಚರ್ಮದಿಂದ ಪಾದರಕ್ಷೆ ತಯಾರಿಸಿ ತಾಯಿಗೆ ಉಡುಗೊರೆ ನೀಡಿದ..!

ಮಧ್ಯಪ್ರದೇಶದ ಉಜ್ಜಯಿನಿಯ ರೌನಕ್ ಗುರ್ಜರ್ ಎಂಬ ವ್ಯಕ್ತಿಯೊಬ್ಬರು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ತಮ್ಮ ತಾಯಿಗೆ ವಿಶಿಷ್ಟವಾದದನ್ನು ಅರ್ಪಣೆ ಮಾಡಿದ್ದಾರೆ. ಗುರ್ಜರ್ ತನ್ನದೇ ಚರ್ಮದಿಂದ ಒಂದು ಜೊತೆ ಪಾದರಕ್ಷೆ ತಯಾರಿಸಿ ತನ್ನ ತಾಯಿಗೆ ಉಡುಗೊರೆಯಾಗಿ ನೀಡಿದ್ದಾರೆ…! ಇದಕ್ಕೆ ಅವರು ರಾಮಾಯಣದಿಂದ ಪ್ರೇರಣೆ ಪಡೆದಿದ್ದಾಗಿ ಹೇಳಿದ್ದಾರೆ. ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಗುರ್ಜರ್, “ನಾನು ನಿಯಮಿತವಾಗಿ ರಾಮಾಯಣವನ್ನು ಪಠಿಸುತ್ತೇನೆ ಮತ್ತು ಭಗವಾನ್ … Continued

ವೀಡಿಯೊ…| ಮನೆಗೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ಹೋರಾಡಿದ ತಾಯಿ-ಮಗಳು ; ಇಬ್ಬರು ದರೋಡೆಕೋರರ ಬಂಧನ : ವೀಕ್ಷಿಸಿ

ಹೈದರಾಬಾದ್ : ಮಾರ್ಷಲ್ ಆರ್ಟ್ಸ್‌ನಲ್ಲಿ ತರಬೇತಿ ಪಡೆದ ಮಹಿಳೆ ಮತ್ತು ಆಕೆಯ ಅಪ್ರಾಪ್ತ ಮಗಳು ಬೇಗಂಪೇಟೆಯಲ್ಲಿರುವ ತಮ್ಮ ಮನೆಯಲ್ಲಿ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳ ದರೋಡೆ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರ ಮೂಲದ ಇಬ್ಬರು ಆರೋಪಿಗಳು ಮನೆಯನ್ನು ದರೋಡೆ ಮಾಡಲು ಯೋಜನೆ ರೂಪಿಸಿದ್ದರು ಮತ್ತು ದರೋಡೆ ಮಾಡಲು ಮೊದಲೇ ಮನೆಯನ್ನು … Continued

ಮನೆಯಲ್ಲಿ ಮಗಳು-ಆಕೆಯ ಪ್ರಿಯಕರನನ್ನು ಒಟ್ಟಿಗೆ ನೋಡಿದ ನಂತರ ಮಗಳನ್ನೇ ಕೊಂದ ತಾಯಿ…!

ಹೈದರಾಬಾದ್‌ : ಆಘಾತಕಾರಿ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ತನ್ನ 19 ವರ್ಷದ ಮಗಳನ್ನು ಆಕೆಯ ಪ್ರಿಯಕರನೊಂದಿಗೆ ತಮ್ಮ ಮನೆಯಲ್ಲಿ ಒಟ್ಟಾಗಿ ಇರುವುದನ್ನು ಕಂಡ ನಂತರ ಮಗಳನ್ನೇ ಹತ್ಯೆಗೈದ ಾರೋಪಿತ ಘಟನೆ ಹೈದರಾಬಾದ್‌ ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆರೋಪಿಯನ್ನು ಜಂಗಮ್ಮ ಎಂದು ಗುರುತಿಸಲಾಗಿದ್ದು, ಬುಧವಾರ ಮಧ್ಯಾಹ್ನ ಕೆಲಸ ಮುಗಿಸಿ ಊಟಕ್ಕೆ ಮನೆಗೆ ಬಂದಿದ್ದಾಗ ಮಗಳು ಭಾರ್ಗವಿ ತನ್ನ … Continued

58ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೂಸೆವಾಲಾ ತಾಯಿ

ಚಂಡೀಗಢ: ಎರಡು ವರ್ಷಗಳ ಹಿಂದೆ ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ ತಾಯಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಸಿಧು ಮೂಸೆವಾಲಾ ಅವರ 58 ವರ್ಷದ ತಾಯಿ ಚರಣ್ ಕೌರ್ ಮತ್ತು 60 ವರ್ಷದ ತಂದೆ ಬಲ್ಕೌರ್ ಸಿಂಗ್ ಅವರು, ಕಳೆದುಕೊಂಡಿದ್ದ ಏಕೈಕ ಮಗನ ಸ್ಥಾನ ತುಂಬಲು ಮತ್ತೊಬ್ಬ ಮಗನನ್ನು ಪಡೆದಿದ್ದಾರೆ. ಸಿಧು … Continued

ವಿದ್ಯುತ್‌ ತಂತಿ ತುಳಿದು ತಾಯಿ-ಮಗು ಸಾವಿನ ಪ್ರಕರಣ : ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ, ಇಬ್ಬರು ಅಧಿಕಾರಿಗಳ ಅಮಾನತು

ಬೆಂಗಳೂರು : ಕಾಡುಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೋಪ್ ಫಾರ್ಮ್ ಬಳಿ ವಿದ್ಯುತ್ ತಂತಿ ತುಳಿದ ಪರಿಣಾಮ ಮಹಿಳೆ ಮತ್ತು ಮಗು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಸ್ಕಾಂನ ಎಇ ಹಾಗೂ ಎಇಇ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಇಂಧನ ಖಾತೆ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ. ರಸ್ತೆ ಬದಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು … Continued

ತಾಯಿ, ಇಬ್ಬರು ಮಕ್ಕಳು ಸಜೀವ ದಹನ: ಶಾರ್ಟ್‌ ಸರ್ಕಿಟ್‌ನಿಂದ ಎಸಿ ಸ್ಫೋಟಗೊಂಡ ಶಂಕೆ

ರಾಯಚೂರು: ಶಾರ್ಟ್‌ ಸರ್ಕಿಟ್‌ನಿಂದ ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಮನೆಯೊಳಗಿದ್ದ ತಾಯಿ ಹಾಗೂ ಇಬ್ಬರು ಮಕ್ಕಳು ದಹನವಾಗಿರುವ ದುರಂತ ಘಟನೆ ರಾಯಚೂರು ಜಿಲ್ಲೆಯ ಶಕ್ತಿನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶಕ್ತಿನಗರದ ಕೆಪಿಸಿ ಕ್ವಾಟ್ರಸ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದ್ದು ಮೃತರನ್ನು ಮಂಡ್ಯ ಮೂಲದ ರಂಜಿತಾ(33), ಮಕ್ಕಳಾದ ಮೃದಲ (13), ತಾರುಣ್ಯ(5) ಎಂದು ಗುರುತಿಸಲಾಗಿದೆ. ಶಾರ್ಟ್‌ … Continued